Ad Widget

ಉಳುವಾರು : ವಿಷ್ಣುಮೂರ್ತಿ ದೈವದ ಬೈಲಕೋಲ

ಅರಂತೋಡು ಗ್ರಾಮದ ಉಳುವಾರು ತರವಾಡು ಮನೆಯಲ್ಲಿ ವಿಷ್ಣುಮೂರ್ತಿ ಬೈಲುಕೋಲ ದಿ.30 ರಂದು ನಡೆಯಿತು. ಈ ಸಂದರ್ಭದಲ್ಲಿ ಕುಟುಂಬದ ಹಿರಿಯರು ಪ್ರಮುಖರು ಉಪಸ್ಥಿತರಿದ್ದರು.

ಐವರ್ನಾಡು : ಉದ್ದಂಪಾಡಿಯಲ್ಲಿ ಗೋಂದೋಳು ಪೂಜೆ

ಐವರ್ನಾಡು ಗ್ರಾಮದ ಉದ್ದಂಪ್ಪಾಡಿ ರಾಮಣ್ಣ ನಾಯ್ಕ ಅವರ ಮನೆಯಲ್ಲಿ ರಾತ್ರಿ ದಿ.29 ಮಂಗಳವಾರದಂದು ಶ್ರೀ ದೇವಿ ಅಮ್ಮನವರ ಗೋಂದೋಳು ಪೂಜೆ ನಡೆಯಿತು.
Ad Widget

ಕಲ್ಮಕಾರು : ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ನೂತನ ಒಕ್ಕೂಟ ರಚನೆ – ಅಧ್ಯಕ್ಷರಾಗಿ ಶೇಷಪ್ಪ ಗೌಡ ಕೊಪ್ಪಡ್ಕ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 2022-23ನೇ ಸಾಲಿನ ಮುಂದಿನ 3 ವರ್ಷದ ಅವಧಿಗೆ ನೂತನ ಒಕ್ಕೂಟವನ್ನು ಮಾ.29 ರಂದು ರಚನೆ ಮಾಡಲಾಯಿತು. Harinarayana Mamatha devajana ಒಕ್ಕೂಟದ ನೂತನ ಅಧ್ಯಕ್ಷರಾಗಿ ಶೇಷಪ್ಪ ಗೌಡ ಕೊಪ್ಪಡ್ಕ, ಉಪಾಧ್ಯಕ್ಷರಾಗಿ ಹರಿನಾರಾಯಣ ಕೊಂಬೊಟ್ಟು, ಕಾರ್ಯದರ್ಶಿಯಾಗಿ ಶ್ರೀಮತಿ ಮಮತಾ ದೇವಜನ, ಜತೆ ಕಾರ್ಯದರ್ಶಿಯಾಗಿ ಲಿಖಿನ್ ಪಡ್ಪು, ಕೋಶಾಧಿಕಾರಿಯಾಗಿ ಯತೀಶ್ ಕಾರ್ಗೋಡು...

ಮುಕ್ಕೂರು : ಯುವಸೇನೆ ಟ್ರೋಫಿ, ಸಾಧಕರಿಗೆ ಸಮ್ಮಾನ

ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಶ್ಲಾಘನೀಯ : ಸಂಸದ ನಳಿನ್ ಮುಕ್ಕೂರು : ಹತ್ತಾರು ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಯುವಸೇನೆ ತಂಡ ಕ್ರಿಕೆಟ್ ಕೂಟ ಆಯೋಜನೆಯ ಮೂಲಕ ಮಾಡಿರುವುದು ಉತ್ತಮ ಪ್ರಯತ್ನ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ, ದ.ಕ.ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಯುವಸೇನೆ ಮುಕ್ಕೂರು, ಜ್ಯೋತಿ ಯುವಕ ಮಂಡಲ ಮುಕ್ಕೂರು-...

