ಬೆಳ್ಳಾರೆ :  ಪೆರುವಾಜೆ ದ್ವಾರದ ಬಳಿ ಸ್ಕೂಟಿ ಹಾಗೂ ಬೈಕ್ ಮುಖಾಮುಖಿ – ಜಖಂ

ಬೆಳ್ಳಾರೆ :  ಪೆರುವಾಜೆ ದ್ವಾರದ ಬಳಿ ಸ್ಕೂಟಿ ಹಾಗೂ ಬೈಕ್ ಮುಖಾಮುಖಿ ಢಿಕ್ಕಿಯಾದ ಘಟನೆ ಇಂದು ಸಂಜೆ ನಡೆದಿದೆ. ಒರ್ವ ಸವಾರನ ಕಾಲಿಗೆ, ಮತ್ತೋರ್ವನ ಕೈ ಬೆರಳಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

30 ನೇ ವರ್ಷಕ್ಕೆ ಪಾದಾರ್ಪಣೆ ಪಾದುಕಾ ಕಲೆಕ್ಷನ್ – ಫೂಟ್ ವೇರ್ ಖರೀದಿಯಲ್ಲಿ ಭಾರಿ ದರ ಕಡಿತ

https://youtube.com/@amarasuddiamarasuddi7408?si=MLl3rw9jeQDKEOz1 ಸುಳ್ಯ ಶ್ರೀರಾಮ್ ಪೇಟೆಯಲ್ಲಿ ಕಳೆದ 30 ವರ್ಷಗಳಿಂದ ಕಾರ್ಯಚರಿಸುತ್ತಿರುವ ಪಾದುಕಾ ಕಲೆಕ್ಷನ್ ಪಾದರಕ್ಷೆ ಅಂಗಡಿಯಲ್ಲಿ ಭಾರಿ ದರಕಡಿತ ಮಾರಾಟ ಆರಂಭವಾಗಿದೆ. ಪಾದರಕ್ಷೆಗಳ ಅಪಾರ ಸಂಗ್ರಹವಿದ್ದು ಪ್ರತಿಯೊಂದು ಪಾದರಕ್ಷಗಳ ಮೇಲೆ ಶೇಕಡ 10 ರಿಂದ 60ರಷ್ಟು ದರ ಕಡಿತದಲ್ಲಿ ಮಾಡಲಾಗುತ್ತಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಹಾಗೂ ನಮ್ಮನ್ನು 30 ವರ್ಷಗಳಿಂದ ಪ್ರೋತ್ಸಾಹಿಸಿದ ಗ್ರಾಹಕರಿಗೆ  ಸಂಸ್ಥೆಯ...
Ad Widget

ನಮ್ಮ ಸರಕಾರದ ಜನಪರ ಯೋಜನೆಗಳು ಜಿಲ್ಲೆಯಲ್ಲಿ ಮತಗಳಾಗಿ ಪರಿವರ್ತನೆ ಆಗಲಿದೆ – ಪಿ ಸಿ ಜಯರಾಮ್ : 

ಬದುಕು ಮತ್ತು ಭಾವನಾತ್ಮಕ ವಿಷಯಗಳ ನಡುವೆ ಈ ಬಾರಿಯ ಚುನಾವಣೆ - ಭರತ್ ಮುಂಡೋಡಿ ಲೋಕಸಭಾ ಚುನಾವಣೆಗೆ ದಿನ ನಿಗದಿಯಾಗಿದ್ದು, ಎರಡನೆ ಹಂತದ ಚುನಾವಣೆಯಲ್ಲಿ ನಡೆಯಲಿದ್ದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಮಾ. 30 ರಂದು ಸುಳ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ ಜಯರಾಮ ತಿಳಿಸಿದರು. https://youtu.be/PxrTzXRCgsU?si=MGONoZ4SG1IhY18z ಅವರು ಸುಳ್ಯದ...

ಬಿಜೆಪಿ ಯುವಮೋರ್ಚಾ ವತಿಯಿಂದ ಯುವ ಚೌಪಾಲ್ ಕಾರ್ಯಕ್ರಮ

ಬಿಜೆಪಿ ಯುವ ಮೋರ್ಚಾ, ಸುಳ್ಯ ಮಂಡಲದ ವತಿಯಿಂದ ಯುವ ಚೌಪಾಲ್ ಕಾರ್ಯಕ್ರಮವು ಸುಳ್ಯ ತಾಲೂಕು ಅಲೆಟ್ಟಿ ಗ್ರಾಮದ ಕೂರ್ನಡ್ಕ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸುಳ್ಯ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಶ್ರೀಕಾಂತ್ ಮಾವಿನಕಟ್ಟೆ, ಜಿಲ್ಲಾ ಉಪಾಧ್ಯಕ್ಷರು, ಹಾಗೂ ಸುಳ್ಯ ಯುವಮೋರ್ಚಾ ಮಂಡಲ ಪ್ರಭಾರಿ ವರುಣ್ ರಾಜ್ ಅಂಬಟ್, ಜಿಲ್ಲಾ ಕಾರ್ಯದರ್ಶಿಗಳಾದ ವಿರೂಪಾಕ್ಷ...

ಬಿಜೆಪಿ ಯುವಮೋರ್ಚಾ ವತಿಯಿಂದ ಯುವ ಚೌಪಾಲ್ ಕಾರ್ಯಕ್ರಮ

ಬಿಜೆಪಿ ಯುವ ಮೋರ್ಚಾ, ಸುಳ್ಯ ಮಂಡಲದ ವತಿಯಿಂದ ಯುವ ಚೌಪಾಲ್ ಕಾರ್ಯಕ್ರಮವು ಸುಳ್ಯ ತಾಲೂಕು ಅಲೆಟ್ಟಿ ಗ್ರಾಮದ ಕೂರ್ನಡ್ಕ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸುಳ್ಯ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಶ್ರೀಕಾಂತ್ ಮಾವಿನಕಟ್ಟೆ, ಜಿಲ್ಲಾ ಉಪಾಧ್ಯಕ್ಷರು, ಹಾಗೂ ಸುಳ್ಯ ಯುವಮೋರ್ಚಾ ಮಂಡಲ ಪ್ರಭಾರಿ ವರುಣ್ ರಾಜ್ ಅಂಬಟ್, ಜಿಲ್ಲಾ ಕಾರ್ಯದರ್ಶಿಗಳಾದ ವಿರೂಪಾಕ್ಷ...

ಕೇರಳದ ಸಹ-ಚುನಾವಣಾ ಉಸ್ತುವಾರಿಯಾಗಿ ನಳಿನ್ ಕುಮಾರ್ ಕಟೀಲ್ ನೇಮಕ

ದ.ಕ.ಲೋಕಸಭಾ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರನ್ನು ಮುಂಬರುವ ಲೋಕಸಭೆ ಚುನಾವಣೆ 2024 ಕ್ಕೆ ಕೇರಳದ ಸಹ-ಚುನಾವಣಾ ಉಸ್ತುವಾರಿಯಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ನೇಮಿಸಿದ್ದಾರೆ. ಎರಡು ಬಾರಿ ಸಂಸದರಾಗಿರುವ ಕಟೀಲ್ ರವರು ರಾಜ್ಯಾಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.

ಎಡಮಂಗಲ : ಕೊಲ್ಲರ್ನೂಜಿ ಕುಟುಂಬದ ಧರ್ಮನಡಾವಳಿ ಹಾಗೂ ಸಭಾ ಕಾರ್ಯಕ್ರಮ

ಎಡಮಂಗಲ ಗ್ರಾಮದ ಜಾಲ್ತಾರು ಕೊಲ್ಲರ್ನೂಜಿ ಕುಟುಂಬದ ತರವಾಡು ಮನೆಯಲ್ಲಿ ಕೊಲ್ಲರ್ನೂಜಿ ಕುಟುಂಬಸ್ಥರ ಧರ್ಮದೈವ ಮತ್ತು ಉಪದೈವಗಳ ಧರ್ಮನಡಾವಳಿಯು ಮಾ.24 ಹಾಗೂ ಮಾ.25ರಂದು ಜರುಗಿತು. ಧರ್ಮನಡಾವಳಿಯ ಪ್ರಯುಕ್ತ ಮಾ.24ರಂದು ಬೆಳಗ್ಗೆ ಗಣಹೋಮ ನೆರವೇರಿತು. ಸಂಜೆ ದೈವಗಳ ಭಂಡಾರ ತೆಗೆದು ಅನ್ನಸಂತರ್ಪಣೆ ನಡೆಯಿತು. ಬಳಿಕ ಸತ್ಯದೇವತೆ, ಕಲ್ಲುರ್ಟಿ, ವರ್ಣಾರ ಪಂಜುರ್ಲಿ, ಧರ್ಮದೈವ ರುದ್ರಚಾಮುಂಡಿ ಮತ್ತು ಗುಳಿಗ ದೈವಗಳ ನೇಮೋತ್ಸವ...

ಕುಕ್ಕೆ ಸುಬ್ರಮಣ್ಯ : ನಿರಂತರ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ ರವಿ ಕಕ್ಕೆಪದವು ಸಮಾಜ ಸೇವಾ ತಂಡ

ಕುಕ್ಕೆ ಸುಬ್ರಮಣ್ಯದ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನವರು ಕುಮಾರಧಾರದ ದ್ವಾರದಿಂದ ಕಾಶಿ ಕಟ್ಟೆ ವರೆಗಿನ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ಹಾಗೂ ಕಾಶಿ ಕಟ್ಟೆ ಸುತ್ತಮುತ್ತಲಿನ ಪರಿಸರದಲ್ಲಿ ಇದ್ದಂತಹ ಕಸ ಕಡ್ಡಿಗಳು, ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸ್ಟಿಕ್ ಚೀಲ ಹಾಗೂ ಇನ್ನಿತರ ಕಚ್ಚಾ ವಸ್ತುಗಳನ್ನು ಹೆಕ್ಕಿ ಸ್ವಚ್ಛತಾ ಕಾರ್ಯ ಕೈಗೊಂಡರು. ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ...

ಶ್ರೀ ಕಿನ್ನಿಮಾಣಿ ಪೂಮಾಣಿ ಸೇವಾ ಸಮಿತಿ, ಕುಕ್ಕನ್ನೂರು ಇದರ ಸಾಮಾನ್ಯ ಸಭೆ

ಮಾ. 24 ರವಿವಾರ ಸಂಜೆ ಗಂಟೆ 6.00ಕ್ಕೆ ಶ್ರೀ ಕಿನ್ನಿಮಾಣಿ ಪೂಮಾಣಿ ಸೇವಾಸಮಿತಿಯ ಸಾಮಾನ್ಯ ಸಭೆಯುಕುಕ್ಕನ್ನೂರಿನ ಕಟ್ಟಮುಚೀರ್ ಮಾಡದ ಬಳಿಯಲ್ಲಿ ನಡೆಯಿತು. ಈ ಸಭೆಯಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ಕುಕ್ಕನ್ನೂರು ಕಾಲಾವಧಿ ಉತ್ಸವ ದ ಪೂರ್ವ ತಯಾರಿಯ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಊರವರು ಸೇರಿದ್ದರು.

ಬೆಳ್ಳಾರೆ ವಲಯ ಕಾಂಗ್ರೇಸ್ ಚುನಾವಣ ಪ್ರಚಾರ ಕಛೇರಿ ಉದ್ಘಾಟಣೆ

ಮಾ.30ರ ಶನಿವಾರ ಮದ್ಯಾಹ್ನ  1 ಘಂಟೆಗೆ ಸರಿಯಾಗಿ ಬೆಳ್ಳಾರೆಯ ಕಲ್ಪವ್ರಕ್ಷ ಆರ್ಕೆಡ್ ನಲ್ಲಿ ಕಾಂಗ್ರೇಸ್ ಚುನಾವಣ ಪ್ರಚಾರ ಕಛೇರಿ ಉದ್ಘಾಟಣೆ ನಡೆಯಲಿದೆ. ಈ ಸಮಾರಂಭಕ್ಕೆ ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯಮತ್ತು ಜಿಲ್ಲಾ , ತಾಲೂಕಿನ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಕಾಂಗ್ರೇಸ್ ಪಕ್ಷದ ನಾಯಕರು ಕಾರ್ಯಕತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಬೇಕಾಗಿ ಬೆಳ್ಳಾರೆ ವಲಯ ಕಾಂಗ್ರೇಸ್ ಮೂಲಗಳು...
Loading posts...

All posts loaded

No more posts

error: Content is protected !!