‘ರೋಟರಿ ಕ್ಲಬ್ ಬೆಳ್ಳಾರೆ ಟೌನ್’ಗೆ ನೂತನ ಸಾರಥ್ಯ ; ಜು.25ರಂದು ಪದಗ್ರಹಣ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ

ಬೆಳ್ಳಾರೆ : 2026-27ನೇ ಸಾಲಿನ ನೂತನ ಪದಾಧಿಕಾರಿಗಳ ತಂಡವನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಆರಿಫ್ ಬೆಳ್ಳಾರೆ, ನಿಕಟಪೂರ್ವಾಧ್ಯಕ್ಷರಾಗಿ ವಿಶ್ವನಾಥ.ಕೆ, ನಿಯೋಜಿತ ಅಧ್ಯಕ್ಷರಾಗಿ ಗಣೇಶ್ ಕುಕ್ಕುತಡಿ, ಕಾರ್ಯದರ್ಶಿಯಾಗಿ ಪ್ರಶಾಂತ್ ತಂಟೆಪ್ಪಾಡಿ ಹಾಗೂ ಕೋಶಾಧಿಕಾರಿಯಾಗಿ ರವೀಂದ್ರ ಗೌಡ ಆಯ್ಕೆಯಾಗಿದ್ದಾರೆ ಎಂದು ಜು.18ರಂದು ಸುಳ್ಯದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕ್ಲಬ್ ನ ಸರ್ಜೆಂಟ್ ಎಟ್ ಆರ್ಮ್ಸ್ ಆಗಿ ನವೀನ್...

ಕುಕ್ಕೆ ಕ್ಷೇತ್ರದ ಗಜರಾಣಿ ‘ಯಶಸ್ವಿನಿ’ಗೆ 23ನೇ ವರ್ಷದ ಜನ್ಮದಿನದ ಸಂಭ್ರಮ

ಸುಬ್ರಹ್ಮಣ್ಯ : ನಾಗಾರಾಧನೆಯ ಮೂಲಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಯಶಸ್ವಿನಿ ಜು.18 ಶನಿವಾರ ತನ್ನ ಹುಟ್ಟಿದ ದಿನವಾಗಿ 23ನೇ ವರ್ಷಕ್ಕೆ ಪಾದಾರ್ಪಣೆ ಮಾದಿದ್ದಾಳೆ. ಹುಟ್ಟು ಹಬ್ಬದ ದಿನವಾದ ಶನಿವಾರ ಯಶಸ್ವಿನಿಯ ಹೆಸರಿನಲ್ಲಿ ಕಾಶಿಕಟ್ಟೆ ಮಹಾಗಣಪತಿ ದೇವಸ್ಥಾನದಲ್ಲಿ ಸಂಜೆ ವಿಶೇಷ ರಂಗ ಪೂಜೆ ನೆರವೇರಿಸಲಾಯಿತು. ಪೂಜೆಯ ಬಳಿಕ ಕಾಶಿಕಟ್ಟೆಯಿಂದ ಮುಖ್ಯ ರಸ್ತೆಯಲ್ಲಿ ಮೈಯಾಡಿಸುತ್ತಾ, ಸೊಂಡಿಲೆತ್ತಿ, ತಲೆಮುಟ್ಟಿ ಹರಸಿಕೊಂಡು ತೆರಳಿದ...
Ad Widget

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ವನಸುಮ ವನವಾಸಿ ವಿದ್ಯಾರ್ಥಿನಿಲಯಕ್ಕೆ ಪುಸ್ತಕ ವಿತರಣೆ

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ವನಸುಮ ವನವಾಸಿ ವಿದ್ಯಾರ್ಥಿ ನಿಲಯ ಅಡ್ಕಾರ್ ಇಲ್ಲಿನ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವು ಜುಲೈ 18ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಸುಳ್ಯ ಪಯಸ್ವಿನಿ ಇದರ ಅಧ್ಯಕ್ಷೆ ಜೆಎಫ್ಎಂ ಲತಾಶ್ರೀ ಸುಪ್ರೀತ್ ಮೊಂಟಡ್ಕ ವಹಿಸಿದ್ದರು.  ಜೇಸಿಐ ಭಾರತ ವಲಯ 15, ನೇತ್ರಾವತಿ(ರಿಜನ್ -ಬಿ) ಇದರ ಉಪಾಧ್ಯಕ್ಷರಾದ ಜೇಸಿ ಸೆನೆಟರ್ ಜಿತೇಶ್ ಪಿರೆರಾ...

