ಸುಳ್ಯ ನಗರದಲ್ಲಿ ಜಲಕ್ಷಾಮ ಭೀತಿ ತುರ್ತುಕ್ರಮಕ್ಕೆ ಜಿಲ್ಲಾಧಿಕಾರಿಗೆ ಮನವಿ

ಸುಳ್ಯ ನಗರಕ್ಕೆ ಕುಡಿಯುವ ನೀರು ಒದಗಿಸುತ್ತಿರುವ ಪಯಸ್ವಿನಿ ನದಿಯಲ್ಲಿ ನೀರು ತಳ ಸೇರಿದ್ದು, ನಗರಕ್ಕೆ ನೀರು ಸರಬರಾಜು ಮಾಡಲು ಅಸಾಧ್ಯವಾದ ಪರಿಸ್ಥಿತಿ ಉಂಟಾಗಿರುವುದರಿಂದ ಕೂಡಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ತುರ್ತು ಕ್ರಮ  ಕೈಗೊಳ್ಳಬೇಕೆಂದು ಸುಳ್ಯ ನಗರ ಪಂಚಾಯತ್  ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಸುಳ್ಯ ತಹಶೀಲ್ದಾರ್ ಹಾಗೂ ದ.ಕ. ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.  ಚುನಾವಣಾ...

ವಿದ್ಯಾರಶ್ಮಿಗೆ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ

ಮಾರ್ಚ್ 2023ರಲ್ಲಿ ಜರುಗಿದ ದ್ವಿತೀಯ ಪಿಯುಸಿ ಪರೀಕ್ಷೆಗೆ ವಿದ್ಯಾರಶ್ಮಿ ವಿದ್ಯಾಲಯದ ವಾಣಿಜ್ಯ ವಿಭಾಗದ 25 ಮತ್ತು ವಿಜ್ಞಾನ ವಿಭಾಗದ 9 ಅಭ್ಯರ್ಥಿಗಳು, ಒಟ್ಟು 34 ಅಭ್ಯರ್ಥಿಗಳು ಹಾಜರಾಗಿದ್ದು 31 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಮಾನ್ವಿ ಬಿ.ಸಿ. (EBAS-550) ಫಾತಿಮತ್ ನಿಶಾ (EBAC-545) ತೇಜಸ್ ಕೆ. (PCMB-531) ಹರ್ಷಿತ್ ಕೆ.ಡಿ. (EBAC-526) ನಿಶಾಂತ್ ಡಿ.ಎಚ್. (PCMC-521) ಪ್ರಣವ್ ಕೆ.ಯು....
Ad Widget

ಬೆಳ್ಳಾರೆ : ಬಿಜೆಪಿ ಭರ್ಜರಿ ರೋಡ್ ಶೋ

ಸುಳ್ಯ ಬಿಜೆಪಿ ಮಂಡಲ ಸಮಿತಿಯ ವತಿಯಿಂದ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ಪರವಾಗಿ ಬೆಳ್ಳಾರೆಯಲ್ಲಿ ರೋಡ್ ಶೋ ಹಾಗೂ ಸಾರ್ವಜನಿಕ ಸಭೆ ನಡೆಯಿತು. ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಬಳಿಯಿಂದ ಆರಂಭಗೊಂಡು ಬೆಳ್ಳಾರೆಯ ಮುಖ್ಯ ಪೇಟೆಯಲ್ಲಿ ರೋಡ್ ಶೋ ನಡೆಯುತು. ಬಳಿಕ ಬಸ್ ನಿಲ್ದಾಣದ ಬಳಿಯಲ್ಲಿ ಸಾರ್ವಜನಿಕ ಚುನಾವಣಾ ಪ್ರಚಾರ...

ಎನ್ಎಮ್ ಸಿ : ಸ್ವಾವಲಂಬನೆಡೆಗೆ ಒಂದು ಹೆಜ್ಜೆ ಎಂಬ ಕೌಶಲ್ಯ ತರಬೇತಿ ಶಿಬಿರ

ಸುಳ್ಯ ನೆಹರು ಮೆಮೋರಿಯಲ್ ಕಾಲೇಜು ಸಮಾಜ ಕಾರ್ಯ ವಿಭಾಗದ ವತಿಯಿಂದ ಏರ್ಪಡಿಸಿದ್ದ ಸ್ವಾವಲಂಬನೆಡೆಗೆ ಒಂದು ಹೆಜ್ಜೆ ಎಂಬ ಕೌಶಲ್ಯ ತರಬೇತಿ ಶಿಬಿರದ ಒಂದು ಭಾಗವಾದ ನರ್ಸರಿ ನಿರ್ವಹಣೆ ಮತ್ತು ಕಸಿ ಕಟ್ಟುವಿಕೆ ವಿಭಾಗದಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳ ತರಬೇತಿಯಿಂದ ಉತ್ತೇಜಿತರಾಗಿ ಇನ್ನಷ್ಟು ಹೆಚ್ಚಿನ ಮಾಹಿತಿ ಹಾಗೂ ಸಲಹೆಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು ಹಾಗೂ...

