Ad Widget

ಫೆ.1- 4 ಸುಳ್ಯ ರಂಗಮನೆಯಲ್ಲಿ ‘ರಂಗ ಸಂಭ್ರಮ’

ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.) ಸುಳ್ಯ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಲ್ಲಿ ಫೆಬ್ರವರಿ 01 ರಿಂದ 04 ರ ವರೆಗೆ ನಾಲ್ಕು ದಿನಗಳ ‘ರಂಗ ಸಂಭ್ರಮ- 2024’  ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಫೆ.01 ರಂದು ಗುರುವಾರ ಮೂಡುಬಿದ್ರೆಯ  ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರಿಂದ ಶ್ರೀಮತಿ ವೈದೇಹಿ ರಚಿಸಿರುವ, ಡಾ.ಜೀವನ್ ರಾಂ ಸುಳ್ಯ ನಿರ್ದೇಶನದ ಪ್ರಸಿದ್ಧ ಮಕ್ಕಳ ಪ್ರಯೋಗ ‘ನಾಯಿಮರಿ ನಾಟಕ’ ಪ್ರದರ್ಶನವಿರುತ್ತದೆ.

. . . . . . . . .


ಫೆ.02 ಶುಕ್ರವಾರ ಮಂಡ್ಯ ರಮೇಶರ ನಟನ ಮೈಸೂರು ಸಂಸ್ಥೆಯ ಯುವ ಕಲಾವಿದರಾದ ಮೇಘ ಸಮೀರ ಮತ್ತು ದಿಶಾ ರಮೇಶ್ ಅಭಿನಯಿಸುವ ‘ಕಣಿವೆಯ ಹಾಡು’ ನಾಟಕವಿರುತ್ತದೆ. ಅತೊಲ್ ಫ್ಯೂಗಾರ್ಡ್ ರಚಿಸಿದ ಈ ನಾಟಕವನ್ನು ಡಾ.ಮೀರಾಮೂರ್ತಿ ಕನ್ನಡಕ್ಕೆ ಅನುವಾದಿಸಿದ್ದು , ರಂಗಕರ್ಮಿ ಡಾ.ಶ್ರೀಪಾದ ಭಟ್ ನಿರ್ದೇಶಿಸಿದ್ದಾರೆ.

. . . . . . .


ಫೆ.03 ರಂದು ಮದ್ವಾದೀಶ ವಿಠಲದಾಸ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆ ಇವರಿಂದ’ ದಾಸ ಸಂಕೀರ್ತನೆ’ ಹಾಗೂ ಕೆನರಾ ಕಲ್ಚರಲ್ ಅಕಾಡೆಮಿ ಮಂಗಳೂರು ಇಲ್ಲಿನ ಕಲಾವಿದರಿಂದ, ನೀನಾಸಂ ಪದವೀಧರರಾದ ಭುವನ್ ಮಣಿಪಾಲ ನಿರ್ದೇಶನ ಹಾಗೂ ಉಜ್ವಲ್ ಯು.ವಿ. ಇವರ ವಿನ್ಯಾಸದಲ್ಲಿ ‘ ಶೂರ್ಪಣಖಾಯನ ‘ ಎಂಬ ನಾಟಕ ಪ್ರದರ್ಶನವಿರುತ್ತದೆ.
ಫೆ.04 ರಂದು ಮೂಡುಬಿದ್ರೆಯ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರಿಂದ ಶಶಿರಾಜ್ ರಾವ್ ಕಾವೂರು ರಚಿಸಿದ, ಜೀವನ್ ರಾಂ ಸುಳ್ಯ ನಿರ್ದೇಶನದ
‘ ಏಕಾದಶಾನನ ‘ ನಾಟಕ ಪ್ರದರ್ಶನ ಮತ್ತು ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಪ್ರಸ್ತುತ ಪಡಿಸುವ, ವಿದ್ವಾನ್ ಚಂದ್ರಶೇಖರ ನಾವುಡ ನಿರ್ದೇಶನದಲ್ಲಿ ‘ದಶಾವತಾರ’ ನೃತ್ಯ ರೂಪಕವು ನಡೆಯಲಿದೆ.
ಪ್ರತಿದಿನ ಸಂಜೆ 6.30 ಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಲಿದ್ದು , ಪ್ರವೇಶ ಉಚಿತವಾಗಿರುತ್ತದೆ ಎಂದು ರಂಗಮನೆಯ ಅಧ್ಯಕ್ಷ ಡಾ.ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading