Ad Widget

ಸರಕಾರಿ ಪ್ರೌಢ ಶಾಲೆ ಎಣ್ಮೂರು: ಯಕ್ಷ ಧ್ರುವ – ಯಕ್ಷ ಶಿಕ್ಷಣ ಕಾರ್ಯಾಗಾರ ಉದ್ಘಾಟನೆ; ಯಕ್ಷಗಾನ ಕಲಿಕೆಯಿಂದ ಬೌದ್ಧಿಕ ಮತ್ತು ಶಾರೀರಿಕ ಆರೋಗ್ಯ: ಪ್ರೋ.ಎಂ ಎಲ್ ಸಾಮುಗ

ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಪಟ್ಲ ಫೌಂಡೇಶನ್ ವತಿಯಿಂದ ಎಣ್ಮೂರು ಪ್ರೌಢಶಾಲೆಯಲ್ಲಿ ನಡೆಯಲಿರುವ ಯಕ್ಷ ಶಿಕ್ಷಣ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ಆಗಸ್ಟ್ 30ರಂದು ನಡೆಯಿತು. ಕಾರ್ಯಕ್ರಮವನ್ನು ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಉಮೇಶ್ ಶೆಟ್ಟಿ ಉಬರಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ಯಕ್ಷಗಾನ ಕಲಿಕೆಯಿಂದ ಶಾಲಾ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಇದು ನಮ್ಮಲ್ಲಿ ಏಕಾಗ್ರತೆ...

ಸುಳ್ಯ : ಶ್ರೀ ದೇವಿ ಕಾಂಡಿಮೆಂಟ್ಸ್ ಸ್ವೀಟ್ಸ್ & ಜನರಲ್ ಸ್ಟೋರ್ ಶುಭಾರಂಭ

ಸುಳ್ಯದ ಜೆ.ಸಿ.ರೋಡ್ ನಲ್ಲಿರುವ ಸದರ್ನ್ ರೆಸಿಡೆನ್ಸಿ ಕಾಂಪ್ಲೆಕ್ಸ್ ನಲ್ಲಿ ರಾಮಚಂದ್ರ ಅಟ್ಲೂರು ಕೋಡ್ತಿಲು ಮಾಲಕತ್ವದ ಶ್ರೀ ದೇವಿ ಕಾಂಡಿಮೆಂಟ್ಸ್ ಆ.30 ರಂದು ಶುಭಾರಂಭಗೊಂಡಿತು. ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಬೆಳಿಗ್ಗೆ ಪುರೋಹಿತ ಅಭಿರಾಮ ಭಟ್ ರವರು ಗಣಹೋಮ ನೆರವೇರಿಸಿದರು. ಈ ಸಂದರ್ಭದಲ್ಲಿ ಸದರ್ನ್ ರೆಸಿಡೆನ್ಸಿ ಮಾಲಕರಾದ ವಿಶ್ವನಾಥ...
Ad Widget

ಸುಳ್ಯ : ಧನ್ಯ ಸ್ಟೋರ್ ವಿಸ್ಕೃತಗೊಂಡ ಮಳಿಗೆಯಲ್ಲಿ ಶುಭಾರಂಭ – ಆರಿಕೋಡಿ ಧರ್ಮದರ್ಶಿಗಳಿಂದ ಉದ್ಘಾಟನೆ

ಬಾಳೆಮಕ್ಕಿಯಲ್ಲಿ ಸುಮಾರು 35 ವರ್ಷಗಳಿಂದ ಕಾರ್ಯಚರಿಸುತ್ತಿರುವ ಧನ್ಯ ಸ್ಟೋರ್ ವಿಸ್ಕೃತಗೊಂಡ ಮಳಿಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು. ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ದೀಪ ಬೆಳಗಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾದ ರಾಜಶ್ರೀ ಕಾಂಪ್ಲೆಕ್ಸ್ ನ ಮಾಲಕರಾದ ಇಂಜಿನಿಯರ್ ಕೆ.ಆರ್.ಕೃಷ್ಣರಾವ್ ಶುಭಹಾರೈಸಿದರು. ಸಂಸ್ಥೆಯ ಮಾಲಕರಾದ ಹರಿಶ್ಚಂದ್ರ ಬಾಬ್ಲುಬೆಟ್ಟು ಮತ್ತು ಶ್ರೀಮತಿ ವಾಣಿ ರವರು ಆರಿಕೋಡಿ ಕ್ಷೇತ್ರದ...

