ಉತ್ತರ ಕನ್ನಡದ ಭಟ್ಕಳದಲ್ಲಿ ನಡೆದ ರಾಜ್ಯ ಮಟ್ಟದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅಶ್ವಿಜ್ ಅತ್ರೇಯ ಸುಳ್ಯ

ಮೇ16 : Inspire Dance Crew, Bhatkala ಇದರ 5ನೇ ವರ್ಷದ “ಸಂಭ್ರಮ “2026 Shining Night” ರಾಜ್ಯ ಮಟ್ಟದ ಸಂಗೀತ ಗಾಯನ ಸ್ಪರ್ಧೆಯಲ್ಲಿ ಸುಳ್ಯದ ಅಶ್ವಿಜ್ ಅತ್ರೇಯ ಸುಳ್ಯ ಇವರು ಪ್ರಥಮ ಸ್ಥಾನ ಪಡೆದು ಟ್ರೋಫಿ ನಗದು ಬಹುಮಾನಕ್ಕೆ ಭಾಜನರಾಗಿದ್ದಾರೆ. ಆಡಿಷನ್, ಮೆಗಾ ಆಡಿಷನ್, ಸೆಮಿ ಫಿನಾಲೆ ಹಂತಗಳಿಂದ ಆಯ್ಕೆಯಾಗಿ ಫಿನಾಲೆ ಹಂತದಲ್ಲಿ ಟಾಪ್...

ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿದ ತೆಲಂಗಾಣ ಸಾರಿಗೆ ಸಚಿವರಾದ ಪೋನ್ನಮ್ ಪ್ರಭಾಕರ

ಸುಬ್ರಹ್ಮಣ್ಯ : ತೆಲಂಗಾಣ ರಾಜ್ಯ ಸರಕಾರದ ಸಾರಿಗೆ ಸಚಿವರಾದ ಪೊನ್ನಮ್ ಪ್ರಭಾಕರ ಅವರು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಇವರನ್ನು ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿಗಳಾದ ಅರವಿಂದ ಅಯ್ಯಪ್ಪ ಸುತಗುಂಡಿ ಸ್ವಾಗತಿಸಿದರು. ಬಳಿಕ ಶ್ರೀ ದೇವಳಕ್ಕೆ ತೆರಳಿದ ಸಚಿವರು ಶ್ರೀ ದೇವರ ದರುಶನ ಮಾಡಿದರು. ಇವರಿಗೆ ಅರ್ಚಕರು ಶಾಲು ಹೊದಿಸಿ ಮಹಾಪ್ರಸಾದ ನೀಡಿದರು....
Ad Widget

ಸುಬ್ರಹ್ಮಣ್ಯ : ಕೊಲ್ಲಮೊಗ್ರು-ಹರಿಹರ ಪ್ರಾ.ಕೃ.ಪ.ಸ ಸಂಘದಿಂದ ಪತ್ರಿಕಾಗೋಷ್ಠಿ – 2025-26ನೇ ಸಾಲಿನಲ್ಲಿ 480.80 ಕೋಟಿ ರೂ. ವ್ಯವಹಾರ, 1.80 ಕೋಟಿ ರೂ. ಲಾಭ ಹಾಗೂ 27 ಕೋಟಿ ರೂ. ವ್ಯವಹಾರ ವಿಸ್ತರಣೆ, ಶೇ.99 ಸಾಲ ವಸೂಲಾತಿ – ಮಾಹಿತಿ ನೀಡಿದ ಆಡಳಿತ ಮಂಡಳಿ

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಮೇ.20 ಬುಧವಾರದಂದು ಸುಬ್ರಹ್ಮಣ್ಯದಲ್ಲಿ ಸಂಘದ 2025-26ನೇ ಸಾಲಿನ ವ್ಯಾವಹಾರಿಕ ವರ್ಷದ ವರದಿಯನ್ನು ನೀಡುವ ಸಲುವಾಗಿ ಪತ್ರಿಕಾಗೋಷ್ಠಿ ನಡೆದಿದ್ದು, ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಡಾ| ಸೋಮಶೇಖರ್ ಕಟ್ಟೆಮನೆ “ತಾಲೂಕಿನ ಪ್ರಮುಖ ಸಹಕಾರಿ ಸಂಘವಾಗಿ ಹರಿಹರ ಪಳ್ಳತ್ತಡ್ಕದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿ ಕೊಲ್ಲಮೊಗ್ರು ಹಾಗೂ...

