ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಸರಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು . ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು ಮಾ.04 ರಿಂದ ಏ.03 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಕೆಳಗಿನ ಲಿಂಕನ್ನು ಬಳಸಿ ಅರ್ಜಿ ಸಲ್ಲಿಸಬೇಕು http://kea.kar.nic.in

ಎನ್ನೆಂಸಿ: ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ

ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಮತ್ತು ಸುಳ್ಯ ತಾಲೂಕಿನ ವಿವಿಧ ಇಲಾಖೆಗಳ ಹಾಗೂ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವು ದಿನಾಂಕ ೨೧ ಫೆಬ್ರವರಿ ೨೦೨೪ರಂದು ಕೆ.ವಿ.ಜಿ. ವೃತ್ತದ ಬಳಿಯಿಂದ ಆರಂಭಗೊ0ಡಿತು. ಕೆ.ವಿ.ಜಿ. ವೃತ್ತದ ಬಳಿ ಆಗಮಿಸಿದ ಜಾಗೃತಿ ಜಾಥಾ ರಥದಲ್ಲಿದ್ದ ಡಾ/ ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ನೆಹರು ಮೆಮೋರಿಯಲ್ ಕಾಲೇಜಿನ...
Ad Widget

ಕಲ್ಲುಗುಂಡಿ: ಮಾನವೀಯತೆ ಮೆರೆದ ಯಶಸ್ವಿ ಯುವಕ ತಂಡ

ಕಲ್ಲುಗುಂಡಿಯಲ್ಲಿ ನಡೆದ ಕೆಪಿಎಲ್ 7 ಕ್ರಿಕೆಟ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದು ಟ್ರೋಫಿಯನ್ನು ಅಲಂಕರಿಸಿಕೊಂಡ ಸ್ಥಳೀಯ ಯಶಸ್ವಿ ಯುವಕ ತಂಡವು ಬಹುಮಾನದಲ್ಲಿ ಬಂದ ಮೊತ್ತವನ್ನು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿಗೆ ನೀಡಿದ್ದಾರೆ. ಚೆಂಬು ಗ್ರಾಮದ ಆನ್ಯಾಳ ಅಜಿತ್ ಎಸ್ ಹಾಗೂ ಅನುಪಮಾ ದಂಪತಿಗಳ ಪುತ್ರಿ ಆರ್ವಿ (4ವರ್ಷ) ಪುಟ್ಟ ಮಗು ಹೃದಯ ಸಂಬಂಧ ಕಾಯಿಲೆಯಿಂದ...

ಬೇಬಿ ಬಾಟಲ್ ದಂತ ಕ್ಷಯ

ಹಲ್ಲುಗಳು ಹುಳುಕಾಗಲು ಬರೀ ಸಿಹಿ ತಿಂಡಿ ಮಾತ್ರವೇ ಕಾರಣವಲ್ಲ. ಹಲ್ಲು ಹುಳುಕಾಗಲು ಹಲವಾರು ಕಾರಣಗಳಿವೆ. ಅನುವಂಶಿಕ ಮತ್ತು ವಂಶ ಪಾರಂಪರ್ಯ ಕಾರಣಗಳು, ನಿಯಮಿತವಾಗಿ ಹಲ್ಲಿನ ಆರೋಗ್ಯವನ್ನು ಪರೀಕ್ಷಿಸಿಕೊಳ್ಳದಿರುವುದು, ಸರಿಯಾದ ಕ್ರಮದಲ್ಲಿ ಸರಿಯಾದ ದಂತ ಚೂರ್ಣವನ್ನು ಉಪಯೋಗಿಸಿ ಹಲ್ಲು ಉಜ್ಜದಿರುವುದರಿಂದ ದಂತ ಕ್ಷಯವಾಗುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ಹಲ್ಲಿನ ರಚನೆಯಲ್ಲಿನ ವ್ಯತ್ಯಾಸ, ತುಂಬಾ ಆಳವಾದ ಹಲ್ಲಿನ...

ಫೆ.25 : ಬಾಳಿಗೆ ಬೆಳಕು ಕವನ ಸಂಕಲನ ಲೋಕಾರ್ಪಣೆ

ಬಾಳಿಗೆ ಬೆಳಕು ಲೋಕಾರ್ಪಣೆಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕ ಮತ್ತು ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಹಾಗೂ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ದಿನಾಂಕ 25.02 2024 ರಂದು ಭಾನುವಾರ ಬೆಳಗ್ಗೆ ಸಮಯ 9.30ಕ್ಕೆ ಮನಿಷಾ ಸಭಾಂಗಣ ಜೈನ ಭವನ ರಸ್ತೆ ಪುತ್ತೂರು ಇಲ್ಲಿ ಯುವ ಕವಯಿತ್ರಿ ಪ್ರಿಯಾ...

ಫೆ.22: ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶಿಲಾನ್ಯಾಸ ಕಾರ್ಯಕ್ರಮ

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳಿಗೊಳಪಟ್ಟ ಪಂಚಸ್ಥಾಪನೆಗಳಲ್ಲಿ ಒಂದಾದ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿದ್ದು, ನವೀಕರಣ ಪುನಃ ಪ್ರತಿಷ್ಠೆ ಸಿದ್ಧಿರ್ಥಕ್ಕಾಗಿ ಶಿಲಾನ್ಯಾಸ ಕಾರ್ಯಕ್ರಮವು ಫೆ.22 ರಂದು ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಕ್ಷೇತ್ರದ ತಂತ್ರಿಗಳು ಶಿಲಾನ್ಯಾಸ ನೆರವೇರಿಸಲಿದ್ದಾರೆ.ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಭೆಯ ಅಧ್ಯಕ್ಷತೆಯನ್ನು ಶಾಸಕಿ ಕು| ಭಾಗೀರಥಿ...

