ಮಂಡೆಕೋಲು : ಗೋ ಆಧಾರಿತ ಕೃಷಿ ಪ್ರಾತ್ಯಕ್ಷಿಕೆ

ಗೋವು ಆಧಾರಿತ ಕೃಷಿ,ಗೋ ಕೃಪಾಮೃತ ಬಗ್ಗೆ ಪರಿಚಯ ಮತ್ತು ಪ್ರಾತ್ಯಕ್ಷಿಕೆ ಇಂದು ಮಂಡೆಕೋಲು ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು . ಗೋವು ಆಧಾರಿತ ಕೃಷಿ ಬಗ್ಗೆ ಆರ್.ಕೆ.ಭಟ್ ಸುಳ್ಯ ಇವರು ಮಾಹಿತಿ ನೀಡಿದರು. ನವೋದಯ ಸಂಘದ ಸಹಭಾಗಿತ್ವದೊಂದಿಗೆ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಉಪಾಧ್ಯಕ್ಷೆ ಜಲಜಾ ದೇವರಗುಂಡ ವಹಿಸಿದ್ದರು. ಅತಿಥಿಗಳಾಗಿ ಮಂಡೆಕೋಲು ಸಹಕಾರಿ...

ಪೆರುವಾಜೆ : ಬಿಜೆಪಿಯಿಂದ ಕಾಂಗ್ರೆಸ್ ಗೆ ಸೇರ್ಪಡೆ

ಪೆರುವಾಜೆ ಗ್ರಾಮದ 3 ನೇ ವಾರ್ಡ ಬಿಜೆಪಿ ವಾರ್ಡ ಕಾರ್ಯದರ್ಶಿ ಕರುಣಾಕರ, ಬೆಳ್ಳಾರೆ ಸಹಕಾರಿ ಸಂಘದ ಮಾಜಿ ಸದಸ್ಯ ಲಕ್ಷ್ಮಣ ,ವಿಜಯ, ದಿನೇಶ, ಸುಂದರ ಇವರನ್ನು ಇಂದು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ಕಾಂಗ್ರೆಸ್ ಪಕ್ಷಕ್ಕೆಸೇರ್ಪಡೆ ಗೊಳಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಯಪ್ರಕಾಶ್ ರೈ, ಬೆಳ್ಳಾರೆ ತಾಲೂಕು ಪಂಚಾಯತ್ ಕ್ಷೇತ್ರ...
Ad Widget

ಸುಳ್ಯ : ಸಂಪತ್ ಹಂತಕರ ಬಂಧನ…!ಆಪ್ತರಿಂದಲೆ ಕೊಲೆ

ಕೊಲೆಯಾದ ಸಂಪತ್- ಕಳೆದ ವರ್ಷ ಮಾರ್ಚ್ ನಲ್ಲಿ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಅವರನ್ನು ಅಪಘಾತದಲ್ಲಿ ಕೊಲೆ ಮಾಡಿಸಿದ ಕೇಸ್ ನ ಪ್ರಮುಖ ಆರೋಪಿ ಸಂಪತ್ ನನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿ ಪ್ರಮುಖ ಆರೋಪಿಗಳನ್ನು ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ನೇತೃತ್ವದ ಹಾಗೂ ಮಂಗಳೂರು ಡಿಸಿಐಬಿ ಪೊಲೀಸರ ತನಿಖಾ ತಂಡ ಬಂಧಿಸಿರುವ...

ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷರಾಗಿ ಮಹೇಶ್ ರೈ ಮೇನಾಲ

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷರಾಗಿ ಮಹೇಶ್ ಕುಮಾರ್ ರೈ ಮೇನಾಲ ಇವರು ಆಯ್ಕೆಯಾಗಿದ್ದಾರೆ. ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಮೇನಾಲ ನಿವಾಸಿಯಾಗಿರುವ ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿ, ಹಿಂದೂ ಜಾಗರಣ ವೇದಿಕೆ ಪುತ್ತೂರು ಹಾಗೂ ಸುಳ್ಯ ತಾಲೂಕುಗಳ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

