- Thursday
- April 23rd, 2026
ಸಾಂಸ್ಕೃತಿಕ ಲೋಕದಲ್ಲಿ ಯಶಸ್ವಿ ಪಯಣದ ಮೂಲಕ ಹತ್ತನೇ ವಸಂತಕ್ಕೆ ಹೆಜ್ಜೆ ಇಡುತ್ತಿರುವ ಕಲಾಮಾಯೆ ಸಂಸ್ಥೆ ಏನೆಕಲ್ ಇದರ “ಕಲಾಮಾಯೆ ದಶ ಸಂಭ್ರಮ -2026” ಕಾರ್ಯಕ್ರಮವು ಏಪ್ರಿಲ್ 12ರಿಂದ 19 ರವರೆಗೆ ಶ್ರೀ ಆದಿಶಕ್ತಿ ಭಜನಾ ಮಂದಿರ(ರಿ.) ಏನೆಕಲ್ ಇಲ್ಲಿ ರಾಜ್ಯದ ಅನುಭವಿ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ, “ಮಕ್ಕಳ ಗೌಜಿ ಚಿಣ್ಣರ ಬಣ್ಣದ ಬೇಸಿಗೆ ಶಿಬಿರ” ನಡೆಯಲಿದ್ದು, ಮಕ್ಕಳ...
ಬೊಳುಬೈಲು ಸಮೀಪ ಕಾರು ಹಾಗೂ ಕಂಟೈನರ್ ಮುಖಾಮುಖಿ ಢಿಕ್ಕಿಯಾಗಿ ಕಾರು ಚಾಲಕ ಮೃತಪಟ್ಟ ಘಟನೆ ಇದೀಗ ನಡರದಿದೆ. ಕಾರು ಕಾಸರಗೋಡಿನಿಂದ ಸುಳ್ಯ ಕಡೆಗೆ ಬರುತ್ತಿತ್ತೆನ್ನಲಾಗಿದೆ. ಅಪಘಾತದ ರಭಸಕ್ಕೆ ಕಂಟೈನರ್ ಪಲ್ಟಿಯಾಗಿದೆ. ಕಾರು ಚಾಲಕ ಕಾಸರಗೋಡು ಕಿನ್ಬಿಂಗಾರ್ ಸತೀಶ ಮೃತ ದುರ್ದೈವಿ.
ನಿಂತಿಕಲ್ಲಿನ ಕೆನರಾ ಬ್ಯಾಂಕ್ ಬಳಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಲೋಕನಾಥ (35) ಎಂಬವರು ಮೃತಪಟ್ಟ ಘಟನೆ ಇಂದು ನಡೆದಿದೆ. ಸುಳ್ಯದಿಂದ ಮನೆಗೆ ತೆರಳುತ್ತಿದ್ದಾಗ ನಿಂತಿಕಲ್ಲು ಕೆನರಾ ಬ್ಯಾಂಕ್ ಬಳಿ ವಿದ್ಯುತ್ ಕಂಬಕ್ಜೆ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆ ತರಲಾಗಿತ್ತು . ಅಲ್ಲಿ ಅವರಿಗೆ ಚಿಕಿತ್ಸೆ ಫಲಿಸದೇ ಮೃತಪಟ್ಟರೆನ್ನಲಾಗಿದೆ.ಸುಳ್ಯ...
ಸುಳ್ಯ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಕೃಷಿಕ ಸಮಾಜ ವತಿಯಿಂದ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ಕೊಕ್ಕೊ ಬೆಳೆಯ ನಿರ್ವಹಣೆ ಬಗ್ಗೆ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಅದ್ಯಕ್ಷತೆಯನ್ನು ಡಾ. ಎಂ.ಕೆ ರಾಜೇಶ್ ಮುಖ್ಯಸ್ಥರು ICAR, CPCRI ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ವಿಜ್ಞಾನಿಗಳಾದ ಡಾ. ಎಲೈನ್ ಅಪ್ಸರಾ ಮತ್ತು ಡಾ. ಭವಿಷ್ಯ ಮಾಹಿತಿ ನೀಡಿದರು....
ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವವು ಎ.11ಮತ್ತು 12ರಂದು ನಡೆಯಲಿದ್ದು, ಅಮಂತ್ರಣ ಪತ್ರಿಕೆ ಬಿಡುಗಡೆಯು ನಡೆಯಿತು.ಈ ಸಂದರ್ಭದಲ್ಲಿ ಮೊಕೇಸರರಾದ ಎಂ.ಬಿ ಸದಾಶಿವ, ಅಧ್ಯಕ್ಷ ಜಯಕುಮಾರ್ ಚೆಸ್ಕಾರ್, ಕಾರ್ಯದರ್ಶಿ ಕೇಶವ ಚೌಟಾಜೆ, ಕೋಶಾಧಿಕಾರಿ ಲೋಹಿತ್ ಹೊದ್ದೆಟ್ಟಿ, ಶ್ರೀಮತಿ ಇಂದಿರಾ ದೇವಿಪ್ರಸಾದ್, ಟೀನಾ ಚರಣ್, ಕೆ.ಜಿ ಗೋಪಾಲಕೃಷ್ಣ ಭಟ್, ಬಿ.ಆರ್. ಪದ್ಮಯ್ಯ, ಪುರುಷೋತ್ತಮ ಬಾಳೆಹಿತ್ತಿಲು, ರಾಜಾರಾಮ ಕಳಗಿ, ಯು.ಬಿ...
