Ad Widget

ಕೋಡಿಯಾಲ ಮೂವಪೆ ಅಂಗನವಾಡಿ ಅಹಾರ ಸಾಮಾಗ್ರಿ ಕಳವು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು.

ಸುಳ್ಯ ತಾಲೂಕು ಕೋಡಿಯಾಲ ಗ್ರಾಮದ ಮೂವಪೆ ಅಂಗನವಾಡಿ ಕೇಂದ್ರದ ಅಂಗನವಾಡಿ ಕೇಂದ್ರದಲ್ಲಿ ಅಹಾರ ಸಾಮಾಗ್ರಿಗಳನ್ನು ಕಳವುಗೈದ ಪ್ರಕರಣ ಬೆಳಕಿಗೆ ಬಂದಿದೆ. ಕಾರ್ಯಕರ್ತೆ ಶ್ರೀಮತಿ ಮೋಹಿನಿ ಎಂ ಎಂಬವರ ದೂರಿನಂತೆ, ದಿನಾಂಕ 19-10-2023 ರಂದು ಸಂಜೆಯಿಂದ ಮರುದಿನ ದಿನಾಂಕ 20-10-2023 ರಂದು ಬೆಳಿಗ್ಗಿನ ಅವಧಿಯಲ್ಲಿ ಯಾರೊ ಕಳ್ಳರು ಸದರಿ ಅಂಗನವಾಡಿ ಕೇಂದ್ರದ ಚಾವಣಿಯ ಹಂಚನ್ನು ಸರಿಸಿ ಒಳಪ್ರವೇಶಿಸಿ,...

ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರಿಕರಿಗೆ ಠಾಣಾ ವತಿಯಿಂದ ಜಾಗೃತಿ ಪ್ರಕಟಣೆ ಪ್ರಕಟ.

ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಗ್ರಾಮದ ನಾಗರೀಕರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ತಾವುಗಳು ತಮ್ಮಮನೆಯಿಂದ ಹೊರ ಪ್ರದೇಶಗಳಿಗೆ/ಪರ ಊರುಗಳಿಗೆ ತೆರಳುವ ಸಮಯ ಮನೆಗೆ ಲಾಕ್ ಹಾಕಿಕೊಂಡು ತಪ್ಪದೇ ಅಕ್ಕ ಪಕ್ಕದ ಮನೆಗಳಿಗೆ ಮಾಹಿತಿ ನೀಡಿ ತಮ್ಮ ಮನೆಯ ಮೇಲೆ ನಿಗಾ ಇಡುವಂತೆ ತಿಳಿಸಿ ಹೊರಡುವುದು ಹಾಗೂ ಮನೆಯ ಬಾಗಿಲುಗಳಿಗೆ ಬೀಗವನ್ನು ಹಾಕದೇ door locker ಗಳನ್ನು ಅಳವಡಿಸಿಕೊಳ್ಳುವುದು....
Ad Widget

ಅಮರ ಸುದ್ದಿ ವರದಿ ಫಲಶೃತಿ ವಿವೇಕಾನಂದ ವೃತ್ತದ ಬಳಿಯಿಂದ ಚರಂಡಿ ನಿರ್ಮಾಣಕ್ಕೆ ಅಸ್ತು.

ಸುಳ್ಯ ನಗರ ಪಾಂಚಾಯತ್ ವ್ಯಾಪ್ತಿಗೆ ಒಳಪಡುವ ವಿವೇಕಾನಂದ ವೃತ್ತದ ಬಳಿಯಲ್ಲಿ ಮಳೆ ಬಂದಾಗ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರಿಗೆ ನಿತ್ಯ ಸಮಸ್ಯೆಯನ್ನು ಅನುಭವಿಸುತ್ತಿದ್ದರು . ಈ ಕುರಿತು ನಿರಂತರವಾಗಿ ವರದಿ ಪ್ರಕಟಿಸಿದ ಪರಿಣಾಮವಾಗಿ ದಿನಾಂಕ 19-10-23 ರಂದು ನಗರ ಪಂಚಾಯತ್ ಮುಖ್ಯಾಧಿಕಾರಿ ನೇತ್ರತ್ವದಲ್ಲಿ ಕಂಟ್ರಾಕ್ಟರ್ ಜೊತೆಗೆ ಆಗಮಿಸಿ ನೂತನ...

ಅ.26, 27 ರಂದು ತಾಲೂಕು ಪ್ರಾಥಮಿಕ, ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ಕ್ರೀಡಾಕೂಟ,ಕ್ರೀಡಾ ವಿಕ್ರಮ-2023 -ರೆ.ಫಾ.ವಿಕ್ಟರ್ ಡಿಸೋಜಾ

ಕೊಡಿಯಾಲಬೈಲ್ ಎಂ.ಜಿ.ಎಂ. ಶಾಲಾ ಮೈದಾನದಲ್ಲಿ ಕ್ರೀಡಾಕೂಟವು -ಸೈಂಟ್ ಜೋಸೆಫ್ – ಸೈಂಟ್ ಬ್ರಿಜಿಡ್ಸ್ ವಿದ್ಯಾಸಂಸ್ಥೆಗಳ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ ಮತ್ತುಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಗಳು ಸುಳ್ಯ ಹಾಗೂ ಸೈಂಟ್ ಬ್ರಿಜಿಡ್ಜ್ ಅನುದಾನಿತ ಹಿ. ಪ್ರಾ. ಶಾಲೆ ಸುಳ್ಯ ಇವರ ಸಹಯೋಗದಲ್ಲಿಸುಳ್ಯ ತಾಲೂಕು ಮಟ್ಟದ...