ಮರ್ಕಂಜ : ಗೃಹಲಕ್ಷ್ಮೀ ಯೋಜನೆಗೆ ಚಾಲನೆ

ಕರ್ನಾಟಕ ರಾಜ್ಯ ಸರ್ಕಾರದ ಗೃಹ ಲಕ್ಷ್ಮೀ ಅನುಷ್ಟಾನ ಕಾರ್ಯಕ್ರಮಕ್ಕೆ ಮರ್ಕಂಜ ಪಂಚಾಯಿತ್ ವತಿಯಿಂದ ಸಿ ಎ ಬ್ಯಾಂಕ್ ಸಭಾಭವನದಲ್ಲಿ ಇಂದು(ಅ.30)ರಂದು ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿಯಾಗಿ ತೋಟಗಾರಿಕಾ ಇಲಾಖೆಯ ಎಂ. ವಿಜೇತ್ ಎಸ್ ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ಹೋಸೊಳಿಕೆ, ಉಪಾಧ್ಯಕ್ಷರಾದ ಸಂಧ್ಯಾ ಸೇವಾಜೆ, ಎಲ್ಲಾ ಸದಸ್ಯರು, ಪಂಚಾಯಿತ್ ಅಭಿವೃದ್ಧಿ ಅಧಿಕಾರಿ ಹಾಗೂ...

ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮಕ್ಕೆ ಆರಂತೋಡು ಗ್ರಾಮ ಪಂಚಾಯತ್ ಅಮೃತ ಸಭಾಭವನ ದಲ್ಲಿ ತುಂಬಿ ತುಳುಕಿದ ಫಲಾನುಭವಿಗಳು

ಕರ್ನಾಟಕ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮಕ್ಕೆ ಆರಂತೋಡು ಗ್ರಾಮ ಪಂಚಾಯತಿ ವತಿಯಿಂದ ಆಯೋಜಿಸಲಾಗಿರುವ ಕಾರ್ಯಕ್ರಮ ದ ಉದ್ಘಾಟನೆಯನ್ನು ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ದೀಪ ಬೆಳಗಿಸಿ ಉದ್ಘಾಟಿಸಿದರು. ಸಭಾಂಗಣ ದಲ್ಲಿ ಫಲಾನುಭವಿಗಳು ಪಾಲ್ಗೊಂಡರು.. ಫಲಾಭವಿಗಳಿಗೆ ಮೈಸೂರಿನಲ್ಲಿ ನಡೆಯುವ ಗ್ರಹ ಲಕ್ಷ್ಮಿ ಯೋಜನೆಯ ಅನುಷ್ಠಾನಗೊಳ್ಳುದನ್ನು ವೀಕ್ಷಿಸಲು ಸಭಾಭಾವನದಲ್ಲಿ ಟಿ.ವಿ ಪರದೆಯ ವ್ಯವಸ್ಥೆ...

ಜಟ್ಟಿಪಳ್ಳ : ರಕ್ಷಾ ಬಂಧನ ಕಾರ್ಯಕ್ರಮ

ಕಪಿಲ ಯುವಕ ಮಂಡಲ ಜಟ್ಟಿಪಳ್ಳ ಇದರ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ ಜಟ್ಟಿಪಳ್ಳ ಶ್ರೀ ಚೆನ್ನಕೇಶವ ದೇವರ ವಸಂತ ಕಟ್ಟೆ ಮುಂಭಾಗದಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಕಪಿಲ ಯುವಕ ಮಂಡಲದ ಅಧ್ಯಕ್ಷರಾದ ಹರೀಶ್ ಜೆ ಬಿ, ಗೌರವಾಧ್ಯಕ್ಷರಾದ ವಿಶುಕುಮಾರ್ ಕಾನತ್ತಿಲ, ಮಾಜಿ ಅಧ್ಯಕ್ಷರಾದ ಚೇತನ್ ಜಟ್ಟಿಪಳ್ಳ, ಶ್ರೀರಾಮ ಭಜನಾ ಸೇವಾ ಸಂಘದ ಕೋಶಾಧಿಕಾರಿ ಸಂತೋಷ್ ಶೆಟ್ಟಿ, ಚೈತನ್ಯ...

ಸೆ.17 ರಿಂದ ತೊಡಿಕಾನದಲ್ಲಿ ಯಕ್ಷಗಾನ ನಾಟ್ಯ ತರಬೇತಿ

ಶ್ರೀ ಭುವನೇಶ್ವರಿ ಯಕ್ಷಗಾನ ಕಲಾ ಮಂಡಳಿ ಸುಳ್ಯ ಇದರ ತೊಡಿಕಾನ ಶಾಖೆಯ ವತಿಯಿಂದ ಯಕ್ಷಗಾನ ನಾಟ್ಯ ತರಬೇತಿಯು ಸೆ.17 ರಂದು ಭಾನುವಾರ ತೊಡಿಕಾನದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ "ಅಕ್ಷಯ" ಕಲಾಮಂದಿರದಲ್ಲಿ ಪ್ರಾರಂಭಗೊಳ್ಳಲಿದೆ. ಪ್ರತೀ ಭಾನುವಾರ ಅಪರಾಹ್ನ 3.00 ಸಂಜೆ 5.00 ರ ತನಕ ತರಬೇತಿ ನಡೆಯಲಿದೆ. ಮಾಹಿತಿಗಾಗಿ & ನೋಂದಣಿಗಾಗಿ ಶ್ರೀಮತಿ ವೇದಾವತಿ ತೊಡಿಕಾನ 9448173225...

