Ad Widget

ಅರಂಬೂರು ಪಾಲಡ್ಕ ಬಳಿ ಅಪರಿಚಿತ ಗಂಡಸಿನ ಶವ ಪತ್ತೆ.

ಆಲೆಟ್ಟಿ ಗ್ರಾಮದ ಅರಂಬೂರು ಪಾಲಡ್ಕ ಬಳಿ ಪಯಸ್ವಿನಿ ನದಿಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆ ಯಾಗಿರುವ ಘಟನೆ ಇದೀಗ ವರದಿಯಾಗಿದೆ. ಸ್ಥಳೀಯರು ನದಿಗೆ ಗಾಳ ಹಾಕಲು ನಡೆದುಕೊಂಡು ಹೋಗುತ್ತಿರುವವರಿಗೆ ಕಂಡಿದ್ದು ಅವರು ಕೂಡಲೇ ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಸುದೇಶ್ ಅರಂಬೂರು ರವರಿಗೆ ವಿಷಯ ತಿಳಿಸಿದರು. ಸುಳ್ಯ ಪೋಲಿಸರಿಗೆ ತಕ್ಷಣ ಮಾಹಿತಿ ನೀಡಲಾಗಿದ್ದು ಇದೀಗ ಪೋಲಿಸ್...

ಆಧಾರ್ ಕಾರ್ಡ್ ತಿದ್ದುಪಡಿಗೆ ಅರಂತೋಡಿಗೆ ತೆರಳಿದ ಚೆಂಬು ಗ್ರಾಮದ ವ್ಯಕ್ತಿ ನಾಪತ್ತೆ, ಪೋಲಿಸ್ ದೂರು.

ಸುಳ್ಯದಲ್ಲಿ ಆದಾರ್ ಕಾರ್ಡ್ ತಿದ್ದುಪಡಿ ಮಾಡಲೆಂದು ಅರಂತೊಡಿಗೆ ಬಂದ ಚೆಂಬು ಗ್ರಾಮದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ .ಆ.8 ರಂದು ಚೆಂಬುಗ್ರಾಮದ ಮಿನುಂಗೂರು ಮನೆ ಬಾಲಕೃಷ್ಣ ಎಂಬ 65 ವರ್ಷದ ವ್ಯಕ್ತಿ ಅರಂತೋಡಿಗೆ ತೆರಳಿದ್ದು ಅಲ್ಲಿಂದ ಸುಳ್ಯ ಕಡೆಗೆ ಬರುವ ವ್ಯಾನ್ ನಲ್ಲಿ ತೆರಳಿದ್ದು ಮತ್ತೆ ಅವರು ಮರಳಿ ಮನೆಗೆ ಬಾರದೇ ಇರುವುದರಿಂದ ಮನೆಯವರು ಠಾಣೆಯಲ್ಲಿ...
Ad Widget

ನೈತಿಕ ಪೊಲೀಸ್ ಗಿರಿ ಪ್ರಕರಣದ ವರದಿ ಸಂಬಂಧಿಸಿ ವೆಬ್ ಸೈಟ್ ಗಳ ಮೇಲೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲು.

ಸುಳ್ಯದ ತೊಡಿಕಾನದಲ್ಲಿ ನಿನ್ನೆ ನಡೆದ ನೈತಿಕ ಪೊಲೀಸ್ ಗಿರಿ ನಡೆದಿದೆ ಎಂಬ ಆರೋಪದಡಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಸಂದೇಶ ಹೋಗುವ ರೀತಿ ವರದಿ ನೀಡಿದ್ದಾರೆಂಬ ಆರೋಪದಡಿಯಲ್ಲಿ ಮೂರು ವೆಬ್ ಸೈಟ್ ನ್ಯೂಸ್ ಗಳ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ವರದಿಯಾಗಿರುವ ಅ ಕ್ರ 87/2023 ಪ್ರಕರಣಕ್ಕೆ ಸಂಬಂಧಿಸಿದಂತೆ...

