ಕನಸು ಕಾಣುವ ಮತ್ತು ಅದನ್ನು ಗುರಿ ತಲುಪಲು ಸಂವಿಧಾನದಿಂದ ಎಲ್ಲರಿಗೂ ಸಾಧ್ಯ: ಸುಧೀರ್ ಕುಮಾರ್ ಮುರೊಳ್ಳಿ

ತಾಲೂಕು ಕಚೇರಿ ಎದುರು ಡಾ.ಬಿ.ಆರ್. ಅಂಬೇಡ್ಕರ್ ‌ಪುತ್ಥಳಿಗೆ ಮನವಿ ಸಂಘಟನೆಗಳಿಂದ ಮನವಿ, ನಿರ್ಮಿಸುವ ಭರವಸೆ. ಭಾರತ ದೇಶದ ಸತ್ಪ್ರಜೆಯಾಗಿ ಬಾಳುವವನಿಗೆ ಸಂವಿಧಾನ ಬೇಕು. ಪ್ರತೀ ಜಾತಿ, ಧರ್ಮ ಗಳಿಗೆ ಆದರದೇ ಆದ ಗ್ರಂಥಗಳಿದ್ದರೆ, ಈ ದೇಶದ ಎಲ್ಲವರು ಜತೆಯಾಗಿ ಬಾಳಲು ಕಾರಣವಾಗಿರುವ ಸಂವಿಧಾನ ದೇಶದ ದೊಡ್ಡಗ್ರಂಥ. ಅದನ್ನು ಕಾಪಾಡುವ ಹೊಣೆಗಾರಿಕೆಯೊಂದಿಗೆ ಸಂವಿಧಾನದ ಆಶಯದಂತೆ ಪ್ರತಿಯೊಬ್ಬ ಪ್ರಜೆಯು...

ಸುಳ್ಯ ಮೆಸ್ಕಾಂ ಜನ ಸಂಪರ್ಕ ಸಭೆ , ರಸ್ತೆ , ಶಾಲೆಗಳ ಬಳಿಯಲ್ಲಿ ಜೋತು ಬಿದ್ದಿರುವ ತಂತಿಗಳ ಸರಿ ಪಡಿಸಲು ಆಗ್ರಹ.

ಸುಳ್ಯ: ಮೆಸ್ಕಾಂ ಸುಳ್ಯ ಮತ್ತು ಸುಬ್ರಹ್ಮಣ್ಯ ಉಪ ವಿಭಾಗ‌ ಮಟ್ಟದ ಜನ ಸಂಪರ್ಕ ಸಭೆ ಸುಳ್ಯದ ಮೆಸ್ಕಾಂ ಉಪ ವಿಭಾಗದ ಸುಳ್ಯ ಕಛೇರಿಯಲ್ಲಿ ನಡೆಯಿತು. ಮೆಸ್ಕಾಂ‌ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಗ್ರಾಹಕರ‌ ಅಹವಾಲಯ ಆಲಿಸಿದರು. ವಿವಿಧ ಸಮಸ್ಯೆಗಳನ್ನು ಗ್ರಾಹಕರು ಮಂಡಿಸಿದರು.ತಾಲೂಕಿನ ನಾನಾ ಭಾಗಗಳಲ್ಲಿ ವಿದ್ಯುತ್ ತಂತಿಗಳನ್ನು ಬದಲಾವಣೆ ಮಾಡಬೇಕು,ಹೆಚ್ಚುವರಿ ಪರಿವರ್ತಕ ಅಳವಡಿಸಬೇಕು ಎಂದು...
Ad Widget

ಸಂಪಾಜೆ ಕೈಪಡ್ಕ ಬಳಿ ಅಟೋ ರಿಕ್ಷಾ ಮತ್ತು ಕಾರು ನಡುವೆ ಡಿಕ್ಕಿ .

