Ad Widget

ಆಪತ್ಕಾಲದಲ್ಲಿ ಜೀವರಕ್ಷಣೆಗೆ ಮುಳುಗು ತಜ್ಞರ ತಂಡವನ್ನು ರಚಿಸಿದ ಅಸ್ತ್ರ ಸ್ಪೋರ್ಟ್ಸ್ ಕ್ಲಬ್

ಕಳೆದ ಹಲವು ವರ್ಷಗಳಿಂದ ಪೈಚಾರು ಪರಿಸರದ ಯುವಕರಲ್ಲಿ ಮುಳುಗು ತಜ್ಞರ ತಂಡವೊಂದು ಸದಾ ಕಾರ್ಯಾಚರಿಸುತ್ತಿದ್ದು , ಆಪತ್ಬಾಂಧವ ರಾಗಿ ಸುಳ್ಯ ತಾಲೂಕಿನ ಹಲವಾರು ಘಟನೆಗಳಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟವರ ಶರೀರವನ್ನು ಮೇಲೆ ತರುವಲ್ಲಿ ಸದಾ ಇಲಾಖೆಯೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ತೊಡಗಿಸಿಗೊಂಡು ಹಲವಾರು ಸನ್ಮಾನಗಳನ್ನು ಪಡೆದುಕೊಂಡಿರುತ್ತಾರೆ.ಇದೀಗ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿ ಹಳ್ಳಗಳು...

ಬಸ್ ಚಲಾಯಿಸುತ್ತಿರುವ ವೇಳೆ ಪಾರ್ಶ್ವವಾಯು ಗೆ ತುತ್ತಾದರೂ ಪ್ರಯಾಣಿಕರ ಜೀವ ರಕ್ಷಿಸಿ ಸಮಯಪ್ರಜ್ಞೆ ಮೆರೆದ ಚಾಲಕ ಸದಾಶಿವ

ಪುತ್ತೂರು ಡಿಪೋದ ಕೆ.ಎಸ್ ಆರ್.ಟಿ.ಸಿ.ಬಸ್ ( KA21 F0166) ಬೆಳಗ್ಗಿನ ಜಾವ ಪುತ್ತೂರಿನಿಂದ ಮೈಸೂರಿಗೆ ಪ್ರಯಾಣಿಕರನ್ನು ಕೊಂಡೊಯ್ದು ಪುನಃ ಸಂಜೆ ಹಿಂತಿರುಗುವ ವೇಳೆ ಜೋಡುಪಾಲ ಸಮೀಪಿಸುತ್ತಿದ್ದಂತೆ ಬಸ್ ಚಾಲಕ ಸದಾಶಿವ ಎಂಬವರು ಪಾರ್ಶವಾಯು ಬಾಧಿಸಿ ತೀರ್ವ ಅಸೌಖ್ಯಕ್ಕೊಳಗಾದರು. ಬಸ್ ನಲ್ಲಿ ಇದ್ದ ಪ್ರಯಾಣಿಕರ ಮತ್ತು ತಮ್ಮ ಜೀವ ಆತಂಕದಲ್ಲಿತ್ತು .ಆದರೂ ಈ ಸಂದರ್ಭದಲ್ಲಿ ಧೈರ್ಯ ಕಳೆದುಕೊಳ್ಳದ...
Ad Widget

ಪೆರುವಾಜೆ ಅಕ್ರಮ ಗೋಸಾಗಾಟ ಪತ್ತೆ- ಆರೋಪಿ ಪೋಲೀಸ್ ವಶ

ಅಕ್ರಮವಾಗಿ ಕಸಾಯಿಖಾನೆಗೆ ಗೋ ಸಾಗಾಟ ಮಾಡುತ್ತಿದ್ದಾಗ ಪೆರುವಾಜೆ ಗ್ರಾಮದ ಕುಂಡಡ್ಕ -ಕಾಪು ಎಂಬಲ್ಲಿ ಬಜರಂಗದಳ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬೆಳ್ಳಾರೆ ಪೋಲೀಸರಿಗೆ ಒಪ್ಪಿಸಿದ್ದಾರೆ. ಕಸಾಯಿಖಾನೆಗೆ ದನದ ಸಾಗಾಟ ಮಾಡುತ್ತಿದ್ದ ಕೃಷ್ಣಪ್ಪ ಬಂಬಿಲ ಎಂಬಾತನನ್ನು ಹಿಡಿದು ಬೆಳ್ಳಾರೆ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಶ್ವಹಿಂದೂ ಪರಿಷತ್- ಬಜರಂಗದಳ ಬೆಳ್ಳಾರೆ ಮತ್ತು ಬಜರಂಗದಳ ಕೆಯ್ಯೂರು ಘಟಕದ ಕಾರ್ಯಕರ್ತರು ಕಾರ್ಯಚರಣೆ ನಡೆಸಿದ್ದರು ಎಂದು...

