Ad Widget

ರಾಜ್ಯಮಟ್ಟದ ಕರುನಾಡು ಕಲಾಕುಂಚ ಇ-ಪ್ರಶಸ್ತಿ ಗೆ ಆಯ್ಕೆ

ಕರುನಾಡು ಸಾಹಿತ್ಯ ಪರಿಷತ್ತು,ತಾಲ್ಲೂಕು ಘಟಕ ಚಿಂತಾಮಣಿ ಇವರು ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳಿಗಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಅಂತರ್ಜಾಲ ಚಿತ್ರಕಲಾ ಸ್ಪರ್ಧೆ ಯಲ್ಲಿ 1ರಿಂದ 5 ತರಗತಿ ವಿಭಾಗದಲ್ಲಿ ಸುಳ್ಯದ ರೋಟರಿ ವಿದ್ಯಾ ಸಂಸ್ಥೆಯ ಯ 5ನೇ ತರಗತಿಯ ಮನುಜ್ಞ ಯು.ಬಿ. ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟದ ಕರುನಾಡು ಕಲಾಕುಂಚ ಇ-ಪ್ರಶಸ್ತಿ ಗೆ  ಭಾಜನರಾಗಿದ್ದಾರೆ.

ಹಾಗೂ 6 ರಿಂದ 10ನೇ ತರಗತಿ ವಿಭಾಗದಲ್ಲಿ 8ನೇ ತರಗತಿಯ ಮನಸ್ವಿ ಯು. ಬಿ. ಇವರ ಚಿತ್ರ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ.
ಇವರು ದೇವರಾಜ್ ಯು.ಬಿ.,  ಹಾಗೂ ಕೆವಿಜಿ ಆಯುರ್ವೇದ ಕಾಲೇಜಿನ ಶ್ರೀಮತಿ. ವೇದಾಮಣಿ ಯಂ.ಬಿ.ಇವರ ಸುಪುತ್ರಿಯರು.
ಈ ಕಾರ್ಯಕ್ರಮವನ್ನು   ಕ.ಸಾ.ಪ. ಚಿಂತಾಮಣಿ ಇದರ ಅಧ್ಯಕ್ಷರಾದ ಹೆಚ್ ಎಸ್ ಅಶೋಕ್ ಕೆ., ಕ.ಸಾ.ಪ. ರಾಜ್ಯಾಧ್ಯಕ್ಷರಾದ ಫಯಾಜ್ ಅಹಮದ್ ಖಾನ್, ಕ.ಸಾ.ಪ. ರಾಜ್ಯ ಕಾರ್ಯದರ್ಶಿ ಕೆ ಎನ್ ಅಕ್ರಂಪಾಷ ನೆರವೇರಿಸಿದರು ಎಂದು ಕರುನಾಡು ಸಾಹಿತ್ಯ ಘಟಕದ ಸದಸ್ಯೆ ಲತಾಶ್ರೀ ಸುಪ್ರೀತ್ ರವರು ತಿಳಿಸಿರುತ್ತಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!