ಸುಬ್ರಹ್ಮಣ್ಯ ಮಾರ್ಚ್ 24 : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿ ತಿಂಗಳು ಬರುವ ಶುದ್ಧ ಷಷ್ಠಿಯಂತೆ ಮಾರ್ಚ್ ತಿಂಗಳ ಈ ದಿನ ಮಂಗಳವಾರ ಶುದ್ಧ ಷಷ್ಠಿ ದಿನವಾದ್ದರಿಂದ ಅಧಿಕ ಸಂಖ್ಯೆಯ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಆಶ್ಲೇಷ ಬಲಿ, ನಾಗ ಪ್ರತಿಷ್ಠೆ ಹಾಗೂ ಸರ್ಪ ಸಂಸ್ಕಾರ...
ಸರ್ಕಾರಿ ಪ್ರೌಢಶಾಲೆ ಅಜ್ಜಾವರ ಇಲ್ಲಿಯ ಇಬ್ಬರು ವಿದ್ಯಾರ್ಥಿಗಳು ಭಾರತ ಸರ್ಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಆಯೋಜಿಸಿರುವ ಪ್ರತಿಷ್ಠಿತ “INSPIRE Award -MANAK” ಗೆ ಆಯ್ಕೆಯಾಗಿರುತ್ತಾರೆ. ಈ ಯೋಜನೆಯಡಿ ಮಂಡೆಕೊಲು ಮನೆಯ ಜನಾರ್ಧನ ಮತ್ತು ಧರ್ಮಾವತಿ ದಂಪತಿ ಪುತ್ರಿ 9ನೇ ತರಗತಿಯ ಮೋಕ್ಷಿತಾ ಎಂ.ಜೆ ಹಾಗೂ ಅಜ್ಜಾವರ ಗ್ರಾಮದ ನಾರಾಲು ಮನೆಯ ಪರಮೇಶ್ವರ ಮತ್ತು ರಜನಿ...
ರಾಜ್ಯ ಪ್ರಶಸ್ತಿ ಪುರಸ್ಕೃತ ಮಿತ್ರ ಬಳಗ(ರಿ.) ಕಾಯರ್ತೋಡಿ ಸುಳ್ಯ ಇದರ ವಾರ್ಷಿಕ ಮಹಾಸಭೆ ಮತ್ತು 2026-27ರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾಗಿ ಯಶೋಧರ ಹಾಗೂ ಉಪಾಧ್ಯಕ್ಷರಾಗಿ ಮಹೇಶ್ ಕುತ್ಪಾಜೆ, ಕಾರ್ಯದರ್ಶಿಯಾಗಿ ಮೌನೇಶ್.ಕೆ, ಜೊತೆ ಕಾರ್ಯದರ್ಶಿಯಾಗಿ ಸಚಿನ್ ದೆಂಗೋಡಿ, ಕೋಶಾಧಿಕಾರಿಯಾಗಿ ಶೀನಪ್ಪ ಪಡ್ರೆ, ಕ್ರೀಡಾ ಸಂಚಾಲಕರಾಗಿ ಕಿಶೋರ್.ಕೆ ಆಚಾರ್ಯ, ಸಾಂಸ್ಕೃತಿಕ ಸಂಚಾಲಕರಾಗಿ...
ದಿನಾಂಕ : 24 ಮಾರ್ಚ್ 2026ವಾರ : ಮಂಗಳವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಮಾರ್ಚ್ 24) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 260-305-445-460ಹಳೆ ಅಡಿಕೆ...
ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197 ದಿನಾಂಕ:24/03/2026 ಮಂಗಳವಾರ,🪐01,🐏ಮೇಷ ರಾಶಿ🐏📃,ಇದು ಶುಭ ಸಮಯವಾಗಲಿದೆ. ನೀವು ಆಕರ್ಷಣೆಯ ಕೇಂದ್ರಬಿಂದುವಾಗಿ ಉಳಿಯುತ್ತೀರಿ. ಪ್ರೇಮ ಸಂಬಂಧಗಳಲ್ಲಿ ಮಾಧುರ್ಯ ಇರುತ್ತದೆ. ಹೊಸ ವಾಹನ ಖರೀದಿಸುತ್ತೀರಿ. ನಿರುದ್ಯೋಗಿಗಳ ಬಹುದಿನಗಳ ಕನಸು ಈಡೇರಲಿದೆ. ವ್ಯಾಪಾರಗಳು, ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತವೆ. ಕೈಗೊಂಡಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ಆತ್ಮೀಯರಿಂದ ಶುಭಸುದ್ದಿದೊರೆಯುತ್ತದೆ,ಗಮನಿಸಿ:- ಇಂದು ಉದ್ಯೋಗದಲ್ಲಿ ಅಧಿಕಾರಿಗಳೊಂದಿಗಿನ ಚರ್ಚೆಗಳು...
Loading posts...
All posts loaded
No more posts