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆಯಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ವಾಹನಗಳು ಆಕ್ಸಿಡೆಂಟ್ ಆಗುತ್ತಿದ್ದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಇಂದು ಸಂಜೆ ಸುರೇಶ್ ಎಂಬುವವರು ಸುಳ್ಯ ಕಡೆಗೆ ತನೂ ಓಡಿಸುತ್ತಿರುವ ಅಟೋ ರಿಕ್ಷದಲ್ಲಿ ಪ್ರಯಾಣಿಸುತ್ತಿದ್ದಾಗ ಮುಂಬಾಗದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ತಬ್ಬುಕ್ ದಾರಿಮಿ ಎಂಬುವವರು ಕಾರು ರಿಕ್ಷಕ್ಕೆ ಗುದ್ದಿದ ಪರಿಣಾಮ ಇದೀಗ ಕಾರು ಚಾಲಕರಿಗೆ ಕಲ್ಲುಗುಂಡಿಯಲ್ಲಿ...

ಪಾಲಡ್ಕ : ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿ

ಅರಂಬೂರು ಪಾಲಡ್ಕ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಘಟನೆ ಇದೀಗ ನಡೆದಿದೆ. ಚಾಲಕ ನಿದ್ರೆಗೆ ಜಾರಿದ್ದರಿಂದ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.

ಹರಿಹರ ಪಲ್ಲತ್ತಡ್ಕ : ಜಾತ್ರೋತ್ಸವದ ಅಂಗವಾಗಿ ಭಕ್ತಾದಿಗಳಿಂದ ಹಸಿರುವಾಣಿ ಸಮರ್ಪಣೆ

ಹರಿಹರ ಪಲ್ಲತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ.20 ರಿಂದ 22 ರವರೆಗೆ ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ನಡೆಯಲಿದ್ದು, ಬೆಳಿಗ್ಗೆ ಹಸಿರುವಾಣಿ ಸಮರ್ಪಣೆ ನಡೆಯಿತು. ಮದ್ಯಾಹ್ನ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು.

SKSSF ಅಜ್ಜಾವರ ಶಾಖೆ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ

ಸುಳ್ಯ: ಅಜ್ಜಾವರ ಶಾಖೆ SKSSF ವತಿಯಿಂದ ಸ್ಥಾಪಕ ದಿನಾಚರಣೆಯ ಪ್ರಯುಕ್ತ ಅಜ್ಜಾವರ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಜಮಾಅತ್ ಕಮಿಟಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ಪೇರಡ್ಕ ಜುಮಾ ಮಸೀದಿ ಖತೀಬರಾದ ರಿಯಾಝ್ ಫೈಝಿ ಎಮ್ಮೆಮ್ಮಾಡು ಮಖಾಂ ಝಿಯಾರತ್ ಗೆ ನೇತೃತ್ವವನ್ನು ವಹಿಸಿ ಸಂದೇಶ ಭಾಷಣವನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ  ಜಲೀಲ್ ದಾರಿಮಿ ಮಾಡನ್ನೂರ್...

ದೇವರಕೊಲ್ಲಿ : ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ಪಲ್ಟಿ

ಹುಣಸೂರಿನಿಂದ ಸುಳ್ಯ ಕಡೆಗೆ ತರಕಾರಿ ಸಾಗಿಸಿ ಬರುತ್ತಿದ್ದ ಪಿಕಪ್ ವಾಹನ ಪಲ್ಟಿಯಾದ ಘಟನೆ ಫೆ.20ರಂದು ಕೊಡಗು ಸಂಪಾಜೆಯ ಕೊಯನಾಡಿನ ದೇವರಕೊಲ್ಲಿಯಲ್ಲಿ ನಡೆದಿದೆ. ತರಕಾರಿ ಸಾಗಿಸಿ ಬರುತ್ತಿದ್ದ ಪಿಕಪ್ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕನಕಮಜಲು: ಕೈಯಲ್ಲಿ ಪಟಾಕಿ ಸ್ಫೋಟಗೊಂಡು ಗಂಭೀರ ಗಾಯ!

