ಸುಳ್ಯ : ಸುಳ್ಯ ಕಾಸರಗೋಡು ಸಂಪರ್ಕಿಸುವ ಅಂತರ್ ರಾಜ್ಯ ಹೆದ್ದಾರಿಯಲ್ಲಿ ಇದೀಗ ಒಂಟಿಸಲಗ ರಸ್ತೆಯಲ್ಲೆ ನಡೆದುಕೊಂಡು ಬಂದಿರುವ ಘಟನೆ ವರದಿಯಾಗಿದೆ.
ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಂತರ್ ರಾಜ್ಯ ಗಡಿಯಾದ ಮುರೂರು ಎಂಬಲ್ಲಿ ಚುನಾವಣಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು ಈ ಚೆಕ್ ಪೋಸ್ಟ್ ನ ಕೂಗಳತೆ ದೂರದಲ್ಲಿ ಒಂಟಿಸಲಗವು ರಸ್ತೆಯಲ್ಲಿ ನಡೆದುಕೊಂಡು ಬಂದಿದ್ದು ಇದೀಗ ಒಂಟಿ ಸಲಗವನ್ನು ಹತ್ತಿರದಿಂದ ಕಂಡ ಅಧಿಕಾರಿಗಳು ಭಯದಲ್ಲಿ ಇದ್ದು ಸ್ಥಳಕ್ಕೆ ಕೇರಳ ರಾಜ್ಯದ ಅರಣ್ಯ ಅಧಿಕಾರಿಗಳು ಆಗಮಿಸಿರುವುದಾಗಿ ತಿಳಿದುಬಂದಿದೆ ಇತ್ತ ಒಂಟಿ ಸಲಗವು ರಸ್ತೆಯ ಮೇಲ್ಬಾಗದಲ್ಲಿರುವ ರಬ್ಬರ್ ತೋಟಕ್ಕೆ ತೆರಳಿದೆ ಎಂದು ಕರ್ತವ್ಯ ನಿರತರಾಗಿರುವ ಅಧಿಕಾರಿಗಳ ಮೂಲಗಳಿಂದ ತಿಳಿದು ಬಂದಿದ್ದು ಅರಣ್ಯ ಅಧಿಕಾರಿಗಳು ಕೂಡಲೇ ಸುಳ್ಯದ ಅರಣ್ಯ ಅಧಿಕಾರಿಗಳು ತೆರಳಿ ಅಲ್ಲಿ ಕರ್ತವ್ಯ ನಿರತ ಅಧಿಕಾರಿಗಳು ಮತ್ತು ಜನತೆಯ ಕೃಷಿಗಳ ರಕ್ಷಣೆಯನ್ನು ಮಾಡಬೇಕಿದೆ ಎಂದು ಜನತೆ ಆಗ್ರಹಿಸಿದ್ದಾರೆ.