ಸುಬ್ರಹ್ಮಣ್ಯ ರೈಲು ನಿಲ್ದಾಣದಲ್ಲಿ ಕಸದ ರಾಶಿ – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ಸುಬ್ರಹ್ಮಣ್ಯ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಿಳಿನೆಲೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಸುಬ್ರಹ್ಮಣ್ಯ ರೈಲು ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ತಿಂಗಳುಗಳಿಂದ ಕಸ ಸಂಗ್ರಹವಾಗಿದ್ದು, ಪರಿಸರ ಮಾಲಿನ್ಯ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ. ರಾಜ್ಯದ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣವಾದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ...

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶ್ವ ಶಸ್ತ್ರಚಿಕಿತ್ಸಕರ ದಿನಾಚರಣೆ : ಗಿಡ ನೆಡುವ ಮೂಲಕ ಆರ್ಥಪೂರ್ಣ ಆಚರಣೆ

ಸುಳ್ಯ : ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ರಜತ ಮಹೋತ್ಸವದ ಅಂಗವಾಗಿ ಶಸ್ತ್ರಚಿಕಿತ್ಸಾ ವಿಭಾಗದ ವತಿಯಿಂದ ವಿಶ್ವ ಶಸ್ತ್ರಚಿಕಿತ್ಸಕರ ದಿನವನ್ನು ಜೂನ್ 12 ಶುಕ್ರವಾರದಂದು ಆಚರಿಸಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ.) ಸುಳ್ಯ ಅಧ್ಯಕ್ಷರು ಮತ್ತು ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕೆ.ವಿ.ಯ ಚಿದಾನಂದ ವಹಿಸಿ ಶುಭ...
Ad Widget

ಅಮರ ಸುಳ್ಯ ದಂಗೆಯ ಇತಿಹಾಸ ತೆರೆಗೆ – “ಅಮರ ಸುಳ್ಯ-1837” ಚಲನಚಿತ್ರ ನಿರ್ಮಾಣಕ್ಕೆ ಚಾಲನೆ

ಸುಳ್ಯ, ಜೂ. 12: ಅಮರ ಸುಳ್ಯ ದಂಗೆಯ ಐತಿಹಾಸಿಕ ಘಟನೆಯನ್ನು ಆಧರಿಸಿದ "ಅಮರ ಸುಳ್ಯ-1837" ಎಂಬ ಪೂರ್ಣ ಪ್ರಮಾಣದ ಚಲನಚಿತ್ರ ನಿರ್ಮಾಣಕ್ಕೆ ಅಮರ ಸುಳ್ಯ-1837 ಮೆಮೋರಿಯಲ್ ಟ್ರಸ್ಟ್ (ರಿ.), ಸುಳ್ಯ ಮುಂದಾಗಿದೆ ಎಂದು ಸಾಹಿತಿ ಕೆ.ಆರ್. ತೇಜಕುಮಾರ್ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಜೂ. 12ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮರ ಸುಳ್ಯ ದಂಗೆಯು...

ಇಂದಿನ(ಜೂನ್ 12) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಕಾಳುಮೆಣಸು ಮತ್ತು ರಬ್ಬರ್ ಬೆಲೆಯಲ್ಲಿ ಭರ್ಜರಿ ಏರಿಕೆ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 12 ಜೂನ್ 2026ವಾರ : ಶುಕ್ರವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಜೂನ್ 12) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 390 ರಿಂದ...