ಕೋವಿಡ್ 19 ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಮನೆಗೆ ಭೇಟಿ ನೀಡಿ ಮನೆಯವರಿಗೆ ಧೈರ್ಯ ತುಂಬಿದ ನ. ಪಂ ಸದಸ್ಯೆ

ಕೋವಿಡ್ 19ರ ರ್ಯಾಪಿಡ್ ಯಾಟಿಜನ್ ಪರೀಕ್ಷೆಗೆ ಸ್ವಯಂ ಒಳಗಾಗಿ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಜಯನಗರ 19 ನೇ ವಾರ್ಡಿನ ವ್ಯಕ್ತಿಯೋರ್ವರು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಯಂ ಕೋರಂಟೈನ್ ಒಳಗಾಗಿದ್ದಾರೆ. ಈ ವಿಷಯ ತಿಳಿದ ಸ್ಥಳೀಯ ವಾರ್ಡ್ ಸದಸ್ಯೆ ಶಿಲ್ಪಾ ಸುದೇವ್ ರೋಗಿಯ ಮನೆಗೆ ಭೇಟಿ ನೀಡಿ ಧೈರ್ಯವನ್ನು ತುಂಬಿದ್ದಾರೆ.ಯಾವುದೇ ಸಮಸ್ಯೆಗಳಿದ್ದಲ್ಲಿ ತನ್ನನ್ನು ದೂರವಾಣಿ ಮೂಲಕ ಸಂಪರ್ಕಿಸುವಂತೆ...

ಚೆಂಬು : ಸೇತುವೆಯಲ್ಲಿ ಸಿಲುಕಿಕೊಂಡಿದ್ದ ಮರ ತೆರವು

ಮಳೆಗೆ ದಬ್ಬಡ್ಕ ಕಲ್ಲುಗುಂಡಿ ಸಂಪರ್ಕ ಕಲ್ಪಿಸುವ ಸೇತುವೆಯ ಸಂಪರ್ಕ ಕಡಿತಗೊಂಡ ಕಾರಣದಿಂದ ಹೊಳೆಯಲ್ಲಿ ಬಂದ ಮರಗಳನ್ನು ಊರವರ ಮತ್ತು ಗ್ರಾಮ ಪಂಚಾಯತ್ ಚೆಂಬು ಹಾಗೂ ದಬ್ಬಡ್ಕ ಉಪ ವಲಯದ ಸಿಬ್ಬಂದಿಗಳ ಸಹಾಯದಿಂದ ಮರಗಳನ್ನ ತೆರವುಗೊಳಿಸಿ ಸೇತುವೆಯನ್ನು ಸಂಪರ್ಕಕ್ಕೆ ಮುಕ್ತ ಗೊಳಿಸಲಾಯಿತು.

ಕಳಂಜ ಗ್ರಾಮದಲ್ಲಿ ಮುಗಿಯದ ನೆಟ್ವರ್ಕ್ ಸಮಸ್ಯೆ

"ಹಲೋ…… ಹಲೋ….. ಎಂಚ ಉಲ್ಲರ್…… ಹಲೋ…. ಕೇನುಜಿ"! ಈ ರೀತಿಯಾದ ನೆಟ್ವರ್ಕ್ ಸಮಸ್ಯೆ ಕಳಂಜ ಗ್ರಾಮದಲ್ಲಿ ಹೇರಳವಾಗಿದೆ. ಸದ್ಯ ಪೋನ್ ಕರೆಮಾಡಲು ಸಾಧ್ಯವಾಗದ ಪರಿಸ್ಥಿತಿ ತಲೆದೋರಿದ್ದು, ಇಂಟರ್ನೆಟ್ ದೂರದ ಮಾತಾಗಿದೆ. ಕೊರೋನಾದ ಸಂಕಟಕಾಲದಲ್ಲಿ ಇಂದು ವಿದ್ಯಾರ್ಥಿಗಳ ಶಿಕ್ಷಣವುಆನ್ ಲೈನ್ ಮುಖಾಂತರ ನಡೆಯುತ್ತಿದ್ದು, ಇಂಟರ್ನೆಟ್ ಕೈಕೊಡುವ ಕಾರಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೊಡಕುಂಟಾಗುತ್ತಿದೆ. ಇದರ ಜೊತೆಗೆ ಅನೇಕ...

