Ad Widget

ಚಂದ್ರಯಾನ ಯಶಸ್ವಿಗೆ ಭಾಗಿಯಾದ ಸಂಶೋಧನಾ ವಿದ್ಯಾರ್ಥಿ ಮಾನಸ ಜಯಕುಮಾರ್ ಅವರಿಗೆ ಸನ್ಮಾನ.

ಸುಳ್ಯದ ಕೀರ್ತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸಿ, ತನ್ನ ಪರಿಶ್ರಮದಿಂದಲೇ ಚಂದ್ರಯಾನ-3ಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಗುಜರಾತ್ ನಲ್ಲಿ ಕೆಲಸ ನಿರ್ವಹಿಸಿದ ಹಳ್ಳಿಯ ಪ್ರತಿಭೆ ಮಾನಸ ಜಯಕುಮಾರ್ ಅವರಿಗೆ ಇಂದು ಸಮುದಾಯ ಹಾಗೂ ಕುಟುಂಬಕ್ಕೆ ಕೀರ್ತಿ ತಂದಿರುವುದನ್ನು ಗುರುತಿಸಿ ಸನ್ಮಾನಿಸಲಾಯಿತು. ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಅಧ್ಯಕ್ಷರಾದ ಪಿಸಿ ಜಯರಾಮ್, ಗೌಡ ಯುವ ಸೇವಾ...

ಪ್ಲಾಟಿಂಗ್ ಸಮಸ್ಯೆ ಪರಿಹಾರಕ್ಕೆ ಸುಳ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಂಜಿತ್ ರೈ ಮೇನಾಲ ಕಂದಾಯ ಸಚಿವರಿಗೆ ಮನವಿ – ಸಕಾರಾತ್ಮಕ ಸ್ಪಂದನೆ.

ಸುಳ್ಯ ತಾಲೂಕಿನ ಪ್ಲಾಟಿಂಗ್ ಆಗದೆ ಕಡತ ಬಾಕಿ ಇರುವುದರಿಂದ ಜನರಿಗೆ ಆಗುತ್ತಿರುವ ಸಮಸ್ಯೆ ನಿವಾರಣೆಗೆ ಸುಳ್ಯ ಯುವ ಕಾಂಗ್ರೇಸ್ ಉಪಾಧ್ಯಕ್ಷ ರಂಜಿತ್ ರೈ ಮೇನಾಲ ಇವರ ನೇತೃತ್ವದ ತಂಡವು ಬೆಂಗಳೂರಿನಲ್ಲಿ ಕಂದಾಯ ಸಚಿವ ಕೃಷ್ಣ ಬೈರೆಗೌಡರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಸುಳ್ಯ ತಾಲೂಕಿನಲ್ಲಿ ಪ್ಲಾಟಿಂಗ್ ಆಗದೆ ಹಲವು ಕಡತಗಳು ಬಾಕಿ ಇದೆ. ಬಹು ಮುಖ್ಯವಾಗಿ ಅಜ್ಜಾವರ...
Ad Widget

ಪಂಜ: ಸ್ಕೌಟ್ ಗೈಡ್ ಗೀತಗಾಯನ ಸ್ಪರ್ಧೆ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ವ್ಯಾಪ್ತಿಯಲ್ಲಿರುವ ಎಲ್ಲಾ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿ ಪೂರ್ವ, ಪದವಿ ಕಾಲೇಜುಗಳ ಕಬ್, ಬುಲ್ ಬುಲ್, ಸ್ಕೌಟ್, ಗೈಡ್, ರೋವರ್, ರೇಂಜರ್ ವಿದ್ಯಾರ್ಥಿಗಳಿಗೆ  ಗೀತಗಾಯನ ಸ್ಪರ್ಧೆಯು 24.08.2023 ಗುರುವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡ್ಪಿನಂಗಡಿಯಲ್ಲಿ ಜರುಗಿತು. ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಾಧವ...

ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ ಭಯ ಹುಟ್ಟಿಸಿ ಜನರನ್ನು ಮರಳು ಮಾಡುವುದು ಬಿಜೆಪಿಯ ಚುನಾವಣಾ ಗಿಮಿಕ್ : ಎಂ ವೆಂಕಪ್ಪ ಗೌಡ

ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಮಹತ್ವದ ಚಂದ್ರಯಾನ-1 ಯಶಸ್ವಿಯಾಗಿರುವುದು ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡುವ ವಿಚಾರವಾಗಿದೆ. ಚಂದ್ರನ ದಕ್ಷಿಣ ದ್ರುವದಲ್ಲಿ ಚಂದ್ರಯಾನ 3 ಮಿಷನ್ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿದಿರುವುದು ಜಗತ್ತಿನ ರಾಷ್ಟ್ರಗಳಲ್ಲೇ ಪ್ರಥಮ. ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂರವರ ದೂರದೃಷ್ಠಿಯಿಂದ ಸ್ಥಾಪಿತವಾದ ಇಸ್ರೋ ಮಹತ್ವದ ಮೈಲುಗಲ್ಲು ನೆಟ್ಟಿದೆ. 1969 ಆಗಸ್ಟ್ 15ರಂದು ಸ್ಥಾಪಿತವಾಗಿ...

ಸೇನೆ ಸೇರಬಯಸುವವರಿಗೆ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಭಾರತೀಯ ಸೇನೆ ಹಾಗೂ ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3 ಬಿ ಗೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ಉಚಿತವಾಗಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ....

ಸುಳ್ಯ ಸಹಾಯಕ ಕೃಷಿ ನಿರ್ದೇಶಕರಾಗಿ ಯಶಸ್ ಮಂಜುನಾಥ್ ರಿಗೆ ಪ್ರಭಾರ

ಸುಳ್ಯ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾಗಿ ಯಶಸ್ ಮಂಜುನಾಥ್ ಅಧಿಕಾರ ವಹಿಸಿಕೊಂಡಿದ್ದಾರೆ. ಸುಳ್ಯ ಸಹಾಯಕ ಕೃ಼ಷಿ ನಿರ್ದೇಶಕರಾಗಿದ್ದ ನಾಗರಾಜ್ ರವರು ಹಾವೇರಿಯ ಕಾಗಿನೆಲೆಗೆ ವರ್ಗಾವಣೆ ಗೊಂಡಿರುವುದರಿಂದ ತೆರವಾದ ಸ್ಥಾನಕ್ಕೆ ಯಶಸ್ ಮಂಜುನಾಥ್ ಬಂದಿದ್ದಾರೆ. ಯಶಸ್ ರವರು ಪುತ್ತೂರು ಕೃಷಿ ಇಲಾಖೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾಗಿ ಪ್ರಭಾರದಲ್ಲಿದ್ದು, ಇದೀಗ ಸುಳ್ಯದ ಜವಾಬ್ದಾರಿ ಯನ್ನು ವಹಿಸಿದ್ದಾರೆ. ಇದರ...

ಉಪ್ಪಿನಂಗಡಿ ಗ್ರಾ. ಪಂ. ಗ್ರೇಡ್ 1 ಕಾರ್ಯದರ್ಶಿಯಾಗಿ ಗೀತಾ ಶೇಖರ್ ನೇಮಕ

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಯು.ಡಿ. ಶೇಖರ್ ರವರು ಅಕಾಲಿಕವಾಗಿ ಸರಕಾರಿ ಸೇವೆಯಲ್ಲಿ ಇರುವಾಗಲೇ ಮರಣ ಹೊಂದಿದ್ದು. ಅನುಕಂಪದ ಆಧಾರದ ಮೇಲೆ ಅವರ ಪತ್ನಿ ಶ್ರೀಮತಿ ಗೀತಾ ಶೇಖರ್ ರವರಿಗೆ ಸರಕಾರಿ ಹುದ್ದೆ ದೊರೆತಿದ್ದು,ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಗ್ರೇಡ್‌ 1 ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಸರಕಾರದ ಸುತ್ತೋಲೆ ಮತ್ತು ನೇಮಕಾತಿ ಪ್ರಾಧಿಕಾರಿ...