ವ್ಯಕ್ತಿಯೋರ್ವನ ಕೈಯಲ್ಲಿ ಪಟಾಕಿ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡ ಘಟನೆ ಫೆ.20ರಂದು ಬೆಳಿಗ್ಗೆ ಕನಕಮಜಲಿನಲ್ಲಿ ಸಂಭವಿಸಿದೆ.ಕೈಯ ಬೆರಳುಗಳಿಗೆ ಗಂಭೀರವಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದ ಏಕಹಾ ಭಜನೆಯು ಜರುಗುತ್ತಿದ್ದು, ಕನಕಮಜಲು ಗ್ರಾಮದ ಗಬ್ಬಲಡ್ಕ ಪುರುಷೋತ್ತಮ ನಾಯ್ಕರ ಮಗ ಚಂದ್ರಶೇಖರ ಗಬ್ಬಲಡ್ಕ ಎಂಬವರು ಪಟಾಕಿಯೊಂದನ್ನು ಸಿಡಿಸುವ ವೇಳೆ ಕೈಯಲ್ಲೇ ಸ್ಪೋಟಗೊಂಡು,...

ಕೊಲ್ಲಮೊಗ್ರ : ಸುಜೋಕ್ ಮತ್ತು ಅಕ್ಯುಪ್ರೆಶರ್ ಚಿಕಿತ್ಸೆ ಆಯೋಜನೆ

ಕೊಲ್ಲಮೊಗ್ರದಲ್ಲಿ ಫೆಬ್ರವರಿ 21 ರಿಂದ  ಏಳು ದಿನಗಳ ಸುಜೋಕ್ ಮತ್ತು ಅಕ್ಯುಪ್ರೆಶರ್ ಚಿಕಿತ್ಸೆ ಆಯೋಜನೆಗೊಂಡಿದೆ.ಶ್ರೀ ಮಯೂರ ಕಲಾ ಮಂದಿರದಲ್ಲಿ  ಫೆಬ್ರವರಿ 21ರಿಂದ 27 ರ ವರೆಗೆ ಏಳು ದಿನಗಳ ಸುಜೋಕ್ ಮತ್ತು ಅಕ್ಯುಪ್ರೆಶರ್ ಚಿಕಿತ್ಸೆ ನಡೆಯಲಿದೆ.ಶಿವಮೊಗ್ಗದ ಶ್ರೀ ಚಂದನ್. ಜಿ. ಮತ್ತು ಶ್ರೀ. ಮಂಜುನಾಥ್. ಎನ್.ರವರು ಚಿಕಿತ್ಸೆ ನೀಡಲಿದ್ದಾರೆ.ಮೊಣಕಾಲು ನೋವು, ಸೊಂಟ ನೋವು, ಬೆನ್ನು ನೋವು,...

ಅಡ್ಕಾರು ಅಂಜನಾದ್ರಿ ಪ್ರಸನ್ನಾಂಜನೇಯ ಸ್ವಾಮಿ ದೇವರ ಕಾಲಾವಧಿ ಜಾತ್ರಾಮಹೋತ್ಸವಕ್ಕೆ ಗೊನೆ ಮುಹೂರ್ತ

ಫೆ.26ರಿಂದ 28ರವರೆಗೆ ಜಾಲ್ಸೂರು ಗ್ರಾಮದ ಅಡ್ಕಾರಿನ ಅಂಜನಾದ್ರಿ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದ ಕಾಲಾವಧಿ ಜಾತ್ರಾಮಹೋತ್ಸವವು ನಡೆಯಲಿದ್ದು, ಇದರ ಅಂಗವಾಗಿ, ಫೆ.19ರಂದು ಮಹೂರ್ತದ ಗೊನೆ ಕಡಿಯಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಬ್ರಹ್ಮಶ್ರೀ ವೇ. ಮೂ. ಪುರೋಹಿತ ನಾಗರಾಜ ಭಟ್, ಆಡಳಿತ ಸಮಿತಿ ಅಧ್ಯಕ್ಷ ಶಿವರಾಮ ರೈ ಕುರಿಯ, ಕೋಶಾಧಿಕಾರಿ ಜಯಂತ...
Loading posts...

All posts loaded

No more posts

error: Content is protected !!