ಸ್ವಾಗತ್ ಫ್ರೆಶ್ ಫ್ರುಟ್ಸ್ ಮತ್ತು ವೆಜಿಟೇಬಲ್ ಅಂಗಡಿ ಶುಭಾರಂಭ.

3.ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಉಚಿತ ಹೊಮ್ ಡೆಲಿವರಿ. ಸ್ವಾಗತ್ ಫ್ರೆಶ್ ಫ್ರುಟ್ಸ್ ಮತ್ತು ವೆಜಿಟೇಬಲ್ ಮೇನಾಲದಲ್ಲಿ ಶುಭಾರಂಭ ಗೊಂಡಿತು .ನೂತನ ಅಂಗಡಿಯ ಉದ್ಘಾಟನೆಯನ್ನು ಶ್ರೀ ರವೀಂದ್ರನಾಥ್ ರೈ ಮೇನಾಲ ನೆರವೇರಿಸಿದರುಈ ಸಂದರ್ಭದಲ್ಲಿ ಪ್ರಸಾದ್ ರೈ ಮೇನಾಲ , ರಂಜಿತ್ ರೈ ಮೇನಾಲ , ರಾಮಕೃಷ್ಣ ರೈ ಮೇನಾಲ ,ಜಯರಾಮ( ಮಣಿ) ಮೇನಾಲಸುಧಾಮನಿ ಶೆಟ್ಟಿ ಮೇನಾಲ,ಅಬ್ದುಲ್ ಮೇನಾಲಅದ್ವಿತ್...

ಸುಳ್ಯ ದಸರಾ ಉತ್ಸವ ಆರಂಭ , ಭವ್ಯವಾದ ಮೆರವಣಿಗೆ ಮೂಲಕ ಸಾಗಿ ಬಂದು ಪ್ರತಿಷ್ಟಾಪನೆ.

ಸುಳ್ಯದ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ , ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ (ರಿ.) ದಸರಾ ಉತ್ಸವ ಸಮಿತಿಯ ವತಿಯಿಂದ 52ನೇ ವರ್ಷದ ಶ್ರೀ ಶಾರದಾಂಬ ಉತ್ಸವವು ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದ ಶ್ರೀ ಶಾರದಾಂಬ ಕಲಾವೇದಿಕೆಯಲ್ಲಿ ಇಂದಿನಿಂದ ಒಂಭತ್ತು ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿದ್ದು,ಅ.20ರಂದು ಬೆಳಿಗ್ಗೆ ನಗರದ ಜ್ಯೋತಿ ವೃತ್ತದಿಂದ ಶ್ರೀ...

ಜಮ್ಮುಕಾಶ್ಮೀರದಲ್ಲಿ ಮೊದಲ ಬಾರಿಗೆ ಅದ್ದೂರಿ ನವರಾತ್ರಿ ಉತ್ಸವ – ಮನಸೂರೆಗೊಂಡ ಕಳಂಜದ ನಿನಾದ ಸಾಂಸ್ಕೃತಿಕ ಕೇಂದ್ರದ ಭರತನಾಟ್ಯ

ಜಮ್ಮುಕಾಶ್ಮೀರದ ಕಟ್ರಾ  ಶ್ರೀ ಮಾತಾ ವೈಷ್ನೋದೇವಿ ಶ್ರೈನ್ ಬೋರ್ಡ್  ನವರಾತ್ರಿ ಅಂಗವಾಗಿ ಒಂಭತ್ತು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ, ರಾಷ್ಟ್ರೀಯ ಭಕ್ತಿ ಗೀತೆಗಳ ಸ್ಪರ್ಧೆ ಕಾರ್ಯಕ್ರಮ ಆಯೋಜಿಸಿತ್ತು. ಇದರ ಉದ್ಘಾಟನಾ ಸಮಾರಂಭದಲ್ಲಿ ಯಕ್ಷ ಧ್ರುವ ಪಟ್ಲ ಫೌಂಡೇಷನ್ ನೇತೃತ್ವದ ದೇವಿಮಹಾತ್ಮೆ ಯಕ್ಷಗಾನ ಮತ್ತು ಕಳಂಜದ ನಿನಾದ ಸಾಂಸ್ಕೃತಿಕ ಕೇಂದ್ರದ ಭರತನಾಟ್ಯ ಕಾರ್ಯಕ್ರಮ ನೆರದವರ ಮನಸೂರೆಗೊಂಡಿತು.   ವೈಷ್ನೋದೇವಿಯ ಪದತಳ...

ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಪ್ರೋ ಮಾದರಿಯ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಚಪ್ಪರ ಮುಹೂರ್ತ.

ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ನ. 17,18,19 ರಂದು ಮೂರು ದಿನಗಳ ಕಾಲ ನಡೆಯಲಿರುವ ಪುರುಷರ ಮತ್ತು ಮಹಿಳೆಯರ ವಿಭಾಗದ ಪ್ರೋ ಮಾದರಿಯ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟದ ಚಪ್ಪರ ಮುಹೂರ್ತವು ಇಂದು ನೆರವೇರಿತು. ಸುಳ್ಯದ ಪ್ರಭು ಗ್ರೌಂಡ್ ನಲ್ಲಿ ನಡೆಯಲಿರುವ ಪಂದ್ಯಾಟದ ಚಪ್ಪರ ಮುಹೂರ್ತಕ್ಕೆ ಹಿರಿಯರಾದ ಸಂಘದ...
error: Content is protected !!