- Tuesday
- August 4th, 2026
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ರವರು ಇಂದು ವಿಧಾನಸೌಧದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿಯವರನ್ನು ಭೇಟಿಯಾಗಿ ಸುಳ್ಯದ ಅಗತ್ಯ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಸಲ್ಲಿಸಿ ಕೋರಿಕೊಂಡರು.
ಸಚಿನ್ ಕ್ರೀಡಾ ಸಂಘ(ರಿ.) ಹರಿಹರ ಪಳ್ಳತ್ತಡ್ಕ ಇದರ ವತಿಯಿಂದ ಜೂ.11 ರಂದು ಬಾಳುಗೋಡು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಮನೀಷ್ ಗುಂಡಿಹಿತ್ಲು, ಗೌರವಾಧ್ಯಕ್ಷರಾದ ಜಗದೀಶ್ ವಾಡ್ಯಪ್ಪನಮನೆ, ಶಾಲಾ ಮುಖ್ಯೋಪಾಧ್ಯಾಯರು, ಸಹಶಿಕ್ಷಕರು, ಸಂಘದ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. (ವರದಿ : ಉಲ್ಲಾಸ್ ಕಜ್ಜೋಡಿ)
ದೇವಚಳ್ಳ ಗ್ರಾಮದ ದೇವ ಊರುಕಟ್ಟಿಗೆ ಸಂಬಂದಿಸಿದ ಶ್ರೀ ಉಳ್ಳಾಕುಲು ಮತ್ತು ಮಲೆ ದೈವಗಳ ನೂತನ ದೈವಸ್ಥಾನ ಮತ್ತು ಕಟ್ಟೆಗಳ ನಿರ್ಮಾಣಕ್ಕೆ ಶಿಲ್ಪಿ ವೆಂಕಟರಮಣ ಆಚಾರ್ಯ ರವರು ಭೂಮಿ ಪೂಜೆಯ ವಿಧಿವಿಧಾನ ಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಉಳ್ಳಾಕುಲು ದೈವಸ್ಥಾನದ ಮೊಕ್ತೇಸರಾದ ಬಾಲಕೃಷ್ಣ ಗೌಡ ದೇವ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ರಮೇಶ ಪಡ್ಪು, ಕಾರ್ಯದರ್ಶಿ ಲಕ್ಷ್ಮೀಶ ಅಡ್ಡನಪಾರೆ,...
ಸುಳ್ಯ: ರಂಗಭೂಮಿ, ಕಿರುತೆರೆ, ಹಿರಿತೆರೆ ಕಲಾವಿದರಾಗಿ ಕಳೆದ ಮೂರು ದಶಕಗಳಿಂದ ಜನಪ್ರಿಯರಾಗಿರುವ ಎಂ ಎನ್ ಸುರೇಶ್ (ಮೂಗ್ ಸುರೇಶ್ ) ಈಗ ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಮೊದಲ ನಿರ್ಮಾಣ ಹಾಗೂ ನಿರ್ದೇಶನದ ಚಿತ್ರ 'ಕ್ಷಮೆಯಿರಲಿ ತಂದೆ'ಜೂನ್ 12ರಂದು (ನಾಳೆಯಿಂದ) ಸುಳ್ಯ ಸೇರಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಸುಳ್ಯ ಭಾರತ್ ಸಿನಿಮಾ ಚಿತ್ರ...
ವಿಶ್ವ ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ ಜೇಸಿಐ ಸುಳ್ಯ ಸಿಟಿ, ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ತಾಲೂಕು, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು, ಜಂ ಇಯ್ಯತುಲ್ ಫಲಾಹ್ (ರಿ.) ಸುಳ್ಯ ಘಟಕ, ಭಾರತೀಯ ರೆಡ್ ಕ್ರಾಸ್ ರಕ್ತನಿಧಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಲಯನ್ಸ್ ಕ್ಲಬ್ ಹಿರಿಯಡ್ಕ...
