Ad Widget

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಸುಳ್ಯ ಭೇಟಿ : ಸುಳ್ಯ ಬಿಜೆಪಿ ಅಭಿನಂದನೆ

ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಇಂದು ಸುಳ್ಯಕ್ಕೆ ಭೇಟಿ ನೀಡಿದರು. ನೂತನ ಸದಸ್ಯರಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ಸುಳ್ಯ ವಿಧಾನಸಭಾ ಕ್ಷೇತ್ರ ಬೇಟಿ ಮಾಡಿದರು. ಬೆಳಗ್ಗೆ ಕಡಬದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಸುಳ್ಯಕ್ಕೆ ಆಗಮಿಸಿದರು. ಸುಳ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯ...

*ಮುಕ್ಕೂರು ರಕ್ಷಾ ಬಂಧನ ಆಚರಣೆ* *ಆಚರಣೆಯ ಆಶಯ ಜೀವನದಲ್ಲಿ ರೂಢಿಸಿಕೊಳ್ಳಬೇಕು : ಜಗನ್ನಾಥ ಪೂಜಾರಿ*

ಮುಕ್ಕೂರು- ಕುಂಡಡ್ಕ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ನೇಸರ ಯುವಕ ಮಂಡಲ ಇದರ ಆಶ್ರಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಆ.3 ರಂದು ಮುಕ್ಕೂರಿನಲ್ಲಿ ನಡೆಯಿತು.ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿ*ಸನಾತನ ಸಂಸ್ಕೃತಿಯ ಸಾರವುಳ್ಳ ಹಿಂದೂ ಧರ್ಮದಲ್ಲಿ ಸಹೋದರತೆಯ ಬಾಂಧವ್ಯ ಶ್ರೇಷ್ಠವಾದದು. ಜಾತಿ, ಮತದ ಬೇಧವಿಲ್ಲದೆ...
Ad Widget

ಸುಳ್ಯ ನಗರ ಕಾಂಗ್ರೆಸ್ ಸಮಿತಿ ಸಭೆ

ಸುಳ್ಯ ನಗರ ಕಾಂಗ್ರೆಸ್ ಸಮಿತಿ ಸಭೆ ಇಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ ಜೆ ಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ಕುರಿತು ವಿಚಾರ ವಿನಿಮಯ ನಡೆಸಲಾಯಿತು. ಅಲ್ಲದೆ ಕೆಪಿಸಿಸಿ ಯ ಆರೋಗ್ಯ ಹಸ್ತ ಯೋಜನೆ ಯ ಕೊರೋನ ವಾರಿಯರ್ಸ್...

ಕೆಪಿಸಿಸಿ ಸದಸ್ಯರಾಗಿ ಭರತ್ ಮುಂಡೋಡಿ ನೇಮಕ

ಪ್ರತಿಷ್ಠಿತ ಮುಂಡೋಡಿ ಮನೆತನದ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭರತ್ ಮುಂಡೋಡಿ ಕೆಪಿಸಿಸಿ ಸದಸ್ಯರಾಗಿ ಇಂದು ಡಿ.ಕೆ. ಶಿವಕುಮಾರ್ ನೇಮಕ ಮಾಡಿ ಆದೇಶಿಸಿದ್ದಾರೆ. ಭರತ್ ಮುಂಡೋಡಿ ಉತ್ತಮ ವಾಗ್ಮಿ, ಸಂಘಟನಾ ಚತುರಾಗಿದ್ದಾರೆ.

ಸುಳ್ಯ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ – ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಬೇಡಿ, ಶಾಂತಿಯುತ ಸುಳ್ಯ ಶಾಂತಿಯುತವಾಗಿ ಮುಂದುವರಿಯಲಿ

ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ (ಭೂಮಿ ಪೂಜಾ) ಕಾರ್ಯಕ್ರಮ ಇರುವುದರಿಂದ ಸಾರ್ವಜನಿಕರು ಯಾವುದೇ ರೀತಿಯ ಅತಿರೇಕಕ್ಕೆ ಒಳಗಾಗಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಸನ್ನಿವೇಶಕ್ಕೆ ಮುಂದಾಗಬಾರದು ಎಂದು ಇಂದು ಸಂಜೆ ಸುಳ್ಯದಲ್ಲಿ ನಡೆದ ಶಾಂತಿ ಸಭೆಯಲ್ಲಿ ವಿವಿಧ ಧರ್ಮದ ಮುಖಂಡರು ಮತ್ತು ರಾಜಕೀಯ ನೇತಾರರನ್ನು ಉದ್ದೇಶಿಸಿ ಸುಳ್ಯ ವೃತ್ತ ನಿರೀಕ್ಷಕ ನವೀನಚಂದ್ರ ಜೋಗಿ ರವರು...

ಕೊಡಗಿನಲ್ಲಿ 41 ಹೊಸ ಕೋವಿಡ್ ಪ್ರಕರಣ ಪತ್ತೆ

ಕೊಡಗು ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 15 ಹೊಸ ಕೋವಿಡ್ ಪ್ರಕರಣಗಳು ಮತ್ತು  ಮಧ್ಯಾಹ್ನ 1.30 ರ ವೇಳೆಗೆ 26 ಹೊಸ ಕೋವಿಡ್-19 ಪ್ರಕರಣ ಸೇರಿದಂತೆ ಒಟ್ಟು 41 ಕೋವಿಡ್ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. ವಿರಾಜಪೇಟೆಯ ವಡ್ಡರಮಡುವಿನ 38 ವರ್ಷದ ಪುರುಷ, 10 ಮತ್ತು 12 ವರ್ಷದ ಬಾಲಕ,...

ತಾಲೂಕು ಎನ್ ಎಸ್ ಯು ಐ ಘಟಕದಿಂದ ಎನ್ ಎಂ ಸಿ ಪ್ರಾಂಶುಪಾಲರಿಗೆ ಮನವಿ

ತಾಲೂಕು ಎನ್ ಎಸ್ ಯು ಐ ಘಟಕದಿಂದ ವಿದ್ಯಾರ್ಥಿಗಳಿಗೆ ಫೀಸು ಕಟ್ಟಲು ಕೊರೊನ ಮಹಾಮಾರಿ ಕಾಯಿಲೆಯಿಂದ ಪೊಷಕರ ಬಳಿ ಹಣದ ಕೊರತೆ ಇರುವುದರಿಂದ ಫೀಸು ಕಟ್ಟಲು ಸಮಸ್ಯೆಯಾಗುತ್ತಿದ್ದು ಕಾಲೇಜು ವತಿಯಿಂದ ಸಮಯಾವಕಾಶ ಕೊಡಬೇಕೆಂದು ಎನ್ ಎಂ ಸಿ ಪ್ರಾಂಶುಪಾಲರಾದ ಪೂವಪ್ಪ ಕಣಿಯೂರು ಅವರಿಗೆ ಮನವಿಯನ್ನು ಸಲ್ಲಿಸಲಾಯಿತು . ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ...

ಪೈಂಬೆಚ್ಚಾಲು ಎಸ್ಸೆಸ್ಸೆಫ್ ದಅವಾ ಸಮಿತಿ ಅಧ್ಯಕ್ಷರಾಗಿ ಪಿ.ಎ. ಮುನೀರ್ ಸಖಾಫಿ ಪುನರಾಯ್ಕೆ

ಪೈಂಬೆಚ್ಚಾಲು ಎಸ್ಸೆಸ್ಸೆಫ್ ದಅವಾ ಸಮಿತಿಯ ವಾರ್ಷಿಕ ಕೌನ್ಸಿಲ್ ಸಮಿತಿಯ ಅಧ್ಯಕ್ಷರಾದ ಪಿ.ಎ.ಮುನೀರ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ಆಗಸ್ಟ್ ಒಂದರಂದು ಬಿಜೆಯಂ ವಠಾರದಲ್ಲಿ ನಡೆಯಿತು.ಸಿ.ಎಚ್.ಅಬ್ದುರ್ರಹ್ಮಾನ್ ಮುಸ್ಲಿಯಾರ್ ದುಆ ಮೂಲಕ ಸಭೆಗೆ ಚಾಲನೆ ನೀಡಿ ಸಭೆಯನ್ನು ಉದ್ಘಾಟಿಸಿದರು. ಹಾಫಿಳ್ ಯೂನುಸ್ ಎಂ.ಪಿ. ಖಿರಾಅತ್ ಪಟಿಸಿದರು. ಎಚ್ಐಎಂ ಸದರ್ ಉಸ್ತಾದ್ ಅಲ್ ಹಾಜ್ ಬಿ. ಎಂ.ಇಸ್ಮಾಯಿಲ್ ಸಖಾಫಿ ಮುತ ಅಲ್ಲಿಂ...

