ಬಿಜೆಪಿ ಸುಳ್ಯ ಮಂಡಲದ ವತಿಯಿಂದ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಮತ್ತು ಸಂಘಟನಾತ್ಮಕ ಸಭೆ

ಬಿಜೆಪಿ ಸುಳ್ಯ ಮಂಡಲದ ವತಿಯಿಂದ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಮತ್ತು ಸಂಘಟನಾತ್ಮಕ ಸಭೆ ಹಾಗೂ BLA-2 ಗಳಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮವು ಜೂ.09 ಮತ್ತು 10 ರಂದು ಸುಳ್ಯ ವಿಧಾನ ಸಭಾಕ್ಷೇತ್ರದ ವಿವಿಧ ಕಡೆಗಳಲ್ಲಿ ನಡೆಯಿತು.ಜೂ.09ರಂದು ಕೊಯಿಲ ಮಹಾಶಕ್ತಿ ಕೇಂದ್ರದ ಸಭೆಯು ಗೊಳಿತೊಟ್ಟು ಸಿದ್ದಿವಿನಾಯಕ ಸಭಾಂಗಣದಲ್ಲಿ, ಕಡಬ ಮಹಾಶಕ್ತಿ ಕೇಂದ್ರದ ಸಭೆಯ ಕೋಡಿಂಬಾಳ...

ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ವಿದ್ಯಾರ್ಥಿ ಶಿಕ್ಷಕಿಯರು ರಾಜ್ಯದ ವಿವಿಧ ಶಾಲೆಗಳಲ್ಲಿ ಶಿಕ್ಷಕಿಯರುಗಳಾಗಿ ಆಯ್ಕೆ

ವರ್ಲ್ಡ್ ಸ್ಕಿಲ್ ಕೌನ್ಸಿಲ್ ನಿಂದ ಮಾನ್ಯತೆ ಪಡೆದಿರುವ ಹಾಗೂ ಭಾರತ ಸರಕಾರದಿಂದ ಪ್ರವರ್ತಿತ ರಾಷ್ಟೀಯ ಅಭಿವೃದ್ಧಿ ಏಜನ್ಸಿ ಭಾರತ್ ಸೇವಕ್ ಸಮಾಜದ ಸುಳ್ಯ ತಾಲೂಕಿನ ಏಕೈಕ ಅಂಗೀಕೃತ ಸಂಸ್ಥೆಯಾದ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ 2025-26ನೇ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ(ಡಿ.ಎಂ.ಇ.ಡಿ) ಪೂರ್ಣಗೊಳಿಸಿದ ವಿದ್ಯಾರ್ಥಿ ಶಿಕ್ಷಕಿಯರು ರಾಜ್ಯದ ಹಾಗೂ ಹೊರ ರಾಜ್ಯದ ವಿವಿಧ ಪ್ರತಿಷ್ಠಿತ...
Ad Widget

ಮರ್ದೂರಡ್ಕ : ಉಚಿತ ನೋಟ್ ಪುಸ್ತಕ ಹಾಗೂ ಲೇಖನ ಸಾಮಾಗ್ರಿಗಳ ವಿತರಣೆ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮರ್ದೂರಡ್ಕದಲ್ಲಿ ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್, ಮುಂಬಯಿ ಇವರು ಕೊಡಮಾಡಿದ ಉಚಿತ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ಉದಯಕುಮಾರ್ ರೈ ನಾಗನಕಜೆ ಇವರ ನೇತೃತ್ವದಲ್ಲಿ ವಿತರಿಸಲಾಯಿತು. ಶ್ರೀ ದುರ್ಗಾ ಸೇವಾ ಸಂಘ ಕೇನ್ಯದ ಸದಸ್ಯರಾದ ದೇವಿಪ್ರಸಾದ್ ರೈ ಕೇನ್ಯ ಈ ಕೊಡುಗೆ ಒದಗಿಸುವಲ್ಲಿ ಸಹಕಾರ ನೀಡಿದರು. ಈ ಸಂದರ್ಭ...

ಹರಿಹರ ಪಳ್ಳತ್ತಡ್ಕ : ಜೂ.13 ರಂದು ಸಚಿನ್ ಕ್ರೀಡಾ ಸಂಘದ ಸಾರಥ್ಯದಲ್ಲಿ “ಅಭಿನಂದನಾ ಹಾಗೂ ಸನ್ಮಾನ ಸಮಾರಂಭ”

