Ad Widget

ಓಡಬಾಯಿ ತೂಗು ಸೇತುವೆಗೆ ಗ್ರಾಮ ಪಂಚಾಯತ್ ವತಿಯಿಂದ ಸೋಲಾರ್ ಲೈಟ್ ಅಳವಡಿಕೆ, ಕಂಬ ಹತ್ತಿ ದೀಪ ಅಳವಡಿಸಿದ ವಿಪತ್ತು ನಿರ್ವಾಹಣ ತಂಡದ ಸದಸ್ಯರು.

. . . . . . . . .

ಗ್ರಾಮ ಪಂಚಾಯತ್ ಅಜ್ಜಾವರದ ವತಿಯಿಂದ ದೊಡ್ಡೇರಿ ತೂಗು ಸೇತುವೆಗೆ ಗ್ರಾಮ ಪಂಚಾಯತ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿದ ಅನುದಾನದಲ್ಲಿ ಸೆಲ್ಕೋ ಸೋಲಾರ್ ರವರ ಸೋಲಾರ್ ದೀಪ ಅಳವಡಿಕೆ ಮಾಡಲಾಗಿದೆ.

. . . . . . .


ಸುಳ್ಯದ ಪ್ರಮುಖ ಪ್ರವಾಸಿತಾಣ ಹಾಗೂ ದೊಡ್ಡೇರಿ ಭಾಗದ ಜನರನ್ನು ನಗರಕ್ಕೆ ಜೋಡಿಸುವ ಮುಖ್ಯ ತೂಗುಸೇತುವೆ ಓಡಬಾಯಿಯಲ್ಲಿದ್ದು ಈ ತೂಗು ಸೇತುವೆಗೆ ವಿದ್ಯುತ್ ವ್ಯವಸ್ಥೆ ಬೇಕೆನ್ನುವುದು ಈ ಭಾಗದ ಜನರ ಹಲವಾರು ವರ್ಷಗಳ ಬೇಡಿಕೆಯಾಗಿತ್ತು. ಈ ಬೇಡಿಕೆಗೆ ಸ್ಪಂದಿಸಿ ಅಜ್ಜಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತ್ಯವತಿ ಬಸವನಪಾದೆ ಸದಸ್ಯರಾದ ರತ್ನಾವತಿ ಹಾಗೂ ಜಯರಾಮ ಇವರು ಸ್ಥಳೀಯ ಪ್ರತಿನಿಧಿಗಳಾಗಿದ್ದು ಇವರ ಮುತುವರ್ಜಿಯಲ್ಲಿ ಈ ಸೋಲಾರ್ ಚಾಲಿತ ವಿಧ್ಯುತ್ ದೀಪವನ್ನು ಅಳವಡಿಸಲಾಗಿದೆ ಸಂದರ್ಭದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಹರ್ಷಿತ್ ದೊಡ್ಡೇರಿ, ಸುನಿಲ್ ದೊಡ್ಡೇರಿ ರವರು ಸೋಲಾರ್ ದೀಪವನ್ನು ಬೃಹದಾಕರದ ಕಂಬಕ್ಕೆ ಅಳವಡಿಸುವ ಕೆಲಸವನ್ನು ಮಾಡಿದ್ದಾರೆ.ಈ ಸಂದರ್ಭದಲ್ಲಿ ಸೆಲ್ಕೊ ಸೋಲಾರ್ ಮ್ಯಾನೇಜರ್ ಆಶಿಕ್ , ಸೆಲ್ಕೊ ಸಿಬ್ಬಂದಿಗಳು ಊರಿನ ನಾಗರಿಕರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading