ಕಲ್ಲುಗುಂಡಿ : ಸ್ಟಡಿ ಲಿಂಕ್ ಟ್ಯುಟೋರಿಯಲ್‌ನ 06 ವಿದ್ಯಾರ್ಥಿಗಳು ನವೋದಯ ವಿದ್ಯಾಲಯಕ್ಕೆ ಆಯ್ಕೆ

ಕಲ್ಲುಗುಂಡಿ ಸ್ಟಡಿ ಲಿಂಕ್ ಟ್ಯುಟೋರಿಯಲ್‌ನ 06 ವಿದ್ಯಾರ್ಥಿಗಳು ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ. ಚೆಂಬು ಗ್ರಾಮದ ಪರಿವಾರ ಶಿವಪ್ರಕಾಶ್ ಪಿ.ಕೆ ಹಾಗೂ ಪ್ರಮೀಳಾ ಪಿ.ಎಸ್ ದಂಪತಿಗಳ ಪುತ್ರಿ ಗೂನಡ್ಕ ಮಾರುತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಅನಿಕ್ಷಾ, ನೀರಬಿದಿರೆ ಪ್ರಶಾಂತ್ ಎನ್.ಜೆ ಹಾಗೂ ಸುಮಲತಾ ಎಂ.ಪಿ ದಂಪತಿಗಳ ಪುತ್ರ ದಿಶಾನ್ ಎನ್.ಪಿ, ಹಂಡನ ಪುರುಷೋತ್ತಮ ಹೆಚ್.ಎಸ್ ಹಾಗೂ ಸವಿತಾ.ಜಿ ದಂಪತಿಗಳ...

ಮಂಡೆಕೋಲು ಗ್ರಂಥಾಲಯದಲ್ಲಿ ಮಹಿಳಾ ದಿನಾಚರಣೆ

ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅಧ್ವೈತ್ ಹುಂಡೈ ಸುಳ್ಯ ಶಾಖಾ ಮೆನೇಜರ್ ಸುಮನಾ ಬೆಳ್ಳಾರ್ಕರ್ ನೆರವೇರಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸಾಹಿತಿಗಳಾದ ವಿಮಲಾರುಣ ಪಡ್ಡಂಬೈಲು ಸಾಮಾಜಿಕ ಕ್ಷೇತ್ರದಲ್ಲಿ ಮಹಿಳೆಯ ಒಳಿತು ಕೆಡುಕುಗಳ ಬಗ್ಗೆ ಮಾತನಾಡಿದರು. ಗ್ರಂಥಾಲಯದ ಸ್ಪೋಕನ್‌ ಇಂಗ್ಲಿಷ್ ಶಿಕ್ಷಕಿ ಗೀತಾಂಜಲಿ ಟಿ.ಜಿ ಅಧ್ಯಕ್ಷತೆ...
Ad Widget

ಸುಳ್ಯದ ಲಯನ್ಸ್ ಕ್ಲಬ್ ಹಾಲ್ ನಲ್ಲಿ ನಡೆಯುತ್ತಿದೆ “ಸಿಂಧೂರ ಬಿಗ್ಗೆಸ್ಟ್ ಸೀರೆ ಮೇಳ” ; ಇಲ್ಲಿ ಸಿಗಲಿವೆ ಫ್ಯಾಕ್ಟರಿ ರೇಟ್ ನಲ್ಲಿ ಟ್ರೆಂಡಿ ಡಿಸೈನ್ಸ್ ಗಳ ವಿವಿಧ ಶೈಲಿಯ ಸೀರೆಗಳು

ಸುಳ್ಯದ ಜೂನಿಯರ್ ಕಾಲೇಜು ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಹಾಲ್ ನಲ್ಲಿ “ಸಿಂಧೂರ ಬಿಗ್ಗೆಸ್ಟ್ ಸೀರೆ ಮೇಳ” ವು ಮಾ.17ರಿಂದ ಮತ್ತೆ ಪ್ರಾರಂಭಗೊಂಡಿದ್ದು, ಯುಗಾದಿ ಹಬ್ಬದ ಸಂಭ್ರಮದ ಈ ಸಂದರ್ಭದಲ್ಲಿ ಹೊಸ ಹೊಸ ಸೀರೆಗಳ ಬೃಹತ್ ಸಂಗ್ರಹವೇ ಇಲ್ಲಿ ಲಭ್ಯವಿದ್ದು, ಟ್ರೆಂಡಿ ಡಿಸೈನ್ ಗಳ ಹೊಸ ಹೊಸ ಸ್ಟೈಲ್ ಗಳ ಸಿಲ್ಕ್, ಕಾಟನ್, ಡಿಸೈನರ್, ಡೈಲಿವೇರ್ ಹೀಗೆ...

ಸುಬ್ರಹ್ಮಣ್ಯದಲ್ಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿರೋಧ ; ಎರಡನೇ ಸಭೆಯಲ್ಲಿ ಹೋರಾಟ ತೀವ್ರಗೊಳಿಸಲು ನಿರ್ಧಾರ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ವಿರೋಧ ವ್ಯಕ್ತಪಡಿಸಿ ಎರಡನೇ ಸಭೆ ಮಾ.19 ರಂದು ನಡೆಯಿತು. ಸಭೆಯಲ್ಲಿ ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿ ಪ್ರಾಧಿಕಾರ ರಚನೆ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದರು. ಸಭೆಯಲ್ಲಿ ಮಾತನಾಡಿದ ಶಿವರಾಮ್ ರೈ ಅವರು, “ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯಿಂದ ಭೂಸ್ವಾಧೀನದ ಆತಂಕ ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ...

ಕುಕ್ಕೆ ಸುಬ್ರಹ್ಮಣ್ಯ : ಕಸ ಎಸೆದ ಭಕ್ತರಿಗೆ ಸ್ಥಳದಲ್ಲೇ ಜಾಗೃತಿ ಮೂಡಿಸುವಿಕೆ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರೋರ್ವರು ಕಾಶಿಕಟ್ಟೆಯ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಎದುರುಗಡೆ ರಸ್ತೆಯಲ್ಲಿ ಕಸ ಎಸೆದ ಘಟನೆ ನಡೆಯಿತು. ಈ ಸಂಧರ್ಭದಲ್ಲಿ ಸ್ವಚ್ಛ ಜಾಗೃತಿ ಸಮಿತಿ ಅಭಿಯಾನದ ಸದಸ್ಯರಾದ ಶಿವರಾಮ್ ರೈ ಹಾಗೂ ಪವನ್ ಎಮ್.ಡಿ ಸ್ಥಳಕ್ಕೆ ಆಗಮಿಸಿ ಕಸವನ್ನು ಎಸೆಯದಂತೆ ಮತ್ತು ಸ್ವಚ್ಛ ಭಾರತವೆಂಬ ಅಭಿಯಾನವಿದ್ದು, ಈ ರೀತಿ ಪುಣ್ಯ ಕ್ಷೇತ್ರಕ್ಕೆ ಬಂದು ಎಲ್ಲೆಂದರಲ್ಲಿ ಕಸ...

ಕು.ಗೋಷಿತಾ ಕುಳ್ಳಂಪಾಡಿ ನವೋದಯ ವಿದ್ಯಾಲಯಕ್ಕೆ ಆಯ್ಕೆ

ಹಾಲೆಮಜಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕು.ಗೋಷಿತಾ ಕುಳ್ಳಂಪಾಡಿ ಅವರು ಮುಡಿಪು ನವೋದಯ ವಸತಿ ಶಾಲೆಯ 6ನೇ ತರಗತಿ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ಸುತ್ತಿನಲ್ಲಿ ಆಯ್ಕೆಯಾಗಿರುತ್ತಾರೆ.ಕುಳ್ಳಂಪಾಡಿ ಗೋಪಾಲಕೃಷ್ಣ ಹಾಗೂ ಶ್ರೀಮತಿ ಧನ್ಯಾ ದಂಪತಿಗಳ ಪುತ್ರಿಯಾದ ಇವರು ಗುತ್ತಿಗಾರು ಗ್ರಾಮ ಪಂಚಾಯತ್ ಅರಿವು ಕೇಂದ್ರ ಮತ್ತು ಶ್ರೀ ದುರ್ಗಾ ಕಂಪ್ಯೂಟರ್ ತರಬೇತಿ ಕೇಂದ್ರದ ಸಹಭಾಗಿತ್ವದ ಎಂಟನೇ...