ಪಂಜ : ಪೌಷ್ಟಿಕಾಹಾರ ವಿತರಣೆ, ಸ್ತನ್ಯಪಾನ ಸಪ್ತಾಹ

ಪಂಜ ಅಂಗನವಾಡಿ ಕೇಂದ್ರದಲ್ಲಿ 6 ತಿಂಗಳಿಂದ 6 ವರ್ಷದ ಮಕ್ಕಳಿಗೆ, ಗರ್ಭಿಣಿ ಮತ್ತು ಬಾಣಂತಿಯರಿಗೆ ಪೂರಕ ಪೌಷ್ಟಿಕಾಹಾರ ವಿತರಣೆ ನಡೆಯಿತು. ವನಿತ ಸಮಾಜದ ಅಧ್ಯಕ್ಷೆ ಹೇಮಲತ ಸಿ ವಿತರಿಸಿದರು. ಆರೋಗ್ಯ ಕಾರ್ಯಕರ್ತೆ ಕಮಲ ಎ.ಎಸ್., ಆಶಾ ಕಾರ್ಯಕರ್ತೆ ಪುಷ್ಪಾವತಿ, ಅಂಗನವಾಡಿ ಕಾರ್ಯಕರ್ತೆ ಭಾಗೀರಥಿ ಹಾಗೂ ಪೋಷಕರು, ಫಲಾನುಭವಿಗಳು ಉಪಸ್ಥಿತರಿದ್ದರು.

ರಾಮ ಮಂದಿರ ಶಂಕು ಸ್ಥಾಪನೆ ಹಿನ್ನೆಲೆಯಲ್ಲಿ ಯಾವುದೇ ಕೋಮು ಪ್ರಚೋದಕ ಸಂದೇಶ ಹಾಕಬಾರದೆಂದು ಬೆಳ್ಳಾರೆ ಪೊಲೀಸರಿಂದ ಸಾರ್ವಜನಿಕರಿಗೆ ಸೂಚನೆ

ಜುಲೈ 05 ರಂದು ಅಯೋಧ್ಯೆ ಯಲ್ಲಿ ರಾಮ ಮಂದಿರದ ಶಂಕು ಸ್ಥಾಪನೆ ಇರುವುದರಿಂದ ಸಾರ್ವಜನಿಕರು ಯಾವುದೇ ಕೋಮುಗಲಭೆಗಳನ್ನು ಸೃಷ್ಟಿಸುವಂತಹ ಸಂದೇಶ ಗಳನ್ನು ವಾಟ್ಸಾಪ್ ಅಥವಾ ಫೇಸ್ಬುಕ್ನಲ್ಲಿ ಒಂದು ಧರ್ಮಕ್ಕೆ ಮತ್ತು ಇನ್ನೊಂದು ಧರ್ಮಕ್ಕೆ ಧಕ್ಕೆಯಾಗುವಂತೆ ಯಾವುದೇ ಸಂದೇಶಗಳನ್ನು ಅಪ್ಲೋಡ್ ಮಾಡಬಾರದು ಮತ್ತು ಯಾವುದೇ ಧರ್ಮಕ್ಕೆ ಸಂಬಂಧಿಸಿದ ಪ್ರಚೋದನಕಾರಿ ಸಂದೇಶಗಳನ್ನು ಅಪ್ಲೋಡ್ ಮಾಡಬಾರದು. ಯಾರಾದರೂ ಅಂತ ಸಂದೇಶಗಳನ್ನು...
Loading posts...

All posts loaded

No more posts

error: Content is protected !!