Ad Widget

ಚೈತ್ರ ಯುವತಿ ಮಂಡಲ ಅಜ್ಜಾವರ ಟಿಶರ್ಟ್ ಬಿಡುಗಡೆ

ಯುವಜನ ಸಂಯುಕ್ತ ಮಂಡಳಿ(ರಿ) ಸುಳ್ಯ ವತಿಯಿಂದ ತಾಲೂಕಿನ ಯುವಕ ಯುವತಿ ಮಂಡಲಗಳಿಗೆ ಸರಕಾರಿ ಪದವಿಪೂರ್ವ ಕಾಲೇಜು ಮೈದಾನ ಸುಳ್ಯದಲ್ಲಿ ಜರುಗಿದ ಕ್ರೀಡಾಕೂಟದಲ್ಲಿ ಚೈತ್ರ ಯುವತಿ ಮಂಡಲ ಅಜ್ಜಾವರಕ್ಕೆ ರಘು ಬೆಂಗಳೂರು ಅವರು ಕೊಡಮಾಡಿದ ಟಿಶರ್ಟ್ ಅನ್ನು ಬಿಡುಗಡೆ ಗೊಳಿಸಲಾಯಿತು. ಈ ಸಂದರ್ಭದಲ್ಲಿ ಯುವಜನ ಸಂಯುಕ್ತ ಮಂಡಳಿ ಸುಳ್ಯ ಅಧ್ಯಕ್ಷರಾದ ಶ್ರೀ ಪ್ರವೀಣ್ ಕುಮಾರ್ ಎ. ಎಂ.,...

ಸುಳ್ಯ : ಮಂಡಲದಲ್ಲಿ ಎದ್ದ ಆಕ್ರೋಶ ತುರ್ತು ಸಭೆ, ಅಸಹಕಾರ ಚಳುವಳಿ ಕುರಿತು ನಿಯೋಜಿತ ಮಂಡಲ ಅಧ್ಯಕ್ಷರ ಪ್ರತಿಕ್ರಿಯೆ

ನಮ್ಮ ಸುಳ್ಯ ಮಂಡಲದಲ್ಲಿನ ಕೆಲ ಗೊಂದಲಗಳು ಮತ್ತು ಇಂದಿನ ದಿಢೀರ್ ಸಭೆಯಿಂದ ಪಕ್ಷಕ್ಕೆ ಗೊಂದಲ ಮತ್ತು ಸಮಸ್ಯೆಗಳು ಆಗುವುದಿಲ್ಲ. ಅಲ್ಲದೆ ಈ ಹಿಂದೆಯು ಅಸಹಕಾರ ಚಳುವಳಿ ನಡೆದಿತ್ತು. ನಂತರದ ದಿನಗಳಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಕಾರ್ಯಗಳನ್ನು ಮಾಡಿದ್ದೇವೆ. ಅಲ್ಲದೇ ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಹಿಂದೆ ರಚಿಸಿದ ಪೇಜ್ ಪ್ರಮುಖರು ಮತ್ತು ವಾರ್ಡ್ ಗಳ...
Ad Widget

ದೇವ ದುರ್ಲಭ ಕಾರ್ಯಕರ್ತರ ಹೈ ವೋಲ್ಟೇಜ್ ಮೀಟಿಂಗ್ – ಕಾರ್ಯಕರ್ತರು, ನಾಯಕರ ತೀರ್ಮಾನಕ್ಕೆ ಜಿಲ್ಲಾ ನಾಯಕರು ಶಾಕ್ – ನಿಯೋಜಿತ ಅಧ್ಯಕ್ಷರ ಬಗ್ಗೆ ಕಾರ್ಯಕರ್ತರ ಅಸಮಾಧಾನವೇನು ?