ನೆಟ್ಟಣ ಬೈಲು: ಆನೆ ದಾಳಿಯಿಂದ ಕೃಷಿ ನಾಶ ; ಕೃಷಿಕರಿಗೆ ಸಂಕಷ್ಟ

ಸುಬ್ರಹ್ಮಣ್ಯ : ನೆಟ್ಟಣ ಬೈಲು, ಕೊಂಬಾರು, ಸಿರಿಬಾಗಿಲು ಮೊದಲಾದ ಕಡೆ ಮಂಗಳವಾರ ರಾತ್ರಿ ಕೃಷಿಕರ ತೋಟಗಳಿಗೆ ಆನೆ ದಾಳಿ ಮಾಡಿದೆ. ಇದರಿಂದಾಗಿ ಕೃಷಿಕರ ತೋಟವು ಹಾನಿಗೊಳಗಾಗಿದೆ. ನಿರಂತರ ಆನೆ ದಾಳಿಯಿಂದ ಕೃಷಿಕರು ಹೈರಾಣಾಗಿದ್ದು, ಸಂಕಷ್ಟ ಎದುರಿಸುತ್ತಿದ್ದಾರೆ. ಮಂಗಳವಾರ ರಾತ್ರಿ ನೆಟ್ಟಣ ಬೈಲು, ಕೊಂಬಾರು, ಸಿರಿಬಾಗಿಲು ಪ್ರದೇಶದ ಅನೇಕ ರೈತರ ತೋಟಗಳಿಗೆ ನುಗ್ಗಿದ ಕಾಡಾನೆಯು ತೋಟದಲ್ಲಿದ್ದ ಫಲಭರಿತ...

ಮಾವಿನಕಟ್ಟೆ ಶ್ರೀ ಮಹಾವಿಷ್ಣು ದೈವದ ಒತ್ತೆಕೋಲ – ದೈವದ ಅಗ್ನಿಸೇವೆ – ಮನಸೂರೆಗೊಂಡ ಛತ್ರಪತಿ ಶಿವಾಜಿ ನಾಟಕ

ದೇವಚಳ್ಳ ಗ್ರಾಮದ ಮಾವಿನಕಟ್ಟೆ ಉದಯಗಿರಿಯಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಾ.18 ಮತ್ತು 19 ರಂದು ನಡೆಯಿತು. ನೂರಾರು ಭಕ್ತಾಧಿಗಳು ಅಗಮಿಸಿ ಶ್ರೀ ದೈವದ ಪ್ರಸಾದ ಸ್ವೀಕರಿಸಿ, ಕಣ್ತುಂಬಿಕೊಂಡರು. ಮಾ.18 ರಂದು ಬೆಳಿಗ್ಗೆ ಗಣಪತಿ ಹವನ, ಶುದ್ಧಿ ಕಲಶ, ಮೇಲೇರಿ ಕಾರ್ಯಕ್ರಮ, ಅಶ್ವತ್ಥ ಪೂಜೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಾತ್ರಿ...

ಅರಂತೋಡು ಸ.ಮಾ.ಹಿ ಪ್ರಾಥಮಿಕ ಶಾಲೆಯ ಮೂವರು ವಿದ್ಯಾರ್ಥಿಗಳು ನವೋದಯ ವಿದ್ಯಾಲಯಕ್ಕೆ ಆಯ್ಕೆ

ಸ.ಮಾ.ಹಿ ಪ್ರಾಥಮಿಕ ಶಾಲೆ ಅರಂತೋಡು ಇಲ್ಲಿಯ ಮೂವರು ವಿದ್ಯಾರ್ಥಿಗಳು ಮುಡಿಪು ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಆಯ್ಕೆಯಾಗಿರುತ್ತಾರೆ. ಮಾವಜಿ ಚಂದ್ರಶೇಖರ ಹಾಗೂ ಉಷಾ ದಂಪತಿಗಳ ಪುತ್ರಿ ಶಾನ್ವಿ ಎಂ.ಸಿ, ನೀರಬಿದಿರೆ ಪ್ರಶಾಂತ್ ಹಾಗೂ ಸುಮಲತಾ ದಂಪತಿಗಳ ಪುತ್ರ ದಿಶಾನ್ ಎನ್.ಪಿ, ಕೊಳಂಗಾಯ ಅಜ್ಜನಗದ್ದೆ ಸದಾನಂದ ಹಾಗೂ ಯಶಸ್ವಿನಿ ದಂಪತಿಗಳ ಪುತ್ರ ವೈಭವ್...
error: Content is protected !!