ಎಸ್‌ಡಿಪಿಐ ಪಕ್ಷವು ರಾಜಕೀಯವಾಗಿ ಅನ್ಯಾಯ ಮಾಡುವ ಕೈಗಳನ್ನು ತಡೆಯುವ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ – ರಿಯಾಝ್ ಫರಂಗಿಪೇಟೆ

ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಪಕ್ಷದ ಸಮಾವೇಶವು ಫೆ.೨೦ರಂದು ಉಡುಪಿ ಗಾರ್ಡನ್‌ನಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪಕ್ಷದ ದ ಕ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ನೆರವೇರಿಸಿದರು. ದಿಕ್ಸೂಚಿ ಭಾಷಣಗಾರರಾಗಿ ಸೋಶಿಯಲ್ ಡೆಮಾಕ್ರೆಟಿ ಪಾರ್ಟಿ ಆಫ್ ಇಂಡಿಯಾ ಇದರ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆಯವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದಾಗಿ ದೇಶ...

ಸಮಾಜ ಕಲ್ಯಾಣ ಇಲಾಖೆ,ಅಜ್ಜಾವರ ಗ್ರಾಮ ಪಂಚಾಯತ್ ಜಂಟಿ ಆಶ್ರಯದಲ್ಲಿ ಭಾರತದ”ಸಂವಿಧಾನ ಜಾಗೃತಿ ಜಾಥ”

ದಕ್ಷಿಣ ಕನ್ನಡ ಸುಳ್ಯ ತಾಲೂಕು ಸಮಾಜ ಕಲ್ಯಾಣ ಇಲಾಖೆ,ಅಜ್ಜಾವರ ಗ್ರಾಮ ಪಂಚಾಯತ್ ಜಂಟಿ ಆಶ್ರಯದಲ್ಲಿ ಭಾರತದ 75ನೇ ವರ್ಷದ "ಸಂವಿಧಾನ ಜಾಗೃತಿ ಜಾಥ"ಕಾರ್ಯಕ್ರಮವನ್ನು ಕಾಲ್ನಡಿಗೆ ಜಾಥಾದಲ್ಲಿ ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲಾ ಆವರಣಕ್ಕೆ ಶಾಲಾ ವಿದ್ಯಾರ್ಥಿಗಳಿಂದ, ಸಾರ್ವಜನಿಕರಿಂದ,ಅಜ್ಜಾವರ ಪಂಚಾಯತ್ ಆಡಳಿತ ಮಂಡಳಿ, ಗ್ರಾಮದ ಎಲ್ಲಾ ಅಧಿಕಾರಿ ವರ್ಗದವರಿಂದ, ಅಜ್ಜಾವರ ಸ.ಹಿ.ಪ್ರಾ.ಶಾಲೆ ವಿದ್ಯಾರ್ಥಿಗಳಿಂದ ಬ್ಯಾಂಡ್ ಸೆಟ್ ನೊಂದಿಗೆ ಬರಮಾಡಿಕೊಳ್ಳಲಾಯಿತು.ಈ ಗ್ರಾಮ...

ಜೇಸಿಐ ಸುಳ್ಯ ಪಯಸ್ವಿನಿ ನೀಡುವ 2024ರ ಯುವ ಸಾಧಕ ಪ್ರಶಸ್ತಿಗೆ ವೀಕ್ಷಿತ್ ಗೌಡ ಕುತ್ಯಾಳ ಆಯ್ಕೆ.

ಸುಳ್ಯದ ಮಡಪ್ಪಾಡಿ ಗ್ರಾಮದ ಯುವ ಪ್ರತಿಭೆ ಕೊಳಲು ವಾದಕ ವೀಕ್ಷಿತ್ ಗೌಡ ಕುತ್ಯಾಳ ಇವರು ಜೇಸಿಐ ಸುಳ್ಯ ಪಯಸ್ವಿನಿ ನೀಡುವ 2024ರ ಯುವ ಸಾಧಕ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ತಿಳಿದುಬಂದಿದೆ.

ಕೊಲ್ಲಮೊಗ್ರ ಪತ್ರಕರ್ತರ ಗ್ರಾಮ ವಾಸ್ತವ್ಯ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಧಾನ ಸಭಾ ಸಭಾಪತಿ ಯು.ಟಿ ಖಾದರ್ ಗೆ ಮನವಿ ಸಲ್ಲಿಕೆ.

ದ.ಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಫೆ 10 ರಂದು ಕೊಲ್ಲಮೊಗ್ರದಲ್ಲಿ ಜರುಗಿದ ಪತ್ರಕರ್ತರ ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಹಲವು ಬೇಡಿಕೆಗಳು ಅಲ್ಲಿ ಬಂದಿದ್ದು ಅದಕ್ಕೆ ಸಂಬಂಧಿಸಿದ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಧಾನ ಸಭಾ ಅಧ್ಯಕ್ಷರಾದ ಯು..ಟಿ ಖಾದರ್ ಅವರಿಗೆ ಶಾಸಕಿ ಭಾಗೀರಥಿ ಮುರಳ್ಯರವರ ಸಮ್ಮುಖದಲ್ಲಿ ಮನವಿ ನೀಡಲಾಯಿತು.ಈ...
Loading posts...

All posts loaded

No more posts

error: Content is protected !!