ಭಾವ ತೀರ ಯಾನ ಚಲನಚಿತ್ರ ನಾಳೆ ಸುಳ್ಯದಲ್ಲಿ ಕೊನೆಯ ಪ್ರದರ್ಶನ – ಸುಳ್ಯದ ಪ್ರತಿಭೆಯ ಬೆಂಬಲಿಸಲು ಕೊನೆಯ ಅವಕಾಶ

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಸುಳ್ಯದಲ್ಲಿ ಮರುಬಿಡುಗಡೆಗೊಂಡು ಎರಡು ವಾರಗಳಿಂದ ಉತ್ತಮ ಪ್ರದರ್ಶನ ಕಾಣುತ್ತಿದೆ. ಸುಳ್ಯ ಭಾರತ್ ಸಿನೇಮಾಸ್ ( ಸಂತೋಷ್ ಚಿತ್ರಮಂದಿರ) ನಲ್ಲಿ ಮೇ. 21 ಗುರುವಾರ ಸಂಜೆ 4.15 ಕ್ಕೆ ಕೊನೆಯ ಚಿತ್ರ ಪ್ರದರ್ಶನ ನಡೆಯಲಿದೆ. ಪುತ್ತೂರಿನಲ್ಲಿ ನಿರೀಕ್ಷೆಗೂ ಮೀರಿ ಯಶಸ್ವಿ ...

ಗುತ್ತಿಗಾರು : ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸ್ವಚ್ಛತೆ ಮೂಲಕ ಮಾದರಿಯಾದ ದಂಪತಿಗಳಿಗೆ ಅಕ್ಕಿ ವಿತರಣೆ

ಜಿಲ್ಲಾ ಮಟ್ಟದ ಯೋಗಾಸನ ಮತ್ತು ರಕ್ತದಾನ ಶಿಬಿರ ಪ್ರಯುಕ್ತ ಆಯೋಜನೆ ಮಾಡಲಾಗಿದ್ದ ಸಹಾಯ ನಿಧಿ ಕೂಪನ್ ನ ಬಹುಮಾನಗಳನ್ನು ವಿತರಣೆ ಮಾಡಲಾಗಿದ್ದು, ಕೆಲವೊಂದು ಬಹುಮಾನಗಳು ಹಾಗೆ ಉಳಿಕೆ ಆಗಿದ್ದು ಇದರ ಬಾಬ್ತು ಇದ್ದ 50 ಕೆ.ಜಿ ಅಕ್ಕಿಯನ್ನು ಗುತ್ತಿಗಾರಿನಲ್ಲಿ ಸ್ವಚ್ಛತೆಯ ಕೆಲಸವನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತ ಮಾದರಿ ಜೀವನ ನಡೆಸುತ್ತಿರುವ ಶ್ರೀಮತಿ ಲೀಲಾವತಿ ಅನಂತಕೃಷ್ಣ ಛತ್ರಪ್ಪಾಡಿ ಅವರಿಗೆ...

ವರ್ಷದಲ್ಲಿ 28 ದಿನ ಮಾತ್ರ ತೆರೆದಿರುವ ಕೊಟ್ಟಿಯೂರು ದೇವಸ್ಥಾನ – ದೇವರ ದರ್ಶನಕ್ಕೆ ಎಸ್.ಕೆ.ಎಚ್. ಟೂರ್ಸ್ ನಿಂದ ವಿಶೇಷ ಪ್ಯಾಕೇಜ್

ಕೇರಳದ ಪ್ರಸಿದ್ಧ ದೇವಸ್ಥಾನಗಳಲ್ಲೊಂದಾದ ಕೊಟ್ಟಿಯೂರು ಶಿವ ದೇವಸ್ಥಾನ ವರ್ಷದಲ್ಲಿ 28 ದಿನ ಮಾತ್ರ ದರ್ಶನಕ್ಕೆ ಅವಕಾಶವಿದ್ದು, ಮೇ 21 ರಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಕ್ತಾಧಿಗಳ ಪ್ರಯಾಣಕ್ಕೆ ಸುಬ್ರಹ್ಮಣ್ಯದ ಎಸ್.ಕೆ.ಎಚ್. ಟೂರ್ಸ್ ನಿಂದ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಇಂದಿನಿಂದ ಬುಕ್ಕಿಂಗ್ ಆರಂಭಗೊಂಡಿದೆ. ಬುಕ್ಕಿಂಗ್ ಗಾಗಿ 6361822198, 9483055264 ನಂಬರ್ ಗೆ ಸಂಪರ್ಕಿಸಬಹುದು....