ಎಸ್ ಎಂ ಎ ಝೋನಲ್ ಲೆವೆಲ್ ಅಲರ್ಟ್ 2020 ಮತ್ತು ಬೇಕಲ್ ಉಸ್ತಾದ್ ಅನುಸ್ಮರಣಾ ಕಾರ್ಯಕ್ರಮ

ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಎಸ್ಎಂಎ ಬೆಳ್ಳಾರೆ ಝೋನಲ್ ಸಮಿತಿ ವತಿಯಿಂದ ಎಸ್ಎಂಎ ಲೀಡರ್ಸ್ ಮೀಟ್ ಹಾಗೂ ಇತ್ತೀಚೆಗೆ ನಿಧನರಾದ ತಾಜಲ್ ಫುಖಹ ಬೇಕಲ್ ಉಸ್ತಾದರ ಅನುಸ್ಮರಣಾ ಕಾರ್ಯಕ್ರಮ ಬೆಳ್ಳಾರೆ ಸುನ್ನೀ ಸೆಂಟರ್ ಸಭಾಂಗಣದಲ್ಲಿ ಬೆಳ್ಳಾರೆ ಝೋನಲ್ ಸಮಿತಿ ಅಧ್ಯಕ್ಷ ಹಾಜಿ ಇಸ್ಮಾಯಿಲ್ ಪಡ್ಪಿನಂಗಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಲೀಡರ್ಸ್ ಮೀಟ್ ಸಭಾಕಾರ್ಯಕ್ರಮವನ್ನು ಎಸ್ಎಂಎ ಜಿಲ್ಲಾ ಸಮಿತಿ...

ಸುಳ್ಯ : ಅನುಗ್ರಹ ಮೋಟಾರ್ಸ್ ಸುಜುಕಿ ದ್ವಿಚಕ್ರ ವಾಹನ ಶೋರೂಂ ಶುಭಾರಂಭ

ಸುಳ್ಯ ಪರಿವಾರಕಾನ ಗ್ರ್ಯಾಂಡ್ ಪರಿವಾರ್ ಬಳಿ ಅನುಗ್ರಹ ಮೋಟಾರ್ಸ್ ಸುಜುಕಿ ದ್ವಿಚಕ್ರ ವಾಹನದ ಶೋರೂಮ್ ಅ.9 ರಂದು ಶುಭಾರಂಭಗೊಂಡಿತು.ನೂತನ ಸಂಸ್ಥೆಯನ್ನು ಸುಜುಕಿ ಸೇಲ್ಸ್ ಏರಿಯಾ ವ್ಯವಸ್ಥಾಪಕ ಗುರು ಪ್ರಸಾದ್‌ ಉದ್ಘಾಟಿಸಿದರು.ಸುಜುಕಿ ಸರ್ವಿಸ್ ಏರಿಯಾ ವ್ಯವಸ್ಥಾಪಕ ಕಿಲ್ಲನ್ ರಾಂಬರ್,ಅನಘ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕ ಎನ್.ವೆಂಕಟ ಫಾಣಿ,ಸಂಸ್ಥೆಯ ನಿರ್ದೇಶಕಿಯವರ ತಂದೆಯವರಾದ ಈಶ್ವರ,ತಾಯಿ ಶಶಿಕಲಾ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್...

ಅಕ್ಟೋಬರ್ 18 ಗಾಂಧಿನಗರ ಎಸ್ಸೆಸ್ಸೆಫ್ ವತಿಯಿಂದ ಬ್ಲಡ್ ಸೈಬೋ 199ನೇ ರಕ್ತದಾನ ಶಿಬಿರ

ಎಸ್ ಎಸ್ ಎಫ್ ಬ್ಲಡ್ ಸೈಬೋ 199 ನೇ ರಕ್ತದಾನ ಶಿಬಿರ ಅ.18 ರಂದು ಸುಳ್ಯ ಗಾಂಧಿನಗರದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ ಎಂದು ಸಂಘಟಕರು ಇಂದು ಸುಳ್ಯ ಪ್ರೆಸ್ ಕ್ಲಬ್ಬಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಎಸ್ಎಸ್ಎಫ್ ಸಂಘಟನೆಯ ಬ್ಲಡ್ ಸೈಬೋ ವಿಭಾಗವು ರಾಷ್ಟ್ರ ಮತ್ತು ರಾಜ್ಯದ ಮೂಲೆಮೂಲೆಗಳಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗುತ್ತಿದ್ದು ಸಾವಿರಾರು ಜೀವಗಳನ್ನು ರಕ್ಷಿಸುವಲ್ಲಿ...