ಬತ್ತಿದ ಪಯಸ್ವಿನಿ ನದಿಯಲ್ಲಿ ಮೀನುಗಳ ಮಾರಣಹೋಮ

ಸುಳ್ಯದ ಜೀವನದಿಯಾಗಿರುವ ಪಯಸ್ವಿನಿಯ ಒಡಲು ಬರಿದಾಗಿದ್ದು, ನದಿಯಲ್ಲಿದ್ದ ಸಾವಿರಾರು ಮೀನುಗಳ ಮಾರಣಹೋಮ ನಡೆದಿದೆ. ನದಿ ತಟದಲ್ಲಿ ಎಲ್ಲೆಂದರಲ್ಲಿ ಸಾವಿರಾರು ಮೀನುಗಳು ತನ್ನ ಪ್ರಾಣ ಕಳೆದುಕೊಂಡು ಸುಡು ಬಿಸಿಲಿನಲ್ಲಿ ಒಣಗಿ ಹೋಗುತ್ತಿದೆ. ಪರಿಸರವಿಡೀ ದುರ್ನಾತದಿಂದ ಕೂಡಿದೆ. ಸುಳ್ಯ ತಾಲೂಕಿನೆಲ್ಲೆಡೆ ಜಲಕ್ಷಾಮದ ಭೀತಿ ಎದುರಾಗಿದ್ದು, ಜನರು ಮಳೆಗಾಗಿ ದೇವರ ಮೊರೆ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರೀತಿಯ ತುರ್ತು...

ಸುಳ್ಯದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ – 40% ಕಮಿಷನ್ ಸರ್ಕಾರ ತೊಲಗಿಸಲು ಮಲ್ಲಿಕಾರ್ಜುನ ಖರ್ಗೆ ಕರೆ

ರಾಜ್ಯದಲ್ಲಿ ಈಗಿರುವ 40% ಕಮಿಷನ್ ಸರ್ಕಾರವನ್ನು ತೆಗೆದು ಜನಪರವಾದ ಕಾಂಗ್ರೆಸ್ ಸರಕಾರವನ್ನು ಆಡಳಿತಕ್ಕೆ ತರಬೇಕಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.ಅವರು ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆದ ಕಾಂಗ್ರೆಸ್ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅಭ್ಯರ್ಥಿ ಕೃಷ್ಣಪ್ಪ ಜಿ ಯವರ ಪರವಾಗಿ ಪ್ರಚಾರ ಕಾರ್ಯಕ್ಕೆ ಆಗಮಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.ಸುಳ್ಯದಲ್ಲಿ ಬಡವರ ಕಲಿಕೆಗಾಗಿ...

ಸುಳ್ಯ : ಒಂದು ನಾಮಪತ್ರ ಹಿಂತೆಗೆತ – ಕಣದಲ್ಲಿ ಉಳಿದ 8 ಅಭ್ಯರ್ಥಿಗಳು

ವಿಧಾನಸಭಾ ಚುನಾವಣೆಗೆ ಸುಳ್ಯ ಮೀಸಲು ಕ್ಷೇತ್ರದಿಂದ ಓರ್ವ ಪಕ್ಷೇತರ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದ ಹಿನ್ನಲೆಯಲ್ಲಿ 8 ಮಂದಿ ಅಂತಿಮ ಕಣದಲ್ಲಿದ್ದಾರೆ.9 ಮಂದಿ ನಾಮಪತ್ರ ಸಲ್ಲಿಸಿದ್ದು ಅವರಲ್ಲಿ ಪಕ್ಷೇತರ ಅಭ್ಯರ್ಥಿ ಸತೀಶ್ ಬೂಡುಮಕ್ಕಿ ನಾಮಪತ್ರ ವಾಪಸ್ ಪಡೆದಿದ್ದು ಇದೀಗ ಸುಳ್ಯ ವಿಧಾನಸಭಾ ಕ್ಷೇತ್ರ ಕಣದಲ್ಲಿ ಬಿಜೆಪಿ ಭಾಗೀರಥಿ ಮುರುಳ್ಯ, ಕಾಂಗ್ರೆಸ್ ಜಿ ಕೃಷ್ಣಪ್ಪ, ಜೆಡಿಎಸ್‌ನಿಂದ ಹೆಚ್.ಎಲ್....