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಸತೀಶ್ ಕುಂಪುಲ ಆಯ್ಕೆಯಾಗಿ ಪದಗ್ರಹಣ ಸಮಾರಂಭ ನಡೆದ ಕೆಲ ದಿನಗಳ ನಂತರ ಮಂಡಲ ಸಮಿತಿಗಳಿಗೆ ನೂತನ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿತ್ತು. ಮಂಡಲ ಸಮಿತಿಗೆ ಅಧ್ಯಕ್ಷರ ನೇಮಕವಾಗುತ್ತಿದ್ದಂತೆ ಸುಳ್ಯದಲ್ಲಿ ಕಾರ್ಯಕರ್ತರಿಂದ ಭಾರಿ ಆಕ್ರೋಶವೇ ವ್ಯಕ್ತವಾಗಿದೆ. ಸುಳ್ಯದ ದೇವದುರ್ಲಭ ಕಾರ್ಯಕರ್ತರು ಇಂದು ಪಕ್ಷದ ಕಛೇರಿಯಲ್ಲಿ ತುರ್ತು ಸಭೆ ನಡೆಸಿ...

ಬಿಜೆಪಿ ಕಛೇರಿಗೆ ಬೀಗ ಜಡಿದ ಕಾರ್ಯಕರ್ತರು – ಶಾಸಕಿ ಭಾಗೀರಥಿ ಮುರುಳ್ಯ ಪ್ರತಿಕ್ರಿಯೆ

ಸುಳ್ಯ ಬಿಜೆಪಿಗೆ ನೂತನ ಅಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಕಾರ್ಯಕರ್ತರು ಗರಂ ಆಗಿದ್ದು ಪ್ರಮುಖರ ಸಭೆ ಬಳಿಕ ಕಛೇರಿಗೆ ಬೀಗ ಜಡಿದು ಘೋಷಣೆ ಕೂಗಿದ್ದು ಮತ್ತೊಮ್ಮೆ ಪ್ರಸ್ತುತ ಕಾರ್ಯನಿವಹಿಸುತ್ತಿರುವ ನಾಯಕರೇ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಆಗ್ರಹಿಸುತ್ತಿದ್ದರು. ಈ ಕುರಿತಂತೆ ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯರನ್ನು ಸಂಪರ್ಕಿಸಿ ವಿಚಾರಿಸಿದಾಗ ಪಕ್ಷ ಸಂಘಟನೆ ನೆಲೆಯಲ್ಲಿ ಓರ್ವರನ್ನು ನೇಮಕ ಮಾಡಲಾಗಿದೆ. ಅಲ್ಲದೇ ಇದೀಗ...

ಬಿಜೆಪಿ ನೂತನ ಅಧ್ಯಕ್ಷರ ನೇಮಕ – ಪಕ್ಷದೊಳಗೆ ಭಿನ್ನಮತ ಸ್ಪೋಟ – ಅಸಹಕಾರ ಚಳುವಳಿಗೆ ನಿರ್ಧರಿಸಿದ ಕಾರ್ಯಕರ್ತರಿಂದ ಕಛೇರಿಗೆ ಬೀಗ ಮುದ್ರೆ!

ಸುಳ್ಯ: ಸುಳ್ಯ ಬಿಜೆಪಿ ಮಂಡಲ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ವೆಂಕಟ್ ವಳಲಂಬೆ ಅವರನ್ನು ನೇಮಕ‌ ಮಾಡಿರುವ ಹಿನ್ನಲೆಯಲ್ಲಿ ಹಾಲಿ ಇರುವ ಮಂಡಲ ಸಮಿತಿ ಹಾಗೂ ಕೋರ್ ಕಮಿಟಿಯಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ಪ್ರಮುಖರ ಸಭೆಯ ಬಳಿಕ ಕಾರ್ಯಕರ್ತರು ಅಸಹಕಾರ ಚಳುವಳಿ ನಡೆಸುವುದಾಗಿ ತೀರ್ಮಾನಿಸಿದಲ್ಲದೇ ಇದೀಗ ಕಛೇರಿಗೆ ಬೀಗ ಮುದ್ರೆಯನ್ನು ಜಡಿದಿದ್ದಾರೆ.

ಗೂನಡ್ಕ ಪೆಲ್ತಡ್ಕ ಬಳಿ ಭೀಕರ ರಸ್ತೆ ಅಪಘಾತ ಅದೃಷ್ಟವಶ ಪಾರು

ಸುಳ್ಯ ಗೂನಡ್ಕ ಬಳಿಯ ಪೆಲ್ತಡ್ಕ ಎಂಬಲ್ಲಿ ಸ್ವಿಫ್ಟ್ ಕಾರು ಮತ್ತು ಟ್ಯಾಂಕರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗಿದೆ.