ಪರಂಪರಾಗತ ಕೃಷಿ ವಿಕಾಸ ಯೋಜನೆಯ ಅಡಿಯಲ್ಲಿ “ಕೃಷಿ ಅಧ್ಯಯನ ಪ್ರವಾಸ”

ದಕ್ಷಿಣ ಕನ್ನಡ ತೋಟಗಾರಿಕಾ ಇಲಾಖೆ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಸುಳ್ಯ ಹಾಗೂ ಐ.ಸಿ.ಸಿ.ಓ.ಎ ಇವರ ಸಹಯೋಗದೊಂದಿಗೆ ಹಾಗೂ ಪರಿವಾರ ಪಂಜ ರೈತ ಉತ್ಪಾದಕ ಕಂಪೆನಿ ಇವರ ಸಹಕಾರದೊಂದಿಗೆ ಜು.18ರಂದು ಪರಂಪರಾಗತ ಕೃಷಿ ವಿಕಾಸ ಯೋಜನೆಯ ಸದಸ್ಯರಿಗೆ “ಕೃಷಿ ಅಧ್ಯಯನ ಪ್ರವಾಸ” ನಡೆಯಿತು. ದೂಪ, ಪಯ್ಯಾನಿ ಮತ್ತು ಅಡಿಕೆ ಮರಗಳಲ್ಲಿ ಕಾಳುಮೆಣಸಿನ ಕೃಷಿ ಹಾಗೂ ಸ್ವಯಂಚಾಲಿತ...

ಡಾ. ಅನುರಾಧ ಕುರುಂಜಿಯವರಿಗೆ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026”

ಸುಳ್ಯ : ಶಿಕ್ಷಣ ಕ್ಷೇತ್ರ, ಸಾಹಿತ್ಯ ಸಮಾಜಸೇವೆ ಹಾಗೂ ಸಂಘಟನೆಯಲ್ಲಿ ಸಲ್ಲಿಸಿರುವ ವಿಶಿಷ್ಟ ಕೊಡುಗೆಗಾಗಿ ಶಿಕ್ಷಣ ತಜ್ಞೆ, ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ, ಸಾಹಿತಿ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಅನುರಾಧ ಕುರುಂಜಿ ಅವರಿಗೆ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026” ಘೋಷಿಸಲಾಗಿದೆ. ಗಡಿನಾಡು ಕಾಸರಗೋಡಿನ ಡಾ. ವಾಮನ್ ರಾವ್...

ಸುಳ್ಯ : ಮಟ್ಕಾ ಜೂಜಾಟ – ಆರೋಪಿಗಳು ದೋಷ ಮುಕ್ತ

ಸುಳ್ಯ ನಾವೂರು ಸಮೀಪ ಸಾರ್ವಜನಿಕ ಸ್ಥಳದಲ್ಲಿ 2025 ಮಾ.04 ರಂದು ಸಾರ್ವಜನಿಕರಿಂದ ಹಣವನ್ನು ಪಣವಾಗಿರಿಸಿಕೊಂಡು ಮಟ್ಕಾ ಜೂಜಾಟ ಆಡಿಸುತ್ತಿರುವುದನ್ನು ಖಚಿತ ಮಾಹಿತಿ ಪಡೆದುಕೊಂಡು ಸುಳ್ಯ ಪೋಲಿಸ್ ಠಾಣಾ ಉಪ ನಿರೀಕ್ಷಕರಾದ ಸಂತೋಷ ಬಿ.ಪಿ ರವರು ದಾಳಿ ನಡೆಸಿ ಬಾಬು ಮತ್ತು ಕಾವೇರಿ ಜಗ್ಗ ಅಲಿಯಾಸ್ ಜಗದೀಶ್ ಪೂಜಾರಿ ಎಂಬವರ ಮೇಲೆ ಪ್ರಕರಣವನ್ನು ದಾಖಲಿಸಿ ಸುಳ್ಯ ನ್ಯಾಯಾಲಯಕ್ಕೆ...