ಬೆಂಗಳೂರಿನಲ್ಲಿ ಅಪಘಾತ; ಕೊಲ್ಲಮೊಗ್ರದ ಯುವಕ ಬಲಿ

ಸುಳ್ಯದ ಯುವಕನೋರ್ವ ಬೆಂಗಳೂರಿನಲ್ಲಿ ಅಪಘಾತಕ್ಕೆ ಬಲಿಯಾದ ಘಟನೆ ಮಾ.24 ರಂದು ಸಂಭವಿಸಿದೆ. ಕಲ್ಮಕಾರು ಗ್ರಾಮದ ಧರ್ಮಪಾಲ ಗೌಡ ಬಾಳೆಬೈಲು ಮತ್ತು ಶ್ರೀಮತಿ ವಿಮಲಾಕ್ಷಿ ದಂಪತಿಗಳ ಪುತ್ರ ಯತೀಶ್ ಬಾಳೆಬೈಲು ಮೃತಪಟ್ಟ ದುರ್ದೈವಿ.ಅವಿವಾಹಿತರಾಗಿರುವ ಯತೀಶ್ ಅವರು ಬೆಂಗಳೂರಿನ ವಿಮಾನ ನಿಲ್ದಾಣ ಬಳಿ ಉದ್ಯೋಗದಲ್ಲಿದ್ದು, ಅವರಿಗೆ ಸುಮಾರು 30ವರ್ಷ ವಯಸ್ಸಾಗಿತ್ತು. ಮೃತರು ತಂದೆ ತಾಯಿ, ಸಹೋದರ, ಸಹೋದರಿ, ಬಂಧುಮಿತ್ರರನ್ನು...

ಸುಧೀರ್ ಬೆಳ್ಳಾರ್ಕರ್ ಕೆ.ಆರ್.ಎಸ್. ಪಕ್ಷದ ತೆಕ್ಕೆಗೆ – ಸಂಘಟನಾ ಕಾರ್ಯದರ್ಶಿಯಾಗಿ ನೇಮಕ

ಸುಧೀರ್ ಬೆಳ್ಳಾರ್ಕರ್ ಮಾಜಿ ಶಾಸಕರಾದ ಕೆ ಕುಶಲ ರವರ ಮಗ ಸುಧೀರ್ ಬೆಳ್ಳಾಳ್ಕರ್ ರವರು ಕೆ.ಎಸ್.ಆರ್. ಪಕ್ಷದ ಸಿದ್ದಂತವನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರನ್ನು ತಾಲೂಕು ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.‌ ಈ ಸಂದರ್ಭದಲ್ಲಿ ಕೆ. ಆರ್. ಸ್ ಪಕ್ಷದ ಅಧ್ಯಕ್ಷರು ಅವಿನಾಶ್ ಕಾರಿಂಜಾ. ಪ್ರದಾನ ಕಾರ್ಯದರ್ಶಿ ಜೀವನ್ ನಾರ್ಕೋಡು ಮತ್ತು ಸುಚೇತ್ ಮತ್ತು ಅಖಿಲ್...

ದೇವ : ಯೋಗ ಶಿಬಿರ ಉದ್ಘಾಟನೆ

ದೇವ ಗೆಳೆಯರ ಬಳಗದ ವತಿಯಿಂದ ಒಂದು ವಾರದ ಯೋಗ ಶಿಬಿರವು ಗೆಳೆಯರ ಬಳಗದ ರಂಗ ಮಂದಿರ ದಲ್ಲಿ ಇಂದು ಉದ್ಘಾಟನೆಗೊಂಡಿತು.‌ ಗೆಳೆಯರ ಬಳಗದ ಹಿರಿಯ ಸದಸ್ಯರಾದ ಮೋಹನ್ ಕೆರೆಮೂಲೆ ಉದ್ಘಾಟಿಸಿದರು. ಏ. 24 ರಿಂದ ಏ 29ವರೆಗೆ ಶಿಬಿರ ನಡೆಯಲಿದೆ.
Loading posts...

All posts loaded

No more posts

error: Content is protected !!