Ad Widget

ನಾಳೆ ಸುಳ್ಯಕ್ಕೆ ಅಯೋಧ್ಯಾ ಶ್ರೀರಾಮ ಜನ್ಮಭೂಮಿಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯ ಪುರ ಪ್ರವೇಶ

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಅಯೋಧ್ಯಾ ಶ್ರೀರಾಮ ಜನ್ಮಭೂಮಿಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯ ಪುರ ಪ್ರವೇಶವು ನ.30 ರಂದು ಶ್ರೀರಾಮ ಭಜನಾ ಮಂದಿರದ ಮುಂಭಾಗದಲ್ಲಿ ಸಂಜೆ ಗಂಟೆ 6-05ಕ್ಕೆ ಪುರಪ್ರವೇಶ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಪಂಜ ಲಯನ್ಸ್ ಕ್ಲಬ್ ವತಿಯಿಂದ ಬಡ ಕುಟುಂಬಗಳಿಗೆ ಅಕ್ಕಿ ವಿತರಣೆ

ಲಯನ್ಸ್ ಕ್ಲಬ್ ಪಂಜ ಇದರ ವತಿಯಿಂದ ಪ್ರತಿ ತಿಂಗಳು ನಡೆಯುವ ಅನ್ನಭಾಗ್ಯ ಯೋಜನೆಯ 5ನೇ ಕಾರ್ಯಕ್ರಮದ ಅಂಗವಾಗಿ ನ. 27 ರಂದು ಪಂಬೆತ್ತಾಡಿ ಹಾಗೂ ಕೂತ್ಕುಂಜ ಗ್ರಾಮದ 3 ಬಡಕುಟುಂಬಗಳಿಗೆ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ.ದಿಲೀಪ್ ಬಾಬ್ಲುಬೆಟ್ಟು ಅಕ್ಕಿ ವಿತರಿಸಿದರು. ಈ ಸಂದರ್ಭದಲ್ಲಿ ಉದ್ಯಮಿ ರಜಿತ್ ಭಟ್, ಕಾರ್ಯದರ್ಶಿ ಲ.ವಾಸುದೇವ ಮೇಲ್ಪಾಡಿ, ಕೋಶಾಧಿಕಾರಿ ಲ.ಆನಂದ ಗೌಡ,...
Ad Widget

ರಾಜ್ಯ ಗಾಣಿಗ ಸಮಾವೇಶಕ್ಕೆ ವಿಶೇಷ ಅಥಿತಿ ಆಹ್ವಾನಿತರಾಗಿ ಸುಳ್ಯದ ಅಧ್ಯಕ್ಷರನ್ನು ಆಹ್ವಾನಿಸಿದ ರಾಜ್ಯ ಸಮಿತಿ

ದಿನಾಂಕ 02/12/2023ನೇ ಶನಿವಾರದಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಗಾಣಿಗರ ಸಮಾವೇಶಕ್ಕೆ ಸುಳ್ಯದ ಪಾಟಾಳಿಯಾನೆ ಗಾಣಿಗ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಉದ್ದಂತಡ್ಕ ಇವರನ್ನು ಕರಾವಳಿ ಜಿಲ್ಲೆಯ ವಿಶೇಷ ಅಥಿತಿ ಆಹ್ವಾನಿತರಾಗಿ ಆಹ್ವಾನಿಸಿ ಕರ್ನಾಟಕ ಘನ ಸರಕಾರದ ಮುಖ್ಯ ಮಂತ್ರಿಗಳಿರುವ ವೇದಿಕೆ ಯಲ್ಲಿ ಗುರುತಿಸಲಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯ ಗಾಣಿಗ ಸಮಾವೇಷದ ಅಧ್ಯಕ್ಷತೆಯನ್ನು ರಾಜ್ಯ ಗಾಣಿಗ ಸಂಘದ ಅಧ್ಯಕ್ಷರಾದ...