ಪೆರುವಾಜೆ : ಬಿಜೆಪಿ ವಿಶೇಷ ಕಾರ್ಯಕಾರಿಣಿ

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಇದರ ವಿಶೇಷ ಕಾರ್ಯಕಾರಿಣಿ ಸಭೆಯು ಪೆರುವಾಜೆ ಜೆ. ಡಿ. ಆಡಿಟೋರಿಯಂ ನಲ್ಲಿ ನಡೆಯಿತು.ವಿಶೇಷ ಕಾರ್ಯಕಾರಿಣಿ ಯ ಉದ್ಘಾಟನೆಯನ್ನುನಗರ ಪಂಚಾಯತ್ ಅಧ್ಯಕ್ಷರಾದ ವಿನಯ ಕುಮಾರ್ ಕಂದಡ್ಕ ಉದ್ಘಾಟಿಸಿ ಮಾತನಾಡಿದರು. ವಿನಯ ಕುಮಾರ್ ಮಾತನಾಡಿ ಪಕ್ಷ ಸಂಘಟ ಹಾಗೂ ನಮ್ಮ ಜೀವನದ ವಿಚಾರ ದಾರೆ ಬಗ್ಗೆ ಮಾತನಾಡಿದರು.ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ...

ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕೀರ್ತನ್ ಗೌಡ ಕೊಡಪಾಲ

ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಲರ್ಧಿಸಿದ ಕೀರ್ತನ್ ಕೊಡಪಾಲ ವಿಜಯಿಯಾಗಿದ್ದಾರೆ. ಮಾ.26 ರಂದು ಮಂಗಳೂರಿನಲ್ಲಿ ಚುನಾವಣೆ ‌ನಡೆಯಿತು. ಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಕಾಲೇಜು ಸುಬ್ರಹ್ಮಣ್ಯ ಇಲ್ಲಿ ಬಿ.ಕಾಂ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಯಾಗಿರುವ ಕೀರ್ತನ್ಮಡಪ್ಪಾಡಿ ಗ್ರಾಮದ ದಿನೇಶ್ ಕೊಡಪಾಲ - ವಸಂತಿ ಕೊಡಪಾಲ...

ಸೋಣಂಗೇರಿ ಶಾಲೆಯ ವತಿಯಿಂದ ಮಾಹಿತಿ ಕಾರ್ಯಗಾರ

ಸೋಣಂಗೇರಿ ಸ.ಉ.ಹಿ.ಪ್ರಾ ಶಾಲಾ ವತಿಯಿಂದ ಶಾಲೆಗೆ ಗೈರು ಹಾಜರಾಗುತ್ತಿರುವ ಮಕ್ಕಳಿಗೆ ಮತ್ತು ಪೋಷಕರಿಗಾಗಿ ಮಾಹಿತಿ ಕಾರ್ಯಗಾರವನ್ನು ಮಾ.21 ರಂದು ಸುಡಿಕಿರಿಗುಡ್ಡೆ ಎಂಬಲ್ಲಿ ಆಯೋಜಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಬು ಇವರು ವಹಿಸಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ರಶ್ಮಿ ನೆಕ್ರಾಜೆ, ಶಿಕ್ಷಣ ಸಂಯೋಜಕ ಶ್ರೀ ವಸಂತ್ ಏನೆಕಲ್ಲು, ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ಉಷಾ,...

ಬೆಳ್ಳಾರೆ : ಸರಕಾರಿ ಆಸ್ಪತ್ರೆಯಲ್ಲಿ ಆದಿತ್ಯವಾರ ಹೇಳೋರಿಲ್ಲ ‌‌‌….ಕೇಳೋರಿಲ್ಲ – ಜನ ಬಂದು ಕಾಯುತ್ತಿರುವ ವಿಡಿಯೋ ವೈರಲ್

ಬೆಳ್ಳಾರೆ ಸರಕಾರಿ ಆಸ್ಪತ್ರೆಯಲ್ಲಿ ಆದಿತ್ಯವಾರ ರಜೆ ಇದೆಯೇ ?, ವೈದ್ಯರು ಅಥವಾ ಸಿಬ್ಬಂದಿ ಯಾರಾದರೂ ಒಬ್ಬರೂ ಇರಬೇಕೆ ?, ರಜೆಯಾದರೇ ಬಾಗಿಲು ಹಾಕಬೇಕಲ್ಲವೇ ? ಇಲ್ಲದೇ ರೋಗಿಗಳು ಬಂದು ಕಾಯುವಂತ ಪರಿಸ್ಥಿತಿ ಇದೆ. ಜನ ಬಂದು ಬೆಳಗ್ಗಿನಿಂದ ಕಾಯುತ್ತಿರುವ ಬಗ್ಗೆ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಬಗ್ಗೆ ಸಂಬಂಧಪಟ್ಟವರು, ಜನಪ್ರತಿನಿಧಿಗಳು ಉತ್ತರಿಸಬೇಕಾಗಿದೆ. ಜನ ಕಾಯುವ ಪರಿಸ್ಥಿತಿ...

ಕುಂಬರ್ಚೋಡು ನಿವಾಸಿಗಳಿಂದ ಸಚಿವ ಅಂಗಾರರಿಗೆ ಮನವಿ

ಜಾಲ್ಸೂರು ಗ್ರಾಮದ ಕುಂಬರ್ಚೋಡು ಭಾಗದ ವಿವಿಧ ಸಮಸ್ಯೆಗಳ ಬಗ್ಗೆ ಸ್ಪಂದಿಸುವಂತೆ ಸಚಿವ ಅಂಗಾರರಿಗೆ ಮನವಿ ಸಲ್ಲಿಸಲಾಯಿತು. ಕುಂಬರ್ಚೋಡಿನ ವಿವಿಧ ಸಮಸ್ಯೆಗಳಾದ ವಿದ್ಯುತ್, ರಸ್ತೆ, ಕಸ ವಿಲೇವಾರಿ, ನೀರು, ಚರಂಡಿ ಸಮಸ್ಯೆ ಸರಿಪಡಿಸಲು ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಅಂಗಾರ ಅವರನ್ನು ಇಂದು ಅವರ ನಿವಾಸದಲ್ಲಿ ಬೇಟಿ ಮಾಡಿ...

ಮಾನಸಿಕವಾಗಿ ಮಹಿಳೆಯರೇ ಬಲಿಷ್ಠರು : ಡಾ| ಚೂಂತಾರು – ಮಹಿಳಾ ದಿನಾಚರಣೆ ಅಂಗವಾಗಿ ಗೃಹರಕ್ಷಕಿ ರಮ್ಯರಿಗೆ ಸನ್ಮಾನ

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸುಳ್ಯ ಘಟಕದ ಮಹಿಳಾ ಗೃಹರಕ್ಷಕಿ ರಮ್ಯರಿಗೆ ಮಹಿಳಾ ದಿನಾಚರಣೆಯ ಅಂಗವಾಗಿ ಸನ್ಮಾನ ಕಾರ್ಯಕ್ರಮ ಮಾ.27 ರಂದು ನಡೆಯಿತು. ಇವರು ಪ್ರಸ್ತುತ ಸುಳ್ಯ ಘಟಕದ ಗೃಹರಕ್ಷಕಿಯಾಗಿದ್ದು, ಪೊಲೀಸ್ ಠಾಣಾ ಕರ್ತವ್ಯ, ಚುನಾವಣಾ ಕರ್ತವ್ಯ, ಕೋವಿಡ್ ಕರ್ತವ್ಯ ಹಾಗೂ ಅನೇಕ ಬಂದೋಬಸ್ತ್ ಕರ್ತವ್ಯಗಳನ್ನು ಮಾಡಿರುತ್ತಾರೆ. ಇವರು ಮಾಡಿರುವ ಕರ್ತವ್ಯಗಳನ್ನು ಗುರುತಿಸಿ ಇವರಿಗೆ ದಕ್ಷಿಣ...
Loading posts...

All posts loaded

No more posts

error: Content is protected !!