Ad Widget

ಇತಿಹಾಸ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾಗಿ ಪ್ರಸನ್ನ ಎನ್.ಎಚ್. ಆಯ್ಕೆ

ದ.ಕ.ಜಿಲ್ಲಾ ಇತಿಹಾಸ ಉಪನ್ಯಾಸಕರ ಸಂಘದ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುಳ್ಯ ಶಾರದಾ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಪ್ರಸನ್ನ ಎನ್.ಎಚ್ ಆಯ್ಕೆಯಾಗಿದ್ದಾರೆ.ಇತ್ತೀಚೆಗೆ ಸಂಘದ ಅಧ್ಯಕ್ಷ ರಾಮಚಂದ್ರ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಕಾರ್ಯದರ್ಶಿಯಾಗಿ ಮಂಗಳೂರಿನ ಬಿಇಎಂ ಪದವಿಪೂರ್ವ ಕಾಲೇಜಿನ ಐತಪ್ಪ ಎಂ. ನೇಮಕಗೊಂಡರು.
ಉಳಿದಂತೆ ಕಾಟಿಪಳ್ಳ ಸರಕಾರಿ ಕಾಲೇಜಿನ ಪೂರ್ಣಿಮಾ ಕಾಮತ್(ಉಪಾಧ್ಯಕ್ಷರು),ಬೆಸೆಂಟ್ ಪದವಿಪೂರ್ವ ಕಾಲೇಜಿನ ಗಾಯತ್ರಿ ಶೆಟ್ಟಿ(ಕೋಶಾಧಿಕಾರಿ), ಪುತ್ತೂರು ಸರಕಾರಿನ ಕಾಲೇಜಿನ ಮನಮೋಹನ್(ಸಂಘಟನಾ ಕಾರ್ಯದರ್ಶಿ), ಬಲ್ಮಠ ಸರಕಾರಿ ಕಾಲೇಜಿನ ಕೃಷ್ಣಯ್ಯ(ಜತೆಕಾರ್ಯದರ್ಶಿ), ಬೆಸೆಂಟ್ ವಿದ್ಯಾಲಯದ ರೂಪಾಕ್ಷ.ಎಂ(ಗೌರವಸಲಹೆಗಾರರು) ಆಯ್ಕೆಗೊಂಡರು. ತಾಲೂಕುಪ್ರತಿನಿಧಿಗಳಾಗಿರತ್ನಾಕರ ಸುಬ್ರಹ್ಮಣ್ಯ (ಸುಳ್ಯ,ಕಡಬ), ರೋಹಿತಾ, ಯೋಗಿತಾ, ಧರ್ಮಪಾಲ (ಮಂಗಳೂರು), ಗಿರೀಶ್ ತಂತ್ರಿ ಕಟೀಲು (ಮೂಲ್ಕಿ, ಮೂಡಬಿದ್ರೆ), ದಾಮೋದರ್(ಪುತ್ತೂರು), ಶೈಲಜಾ(ಬೆಳ್ತಂಗಡಿ), ರೇವತಿ (ಉಳ್ಳಾಲ) ನೇಮಕಗೊಂಡರು. ಮೂಡಬಿದ್ರೆ ಜೈನ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಪ್ರಭಾತ್ ಬಲ್ನಾಡ್ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!