ಪೆರುವಾಜೆಯಲ್ಲಿ ಶಿಥಿಲಗೊಂಡ ಕಾಲು ಸೇತುವೆ – ನೂತನ ಸೇತುವೆಗೆ ನಿರ್ಮಾಣಕ್ಕೆ ಸಾರ್ವಜನಿಕರ ಮನವಿ

ಸುಳ್ಯದ ಪೆರುವಾಜೆ ಗ್ರಾಮದ ಸಾರಕೆರೆ, ಬೋರಡ್ಕ,ಬೇರ್ಯ ಸಂಪರ್ಕಿಸುವ ಕಾಲುಸೇತುವೆಯು ಶಿಥಿಲಾವಸ್ಥೆಗೆ ತಲುಪಿದ್ದು, ಮುರಿದು ಬೀಳಲು ತಯಾರಾಗಿದೆ. ಇಲ್ಲಿ ನೂತನ ಕಾಲುಸೇತುವೆ ನಿರ್ಮಿಸಿ ಕೊಡಲು ಜನತೆ ಬೇಡಿಕೆ ಮುಂದಿಟ್ಟಿದ್ದಾರೆ. ಸುಮಾರು ಎಪ್ಪತ್ತು ಮನೆಗಳು ಈ ಕಾಲು ಸೇತುವೆಯನ್ನು ಬಳಸುತ್ತಿದ್ದಾರೆ. ಸುಮಾರು ಮೂವತ್ತೈದು ವರುಷಗಳ ಹಿಂದೆ ನಿರ್ಮಾಣಗೊಂಡ ಕಾಲುಸೇತುವೆ ಇದಾಗಿದ್ದು, ಮಳೆಗಾಲದಲ್ಲಿ ಮುಳುಗಡೆಯಾಗುತ್ತದೆ ಮತ್ತು ಈ ಮಳೆಗಾಲದಲ್ಲಿ ಕೊಚ್ಚಿ...

ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಮುಂಗಾರು ಮೇಳ ಆರಂಭ

ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯು ಗ್ರಾಹಕರಿಗಾಗಿ ಮಳೆಗಾಲದ ವಿಶೇಷ ಖರೀದಿ ಉತ್ಸವ ಮುಂಗಾರು ಮೇಳವನ್ನು ಘೋಷಿಸಿದೆ. ಈ ಮೇಳವು ಜೂನ್ 13ರಿಂದ ಜೂನ್ 22ರವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಮುಕ್ತವಾಗಿದೆ. ಮೇಳದ ಅಂಗವಾಗಿ ಚಿನ್ನದ ಸರಗಳ ತಯಾರಿಕೆ ಶುಲ್ಕ ಕೇವಲ 8%ರಿಂದ, ಹಾಗೂ ಆಂಟಿಕ್ ಆಭರಣಗಳ ತಯಾರಿಕೆ ಶುಲ್ಕ 12%ರಿಂದ ಆರಂಭವಾಗುತ್ತದೆ. ಜೊತೆಗೆ...

ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ:12-06-2026 ಶುಕ್ರವಾರಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ ಮೊ: 959196919701,ಮೇಷರಾಶಿ*,ಹಣಕಾಸಿನ ವಿಷಯಗಳಲ್ಲಿ ಬುದ್ಧಿವಂತಿಕೆಯಿಂದ.ನಿರ್ಧಾರಗಳನ್ನುತೆಗೆದುಕೊಳ್ಳಿ.ಕಚೇರಿಯಲ್ಲಿಅನಗತ್ಯವಾದವಿವಾದಗಳಿಂದದೂರವಿರಿ.ಅಧಿಕಖರ್ಚು ಮಾಡುವುದು ಉತ್ತಮವಲ್ಲ, ಸ್ನೇಹಿತರ ಸಹಾಯ ಪಡೆಯಿರಿ, ವೃಥಾನಿಂದನೆಗಳನ್ನುಎದುರಿಸಬೇಕಾಗಿ ಬರಬಹುದು,ಗಮನಿಸಿ:- ಇಂದು ನಿಮ್ಮನ್ನು ನೀವೇ ವಿಮರ್ಶಿಸಿಕೊಳ್ಳಿ,ಪರಿಹಾರ:-ದೇವರಮನೆಯಲ್ಲಿ ಶಂಖವನ್ನಿಟ್ಟು ಪೂಜಿಸಿ,  *02,ವೃಷಭರಾಶಿ*,ನಿಮ್ಮಮನಸ್ಸುಗೊಂದಲಕ್ಕೊಳಗಾಗಬಹುದು, ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ.ನಿಮಗೆಆಗದವರು ಕೆಲಸದ ಸ್ಥಳದಲ್ಲಿನಿಮ್ಮನ್ನು ಕೆಣಕುವಸಾಧ್ಯತೆಇದೆ.ಅವರೆಲ್ಲರನ್ನು ನಿಮ್ಮಬುದ್ಧಿಬಲದಿಂದ ದೂರ ಇಡಿ,ಗಮನಿಸಿ:-ಪ್ರಯಾಣದ ಸಮಯದಲ್ಲಿ ಜಾಗ್ರತೆ ಇರಲಿ.ಪರಿಹಾರ:-ಶನಿ ಮಂತ್ರವನ್ನು...

