ಏ.25 : ಮಲ್ಲಿಕಾರ್ಜುನ ಖರ್ಗೆ ಸುಳ್ಯಕ್ಕೆ – ಜಿ.ಕೃಷ್ಣಪ್ಪ ಪರ ಭರ್ಜರಿ ಪ್ರಚಾರ

ಏ. 25 ರಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಳ್ಯ ಕಾಂಗ್ರೇಸ್ ಅಭ್ಯರ್ಥಿ ಕೃಷ್ಣಪ್ಪ ಪರ ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದು ಸುಳ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಿ ಸಿ ಜಯರಾಮ್ ತಿಳಿಸಿದ್ದಾರೆ ಅವರು ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು. ಅಂದು 11 ಗಂಟೆಗೆ ಸುಳ್ಯಕ್ಕೆ ಆಗಮಿಸಲಿರುವ ಮಲ್ಲಿಕಾರ್ಜುನ ಖರ್ಗೆ ಸುಳ್ಯ...

ಪಿಯುಸಿ ಪರೀಕ್ಷೆಯಲ್ಲಿ ಸಮಾನ ಅಂಕ ಪಡೆದು ವಿಶೇಷ ಸಾಧನೆ ಮಾಡಿದ ಅವಳಿ ಸಹೋದರಿಯರು

ಪಿಯುಸಿ ಪರೀಕ್ಷೆಯಲ್ಲಿ ದ.ಕ ಜಿಲ್ಲೆಯಲ್ಲಿ ಅವಳಿ ಸಹೋದರಿಯರು ವಿಶೇಷ ಸಾಧನೆ ಮಾಡಿ ಸುದ್ದಿಯಾಗಿದ್ದಾರೆ. ಅವಳಿ ಹೆಣ್ಣು ಮಕ್ಕಳು ಪಿಯುಸಿ ಪರೀಕ್ಷೆಯಲ್ಲಿ ಸಮಾನ ಅಂಕ ಪಡೆದು ಎಲ್ಲರೂ ಅಚ್ಚರಿ ಪಡುವಂತೆ ಮಾಡಿದ್ದಾರೆ. ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಪುಣ್ಕೆದಡಿ ಉಮೇಶ್ ಗೌಡ ಪಿ.ಎಚ್. ‌ಮತ್ತು ಗೀತಾ ದಂಪತಿಯ ಪುತ್ರಿಯರಾದ ಸ್ಪಂದನ – ಸ್ಪರ್ಶ ಎಂಬ...
Ad Widget

ಕಡಬ : ಬಿರುಸಿನ ಪ್ರಚಾರ ನಡೆಸಿದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ

ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ವಿವಿಧೆಡೆ ಇಂದು ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಬಿರುಸಿನ ಪ್ರಚಾರ ನಡೆಸಿದರು. ಗೊಳಿತೊಟ್ಟು ಗ್ರಾಮದ ಅಲಂತಾಯ-ಶಿವಾರು ದಲಿತ ಕಾಲೊನಿಗೆ ಭೇಟಿ ಅಲ್ಲಿನ ಸಮಸ್ಯೆಗಳು ಹಾಗೂ ಪ್ರಮುಖ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ಮಾಡಿದರು. ಗೊಳಿತೊಟ್ಟು ಗ್ರಾಮದ ಶಾಂತಿನಗರದಲ್ಲಿ, ಕೊಣಾಲು ಗ್ರಾಮದ ಅರ್ಲದಲ್ಲಿ, ನೆಲ್ಯಾಡಿ ಗ್ರಾಮದ ಮಾದೇರಿಯಲ್ಲಿ, ಕೌಕ್ರಾಡಿ ಗ್ರಾಮದ ಪೊಟ್ಲಡ್ಕ,...

