- Wednesday
- June 4th, 2025

ಬೆಳ್ಳಾರೆಯ ಮುಖ್ಯ ರಸ್ತೆಯಲ್ಲಿರುವ ಶ್ರೀದೇವಿ ಹೈಟ್ಸ್ ನ 1ನೇ ಮಹಡಿಯಲ್ಲಿ ದೀಕ್ಷಿತ್ ಪೋನಡ್ಕರವರ ಮಾಲಕತ್ವದಲ್ಲಿ ಅಭಿನವ ಡಿಜಿಟಲ್ ಸೇವಾ ಎಂಟರ್ ಪ್ರೈಸಸ್ ಸಂಸ್ಥೆ ಅ.26ರಂದು ಶುಭಾರಂಭಗೊಂಡಿತು. ಬೆಳಗ್ಗೆ 7 ಗಂಟೆಗೆ ಗಣಹೋಮ ನೆರವೇರಿತು.ಬೆಳ್ಳಾರೆ ಆರಕ್ಷಕ ಠಾಣೆಯ ಎಸ್.ಐ. ಆಂಜನೇಯ ರೆಡ್ಡಿ ದೀಪ ಬೆಳಗಿಸಿ ಉದ್ಘಾಟನೆಗೈದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆಯ ಉಮೇಶ್ ಮಣಿಕ್ಕಾರ, ಉದ್ಯಮಿಗಳಾದ...

ಕೊರೊನಾ ಲಾಕ್ಡೌನ್ ನಲ್ಲಿ ಹಲವು ಐಡಿಯಾಗಳು ಹೊರಗೆ ಬಂದಿದ್ದು, ಹಲವು ಪ್ರತಿಭೆಗಳು ಹೊರ ಜಗತ್ತಿಗೆ ಪರಿಚಯವಾಗಿವೆ. ಇದೇ ಹಿನ್ನಲೆಯಲ್ಲಿ ಜನ್ಮ ತಾಳಿದ್ದೇ "ಐಡಿಯಾ ಬಾಸ್ಕೆಟ್' ಎಂಬ ಹವ್ಯಕ ಯೂಟ್ಯೂಬ್ ವಾಹಿನಿ. ಅಳಿಯುತ್ತಿರುವ ಹವ್ಯಕ ಭಾಷೆಯ ಘಮಲನ್ನು ಮತ್ತೆ ಹರಡಿಸಲು ತಯಾರಾದ ಈ ವಾಹಿನಿಯ ಕರ್ತೃ ಡಾ| ಆದಿತ್ಯ ಭಟ್ ಚಣಿಲ.ವೃತ್ತಿಯಲ್ಲಿ ವೈದ್ಯ ವಿದ್ಯಾರ್ಥಿಯಾಗಿರುವ ಆದಿತ್ಯ ಕೊರೊನಾ...

ಶೇಣಿ ಹೊಸಮಜಲು ರಸ್ತಯ ಗುದ್ದಲಿ ಪೂಜೆ ಅ.25ರಂದು ನಡೆಯಿತು. ಗುದ್ದಲಿ ಪೂಜೆಯನ್ನು ಶಾಸಕ ಎಸ್. ಅಂಗಾರ ನೆರವೇರಿಸಿದರು.ಜಿ.ಪಂ. ಸದಸ್ಯೆ ಪುಷ್ಪಾವತಿ ಬಾಳಿಲ, ತಾ.ಪಂ ಸದಸ್ಯ ರಾಧಾಕೖಷ್ಣ ಬೊಳ್ಳೂರು, ಗ್ರಾ.ಪಂ ಮಾಜಿ ಸದಸ್ಯರಾದ ರತೀನ್ ಚೂಂತಾರು, ನಾರಾಯಣ ಆಚಾರ್ಯ, ನಿರ್ಮಲಾ ರೈ ಹಾಗೂ ಊರವರು ಉಪಸ್ಥಿತರಿದ್ದರು.

ಸುಳ್ಯ ತಾಲೂಕು ಮಡಪ್ಪಾಡಿ ಗ್ರಾಮದ ಬೊಮೆಟ್ಟಿ ವೀರಪ್ಪ ಗೌಡ ಮತ್ತು ಶ್ರೀಮತಿ ರಾಜೇಶ್ವರಿ ರವರ ಪುತ್ರಿ ಮಲ್ಲಿಕಾ ಳ ವಿವಾಹ ನಿಶ್ಚಿತಾರ್ಥವು ಹೊಸದುರ್ಗ ತಾಲೂಕಿನ ಪರಮೇಶ್ವರಪ್ಪ ಮತ್ತು ಶ್ರೀಮತಿ ಗಂಗಮ್ಮ ರವರ ಪುತ್ರ ಪ್ರವೀಣ್ ರೊಂದಿಗೆ ಮಡಪ್ಪಾಡಿಯ ಬೊಮೆಟ್ಟಿ ಮನೆಯಲ್ಲಿ ನಡೆಯಿತು.