ಸಚಿನ್ ಕ್ರೀಡಾ ಸಂಘ(ರಿ.) ಹರಿಹರ ಪಳ್ಳತ್ತಡ್ಕ ಇದರ ಸಾರಥ್ಯದಲ್ಲಿ ಜೂ.13 ಶನಿವಾರದಂದು ಬೆಳಿಗ್ಗೆ 10:30ಕ್ಕೆ ಶ್ರೀ ಹರಿಹರೇಶ್ವರ ದೇವಸ್ಥಾನದ ಕಲಾಮಂದಿರದಲ್ಲಿ ನಿವೃತ್ತ ಯೋಧರಾದ ಭಾಸ್ಕರ ಕೇಮಟಿ ರವರಿಗೆ ಅಭಿನಂದನಾ ಸಮಾರಂಭ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.99 ಫಲಿತಾಂಶ ಪಡೆದು ರಾಜ್ಯಕ್ಕೆ 5ನೇ ಸ್ಥಾನ ಪಡೆದ ದಿ| ದಿವಾಕರ ಮುಂಡಾಜೆ ರವರ ಪುತ್ರಿ ಕು.ಆಶಿಕಾ ಮುಂಡಾಜೆ...

ಜೂ.13 : ಜೇಸಿಐ ಸುಳ್ಯ ಪಯಸ್ವಿನಿ ಹಾಗೂ ಅಂಬ್ಯುಲೆನ್ಸ್ ಚಾಲಕ ಮಾಲಕರ ಸಂಘದ ಆಶ್ರಯದಲ್ಲಿ  ರಕ್ತದಾನ ಶಿಬಿರ

ರಕ್ತದಾನವು ಮಾನವೀಯತೆಯ ಶ್ರೇಷ್ಠ ಸೇವೆಗಳಲ್ಲಿ ಒಂದಾಗಿದ್ದು, ರಕ್ತದಾನ ಮಾಡಿ-ಜೀವದಾನ ನೀಡಿ, ನಿಮ್ಮ ಒಂದು ಹನಿ ರಕ್ತ ಮತ್ತೋಬ್ಬರ ಬದುಕಿಗೆ ಆಶಾಕಿರಣವಾಗಬಹುದು ಎಂಬ ಆಶಯದೊಂದಿಗೆ ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ, ಅಂಬ್ಯುಲೆನ್ಸ್ ಚಾಲಕ ಮಾಲಕರ ಸಂಘ ಸುಳ್ಯ ತಾಲೂಕು ಹಾಗೂ ಸರಕಾರಿ ಆಸ್ಪತ್ರೆ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇವರ...

ಸುದೀರ್ಘ ದಿನಗಳು ಪ್ರಧಾನಿಯಾಗಿ ನರೇಂದ್ರ ಮೋದಿ ಸೇವೆ – ಸುಳ್ಯ ಬಿಜೆಪಿ ಮಂಡಲ ಸಮಿತಿ ವತಿಯಿಂದ ಪೆರುವಾಜೆ ದೇಗುಲದಲ್ಲಿ ವಿಶೇಷ ಪೂಜೆ

ಭಾರತದ ಪ್ರಧಾನಮಂತ್ರಿಯಾಗಿ ಸತತ 4,399 ದಿನಗಳ ಕಾಲ ನಿರಂತರವಾಗಿ ಜನಸೇವೆ ಸಲ್ಲಿಸಿ ಐತಿಹಾಸಿಕ ದಾಖಲೆ ನಿರ್ಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಸುಳ್ಯದ ಬಿಜೆಪಿ ಮಂಡಲ ಸಮಿತಿ ವತಿಯಿಂದ ಪೆರುವಾಜೆ ಜಲದುರ್ಗಾ ದೇವಸ್ಥಾನದಲ್ಲಿ ವಿಶೇಷ ಪೂಜೆ,ಹಾಗೂ ಮಹಾಮಂಗಳಾರತಿಯನ್ನು ಜೂ‌.10ರಂದು ಸಲ್ಲಿಸಲಾಯಿತು.ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸತತ 4398 ದಿನಗಳ ಆಡಳಿತದ ದಾಖಲೆಯನ್ನು...

“ಮಾನಸ ಮಹಿಳಾ ಮಂಡಲದ ಕಾರ‍್ಯಚಟುವಟಿಕೆ ಶ್ಲಾಘನೀಯ” : ಚಂದ್ರಾವತಿ ಬಡ್ಡಡ್ಕ

"ಮಾನಸ ಮಹಿಳಾ ಮಂಡಲ(ರಿ.) ಜಟ್ಟಿಪಳ್ಳವೂ ತನ್ನ ಇಪ್ಪತೈದು ವರ್ಷಗಳಿಂದಲೂ ಕ್ರಿಯಾಶೀಲವಾಗಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಮಹಿಳೆಯರ ಹಿಂದಿನ ಸ್ಥಿತಿಗೂ  ಪ್ರಸ್ತುತತೆಗೂ ತೀರಾ ಭಿನ್ನವಾಗಿ ಬೆಳೆದು ಬಂದಿದೆ" ಎಂದು ಮಾನಸ ಮಹಿಳಾ ಮಂಡಲ(ರಿ.)ದ ಬೆಳ್ಳಿಹಬ್ಬ  ಆಚರಣೆಯ ನೆನಪಿಗೆ ಹೊರತಂದ ಸ್ಮರಣಸಂಚಿಕೆ “ಮಾನಿನಿ-೨೦೨೫” ನ್ನು ಬಿಡುಗಡೆಗೊಳಿಸಿ, ಸಾಹಿತಿ-ಬರಹಗಾರರಾದ ಅರೆಭಾಷೆ ಅಕಾಡೆಮಿಯ ಸದಸ್ಯರಾದ ಶ್ರೀಮತಿ ಚಂದ್ರಾವತಿ ಬಡ್ಡಡ್ಕರವರು ಹೇಳಿದರು....

