ಪಂಜಿಕಲ್ಲಿನ ರಸ್ತೆಯಲ್ಲಿ ಎಂಟು ಕಾಡಾನೆಗಳ ಹಿಂಡು ಎ.4ರಂದು ಬೆಳಿಗ್ಗೆ ರಸ್ತೆ ದಾಟಿ ಸಮೀಪದ ಬೆಳ್ಳಿಪ್ಪಾಡಿ ಕಾಡಿಗೆ ಸಂಚರಿಸಿದೆ.
ಮುರೂರು, ಕೇನಾಜೆಯ ಸಮೀಪದಲ್ಲಿ ಸುಮಾರು ಎಂಟು ಆನೆಗಳ ಹಿಂಡು ಪಯಸ್ವಿನಿ ನದಿ ದಾಟಿ ರಸ್ತೆಯಲ್ಲಿ ಸಂಚರಿಸಿದೆ. ಇದೀಗ ದೇಲಂಪಾಡಿ ಗ್ರಾಮದ ಮೆನ್ನಾ ಎಂಬಲ್ಲಿ ಕಾಡಿನಲ್ಲಿ ಬೀಡು ಬಿಟ್ಟಿರುವುದಾಗಿ ತಿಳಿದುಬಂದಿದೆ. ಆನೆಗಳು ಸಂಚರಿಸಿದ ಪರಿಸರ ಮಹಾಬಲಡ್ಕ, ಪಂಜಿಕಲ್ಲು, ದೇವರಗುಂಡ ಹಾಗೂ ಬೆಳ್ಳಿಪ್ಪಾಡಿಯಲ್ಲಿ ಅಪಾರ ಪ್ರಮಾಣದ ಕೃಷಿ ನಾಶಗೊಂಡಿರುವುದಾಗಿ ತಿಳಿದುಬಂದಿದೆ.