ಮೈಸೂರು : ಮೊಬೈಲ್ ಜರ್ನಲಿಸಂ ನಲ್ಲಿ ಕ್ಷಮಾ ಅಂಬೆಕಲ್ಲು ಪ್ರಥಮ ಸ್ಥಾನ

ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ನಡೆದ ಮಾಧ್ಯಮ ಹಬ್ಬದಲ್ಲಿ ಮೊಬೈಲ್ ಜರ್ನಲಿಸಂ ನಲ್ಲಿ ಕ್ಷಮಾ ಅಂಬೆಕಲ್ಲು ಪ್ರಥಮ ಸ್ಥಾನ ಗಳಿಸಿದ್ದಾರೆ. ಮೈಸೂರಿನ ಮಾತಾ ವಿಶ್ವ ವಿದ್ಯಾಪೀಠ   ಶಿಕ್ಷಣ ಸಂಸ್ಥೆಯಲ್ಲಿ   ವಿಶುವಲ್ ಕಮ್ಯುನಿಕೇಶನ್ (Int. Msc) 3 ನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈಕೆ ದೇವಚಳ್ಳ ಗ್ರಾ.ಪಂ.ಸದಸ್ಯ ಶೈಲೇಶ್ ಅಂಬೆಕಲ್ಲು ಹಾಗೂ ಅಶ್ವಿನಿ ಶೈಲೇಶ್ ದಂಪತಿಗಳ ಪುತ್ರಿ.ಮೈಸೂರು...

ಕೊಡಿಯಾಲಬೈಲು ಶಾಲೆಯನ್ನು ದತ್ತು ಸ್ವೀಕಾರಕ್ಕೆ ನಿರ್ಧರಿಸಿದ ಲಯನ್ಸ್ ಕ್ಲಬ್ – ಆ.28 ರಂದು ಶಾಲಾ ಜಾಗದಲ್ಲಿ ತೆಂಗು ಅಡಿಕೆ ಹಾಗೂ ಹಣ್ಣಿನ ತೋಟ ನಿರ್ಮಾಣಕ್ಕೆ ಚಾಲನೆ

ಸುಳ್ಯ ಲಯನ್ಸ್ ಕ್ಲಬ್ ಅನೇಕ ಜನಪರ ಸಮಾಜ ಸೇವಾ ಚಟುವಟಿಕೆಗಳೊಂದಿಗೆ ಸುಳ್ಯದ ಜನಮಾನಸದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದು ಸಂಸ್ಥೆ 51ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೊಸ ಯೋಜನೆ ರೂಪಿಸುವ ದೃಷ್ಟಿಯಿಂದ ಸರಕಾರಿ ಶಾಲೆಯೊಂದನ್ನು ದತ್ತು ಪಡೆದು ಅದರ ಅಭಿವೃದ್ಧಿಗೆ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಅಧ್ಯಕ್ಷರಾದ ಲಯನ್ ವೀರಪ್ಪ ಗೌಡ ಕಣ್ಕಲ್ ತಿಳಿಸಿದರು. ಸುಳ್ಯ ಪ್ರೆಸ್...

ಅರಂತೋಡು : ವಿದ್ಯಾರ್ಥಿಗಳಿಂದ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ 

ಅರಂತೋಡಿನ ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಚಂದ್ರನಂಗಳದಲ್ಲಿ ಭಾರತದ ತ್ರಿವರ್ಣ ಧ್ವಜಹಾರಿಸಿ ತ್ರಿವಿಕ್ರಮ ಸಾಧನೆಗೈದ ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೋ)ಗೆ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ               "ಥ್ಯಾಂಕ್ಸ್ ಇಸ್ರೋ'' ಎಂದು    ವಿನೂತನ ಶೈಲಿಯಲ್ಲಿ ಬರೆದು,  ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿ  ಅವಿಸ್ಮರಣೀಯ ಸಾಧನೆಗೈದ ಭಾರತೀಯ ವಿಜ್ಞಾನಿಗಳಿಗೆ 525 ಡ್ರಾಯಿಂಗ್ ಶೀಟ್ ನಲ್ಲಿ ಬೃಹದಾಕಾರದ ತ್ರಿವರ್ಣ ಧ್ವಜ ನಿರ್ಮಾಣ...
Loading posts...

All posts loaded

No more posts

error: Content is protected !!