“ಮಾರುಕಟ್ಟೆ ರೌಂಡ್ ಅಪ್” – ಸೋಮವಾರ(ಜು.13)ದಿಂದ ಶನಿವಾರ(ಜು.18)ದವರೆಗಿನ “ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ”ಯ ಸಮಗ್ರ ನೋಟ – ರಬ್ಬರ್, ಕಾಳುಮೆಣಸು, ಕೊಬ್ಬರಿ ಬೆಲೆಯಲ್ಲಿ ಭರ್ಜರಿ ಜಿಗಿತ..! ; ಅಡಿಕೆ ಹಾಗೂ ಕೊಕ್ಕೋ ಧಾರಣೆ ಸಂಪೂರ್ಣ ಸ್ಥಿರ!

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ದಿನನಿತ್ಯವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ಪ್ರತಿದಿನದ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ “ಅಮರ ಸುಳ್ಯ ಸುದ್ದಿ ವಾರಪತ್ರಿಕೆ”ಯ ವೆಬ್ ಸೈಟ್...

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ವಿಶ್ವ ಉರಗಳ ದಿನಾಚರಣೆ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಅಗದತಂತ್ರ ವಿಭಾಗದಿಂದ ವಿಶ್ವ ಉರಗಳ ದಿನಾಚರಣೆಯ ಪ್ರಯುಕ್ತ ಜು.16ರಂದು ವಿವಿಧ ರೀತಿಯ ಉರಗಗಳ ಸಂರಕ್ಷಣೆ ಕುರಿತು ಮಾಹಿತಿ ಕಾರ್ಯಗಾರವನ್ನು ಕಾಲೇಜಿನ ಸುಶ್ರುತ ಸಭಾಂಗಣದಲ್ಲಿ ನಡೆಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ ಲೀಲಾಧರ್ ಡಿ.ವಿ ಅವರು ದೀಪ ಬೆಳಗಿಸುವುದ ಮೂಲಕ ಉದ್ಘಾಟಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ...

ಇಂದಿನ(ಜುಲೈ 18) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಕಾಳುಮೆಣಸು ಬೆಲೆಯಲ್ಲಿ ಮತ್ತೆ ಏರಿಕೆ..! ; ರಬ್ಬರ್ ಬೆಲೆಯಲ್ಲಿ ಅಲ್ಪ ಇಳಿಕೆ..!! ; ಅಡಿಕೆ ಮತ್ತು ಕೊಬ್ಬರಿ ಸಂಪೂರ್ಣ ಸ್ಥಿರ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 18 ಜುಲೈ 2026ವಾರ : ಶನಿವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಜುಲೈ 18) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...

ಮಂಡೆಕೋಲು : ತೂಗುಸೇತುವೆಯ ಬಳಿಯಲ್ಲಿಯೇ ಪದ್ಮಶ್ರೀ ಗಿರೀಶ್ ಬಾರಧ್ವಾಜರಿಗೆ ಶ್ರದ್ಧಾಂಜಲಿ‌ ಅರ್ಪಣೆ

ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಅವರು ನಿರ್ಮಿಸಿದ ತೂಗುಸೇತುವೆ ಬಳಿಯಲ್ಲಿಯೇ ಊರವರಿಂದ ಶ್ರದ್ಧಾಂಜಲಿ ಕಾರ್ಯಕ್ರಮವು ನಡೆಯಿತು. ಮಂಡೆಕೋಲಿನ ಪೆರಾಜೆ ತೂಗುಸೇತುವೆಯು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದು, ಪದ್ಮಶ್ರೀ ಗಿರೀಶ್ ಭಾರದ್ವಾಜರೇ ಈ ಸೇತುವೆಯನ್ನು ಕೂಡ ನಿರ್ಮಿಸಿದ್ದರು. ಈ ತೂಗುಸೇತುವೆ ಕಲ್ಲಡ್ಕ ಪೆರಾಜೆ-ಅಕ್ಕಪ್ಪಾಡಿ ಭಾಗದ ನಾಗರಿಕರ ಬದುಕನ್ನೇ ಬದಲಿಸಿದ ಸೇತುವೆಯಾಗಿದ್ದು, ಆ ಕಾರಣಕ್ಕಾಗಿಯೇ ತೂಗುಸೇತುವೆ ಸಂರಕ್ಷಣಾ...
Loading posts...

All posts loaded

No more posts

error: Content is protected !!