Ad Widget

ವಿವಾಹ ನಿಶ್ಚಿತಾರ್ಥ : ಚೈತ್ರಾ – ರಾಜೇಶ್ (ರವಿರಾಜ್)

ಕಡಬ ತಾಲೂಕು ಕಡಬ ಗ್ರಾಮದ ಆರಿಗ ಮನೆ ದಿ.ಶ್ರೀಧರ ಗೌಡರ ಪುತ್ರಿ ಚೈತ್ರಾರವರ ವಿವಾಹ ನಿಶ್ಚಿತಾರ್ಥವು ಸುಳ್ಯ ತಾಲೂಕು ಕೊಡಿಯಾಲ ಕಲ್ಪಡ ಇಪ್ಪುಲ್ತಡಿ ದಿ.ಪುಟ್ಟಣ್ಣ ಗೌಡರ ದ್ವಿತೀಯ ಪುತ್ರ ರಾಜೇಶ್ (ರವಿರಾಜ್)ರೊಂದಿಗೆ ನ.22ರಂದು ವಧುವಿನ ಮನೆಯಲ್ಲಿ ನಡೆಯಿತು.

ಪಂಜ: ದಿ. ಮಹಾಬಲ ಕುಳರವರಿಗೆ ನುಡಿನಮನ

ಕಲೆ, ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಮಾಜಮುಖಿ ಚಿಂತನೆಗಳೊಂದಿಗೆ ಸಂಘಟನಾತ್ಮಕವಾಗಿ ತನ್ನನ್ನು ತಾನು ತೊಡಗಿಸಿಕೊಂಡು ಸಾರ್ಥಕ ಬದುಕಿನ ಹಾದಿಯಲ್ಲಿ ಆಕಸ್ಮಿಕವಾಗಿ ಅಗಲಿದ ಪಂಜ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಚಿತ್ರಕಲಾ ಶಿಕ್ಷಕ ದಿ. ಮಹಾಬಲ ಕುಳರವರ ಶ್ರದ್ಧಾಂಜಲಿ ಸಭೆಯು ಜೇಸಿಐ ಪಂಜ ಪಂಚಶ್ರೀ, ಲಯನ್ಸ್ ಕ್ಲಬ್ ಪಂಜ, ಆರಾಧನ ಸಮಿತಿ ಪಂಜ, ಹಿರಿಯ...
Ad Widget

ವಳಲಂಬೆಯಲ್ಲಿ ರಂಗಪ್ರವೇಶ, ಯಕ್ಷೋತ್ಸವ; ಸಾತ್ವಿಕ ಆನಂದಗಳು ಮನುಷ್ಯನನ್ನು ಪರಿಪೂರ್ಣನಾಗಿಸುತ್ತವೆ: ಶಿವರಾಮ ಶಾಸ್ತ್ರಿ ಆಚಳ್ಳಿ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಯಕ್ಷಗಾನ ಕಲಾಕೇಂದ್ರ ವಳಲಂಬೆ ಇದರ ಆಶ್ರಯದಲ್ಲಿ ಮೂರನೇ ವರ್ಷದ ರಂಗಪ್ರವೇಶ ಮತ್ತು ಯಕ್ಷೋತ್ಸವ ನ.22ರಂದು ವಳಲಂಬೆಯಲ್ಲಿ ನಡೆಯಿತು. ಸಭೆಯಲ್ಲಿ ಹವ್ಯಾಸಿ ಕಲಾವಿದ ಕುಶಾಲಪ್ಪ ಗೌಡ ರುದ್ರಚಾಮುಂಡಿ, ಯಕ್ಷಗುರು ಗಿರೀಶ್ ಗಡಿಕಲ್ಲುರವರನ್ನು ಸನ್ಮಾನಿಸಿ ಮಾತನಾಡಿದ ನಿವೃತ್ತ ಮುಖ್ಯಗುರು ಶಿವರಾಮ ಶಾಸ್ತ್ರಿ ಆಚಳ್ಳಿ ' ಜಗತ್ತಿನಲ್ಲಿ ಲೌಕಿಕ ಬದುಕಿಗಿಂತ ಸಾತ್ವಿಕ‌ ಆನಂದ ಶ್ರೇಷ್ಟ,...