ಸುಬ್ರಹ್ಮಣ್ಯ ಕಾಲೇಜಿನಲ್ಲಿ ಓಣಂ ಹಬ್ಬ ಆಚರಣೆ

ದೇವರನಾಡು ಕೇರಳದಲ್ಲಿ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಇತರ ಕಡೆಗಳಲ್ಲಿ ಕೂಡಾ ಈ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರಜೆಗಳ ಯೋಗಕ್ಷೇಮಕ್ಕಾಗಿ ಅತ್ಯುತ್ತಮ ಆಡಳಿತ ಮಾಡಿದ ಬಲಿಚಕ್ರವರ್ತಿಗೆ ಈ ಹಬ್ಬವನ್ನು ಸಮರ್ಪಿಸಲಾಗುತ್ತದೆ. ವಿಷ್ಣುವಿನ ವರದಂತೆ ಪ್ರತಿವರ್ಷ ಬಲಿಚಕ್ರವರ್ತಿಯು ಭೂಮಿಗೆ ಬಂದು ತನ್ನ ಪ್ರಜೆಗಳನ್ನು ಭೇಟಿಯಾಗುವ ದಿನವನ್ನು ಓಣಂ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಹಬ್ಬವು ಸಂಪತ್ತಿನ ಸಂಕೇತವಾಗಿದೆ. ಉತ್ತಮ...

ಮಿಸ್ಸಿ ಮಂಗಳೂರ್ಸ್ ಶೋ ಸ್ಟೋಪಿಂಗ್ ಸ್ಪರ್ಧೆಯಲ್ಲಿ ಸುಳ್ಯದ ಮಿಥಾಲಿ ಯು.ಎಲ್. ಫಸ್ಟ್ ರನ್ನರ್ ಅಪ್

ಮಂಗಳೂರಿನ ಸಿಝ್ಲಿಂಗ್ ಗಾಯ್ಸ್ ಡಾನ್ಸ್ ಸ್ಟುಡಿಯೋ, ಫಿಜಾ ನೆಕ್ಸಸ್ ಮಾಲ್ ನಲ್ಲಿ ಏರ್ಪಡಿಸಿದ ” ಮಿಸ್ಸಿ ಮಂಗಳೂರ್ಸ್ ಶೋ ಸ್ಟೋಪಿಂಗ್ 2023- 24″ ಸ್ಪರ್ಧೆಯಲ್ಲಿ ಸುಳ್ಯದ ಮಿಥಾಲಿ.ಯು.ಎಲ್ ಫಸ್ಟ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇವರು ಸೋಣಂಗೇರಿ ಗುಂಡ್ಯಡ್ಕದ ಲೋಕೇಶ್ ಉಳುವಾರು ಹಾಗೂ ಶ್ರೀಪ್ರಿಯ ದಂಪತಿಗಳ ಪುತ್ರಿ. ಕೆ.ವಿ.ಜಿ ಐಪಿಎಸ್ ನ 3ನೇ ತರಗತಿಯ ವಿದ್ಯಾರ್ಥಿನಿ....

ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿಯವರಿಗೆ “ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿ-2023”

ಸುಳ್ಯದ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿಯವರುನಾಡಿನ ಸಮಾಚಾರ ಸೇವಾ ಸಂಘ (ರಿ), ಗೋಕಾಕ, ಬೆಳಗಾವಿ ಇವರು ಶಿಕ್ಷಕರ ದಿನಾಚರಣೆ ನಿಮಿತ್ಯ ಪ್ರತೀ ವರ್ಷ ಕೊಡ ಮಾಡುವ "ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟೀಯ ಪ್ರಶಸ್ತಿ-2023" ಕ್ಕೆ ಆಯ್ಕೆಯಾಗಿದ್ದಾರೆ. ಶಿಕ್ಷಣ, ಸಾಹಿತ್ಯ, ಸಮಾಜ ಸೇವೆ, ಸಂಘಟನಾ ಕ್ಷೇತ್ರದ ಕಾರ್ಯಗಳನ್ನು ಗಮನಿಸಿ ಇವರನ್ನು ಈ ಪ್ರಶಸ್ತಿಗೆ...
Loading posts...

All posts loaded

No more posts

error: Content is protected !!