Ad Widget

ಸುಳ್ಯ : ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟದ ಸಭೆ – ಪುಲ್ವಾಮ ಹುತಾತ್ಮ ಸೈನಿಕರಿಗೆ ನುಡಿನಮನ

ಸುಳ್ಯ ಬಿಜೆಪಿ ಮಂಡಲದ ಸಾಮಾಜಿಕ ಜಾಲತಾಣ ಪ್ರಕೋಷ್ಟಕದ ಸಭೆಯು ಸುಳ್ಯದ ಬಿಜೆಪಿ ಕಛೇರಿಯಲ್ಲಿ ಫೆ.14ರಂದು ನಡೆಯಿತು.
ಫೆ.28ರಂದು ಮಂಗಳೂರಿನಲ್ಲಿ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟಕದ ಜಿಲ್ಲಾ ಕಾರ್ಯಕಾರಿಣಿ ನಡೆಯಲಿದ್ದು, ಇದರ ಪೂರ್ವಭಾವಿ ಸಭೆಯು ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಅಜಿತ್ ಉಳ್ಳಾಲ್, ಸಹ ಸಂಚಾಲಕ ದೀರಜ್ ಮಂಗಳೂರು, ಅಕ್ಷಯ್, ಸಾಮಾಜಿಕ ಜಾಲತಾಣ ಜಿಲ್ಲಾ ಸಮಿತಿ ಸದಸ್ಯರಾದ ರವಿವರ್ಮ ಅಲೆಕ್ಕಾಡಿ , ಸುಳ್ಯ ಮಂಡಲ ಸಾಮಾಜಿಕ ಜಾಲತಾಣ ಮಂಡಲ ಸಮಿತಿ ಸಂಚಾಲಕ ಫಯಾಝ್ ಕಡಬ, ಸಹಸಂಚಾಲಕ ಸುಪ್ರೀತ್ ಮೋಂಟಡ್ಕ, ಕಾರ್ಯಕಾರಿ ಸದಸ್ಯರುಗಳಾದ ಪ್ರಸಾದ್ ಕಾಟೂರು, ಹರೀಶ್ ಬೂಡುಪನ್ನೆ, ಲೋಕೇಶ್ ಬರೆಪ್ಪಾಡಿ, ಪ್ರವೀಣ್ ಚೆನ್ನಾವರ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪುಲ್ವಾಮ ದಾಳಿ ಹುತಾತ್ಮರಾದ ಸೈನಿಕರಿಗೆ ನುಡಿನಮನ ಸಲ್ಲಿಸಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!