ಕೆ.ಪಿ.ಸಿ.ಸಿ.ಕಾನೂನು ವಿಭಾಗದ ಅಧ್ಯಕ್ಷರ ಭೇಟಿ ಮಾಡಿದ ಸುಳ್ಯದ ಕಾಂಗ್ರೆಸ್ ನಾಯಕರು

ಕೆ.ಪಿ.ಸಿ.ಸಿ.ಕಾನೂನು ಹಾಗೂ ಮಾನವ ಹಕ್ಕು ವಿಭಾಗದ ಅಧ್ಯಕ್ಷರು ಮತ್ತು ಕರ್ನಾಟಕ ಸರ್ಕಾರದ ಮಾಜಿ ಹೆಚ್ಚುವರಿ ಅಡ್ವಾಕೇಟ್ ಜನರಲ್ ಶ್ರೀ ಎ.ಎಸ್.ಪೊನ್ನಣ್ಣರವರು ನ. 22 ರಂದು ಪೆರಾಜೆ ಗ್ರಾಮಕ್ಕೆ ಭೇಟಿ ಮಾಡಿದ ಸಂದರ್ಭದಲ್ಲಿ ಕೆ ಪಿ ಸಿ ಸಿ ಮಾಜಿ ಕಾರ್ಯದರ್ಶಿ ಟಿ ಎಂ ಶಹೀದ್ , ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಧರ್ಮಪಾಲ...

ಕ್ರೈಸ್ತ ಅಲ್ಪಸಂಖ್ಯಾತರ ಸೊಸೈಟಿಯಿಂದ ದಿವ್ಯಜ್ಯೋತಿ ಕ್ಯಾಶ್ ಸರ್ಟಿಫಿಕೇಟ್ ಹಾಗೂ ರಿಕರಿಂಗ್ ಡೆಪಾಸಿಟ್ ಯೋಜನೆ ಬಿಡುಗಡೆ

ಸುಳ್ಯ ತಾಲೂಕು ಕ್ರೈಸ್ತ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಹೊಸ ಯೋಜನೆಗಳನ್ನು ಬಿಡುಗಡೆಗೊಳಿಸಿದೆ. ದಿವ್ಯಜ್ಯೋತಿ ಕ್ಯಾಶ್ ಸರ್ಟಿಫಿಕೇಟ್ ಹಾಗೂ ರಿಕರಿಂಗ್ ಡೆಪಾಸಿಟ್ ಯೋಜನೆಗಳನ್ನು ಜಾರಿಗೆ ತಂದಿದ್ದು ಇದರ ಉದ್ಘಾಟನೆ ನ.21 ರಂದು ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ಬಿಟ್ಟಿ ಬಿ‌‌.ನೆಡುನಿಲಂ ವಹಿಸಿದ್ದರು. ಸಂತ ಬ್ರಿಜಿಡ್ಸ್ ಚರ್ಚ್ ನ ಧರ್ಮಗುರು...

ಬೆಳ್ಳಾರೆಯಲ್ಲಿ ಸಿಂಚನ ಡೆವಲಪ್ಪರ್ಸ್ ರಬ್ಬರ್ ಖರೀದಿ ಕೇಂದ್ರ ಶುಭಾರಂಭ

ಬೆಳ್ಳಾರೆಯ ಮೇಲಿನ ಪೇಟೆಯಲ್ಲಿರುವ ಮಾಸ್ತಿಕಟ್ಟೆ ಮೊಯಿದೀನ್ ಕಾಂಪ್ಲೆಕ್ಸ್ ನಲ್ಲಿ ಬೆಳ್ಳಾರೆಯ ಸಿಂಚನ ಆಟೋ ಮಾಲಕರಾದ ಲೋಕೇಶ್ ಮೊಗಪ್ಪೆ ಮತ್ತು ಶಶಿಕುಮಾರ್ ಮೊಗಪ್ಪೆ ಮಾಲಕತ್ವದ ಸಿಂಚನ ಡೆವಲಪ್ಪರ್ಸ್ ರಬ್ಬರ್ ಖರೀದಿ ಕೇಂದ್ರ ನ.22 ರಂದು ಶುಭಾರಂಭಗೊಂಡಿತು.ಬೆಳಗ್ಗೆ ಗಣಹೋಮ ನೆರವೇರಿತು.ಲೋಕೇಶ್ ಮೊಗಪ್ಪೆ ಹಾಗೂ ಶಶಿಕುಮಾರ್ ಮೊಗಪ್ಪೆಯವರ ತಾಯಿ ಶ್ರೀಮತಿ ಅನ್ನಲಕ್ಷ್ಮೀ ದೀಪ ಬೆಳಗಿಸಿ ಮಳಿಗೆಯ ಉದ್ಘಾಟನೆಗೈದರು. ಈ ಸಂದರ್ಭದಲ್ಲಿ...