ಗೂನಡ್ಕ ಪೆಲ್ತಡ್ಕ ಬಳಿ ಭೀಕರ ರಸ್ತೆ ಅಪಘಾತ ಅದೃಷ್ಟವಶಾತ್ ಪಾರು

ಸುಳ್ಯ ಗೂನಡ್ಕ ಬಳಿಯ ಪೆಲ್ತಡ್ಕ ಎಂಬಲ್ಲಿ ಸ್ವಿಫ್ಟ್ ಕಾರು ಮತ್ತು ಟ್ಯಾಂಕರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಪ್ರಯಾಣಿಕರು ಪಾರಾಗಿದ್ದಾರೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ದ.ಕ.ಜಿಲ್ಲಾ ಪತ್ರಕರ್ತರ ಗ್ರಾಮ ವಾಸ್ತವ್ಯದ ಮಾಹಿತಿ ಪತ್ರ ಬಿಡುಗಡೆ

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ,ದ.ಕ ಜಿಲ್ಲಾ ಪಂಚಾಯತ್, ಸುಳ್ಯ ತಾಲೂಕು ಪಂಚಾಯತ್, ದ.ಕ ಜಿಲ್ಲಾ ಪೊಲೀಸ್ ಇಲಾಖೆ. ಹರಿಹರ, ಕೊಲ್ಲಮೊಗರು ಗ್ರಾಮ ಪಂಚಾಯತ್ ಮತ್ತು ಸ್ಥಳೀಯಾಡಳಿತ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕೊಲ್ಲಮೊಗ್ರ ಬಂಗ್ಲೆಗುಡ್ಡೆ ಸರಕಾರಿ ಶಾಲಾ...

ಪ್ರೊ ಕಬಡ್ಡಿ ಪಂದ್ಯಾಟದಲ್ಲಿ ಎನ್ನೆಂಸಿ ಪ್ರತಿಭೆ- ರತನ್ ಜಿ

ತೆಲುಗು ಟೈಟಾನ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟು:ಫೆ.03; ಇಂದು ನಡೆಯಲಿರುವ ದೇಶದ ಪ್ರತಿಷ್ಠಿತ ಪ್ರೊ ಕಬಡ್ಡಿ ಲೀಗ್ ನಲ್ಲಿ ತೆಲುಗು ಟೈಟಾನ್ಸ್ ತಂಡವನ್ನು ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಥಮ ಎಂ.ಎಸ್.ಡಬ್ಲ್ಯೂ. ವಿದ್ಯಾರ್ಥಿ ರತನ್ ಜಿ ಪ್ರತಿನಿಧಿಸಲಿದ್ದಾರೆ. ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ ಸಿ ಯವರು ಪ್ರಯೋಜಿಸುತ್ತಿರುವ ಕೆವಿಜಿ ಸ್ಪೋರ್ಟ್...

ಪೆರಾಜೆ : ಕೊಕ್ಕೋ ತೋಟದ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಗಾರ

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ರೈತ ಸದಸ್ಯರ ತೋಟಗಳಲ್ಲಿ ಕೊಕ್ಕೋ ಪ್ರೂನಿಂಗ್ (ಸವರುವಿಕೆ) ಮತ್ತು ತೋಟದ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು.ಕಾರ್ಯಾಗಾರದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ಬಿ. ರವರು ವಹಿಸಿ "ಅಡಿಕೆ ಹಳದಿ ರೋಗದಿಂದ ಸಮಸ್ಯೆಗೊಳಗಾದ ನಾವುಗಳು ಪ್ರಮುಖ ಪರ್ಯಾಯ ಬೆಳೆಯಾದ ಕೊಕ್ಕೋವನ್ನು ಕ್ರಮಬದ್ಧವಾಗಿ ಬೆಳೆಸಿ ಅಧಿಕ...
Loading posts...

All posts loaded

No more posts

error: Content is protected !!