Ad Widget

ಕಂದ್ರಪ್ಪಾಡಿ ಜಾತ್ರೆಗೆ ಮುಹೂರ್ತ

ಇತಿಹಾದ ಪ್ರಸಿದ್ಧ ಕಂದ್ರಪ್ಪಾಡಿ ರಾಜ್ಯದೈವ ಹಾಗೂ ಪುರುಷ ದೈವ ದೈವಸ್ಥಾನದಲ್ಲಿ ಜಾತ್ರಮಹೋತ್ಸವಕ್ಕೆ ಫೆ. 10 ರಂದು ಮುಹೂರ್ತ ನಡೆಯಿತು. ಕಂಚುಕಲ್ಲಿಗೆ ತೆಂಗಿನಕಾಯಿ ಒಡೆಯುವ ಮೂಲಕ ಜಾತ್ರೆಗೆ ಮುಹೂರ್ತ ಕಾರ್ಯಕ್ರಮ ನಡೆಯಿತು. ಫೆ. 10 ರಿಂದ ಜಾತ್ರೆ ನಡೆದು ಧ್ವಜಾರೋಹಣ ನಡೆಯುವವರೆಗೆ ದೈವಸ್ಥಾನದ ವ್ಯಾಪ್ತಿಗೊಳಪಟ್ಟ ಮನೆಗಳಲ್ಲಿ ಯಾವುದೇ ಶುಭಕಾರ್ಯ ನಡೆಸುವಂತಿಲ್ಲ ಎಂಬ ಧಾರ್ಮಿಕ ಕಟ್ಟುಪಾಡು ಇಲ್ಲಿ ನಡೆದುಕೊಂಡು...

ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಶ್ರಮಸೇವೆ

ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವರ ಮತ್ತು ಅಮ್ಮನವರ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ಅಣ್ಣಪ್ಪ ಸ್ವಾಮಿ, ಧರ್ಮದೈವಗಳಾದ ಕಾಳರಾಹು, ಕಾಳರ್ಕಾಯಿ, ಕುಮಾರಸ್ವಾಮಿ ಮತ್ತು ಕಲ್ಲೇರಿತ್ತಾಯ ಹಾಗೂ ಇತರ ದೈವಗಳ ನೇಮೋತ್ಸವವು ಫೆ.11ರಿಂದ ಫೆ.14ರ ತನಕ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಇಂದು (ಫೆ.10) ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಊರ ಮಹಿಳೆಯರಿಂದ ಶ್ರಮಸೇವೆ ನಡೆಯಿತು.
Ad Widget

ಕವನ : ಬದುಕಿನ ಹಾದಿ

ಸಾವಿನವರೆಗೂ ಸಾಗುವ ದಾರಿ, ಕೊನೆಯಾಗುವುದು ತೀರವ ಸೇರಿ…ತಿಳಿದರೂ ತಿಳಿಯದೇ ಹೋದರೂ ಕೂಡ ತಿಳಿಯಲೆಬೇಕು ಬದುಕಿನ ಹಾದಿ, ಗುರಿ ಸೇರುವ ದಾರಿ…ನೀನು ಯಾರು ಎಂಬ ನಿಜವು ತಿಳಿಯದು ಯಾರಿಗೂ ನಿನ್ನನ್ನು ಹೊರತು, ನಿನ್ನ ಮನಸ್ಸನು ಹೊರತು…ಇತರರ ಬದುಕಿನ ಜೊತೆಗೆ ನೀನು ನಿನ್ನಯ ಬದುಕನು ಹೋಲಿಸಬೇಡ,ನಿನ್ನಯ ಬದುಕಿನ ದಾರಿಯೇ ಬೇರೆ, ಇತರರ ಬದುಕಿನ ದಾರಿಯೇ ಬೇರೆ…ಇಲ್ಲಿ ಯಾರೂ ಶಾಶ್ವತವಲ್ಲ,...

ಐವರ್ನಾಡು : ದೇವರ ಬಲಿ ಹೊರಟು ಉತ್ಸವ, ವಸಂತಕಟ್ಟೆ ಪೂಜೆ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಫೆ.09 ರಂದು ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ನಡೆಯಿತು.ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ ನಡೆಯಿತು.
error: Content is protected !!