ಕನಕಮಜಲು :  ಕೆಸರುಗದ್ದೆ ಕ್ರೀಡಾಕೂಟ ; ತುಳುನಾಡಿನ ಆಚರಣೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು – ಭಾಗೀರಥಿ ಮುರುಳ್ಯ

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ  ಸಹಕಾರಿ ಸಂಘ ನಿ. ಜಾಲ್ಸೂರು, ಯುವಕ ಮಂಡಲ, ಕನಕಮಜಲು ಇವರ ಸಂಯುಕ್ತ ಆಶ್ರಯದಲ್ಲಿ ಸಂತ್ಯಡ್ಕ (ಕನ್ನಡ್ಕ) ಗದ್ದೆ, ಶ್ರೀರಾಮ್ ಪೇಟೆ ಕನಕಮಜಲಿನಲ್ಲಿ ಕೆಸರುಗದ್ದೆ ಕ್ರೀಡಾಕೂಟ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಭಾಗವಹಿಸಿದರು. ನಂತರ ಮಾತನಾಡಿದ ಶಾಸಕರು ತುಳುನಾಡಿನ ಆಚರಣೆಗಳನ್ನು ಪಾಲಿಸಿಕೊಂಡು ಮುಂದಿನ ಯುವ...

ಸುಳ್ಯ : ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ  –  ವಾಹನ ಸವಾರರು ಎಚ್ಚರ ವಹಿಸಲು ಸೂಚನೆ

ಸುಳ್ಯ ನಗರ ವ್ಯಾಪ್ತಿಯಲ್ಲಿ ಕೆಲ ದಿನಗಳಿಂದ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದ್ದು, ಇದೀಗ ಪೈಪ್ ದುರಸ್ತಿ ಕಾರ್ಯವು ನಡೆಯುತ್ತಿದೆ. ಗಾಂಧಿನಗರ ಆಲೆಟ್ಟಿ ಕ್ರಾಸ್ ಬಳಿಯಲ್ಲಿ ರಸ್ತೆ ಮಧ್ಯದಲ್ಲಿ ಅಗೆದು ಪೈಪ್ ದುರಸ್ತಿ ಕಾರ್ಯ ನಡೆಯುತ್ತಿದೆ. ವಾಹನ ಸವಾರರು ಜಾಗರೂಕತೆಯಿಂದ ಚಾಲನೆ ಮಾಡಬೇಕು ಹಾಗೂ ಸಹಕಾರ ನೀಡಬೇಕು ಎಂದು ಗುತ್ತಿಗೆದಾರರು ವಿನಂತಿಸಿಕೊಂಡಿದ್ದಾರೆ.

ಸುಳ್ಯ : ನೈತಿಕ ಪೋಲೀಸ್ ಗಿರಿ ಪ್ರಕರಣ – ಮಾಹಿತಿದಾರನ ಬಂಧನ

ಆ.12 ರಂದು ಸಂಜೆ ನಡೆದ ನೈತಿಕ ಪೋಲೀಸ್ ಗಿರಿ ಪ್ರಕರಣದಲ್ಲಿ ಹಿಂದು ಸಂಘಟನೆಗಳಿಗೆ ಮಾಹಿತಿ ನೀಡಿದಾತನ ಬಂಧಿಸಿರುವ ಬಗ್ಗೆ ತಿಳಿದುಬಂದಿದೆ. ಸುಳ್ಯದ ಖಾಸಗಿ ಹೋಟೆಲ್ ಬಂದ ಜೋಡಿಯ ಬಗ್ಗೆ ಸಿಬ್ಬಂದಿ ವಿಡಿಯೋ ದೃಶ್ಯಾವಳಿಗಳನ್ನು ಸಂಘಟನೆಯ ಕಾರ್ಯಕರ್ತರಿಗೆ ಹಂಚಿದ್ದು ಇದರಿಂದಾಗಿ ನಿನ್ನೆಯ ಎಲ್ಲಾ ಘಟನೆಗಳಿಗೆ ಮುಖ್ಯ ಕಾರಣವೆಂದು ಮನಗಂಡ ಸುಳ್ಯ ಪೋಲೀಸರು ಆತನನ್ನು ಬಂಧಿಸಿದ ಘಟನೆ ಇದೀಗ...