ಐವರ್ನಾಡು : ಗ್ರಾ. ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ಎಸೆದ ಸುಳ್ಯದ ನಿವಾಸಿಗಳಿಗೆ ದಂಡ

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಂಗಮಲೆ ಎಂಬಲ್ಲಿ ತ್ಯಾಜ್ಯ ಎಸೆದ ಸುಳ್ಯ ನಿವಾಸಿಗಳಿಗೆ ಜೂ.10 ರಂದು  ರೂ 5000.00 ದಂಡ ವಿಧಿಸಲಾಯಿತು. ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಂಗಮಲೆಯಲ್ಲಿ ತ್ಯಾಜ್ಯ ಎಸೆದಿದ್ದಾರೆ ಎಂಬ ಮಾಹಿತಿ ಪಡೆದ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ತ್ಯಾಜ್ಯ ಎಸೆದ ಸ್ಥಳಕ್ಕೆ ಭೇಟಿ ನೀಡಿ ತ್ಯಾಜ್ಯ ತುಂಬಿದ್ದ ಬ್ಯಾಗ್ ಪರಿಶೀಲಿಸಿ ತ್ಯಾಜ್ಯ ಎಸೆದ...

ಎನ್.ಎಂ.ಎಂ.ಎಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಮರ್ಕಂಜ ಪ್ರೌಢಶಾಲಾ ವಿದ್ಯಾರ್ಥಿಗಳು

2025-26ನೇ ಸಾಲಿನ ಎನ್.ಎಂ.ಎಂ.ಎಸ್ ವಿದ್ಯಾರ್ಥಿ ವೇತನಕ್ಕೆ ಮರ್ಕಂಜ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಅರಮನೆಗಾಯ ಸಂಜೀವ ಹಾಗೂ ಶ್ರೀಮತಿ ಸುಮತಿ ದಂಪತಿಗಳ ಪುತ್ರಿ ರೇಷ್ಮಾ, ಹಲ್ದಡ್ಕ ಪುರುಷೋತ್ತಮ ಹಾಗೂ ಶ್ರೀಮತಿ ಉಷಾ ದಂಪತಿಗಳ ಪುತ್ರಿ ಪಲ್ಲವಿ ಹಾಗೂ ಕಾಯರ ಮುತ್ತಪ್ಪ ಹಾಗೂ ಶ್ರೀಮತಿ ಸುಜಾತ ದಂಪತಿಗಳ ಪುತ್ರಿ ಶ್ರೀಷ್ಮ ಇವರುಗಳು ಆಯ್ಕೆಗೊಂಡಿದ್ದು, ಶಾಲಾ ಶಿಕ್ಷಕವೃಂದ ಹಾಗೂ ಶಾಲಾಭಿವೃದ್ಧಿ...

ಕುಕ್ಕೆ ದೇವಳದ ಭದ್ರತಾ ಸಿಬ್ಬಂದಿಗಳಿಗೆ ಉಚಿತ ಕೊಡೆ ವಿತರಣೆ

ಸುಬ್ರಹ್ಮಣ್ಯ ಜೂನ್ 10 : ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷ ಗೋಪಾಲ ಎಣ್ಣೆಮಜಲು ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 50 ಭದ್ರತಾ ಸಿಬ್ಬಂದಿಗಳಿಗೆ ಸೋಮವಾರ ಉಚಿತವಾಗಿ ಕೊಡೆಗಳನ್ನು ವಿತರಣೆ ಮಾಡಿದರು. ಭದ್ರತಾ ಸಿಬ್ಬಂದಿಯವರು ಹಗಲು ರಾತ್ರಿ ಎನ್ನದೆ ಶಿಫ್ಟ್ ನಲ್ಲಿ ಮಳೆಗಾಲ, ಬೇಸಿಗೆಗಾಲಗಳಲ್ಲಿ ಭಕ್ತಾದಿಗಳ ಸರತಿ ಸಾಲು, ವಾಹನ ಪಾರ್ಕಿಂಗ್, ದೇವಳದ ಹೊರಾಂಗಣದ...
Loading posts...

All posts loaded

No more posts

error: Content is protected !!