ವಿದ್ಯುತ್ ಬಿಲ್ ನಗದು ಆನ್ಲೈನ್ ಪಾವತಿಯಲ್ಲಿ ವ್ಯತ್ಯಯ

ಸುಳ್ಯದ ಮೆಸ್ಕಾಂ ಕಛೇರಿಯಲ್ಲಿ ಎರಡು ದಿನಗಳ ಕಾಲ ವಿದ್ಯುತ್ ಬಿಲ್ಲ್ ಗಳ ನಗದು ಪಾವತಿ ಮತ್ತು ಆನ್ಲೈನ್ ಪಾವತಿ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ . ಜನರು ತಿಂಗಳ ಕೊನೆಯಾದ ಹಿನ್ನೆಲೆಯಲ್ಲಿ ನಗದು ಬಿಲ್ಲು ಪಾವತಿಸಲು ಸುಳ್ಯ ಮೆಸ್ಕಾಂ ಕಛೇರಿಗೆ ಆಗಮಿಸುತ್ತಿದ್ದು ದಿನಾಂಕ 29 ಮತ್ತು 30ರಂದು ಮೈಗ್ರೇಷನ್ ಪ್ರಕ್ರಿಯೆ ನಡೆಯುತ್ತಿರುವ ಹಿನ್ನಲೆಯಲ್ಲಿ ನಗದು ಹಾಗೂ ಆನ್ಲೈನ್...

ಡಿಸೆಂಬರ್ 8 ರಿಂದ ಧರ್ಮಸ್ಥಳ ಲಕ್ಷದೀಪೋತ್ಸವ: ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನ

ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಡಿಸೆಂಬರ್ 8ರಿಂದ 12ರ ವರೆಗೆ ನಡೆಯಲಿವೆ. ಸರ್ವಧರ್ಮ ಸಮ್ಮೇಳನ: ಡಿ. 11 ರಂದು ಸಂಜೆ 5 ಗಂಟೆಗೆ ಸರ್ವಧರ್ಮ ಸಮ್ಮೇಳನದ 91ನೆ ಅಧಿವೇಶನವನ್ನು ಖ್ಯಾತ ವಿದ್ವಾಂಸ ಬೆಂಗಳೂರಿನ ಡಾ. ಗುರುರಾಜ ಕರ್ಜಗಿ ಉದ್ಘಾಟಿಸುವರು.ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು.ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯವಾದಿ ಡಾ....

ಸುಳ್ಯ: ಶಾರದಾ ಮಹಿಳಾ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

ಶ್ರೀ ಶಾರದ ಹೆಣ್ಮಕ್ಕಳ ಪ್ರೌಢಶಾಲೆ ಮತ್ತು ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜು ಸುಳ್ಯ ಇದರ ವಾರ್ಷಿಕ ಕ್ರೀಡಾಕೂಟವು ತಾರೀಕು 29.11.2023 ರಂದು ನಡೆಯಿತು. ಕ್ರೀಡಾಕೂಟವನ್ನು ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ವಸಂತ ಎ.ಸಿ ಯವರು ಉದ್ಘಾಟಿಸಿ ಶುಭ ಹಾರೈಸಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ...

ಸುಳ್ಯ : ಎಸ್‌ಡಿಪಿಐ ಸ್ಥಳೀಯ ಬ್ಲಾಕ್ ನಾಯಕರ ಸಭೆ – ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಭಾಗಿ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ಬ್ಲಾಕ್ ವ್ಯಾಪ್ತಿಯ ನಾಯಕರ ಸಭೆಯು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಉಪಸ್ಥಿತಿಯಲ್ಲಿ ಸುಳ್ಯದಲ್ಲಿ ಜರುಗಿತು.ಸಭೆಯಲ್ಲಿ ಪಕ್ಷವನ್ನು ಇನ್ನಷ್ಟು ತಲಮಟ್ಟದಲ್ಲಿ ಸಂಘಟಿಸುವ ಬಗ್ಗೆ ಹಾಗೂ ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯ ಬಗ್ಗೆ ಚರ್ಚೆ ನಡೆಸಲಾಯಿತು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್...

ಬಂದಡ್ಕ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಮಹಾಸಭೆ – ನೂತನ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ  ಸುಭಾಶ್ಚಂದ್ರ ರೈ ತೋಟ, ಪ್ರ.ಕಾರ್ಯದರ್ಶಿಯಾಗಿ ಪುರುಷೋತ್ತಮ ಬೊಡ್ಡನಕೊಚ್ಚಿ, ಕೋಶಾಧಿಕಾರಿಯಾಗಿ ಮೋನಪ್ಪ ಗೌಡ

ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಮಹಾಸಭೆಯು ಮೊಕ್ತೇಸರ ಬಿ.ಸದಾನಂದ ರೈ ಯವರ ಅಧ್ಯಕ್ಷತೆಯಲ್ಲಿ ನ.28 ರಂದು ದೇವಸ್ಥಾನದಆವರಣದಲ್ಲಿ ನಡೆಯಿತು.      ಸಭೆಯ ಆರಂಭದಲ್ಲಿ ವಾರ್ಷಿಕ ವರದಿವಾಚನ ಮತ್ತು ಲೆಕ್ಕಪತ್ರವನ್ನು ಮಂಡಿಸಲಾಯಿತು. ಈ ಸಂದರ್ಭದಲ್ಲಿ      ಮುಂದಿನ ಎರಡು ವರ್ಷದ ಅವಧಿಗೆ  ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.ಕ್ಷೇತ್ರದ ಮೊಕ್ತೇಸರರಾಗಿ ಬಿ. ಸದಾನಂದ ರೈ,  ಅಧ್ಯಕ್ಷ ಬಿ. ಸುಭಾಶ್ಚಂದ್ರ ರೈ...

ಸುಳ್ಯ ನಗರದ ಮಹಾಯೋಜನೆಗೆ ಸರ್ಕಾರದ ತಾತ್ಕಾಲಿಕ ಅನುಮೋದನೆ – ಆಕ್ಷೇಪ ಸಲ್ಲಿಸಲು 60 ದಿನಗಳ ಕಾಲಾವಕಾಶ

ಸುಳ್ಯ ಪಟ್ಟಣ ಪಂಚಾಯಿತಿ ಯೋಜನಾ ಪ್ರಾಧಿಕಾರವು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರನ್ವಯ ಸುಳ್ಯ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆಯನ್ನು ತಯಾರಿಸಿ, ನಕ್ಷೆ ಮತ್ತು ವರದಿಯೊಂದಿಗೆ ಸರ್ಕಾರದ ತಾತ್ಕಾಲಿಕ ಅನುಮೋದನೆಗೆ ಸಲ್ಲಿಸಲಾದ ಹಿನ್ನಲೆ ಯಲ್ಲಿ ಸರ್ಕಾರ ಮಹಾಯೋಜನೆಗೆ ತಾತ್ಕಾಲಿಕವಾಗಿ ಅನುಮೋದನೆಯನ್ನು ನೀಡಿದೆ. ತಾತ್ಕಾಲಿಕ ಅನುಮೋದಿತ ಮಹಾಯೋಜನೆ ನಕ್ಷೆ ಮತ್ತು ವರದಿಯನ್ನು ಸುಳ್ಯ ಪಟ್ಟಣ...

ಚೀನಾದಲ್ಲಿ ವಿಚಿತ್ರ ಜ್ವರ – ಸಣ್ಣ ಮಕ್ಕಳೇ ಟಾರ್ಗೇಟ್- ಭಾರತೀಯರಲ್ಲಿ ಆತಂಕ

ಚೀನಾದಲ್ಲಿ ಇದಕ್ಕಿದ್ದಂತೆ ವಿಚಿತ್ರ ಸೋಂಕು ಕಂಡು ಬಂದಿದ್ದು, ಇದು ಹೆಚ್ಚಾಗಿ ಮಕ್ಕಳನ್ನೇ ಗುರಿ ಮಾಡುತ್ತಿರುವುದು ಭಾರತೀಯರಲ್ಲಿ ನಡುಕ ಹುಟ್ಟಿಸಿದೆ. ಮಕ್ಕಳ ಈ ಜ್ವರದ ಲಕ್ಷಣಗಳೇನು ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ.ಟೆಕ್ನಾಲಜಿಯಲ್ಲಿ ಎಲ್ಲರನ್ನೂ ಮೀರಿಸುವಂತೆ ಇರುವ ಚೀನಾ ದೇಶ ಜಗತ್ತಿಗೆ ಕಾಯಿಲೆಗಳನ್ನು ಕೊಡುಗೆಯಾಗಿ ಕೊಡುವಲ್ಲಿ ಕೂಡ ಆಗಾಗ ಸುದ್ದಿ ಮಾಡುತ್ತಲೇ ಇರುತ್ತದೆ. ಯಾವುದಕ್ಕೆ ಹೆದರದಿದ್ದರೂ ಸೋಂಕಿನ ವಿಚಾರಕ್ಕೆ...
Loading posts...

All posts loaded

No more posts

error: Content is protected !!