ಬೆಳ್ಳಾರೆಯಲ್ಲಿ ಸಿಂಚನ ಡೆವಲಪ್ಪರ್ಸ್ ರಬ್ಬರ್ ಖರೀದಿ ಕೇಂದ್ರ ಶುಭಾರಂಭ

ಬೆಳ್ಳಾರೆಯ ಮೇಲಿನ ಪೇಟೆಯಲ್ಲಿರುವ ಮಾಸ್ತಿಕಟ್ಟೆ ಮೊಯಿದೀನ್ ಕಾಂಪ್ಲೆಕ್ಸ್ ನಲ್ಲಿ ಬೆಳ್ಳಾರೆಯ ಸಿಂಚನ ಆಟೋ ಮಾಲಕರಾದ ಲೋಕೇಶ್ ಮೊಗಪ್ಪೆ ಮತ್ತು ಶಶಿಕುಮಾರ್ ಮೊಗಪ್ಪೆ ಮಾಲಕತ್ವದ ಸಿಂಚನ ಡೆವಲಪ್ಪರ್ಸ್ ರಬ್ಬರ್ ಖರೀದಿ ಕೇಂದ್ರ ನ.22 ರಂದು ಶುಭಾರಂಭಗೊಂಡಿತು.ಬೆಳಗ್ಗೆ ಗಣಹೋಮ ನೆರವೇರಿತು.ಲೋಕೇಶ್ ಮೊಗಪ್ಪೆ ಹಾಗೂ ಶಶಿಕುಮಾರ್ ಮೊಗಪ್ಪೆಯವರ ತಾಯಿ ಶ್ರೀಮತಿ ಅನ್ನಲಕ್ಷ್ಮೀ ದೀಪ ಬೆಳಗಿಸಿ ಮಳಿಗೆಯ ಉದ್ಘಾಟನೆಗೈದರು. ಈ ಸಂದರ್ಭದಲ್ಲಿ...

ಕುಡೆಕಲ್ಲು ಜತ್ತಪ್ಪ ಗೌಡ (ಟೈಲರ್)ನಿಧನ

ಆಲೆಟ್ಟಿ ಗ್ರಾಮದ ಕುಡೆಕಲ್ಲು ಮನೆತನದ ಜಯನಗರ ನಿವಾಸಿ ಜತ್ತಪ್ಪ ಗೌಡ ರವರು ಹೃದಯಾಘಾತದಿಂದ ಇಂದು ಬೆಳಗ್ಗೆ ( ನ.22 ರಂದು )ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಒರ್ವ ಪುತ್ರ, ಒರ್ವ ಪುತ್ರಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.ಇವರು ಹಲವಾರು ವರ್ಷಗಳಿಂದ ಸುಳ್ಯದ ರೋಟರಿ ಶಾಲಾ ಬಳಿ ಟೈಲರ್ ವೃತ್ತಿ ಮಾಡುತ್ತಿದ್ದರು. ಮೃತರ...

ದೇವಕಿ ಆಜಡ್ಕ ಕಮಿಲ ನಿಧನ

ಗುತ್ತಿಗಾರು ಗ್ರಾಮದ ಕಮಿಲ ಆಜಡ್ಕ ದಿ.ಶೇಷಪ್ಪ ಗೌಡರ ಧರ್ಮಪತ್ನಿ ದೇವಕಿ (75) ಅಲ್ಪಕಾಲದ ಅಸೌಖ್ಯದಿಂದ ನ.22ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಮೋಹನ,ರವೀಂದ್ರ, ಉದಯಕುಮಾರ, ಪುತ್ರಿ ಶೇಷಮ್ಮ ಹಾಗೂ ಮೊಮ್ಮಕ್ಕಳು ಮತ್ತು ಮರಿಮಕ್ಕಳನ್ನು ಅಗಲಿದ್ದಾರೆ.
error: Content is protected !!