ಪೆರಾಜೆ : ಕಣಜದ ಹುಳು ಕಡಿತ – ವ್ಯಕ್ತಿ ಮೃತ್ಯು

ಕಣಜದ ಹುಳು ಕಡಿತದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಪೆರಾಜೆ ಗ್ರಾಮದ ಹೊದ್ದೆಟ್ಟಿಯಿಂದ ಇಂದು ವರದಿಯಾಗಿದೆ. ಹೊದ್ದೆಟ್ಟಿ ಕುಟುಂಬದ ದೈವಸ್ಥಾನದ ಪೂಜಾರಿ ಜಗದೀಶ (53) ಮೃತ ದುರ್ದೈವಿ. ತಮ್ಮ ತೋಟದಲ್ಲಿ ಕೆಲಸ ನಿರ್ವಹಿಸುವಾಗ ಕಣಜದ ಹುಳು (ಕಡಂದೊಳು) ಕಚ್ಚಿ ಸ್ಮ್ರತಿ ತಪ್ಪಿದ ಅವರನ್ನು ಸುಳ್ಯ ಸರಕಾರೀ ಆಸ್ಪತ್ರೆಗೆ ತಂದು ಸೇರಿಸಿ, ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಮೃತಪಟ್ಟರು. ಮೃತರು...

ನಿಧನ : ಸುಂದರ ಗೌಡ ಹಳೆಮನೆ

ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಹಳೆಮನೆ ಸುಂದರ ಗೌಡ ರವರು ಅಲ್ಪಕಾಲದ ಅಸೌಖ್ಯದಿಂದ ಮೇ.20ರಂದು ಬೆಳಿಗ್ಗೆ ನಿಧನರಾದರು. ಮೃತರಿಗೆ 61 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶೀಲಾವತಿ, ಪುತ್ರಿಯರಾದ ಜಯಶ್ರೀ, ಜಶ್ಮಿತಾ, ಪುತ್ರ ಹಿತೇಶ್ ಹಾಗೂ ಸಹೋದರರಾದ ಕುಂಞಣ್ಣ ಗೌಡ, ಗಂಗಾಧರ ಗೌಡ, ಸಹೋದರಿ ಜಯಂತಿ ಹಾಗೂ ಅಳಿಯಂದಿರು, ಮೊಮ್ಮಕ್ಕಳು ಮತ್ತು ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.

ಇಂದಿನ(ಮೇ 20) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಹೊಸ ಅಡಿಕೆ ಮತ್ತು ಕಾಳುಮೆಣಸು ಧಾರಣೆಯಲ್ಲಿ ಕುಸಿತ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 20 ಮೇ 2026ವಾರ : ಬುಧವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಮೇ 20) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 425 ರಿಂದ...

ದ್ವಾದಶ ರಾಶಿಗಳ ದಿನ ಭವಿಷ್ಯ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ ಮೊ: 9591969197ದಿನಾಂಕ:20:05:2026 ಬುಧವಾರ*01,🐏ಮೇಷರಾಶಿ🐏*🦢,ಈರಾಶಿಯವರಿಗೆಯಾವುದೂ ಕಷ್ಟವಲ್ಲ. ಆದರೆ ಯಾಕೋ ತಿಳಿದಷ್ಟು ವೇಗದಿಂದ ಮುಂದೆ ಸಾಗಲಾರದು ಎಂಬ ತಳಮಳ ನಿಮ್ಮನ್ನು ಬಾಧಿಸುವುದು. ಆದರೆ ಪೂರ್ವ ತಯಾರಿ ಸೂಕ್ತವಾಗಿ ಮಾಡಿಕೊಂಡಲ್ಲಿ ನಿಶ್ಚಿತವಾದ ಗುರಿಯನ್ನು ತಲುಪುವಿರಿ. ಆದಾಯ ಖರ್ಚನ್ನು ಸೂಕ್ಷ್ಮವಾಗಿ ಪರಿಶೀಲಿಸಿ,ಗಮನಿಸಿ:-ಕೆಲವು ಘಟನೆಗಳು ನಿಮ್ಮನ್ನಿಂದು ಭಾವಪರವಶರನ್ನಾಗಿಸುವವು,ಪರಿಹಾರ:- ಇಂದು ಸಂಜೆ ಶಿವಾಲಯಕ್ಕೆ ಹೋಗಿ,*02,🐂ವೃಷಭರಾಶಿ🐂*🦢,ಈರಾಶಿಯವರಿಗೆಕೋರ್ಟು ಕಚೇರಿಯ...
Loading posts...

All posts loaded

No more posts

error: Content is protected !!