ಟ್ರೇಲರ್ನಲ್ಲೇ ಗಮನ ಸೆಳೆದ “ಕ್ಷಮೆಯಿರಲಿ ತಂದೆ” ಸಿನಿಮಾ ನಾಳೆ (ಜೂ.12) ತೆರೆಗೆ – ಸುಳ್ಯದಲ್ಲಿಂದು ಪೋಸ್ಟರ್ ಬಿಡುಗಡೆ
ರಂಗಭೂಮಿ, ಕಿರುತೆರೆ, ಹಿರಿತೆರೆ ಕಲಾವಿದರಾಗಿ ಕಳೆದ ಮೂರು ದಶಕಗಳಿಂದ ಜನಪ್ರಿಯರಾಗಿರುವ ಎಂ ಎನ್ ಸುರೇಶ್ (ಮೂಗ್ ಸುರೇಶ್ ) ಈಗ ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಮೊದಲ ನಿರ್ಮಾಣ ಹಾಗೂ ನಿರ್ದೇಶನದ ಚಿತ್ರ 'ಕ್ಷಮೆಯಿರಲಿ ತಂದೆ'ಜೂನ್ 12ರಂದು (ನಾಳೆಯಿಂದ) ಸುಳ್ಯ ಸೇರಿ ರಾಜ್ಯಾದ್ಯಂತ ಪ್ರದರ್ಶನಗೊಳ್ಳಲಿದ್ದು, ಇದರ ಇದರ ಅಂಗವಾಗಿ ಸುಳ್ಯದಲ್ಲಿ ಪೋಸ್ಟರ್...
ದಿನಾಂಕ : 11 ಜೂನ್ 2026ವಾರ : ಗುರುವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಜೂನ್ 11) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 390 ರಿಂದ...
ಬಾಕಿಲ - ಪೈಕ ರಸ್ತೆಗೆ 10 ಲಕ್ಷ ರೂಪಾಯಿ ಶಾಸಕರು ಹಾಗೂ ಸಂಸದರ ಅನುದಾನದಲ್ಲಿ ಬಾಕಿಲ ಪೈಕ ರಸ್ತೆಯು ರೂ. 10 ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೀಟೀಕರಣ ನಡೆಯುತ್ತಿದ್ದು, ರಸ್ತೆಗೆ ಅಡ್ಡ ಇಟ್ಟಿದ್ದ ವಸ್ತುಗಳನ್ನು ತೆಗೆದು ಹಸಿ ಕಾಂಕ್ರೀಟ್ ರಸ್ತೆಯ ಮೇಲೆ ಕಿಡಿಗೇಡಿಗಳು ಕಾರು ಚಲಾಯಿಸಿದ್ದು ನೂತನ ರಸ್ತೆಗೆ ಹೆಚ್ಚಿನ ಹಾನಿಯಾಗಿರುತ್ತದೆ. ಈ ಕಿಡಿಗೇಡಿಗಳ ಕೃತ್ಯಕ್ಕೆ...
ಸಂಪಾಜೆ ಗ್ರಾಮದ ಗೂನಡ್ಕ ಬೈಲೆ ಎಸ್ ಪಿ ಮೋಹನರವರ ತೋಟಕ್ಕೆ ಕಳೆದ ರಾತ್ರಿ ಕಾಡಾನೆಗಳ ಹಿಂಡು ದಾಳಿ ನಡೆಸಿ ಅಪಾರ ಹಾನಿ ಮಾಡಿದೆ. ತೆಂಗು, ಅಡಿಕೆ ಹಾಗೂ ಬಾಳೆ ಕೃಷಿ ಹಾನಿ ಮಾಡಿದೆ.
ಸುಳ್ಯದ ಯುವಕನ ನೇತೃತ್ವದ ತಂಡ ಬೆಂಗಳೂರು ವಿಧಾನಸೌಧದಿಂದ ಶಬರಿಮಲೆಗೆ ಸೈಕಲ್ ಯಾತ್ರೆ ತೆರಳಿದ್ದಾರೆ. ಸುಮಾರು 850 ಕಿಲೋಮೀಟರ್ ದೂರವನ್ನು ಸೈಕಲ್ ನಲ್ಲಿ ಪ್ರಯಾಣಿಸಿದ್ದಾರೆ. ಸುಳ್ಯದ ಶಿವಪ್ರಸಾದ್ ನಾರ್ಣಕಜೆ, ಅಂಕುಶ್ ದೇವರಾಜ್ ಬೆಂಗಳೂರು, ಸುದರ್ಶನ್ ಚಿಂತಾಮಣಿ, ವಿನಯ್ ಶಾಸ್ತ್ರಿ ಬಿಡದಿ, ಪ್ರವೀಣ್ ಬೆಂಗಳೂರು, ವಿನಯ್ ಬೆಂಗಳೂರು, ಗಣೇಶ್ ಬೆಂಗಳೂರು, ಮಹೇಶ್ ಬೆಂಗಳೂರು, ವಿಷ್ಣು ಪ್ರಸಾದ್ ಬೆಂಗಳೂರು ತಂಡದಲ್ಲಿದ್ದರು.
Loading posts...
All posts loaded
No more posts