ನಿಂತಿಕಲ್ಲು : ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಈದುಲ್ ಪಿತರ್ ಆಚರಣೆ

ತ್ಯಾಗ ಬಲಿದಾನ ದ ಹಬ್ಬವಾದ ಇದುಲ್ ಪಿತರ್ ಹಬ್ಬವನ್ನು ನಿಂತಿಕಲ್ಲು ಬದ್ರಿಯಾ ಜುಮಾ ಮಸೀದಿಯಲ್ಲಿ ವಿಜೃಂಭಣೆ ಯಿಂದ ಆಚರಿಸಲಾಯಿತು.ಜಮಾತ್ ಖತೀಬ್ ಜಾಪರ್ ಸಹದಿ ಯವರು ಖುತುಬಾ ಕ್ಕೆ ನೇತೃತ್ವ ನೀಡಿ ಈದ್ ಸಂದೇಶ ನೀಡಿದರು. ಮುಸ್ತಪಾ ಜುಹುರಿ, ಜಮಾತ್ ಪದಾದಿಕಾರಿಗಳು. ಸದಸ್ಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಚೂಂತಾರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ, ಬೆಂಕಿ ನಂದಿಸಿದ ಊರವರು ಮತ್ತು ಅಗ್ನಿ ಶಾಮಕ ದಳ

ಅಮರಪಡ್ನೂರು ಗ್ರಾಮದ ಚೂಂತಾರು ಎಂಬಲ್ಲಿ ಇಂದು ಮಧ್ಯಾಹ್ನ 12.00ಗಂಟೆ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಿಡಿ ಉಂಟಾಗಿ ರಸ್ತೆ ಬೀದಿಯ ತರಗೆಲೆ ಮೇಲೆ ಬಿದ್ದು ರಸ್ತೆ ಬದಿಗೆ ಹಾಗೂ ಹತ್ತಿರದ ಖಾಸಗಿ ಜಮೀನಿಗೆ ವ್ಯಾಪಿಸುವ ಹಂತದಲ್ಲಿತ್ತು. ವಿಷಯ ತಿಳಿದ ಸ್ಥಳೀಯ ನಾಗರಿಕರು ಸೇರಿ ಬೆಂಕಿ ವ್ಯಾಪಿಸದಂತೆ ನಿಯಂತ್ರಿಸಲು ಯಶಸ್ವಿಯಾದರು. ಮಾಹಿತಿ ತಿಳಿದು ತಕ್ಷಣ...

ಬಿಜೆಪಿಯಿಂದ ಅಂಗಾರರು ಸ್ಪರ್ಧಿಸಿದರೆ ಸೋಲು ಫಿಕ್ಸ್ ಹಾಗಾಗಿ ಹೊಸ ಮುಖದ ಪರಿಚಯ : ಎಂ.ವೆಂಕಪ್ಪ ಗೌಡ

ಸುಳ್ಯ ಕ್ಷೇತ್ರದಲ್ಲಿ 29 ವರ್ಷಗಳಿಂದ ಶಾಸಕರಾಗಿದ್ದ ಸಚಿವ ಎಸ್.ಅಂಗಾರರು ಈ ಬಾರಿ ಸ್ಪರ್ಧೆ ಮಾಡಿದರೆ ಸೋಲುವುದು ಖಚಿತ ಎಂದು ಅರಿತ ಬಿಜೆಪಿಗರು ಹೊಸ ಮುಖವನ್ನು ನೀಡಿದ್ದಾರೆ. ಆದರೆ ಅವರಿಗೆ ಕ್ಷೇತ್ರದ ಅಭಿವೃದ್ಧಿ, ಇಲ್ಲಿಯ ಸಮಸ್ಯೆಯನ್ನು ವಿಧಾನ ಸೌಧದಲ್ಲಿ ಇಟ್ಟು ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಇದೆಯೇ ಎಂಬ ಬಗ್ಗೆ ಸುಳ್ಯದ ಜನತೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಸುಳ್ಯ...

ಬೆಂಗಳೂರಿನ ಹಣದ ಕುಳವನ್ನು ಅಭ್ಯರ್ಥಿ ಮಾಡುವ ಮೂಲಕ ಕಾಂಗ್ರೆಸ್ ಈ ಕ್ಷೇತ್ರಕ್ಕೆ ಹಾಗೂ ಸುಳ್ಯದ ಪರಿಶಿಷ್ಟ ಜಾತಿಗೆ ಮಾಡಿದ ಅವಮಾನ : ದಂಬೆಕೋಡಿ ಟೀಕೆ

