- Monday
- July 27th, 2026
ಸುಳ್ಯ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಇವರ ಕಛೇರಿಯು ಶಾಸಕರ ಭವನದಲ್ಲಿ ವಿಧ್ಯುಕ್ತವಾಗಿ ಪೂಜೆ ಹವನಗಳೊಂದಿಗೆ ಪ್ರಾರಂಭವಾಯಿತು. ಫೆಬ್ರವರಿ 02 ಶುಕ್ರವಾರ, ಬೆಳಿಗ್ಗೆ ಗಂ 9.00 ರಿಂದ, ಬೆಂಗಳೂರು ಶಾಸಕರ ಭವನ ಕಟ್ಟಡ ಸಂ. 2, 3ನೇ ಮಹಡಿ ಕೊಠಡಿ ಸಂ 335, 336 ರಲ್ಲಿ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಹರೀಶ್ ಕಂಜಿಪಿಲಿ,...
ಅಜ್ಜಾವರ ಗ್ರಾಮದ ಮೇನಾಲ ಗ್ರಾಮ ದೈವ ಮೇನಾಲ ಉಳ್ಳಾಕುಲು ಮಾಡ ಚಾವಡಿ ಪರಿವಾರ ಮತ್ತು ನಾಗದೇವರು ಇಲ್ಲಿ ಶ್ರೀ ಧರ್ಮರಸು ಇರ್ವೇರು ಉಳ್ಳಾಕುಲು ದೈವ ಮತ್ತು ಪರಿವಾರ ದೈವಗಳ ನೇಮೋತ್ಸವವು ಮೇದಿನಡ್ಕದಲ್ಲಿ ನಡೆಯುವುತ್ತಿದೆ. ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ನೇಮೋತ್ಸವ ನಡೆಯಲಿದ್ದು, ಫೆ.1ರಂದು ಬೆಳಗ್ಗೆ ನಾಗತಂಬಿಲ ಮೇದಿನಡ್ಕದಲ್ಲಿ ನಡೆದು ಬಳಿಕ ಶ್ರೀ ಉಳ್ಳಾಕುಲು...
ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಪಳ್ಳಿ ಮಜಲು ಎಂಬಲ್ಲಿ ತಮ್ಮದೇ ಸೀರೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಮಿನ್ನು ಎಂದು ಗುರುತಿಸಲಾಗಿದ್ದು ಮನೆಮಂದಿ ಕೆಲಸಕ್ಕೆ ತೆರಳಿದ ಬಳಿಕ ಇವರಿಗೆ ಸುಮಾರು ಮೂರು ವರ್ಷಗಳಿಂದ ಅನಾರೋಗ್ಯವಿದ್ದು ಈ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮೃತರು 3...
ಕೊಲ್ಲಮೊಗ್ರದಲ್ಲಿ ನಡೆಯುವ ಕಾರ್ಯನಿರತ ಪತ್ರಕರ್ತರ ಗ್ರಾಮವಾಸ್ತವ್ಯ ಕಾರ್ಯಕ್ರಮವು ಫೆಬ್ರವರಿ 10 ರಂದು ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಪೂರ್ಣ ಸಹಕಾರ ನೀಡುವುದಾಗಿ ಪುತ್ತೂರು ಎ.ಸಿ. ಜುಬಿನ್ ಮಹಾಪಾತ್ರ ಭರವಸೆ ನೀಡಿದ್ದಾರೆ. ಫೆ.01 ರಂದು ಸುಳ್ಯ ತಾಲೂಕು ಕಚೇರಿಯಲ್ಲಿ ನಡೆಸಲಾದ ಅಧಿಕಾರಿಗಳ ಸಭೆಯಲ್ಲಿ ಎ.ಸಿ. ಜುಬಿನ್ ಮಹಾಪಾತ್ರ ಮತನಾಡುತ್ತಾ ಸರಕಾರವು ಜನತ ದರ್ಶನ ಹಾಗೂ ಗ್ರಾಮ ವಾಸ್ತವ್ಯ ಜಿಲ್ಲಾಧಿಕಾರಿಗಳ...
ಜಿಲ್ಲಾ ಎನ್ ಎಸ್ ಯು ಐ ಸಮಿತಿಯನ್ನು ರಾಜ್ಯ ಎನ್ ಎಸ್ ಯು ಐ ಸಮಿತಿಯು ಬಿಡಿಗಡೆ ಮಾಡಿದ್ದು ಜಿಲ್ಲಾ ಉಪಾಧ್ಯಕ್ಷರಾಗಿ ಕೀರ್ತನ್ ಗೌಡ ಕೊಡಪಾಲ ರವನ್ನು ಪ್ರಧಾನ ಕಾರ್ಯದರ್ಶಿಗಳಾಗಿ ಆಶಿಕ್ ಆರಂತೋಡು, ಉಬೈಸ್ ಗೂನಡ್ಕ ಕಾರ್ಯದರ್ಶಿಯಾಗಿ ಪವನ್ ಅಂಬೆಕಲ್ಲುರ ಬಿಡುಗಡೆ ಮಾಡಿದೆ ಕೀರ್ತನ್ ಗೌಡ ಕೊಡಪಾಲ ರವರು ಈ ಹಿಂದೆ ಎನ್ ಯು ಐ...
ಸುಳ್ಯದ ಜಿ.ಪಂ. ಇಂಜಿನಿಯರಿಂಗ್ ಉಪವಿಭಾಗದ ಹೊಸಕಟ್ಟಡ ನಿರ್ಮಾಣ ಕಾಮಗಾರಿಗೆ ಫೆ.1ರಂದು ಗುದ್ದಲಿಪೂಜೆ ನಡೆಯಿತು. 1 ಕೋಟಿ 65 ಲಕ್ಷ ರೂ. ವೆಚ್ಚದ ಈ ಕಟ್ಟಡ ಕಾಮಗಾರಿಗೆ ಶಾಸಕಿ ಕು. ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು. ಪುರೋಹಿತ ಆಲಂಗಾರು ಹರೀಶ್ ಭಟ್ರವರ ಪೌರೋಹಿತ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ.ಪಂ. ಇಂಜಿನಿಯರಿಂಗ್ ಉಪವಿಭಾಗದ ಎಇಇ ರುಕ್ಮಾಂಗದರವರು ಅಲ್ಲದೆ, ಇಂಜಿನಿಯರ್ಗಳಾದ ಜನಾರ್ದನ,...
ಮಂಡೆಕೋಲು ಗ್ರಾಮದ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಸದಾನಂದ ಮಾವಜಿಯವರು ಜ.28ರಂದು ಆಯ್ಕೆಯಾಗಿದ್ದಾರೆ.ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್ ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ವ್ಯವಸ್ಥಾಪನಾ ಸಮಿತಿ ಸದಸ್ಯರು, ದೇವಸ್ಥಾನದ ವಿವಿಧ ಸಮಿತಿಯವರು, ದೇವಸ್ಥಾನ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತಿಯಲ್ಲಿದ್ದರು. ಜೀರ್ಣೋದ್ಧಾರ ಸಮಿತಿಯ ಖಜಾಂಚಿಯಾಗಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ...
ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.19ರಂದು ಜರುಗಲಿದ್ದು, ಇದರ ಪೂರ್ವಭಾವಿಯಾಗಿ ಕೊಳ್ಳಿ ಮುಹೂರ್ತ ಕಾರ್ಯಕ್ರಮವು ಇಂದು (ಫೆ.01ರಂದು) ನಡೆಯಿತು. ಈ ಸಂದರ್ಭದಲ್ಲಿ ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟಿನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಭಗವದ್ಭಕ್ತರು ಉಪಸ್ಥಿತರಿದ್ದರು.
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆಯಲಿರುವ ಒಂದು ವಾರದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಮೃತ ಸಹಕಾರ ಸದನದಲ್ಲಿ ಜ.29ರಂದು ನಡೆಯಿತು.ಶಿಬಿರದ ಉದ್ಘಾಟನೆಯನ್ನು ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ನ ಅಧ್ಯಕ್ಷರಾದ...
ಹರಿಹರ ಪಲ್ಲತ್ತಡ್ಕ ಸಮೀಪ ಮಲ್ಲಾರ ಎಂಬಲ್ಲಿ ಸ್ಕೂಟರ್ ಅಪಘಾತದಲ್ಲಿ ಗಾಯಗೊಂಡಪಂಜದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟ ಘಟನೆ ಜ.31 ರಂದು ವರದಿಯಾಗಿದೆ.ಪಂಜ ಸಮೀಪದ ಕೂತ್ಕುಂಜ ಗ್ರಾಮದ ಕಲ್ಕ ಗೋಪಾಲ ಮತ್ತು ದೇವಕಿ ದಂಪತಿಗಳ ಪುತ್ರಚಿದಾನಂದ (37ವ) ಮೃತ ಯುವಕ.ಘಟನೆಯ ವಿವರ ಜ.30 ರಾತ್ರಿ ಹರಿಹರದ ಕಡೆ ಕಾರ್ಯಕ್ರಮವೊಂದಕ್ಕೆ ಹೋಗಿ ಮನೆಗೆ ಹಿಂತುರುಗುತ್ತಿದ್ದ ವೇಳೆ ಹರಿಹರ...
Loading posts...
All posts loaded
No more posts