ಸುಳ್ಯ ಬ್ಲಾಕ್ ಪರಿಶಿಷ್ಟ ಜಾತಿ ಘಟಕದ ಸಭೆ ಇಂದು ಘಟಕದ ಅಧ್ಯಕ್ಷ ಆನಂದ ಬೆಳ್ಳಾರೆ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಬ್ಲಾಕ್ ಮಾಧ್ಯಮ ವಕ್ತಾರ ನಂದರಾಜ್ ಸಂಕೇಶ್, ಕಾರ್ಯದರ್ಶಿ ಪದ್ಮನಾಭ ಮತ್ತಿತರರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ತಾಲೂಕು ಘಟಕದ ಪುನರ್ ರಚನೆ, ಸಂಘಟನೆ ಬಲಿಷ್ಠ...

ಸಂಪಾಜೆ ವಲಯ ಕಾಂಗ್ರೆಸ್ ಸಮಿತಿ ಸಭೆ ಸೋಮಶೇಖರ್ ಕೊಯಿಂಗಾಜೆ ಯವರ ಅಧ್ಯಕ್ಷತೆಯಲ್ಲಿ ಸಂಪಾಜೆ ಸೊಸೈಟಿ ಸಭಾಂಗಣದಲ್ಲಿ ನಡೆಯಿತು . ಸಭೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರರಾಗಿ ನೇಮಕವಾದ ಶವಾದ್ ಗೂನಡ್ಕ ರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹಮದ್ ಕುಂಞ ಗೂನಡ್ಕ, ಸಂಪಾಜೆ ಗ್ರಾಮ ಪಂಚಾಯತ್ ಚುನಾವಣಾ ಉಸ್ತುವಾರಿ ಜಗದೀಶ್ ರೈ, ಮಾಜಿ...

ಸುಳ್ಯ:- ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ಜಾರಿಗೊಳಿಸಿದ ಸ್ವತಂತ್ರ ಭಾರತದ ಅತ್ಯಂತ ಕರಾಳ ಕೃಷಿ ಕಾನೂನಿನ ವಿರುದ್ಧವಾಗಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದೇಶವ್ಯಾಪಿ ಅಕ್ಟೋಬರ್ ತಿಂಗಳಿನಲ್ಲಿ "ಜಾಗೋ ಕಿಸಾನ್" ಕೃಷಿ ಸಂಹಾರ ಬಿಜೆಪಿಯ ಹುನ್ನಾರ ಎಂಬ ಹೆಸರಿನಲ್ಲಿ ಅಭಿಯಾನ ಕೈಗೊಂಡಿದ್ದು ಇದರ ಭಾಗವಾಗಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ...

ಸುಳ್ಯ ವೃತ್ತ ನಿರೀಕ್ಷಕ ಕಚೇರಿಯಲ್ಲಿ ಆಯುಧ ಪೂಜಾ ಕಾರ್ಯಕ್ರಮ ನಡೆಯಿತು. ಪುರೋಹಿತ ಬ್ರಹ್ಮಶ್ರೀ ನಾಗರಾಜ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನ, ಎಎಸ್ಐ ದಾಮೋದರ, ಸುಳ್ಯ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು, ರೈಟರ್ ದೇವರಾಜ್, ಸಿಬ್ಬಂದಿಗಳಾದ ರಾಮಚಂದ್ರ, ಮಂಜುನಾಥ, ಮೌಲಾನ, ಸುರೇಶ್,...

ಮುಕ್ಕೂರು-ಪೆರುವಾಜೆ ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ಮುಕ್ಕೂರು ಶಾಲಾ ವಠಾರದಲ್ಲಿ ನಡೆದ 5 ನೇ ವರ್ಷದ ಶ್ರೀ ಶಾರದೋತ್ಸವ ಅ.25 ರಂದು ಮುಕ್ಕೂರು ಶಾಲಾ ವಠಾರದಲ್ಲಿ ನಡೆಯಿತು. ಪತಂಜಲಿ ಶಾಸ್ತ್ರೀ ಮುಕ್ಕೂರು ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.ಬೆಳಗ್ಗೆ ಶಾರದಾ ಪ್ರತಿಷ್ಟೆ, ಪೂಜೆ, ಗಣಹೋಮ, ಮಹಾಪೂಜೆ ನಡೆಯಿತು. ಮಧ್ಯಾಹ್ನ ಮುಕ್ಕೂರು ವಠಾರದಿಂದ ಮೆರವಣಿಗೆ ಸಾಗಿ ಚೆನ್ನಾವರ ಗೌರಿ...

All posts loaded
No more posts