ಬೆಂಗಳೂರಿನ ಹಣದ ಕುಳವನ್ನು ಸುಳ್ಯದ ಅಭ್ಯರ್ಥಿ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಈ ಕ್ಷೇತ್ರಕ್ಕೆ ಹಾಗೂ ಸುಳ್ಯದ ದಲಿತರಿಗೆ ಮಾಡಿದ ಅವಮಾನ ಎಂದು ಬಿಜೆಪಿ ಮಾಧ್ಯಮ ವಕ್ತಾರ ವೆಂಕಟ್ ದಂಬೆಕೋಡಿ ಆರೋಪಿಸಿದರು.ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅನೇಕ ವರ್ಷಗಳಿಂದ ಸುಳ್ಯ ಮೀಸಲೂ ಕ್ಷೇತ್ರವಾಗಿದ್ದು ಪರಿಶಿಷ್ಟ ಜಾತಿಯವರನ್ನು ಮೇಲಕ್ಕೆತ್ತುವ ಉದ್ದೇಶದಿಂದ ಹೊಂದಿದೆ‌....

ಗುತ್ತಿಗಾರು : ಅಮರ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಾಳೆ (ಏ.23) ಅಗ್ನಿ ರಕ್ಷಕ ಯೋಜನೆ ಲೋಕಾರ್ಪಣೆ

ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದಲ್ಲಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏ.23 ರಂದು ಅಗ್ನಿ ರಕ್ಷಕ ಯೋಜನೆ ಲೋಕಾರ್ಪಣೆ ಹಾಗೂ ಯೋಗ ತರಬೇತಿ ಶಿಬಿರ ಸಮಾರೋಪ ಸಮಾರಂಭ ನಡೆಯಲಿದೆ.ಟ್ರಸ್ಟ್ ವತಿಯಿಂದ ಸಾರ್ವಜನಿಕ ಉಪಯೋಗಕ್ಕಾಗಿ ಬೆಂಕಿ ನಂದಿಸುವ ಸಲಕರಣೆಗಳನ್ನು ಖರೀದಿಸಲಾಗಿದ್ದು ಬೆಂಕಿ ಅವಘಡಗಳು ಘಟಿಸಿದ ಸಂದರ್ಭದಲ್ಲಿ ಸಾರ್ವಜನಿಕರು ಕರೆ ಮಾಡಿ ಸಹಕಾರ ಬಯಸಿದರೆ ಟ್ರಸ್ಟ್...

ದಿ.ದೇವಿದಾಸ್ ಕಜ್ಜೋಡಿ ಅವರ ಮೊಮ್ಮಗಳು ಸಾನ್ವಿ ಗೆ ಪಿಯುಸಿ ಯಲ್ಲಿ ಶೇ.95.5 ಅಂಕ

ಕೊಲ್ಲಮೊಗ್ರು ಗ್ರಾಮದ ದಿ.ದೇವಿದಾಸ್ ಕಜ್ಜೋಡಿ ಅವರ ಮೊಮ್ಮಗಳು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿರುವ ಸಾನ್ವಿ.ಎಸ್.ಕೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸೈನ್ಸ್ ನಲ್ಲಿ 573 ಅಂಕ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.ಇವರು ಕುಮಟಾದ ಡಾ| ಎ.ವಿ ಬಾಳಿಗ ಆರ್ಟ್ಸ್ ಮತ್ತು ಸೈನ್ಸ್ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆಗಿದ್ದು, ದಿ.ದೇವಿದಾಸ್ ಕಜ್ಜೋಡಿ ಅವರ...

“ತೊಡಿಕಾನ ಪುರಧೀಶ ಶ್ರೀ ಮಲ್ಲಿಕಾರ್ಜುನ”ಎಂಬ ಭಕ್ತಿಗೀತೆ ಬಿಡುಗಡೆ

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಭಕ್ತಿಗೀತೆಯಾದ 'ತೊಡಿಕಾನ ಪುರಧೀಶ ಶ್ರೀ ಮಲ್ಲಿಕಾರ್ಜುನ' ಎಂಬ ಭಕ್ತಿಗೀತೆಯನ್ನು ತೊಡಿಕಾನ ಜಾತ್ರಾ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಭಕ್ತಿಗೀತೆಯನ್ನು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಯು ಎಂ ಕಿಶೋರ್ ಕುಮಾರ್ ಉಳುವಾರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿಯ ಅಧ್ಯಕ್ಷರಾದ ಚಂದ್ರಶೇಖರ ಆಚಾರ್ಯ ತೊಡಿಕಾನ...
Loading posts...

All posts loaded

No more posts

error: Content is protected !!