ಸುಳ್ಯ : ನೈತಿಕ ಪೋಲೀಸ್ ಗಿರಿ ಹಿನ್ನೆಲೆ : ಓರ್ವನ ಬಂಧನ – ಬಿಡುಗಡೆ, ನೈಜ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ ಪೋಲೀಸರು

ತೊಡಿಕಾನ ಗ್ರಾಮದ ಅಡ್ಯಡ್ಕದಲ್ಲಿ ನಡೆದ ನೈತಿಕ ಪೋಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಓರ್ವನನ್ನು ಬಂಧಿಸಿ, ಬಿಜೆಪಿ ಹಾಗೂ ಹಿಂದೂ ಮುಖಂಡರ ಆಗಮನದ ಬಳಿಕ ಹೈಡ್ರಾಮ ನಡೆದು ಬಿಡುಗಡೆಗೊಳಿಸಿದ ಘಟನೆ ಆ.12 ರಂದು ನಡೆದಿದೆ. ನೈತಿಕ ಪೋಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಂತೋಡಿನ ಅರ್ಜುನ್ ಎಂಬ ಯುವಕನನ್ನು ಸುಳ್ಯ ಪೋಲೀಸರು ಬಂಧಿಸಿ,ಠಾಣೆಯಲ್ಲಿ ಕೂರಿಸಿದ್ದಾರೆಂಬ ವಿಷಯ ತಿಳಿದ...

ಪೈಕ : ವಿವಿಧ ಸಂಘಸಂಸ್ಥೆ ಹಾಗೂ ಊರವರಿಂದ ಶಾಲಾ ಆವರಣ ಸ್ವಚ್ಛತೆ

ಪೈಕ ಸ.ಕಿ‌.ಪ್ರಾಥಮಿಕ ಶಾಲೆಯಲ್ಲಿ ಆ.12 ರಂದು ವಿವಿಧ ಸಂಘಸಂಸ್ಥೆಗಳ ನೇತೃತ್ವದಲ್ಲಿ ಶ್ರಮದಾನ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ,  ಗುತ್ತಿಗಾರು ಪ್ರಗತಿ ಬಂಧು ಮತ್ತು ಸ್ವಸಹಾಯ ಸಂಘಗಳ ಒಕ್ಕೂಟ, ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕ ದ ಸದಸ್ಯರು ಗಳು ಮತ್ತು ಎಸ್ .ಡಿ.ಎಂ.ಸಿ.ಅಧ್ಯಕ್ಷ ರು ಮತ್ತು ಸದಸ್ಯರು ,ಪೋಷಕ ರು,ವಿದ್ಯಾಭಿಮಾನಿಗಳು,ಹಿರಿಯ ವಿದ್ಯಾರ್ಥಿಗಳು  ಶಾಲೆಯ...

ಬೆಳ್ಳಾರೆ : ಕಲ್ಲಪ್ಪಣೆ ಕುಂಞಿಪ್ಪ ಅಜ್ಜ ತರವಾಡು ಕುಟುಂಬದ ವತಿಯಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮ

ಬೆಳ್ಳಾರೆಯ ಕಲ್ಲಪ್ಪಣೆ ಕುಂಞಿಪ್ಪ ಅಜ್ಜ ತರವಾಡು ಕುಟುಂಬದ ವತಿಯಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮ ಆ. 06 ರಂದು ಪೆರುವಾಜೆಯ ಜೆ.ಡಿ. ಆಡಿಟೋರಿಯಂ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ನಿರ್ದೇಶಕರಾದ ಹನೀಫ್ ನೆಟ್ಟಾರವರ ಗೌರವ ಉಪಸ್ಥಿತಿಯಲ್ಲಿ ಕುಟುಂಬದ ಹಿರಿಯರೂ ಆದ ಮೂಸ ಕಲ್ಲಪ್ಪಣೆ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆಯನ್ನು ನೀಡಿದರು. ಮುಸ್ತಫ ಸಖಾಫಿ ಈಶ್ವರಮಂಗಲ ಮತ್ತು ಇಸ್ಮಾಯಿಲ್ ಮದನಿ ಚೆನ್ನಾರು...
error: Content is protected !!