ಕೋಡಿಮಜಲು ಜಾನಕಿ ಬಂಗೇರ ನಿಧನ

ಎಡಮಂಗಲ ಗ್ರಾಮದ ಕೋಡಿಮಜಲು ಜಾನಕಿ ಬಂಗೇರರು ಅ. 8 ರಂದು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ಸುಮಾರು 45 ವರ್ಷಗಳ ಕಾಲ ಕಾಂಗ್ರೆಸ್ ಕಾರ್ಯಕರ್ತೆಯಾಗಿ ದುಡಿದಿರುವುದಲ್ಲದೆ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಎಡಮಂಗಲ ಗ್ರಾ.ಪಂ. ಸದಸ್ಯರಾಗಿ, ಎಡಮಂಗಲ ಪ್ರಾ.ಕೃ.ಪ.ಸ.ಸಂಘದಲ್ಲಿ ಮೂರು ಅವಧಿಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಎಡಮಂಗಲ...

ಕೆಆರ್ ಡಿಸಿಎಲ್ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ರಸ್ತೆಯಲ್ಲೆ ಹರಿಯುತ್ತಿರುವ ನೀರು

ಸುಳ್ಯ ನಗರ ಪ್ರದೇಶಗಳ ಮುಖ್ಯ ರಸ್ತೆಗಳಲ್ಲಿ ಕೆಆರ್ ಡಿಸಿಎಲ್ ವತಿಯಿಂದ ಮಾಣಿ-ಮೈಸೂರು ರಸ್ತೆ ನಿರ್ಮಾಣ ಮಾಡುವ ಸಂದರ್ಭ ರಸ್ತೆಯ ಎರಡು ಬದಿಗಳಲ್ಲಿ ಲಕ್ಷಾಂತರ ರೂಪಾಯಿಗಳ ಖರ್ಚು ಮಾಡಿ ಬೃಹತ್ ಚರಂಡಿಗಳ ನಿರ್ಮಾಣ ಮಾಡಿಸಿ ನಮ್ಮ ಕೆಲಸ ಇಲ್ಲಿಗೆ ಮುಗಿಯಿತು ಎಂದು ಹೋಗಿರುತ್ತಾರೆ. ನಂತರ ಮಳೆಗಾಲದ ಸಂದರ್ಭದಲ್ಲಿ ಮಳೆಯ ನೀರು ರಸ್ತೆಯಲ್ಲಿ ಅರಿಯುವುದೋ ಅಥವಾ ಚರಂಡಿಯಲ್ಲಿ ಹರಿಯುವುದೋ...

ಸಂಪಾಜೆಯಲ್ಲಿ ರಾಜ್ಯ ಹೆದ್ದಾರಿ ಬದಿ ಕುಸಿತ

ನಿನ್ನೆ ರಾತ್ರಿ ಸುರಿದ ಬಾರೀ ಮಳೆಗೆ ಸಂಪಾಜೆಯ ಗಡಿಕಲ್ಲಿನ ಮಸೀದಿಯ ಬಳಿ ಮಂಗಳೂರು ಮೈಸೂರ್ ರಾಜ್ಯ ಹೆದ್ದಾರಿಯ ಚರಂಡಿ ಕುಸಿದು ಅಪಾಯಕಾರಿ ಹೊಂಡ ನಿರ್ಮಾಣವಾಗಿದೆ. ದಿನಂಪ್ರತಿ ನೂರಾರು ವಾಹನಗಳು, ಪಾದಚಾರಿಗಳು ಇಲ್ಲಿ ಸಂಚರಿಸುತ್ತಿದ್ದು ಅಪಾಯದ ಮುನ್ಸೂಚನೆ ನೀಡಿದೆ. ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಮುಂದೆ ಆಗಬಹುದಾದ ದುರ್ಘಟನೆಗಳನ್ನು ತಪ್ಪಿಸಬೇಕೆಂದು ಮಹಮ್ಮದ್ ಕುಂಞಿಎಸ್ ಡಿ ಪಿ...
Loading posts...

All posts loaded

No more posts

error: Content is protected !!