ಗೂನಡ್ಕ ದರ್ಕಾಸ್ ಪರಿಸರದಲ್ಲಿ ಭಾರಿ ಮಳೆಗೆ ಕುಸಿದ ಬರೆ, ಮಣ್ಣಿನಡಿಗಾದ ಬೋರ್

ಸುಳ್ಯ ಗೂನಡ್ಕ ದರ್ಕಸ್ ಪರಿಸರದಲ್ಲಿ ಭಾರಿ ಮಳೆಗೆ ಮನೆಯ ಹಿಂಬದಿಯ ಮಣ್ಣಿನ ಬರೆ ಕುಸಿದುಬಿದ್ದಿದೆ. ಇದರ ಪರಿಣಾಮವಾಗಿ ಮನೆಯವರು ನೀರಿಗಾಗಿ ಬಳಸುತ್ತಿದ್ದ ಬೋರ್ ಮಣ್ಣಿನಡಿಯಲ್ಲಿ ಮುಚ್ಚಿ ಹೋದ ಘಟನೆ ವರದಿಯಾಗಿದೆ.

ದನ ಸಾಗಾಟ ಪ್ರಕರಣ – ಕೊಲೆ ಯತ್ನ ಆರೋಪಿಗೆ ಜಾಮೀನು

ಜುಲೈ 14 ರಂದು ಆರೋಪಿ ಅಬ್ದುಲ್ ಫಾರೂಕ್ ಎಂಬವರು ತನ್ನ ಪಿಕ್ ಅಪ್ ವಾಹನದಲ್ಲಿ ಎರಡು ದನ ಮತ್ತು ಒಂದು ಕರುವನ್ನು ಹಿಂಸಾತ್ಮಕ ರೀತಿಯಲ್ಲಿ ಪುತ್ತೂರು ಸುಳ್ಯ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಸುಳ್ಯ ಪೊಲೀಸ್ ಠಾಣೆಯ ಸಿಬ್ಬಂದಿಗಳು ಜ್ಯೋತಿ ಸರ್ಕಲ್ ಬಳಿ ಕಾಯುತ್ತಿದ್ದು ಸದ್ರಿ ವಾಹನವನ್ನು ಠಾಣೆಯ ಹೆಚ್ ಸಿ ಒಬ್ಬರು...

ಅಪಾಯದ ಸ್ಥಿತಿಯಲ್ಲಿದ್ದ ತೆಂಗಿನ ಮರವೊಂದನ್ನು ತೆರವುಗೊಳಿಸಿದ ಎಸ್ ವೈ ಎಸ್, ಎಸ್ ಎಸ್ ಎಫ್ ತಂಡ

ಸುಳ್ಯ ಅನ್ಸಾರಿಯ ನಿರ್ಗತಿಕರ ಕೇಂದ್ರ ಸಂಪರ್ಕಿಸುವ ರಸ್ತೆ ಬಳಿ ಬರೆಯ ಮೇಲಿನಿಂದ ತಂಗಿನಮರ ಒಂದು ಬೀಳುವ ಅಪಾಯದ ಸ್ಥಿತಿಯಲ್ಲಿ ಇರುವುದನ್ನು ಗಮನಿಸಿದ ಸುಳ್ಯ ಎಸ್ ವೈ ಎಸ್ ,ಎಸ್ ಎಸ್ ಎಫ್ ತಂಡದ ಸದಸ್ಯರು ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಿದರು. ಕಾರ್ಯಾಚರಣೆಯಲ್ಲಿ ಆರಿಸ್ ಬೋರುಗುಡ್ಡೆ, ಶರೀಫ್ ಜಯನಗರ , ಶಾಕಿರ್ ಮೊಗರ್ಪಣೆ,...

ಸುಳ್ಯ ನಗರದ ವಿವಿಧೆಡೆಗಳಲ್ಲಿ ಬರೆಕುಸಿತ

ಸುಳ್ಯ ನಗರದ ಕೆಲವು ಭಾಗಗಳಲ್ಲಿ ಬರೆಕುಸಿತ ಉಂಟಾಗುತ್ತಿದ್ದು ಜನರು ಆತಂಕದಲ್ಲಿದ್ದಾರೆ. ಕಳೆದ ಮೂರು ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಸುಳ್ಯ ತಾಲೂಕಿನಾದ್ಯಂತ ಜನರಲ್ಲಿ ಆತಂಕದ ಛಾಯೆ ಮೂಡಿದೆ. ಒಂದೆಡೆ ಕೊರೋನಾ ಮಹಾಮಾರಿಯು ಸುಳ್ಯವನ್ನು ಕಾಡುತ್ತಿದ್ದರೆ ಮತ್ತೊಂದೆಡೆ ಮಳೆಯು ತನ್ನ ರುದ್ರ ನರ್ತನದಿಂದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
Loading posts...

All posts loaded

No more posts

error: Content is protected !!