ನಿಧನ : ಶ್ರೀಧರ್ ಭಾಗವತ್ ಕಜ್ಜೋಡಿ

ಹರಿಹರ ಪಳ್ಳತ್ತಡ್ಕ ಗ್ರಾಮದ ಕಜ್ಜೋಡಿ ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಧರ್ ಭಾಗವತ್ ರವರು ಜೂ.11 ರಂದು ರಾತ್ರಿ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಅಧ್ಯಾಪಕ ವೃತ್ತಿಯಲ್ಲಿ ಧೀರ್ಘ ಕಾಲ ಸೇವೆ ಸಲ್ಲಿಸಿದ್ದ ಇವರು ಸಹಾಯಕ ಪ್ರಾಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ಹಾಗೂ ಉಪನ್ಯಾಸಕರಾಗಿ ಕಡಬ, ಗುತ್ತಿಗಾರು, ದುಗ್ಗಲಡ್ಕ ಹಾಗೂ ಪಂಜ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ 22 ವರ್ಷಗಳ ಹಿಂದೆ ನಿವೃತ್ತಿಯನ್ನು...

ಎಸ್ ಡಿ ಪಿ ಐ ಸುಳ್ಯ ಅಸೆಂಬ್ಲಿ ಪ್ರತಿನಿಧಿ ಸಭೆ – ಸುಳ್ಯ ಕ್ಷೇತ್ರಾಧ್ಯಕ್ಷರಾಗಿ ಮಿರಾಝ್ ಸುಳ್ಯ ಪುನರಾಯ್ಕೆ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್‌ ಇಂಡಿಯಾ (SDPI) ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಮಧ್ಯಂತರ ಪ್ರತಿನಿಧಿ ಸಭೆಯು ಸುಳ್ಯದ ಪಿ ಆರ್ ಗೇಟ್ ಹಾಲ್ ನಲ್ಲಿ ಕ್ಷೇತ್ರಾಧ್ಯಕ್ಷರಾದ ಮಿರಾಝ್ ಸುಳ್ಯರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕ್ಷೇತ್ರಾಧ್ಯಕ್ಷರಾದ ಮಿರಾಝ್ ಸುಳ್ಯರವರು ಪಕ್ಷದ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ SDPI ಮಂಗಳೂರು ಗ್ರಾಮಾಂತರ...

ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ; ತುರ್ತು ಸ್ಪಂದಿಸಲು ಕೇಂದ್ರ ಸರ್ಕಾರಕ್ಕೆ ಸಂಸದ ಕ್ಯಾ. ಚೌಟ ಮನವಿ – ಎಂಐಡಿಹೆಚ್ ಮಿತಿ ವಿನಾಯಿತಿ ಹಾಗೂ ವಿಶೇಷ ಪ್ಯಾಕೇಜ್ ಘೋಷಣೆಗೆ ಕೃಷಿ ಸಚಿವ ಶಿವರಾಜ್ ಚೌಹಾಣ್‌ ಅವರಿಗೆ ಕೋರಿಕೆ

ನವದೆಹಲಿ : ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದ ಸಾವಿರಾರು ಅಡಿಕೆ ಬೆಳೆಗಾರರಿಗೆ ತೀವ್ರ ಆತಂಕ ತಂದೊಡ್ಡಿರುವ 'ಹಳದಿ ಎಲೆ ರೋಗ' ಮತ್ತು 'ಎಲೆ ಚುಕ್ಕಿ ರೋಗ' ಸಮಸ್ಯೆಗೆ ತುರ್ತು ಪರಿಹಾರ ಕ್ರಮ ಕೈಗೊಳ್ಳುವಂತೆ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ...
Loading posts...

All posts loaded

No more posts

error: Content is protected !!