- Friday
- August 21st, 2026
ಪ್ರಸಿದ್ಧ ಚಿನ್ನಾಭರಣ ಮಳಿಗೆಗಳಲ್ಲೊಂದಾದ ಜಿ ಎಲ್ ಆಚಾರ್ಯ ಜ್ಯುವೆಲರ್ಸ್ ನವರು ಬೇರೆ ಬೇರೆ ಕಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ವರ್ಷ ಮಹಿಳಾ ದಿನಾಚರಣೆ ಪ್ರಯುಕ್ತ ತಾಲೂಕಿನ ಸಾಧಕ ಮಹಿಳೆಯರನ್ನು ಗುರುತಿಸಿ “ಜಿ ಎಲ್ ವುಮನ್ ಆಫ್ ಗೋಲ್ಡ್” ಎಂದು ತಮ್ಮೆಲ್ಲಾ ಶಾಖೆಗಳಿಂದ ಈರ್ವರನ್ನು ಆಯ್ಕೆ ಮಾಡಿದ್ದು ಸುಳ್ಯ ಶಾಖೆಯಿಂದ ಸುಳ್ಯದ ಉಪನ್ಯಾಸಕರು, ವ್ಯಕ್ತಿತ್ವ ವಿಕಸನ ತರಬೇತುದಾರರು...
ಮಾರ್ಚ್ 4 ರಂದು ಕಡಬದಲ್ಲಿ ವಿದ್ಯಾರ್ಥಿನಿಯರ ಮೇಲಿನ ಅಸಿಡ್ ದಾಳಿಯನ್ನು ಖಂಡಿಸಿ ವಿದ್ಯಾರ್ಥಿನಿಯರಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಮತ್ತು ವಿದ್ಯಾರ್ಥಿನಿಯರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕೆಂದು ಮಾನ್ಯ ತಹಸೀಲ್ದಾರ್ ರವರ ಮೂಲಕ ಮನವಿ ಮಾಡಲಾಯಿತು ಹಾಗೂ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕಡಬ ಠಾಣಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾನ್ಯ ಶಾಸಕರಾದ...
ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಇವರು 2023 ಅಕ್ಟೋಬರ್ ನಲ್ಲಿ ನಡೆಸಿದ ಪೋಸ್ಟ್ ಗ್ರಾಜ್ಯುವೇಷನ್ ಸರ್ಟಿಫಿಕೇಟ್ ಇನ್ ನ್ಯೂಟ್ರಿಷಿಯನ್ ಆಂಡ್ ಡಯೆಟಿಕ್ಸ್ (PGCND)ಪರೀಕ್ಷೆಯಲ್ಲಿ ಮೋನಿಷಾ ಜಿ.ಎಸ್. ಗುಡ್ಡೆಮನೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ. ದೇವಚಳ್ಳ ಗ್ರಾಮದ ಸಮುದಾಯ ಆರೋಗ್ಯ ಅಧಿಕಾರಿಯಾಗಿರುವ ಇವರು ಅಜ್ಜಾವರ ಗ್ರಾಮದ ಶಿರಾಜೆ ಗೋಪಾಲಗೌಡ ಮತ್ತು ತೇಜಸ್ವಿನಿ ದಂಪತಿಗಳ ಪುತ್ರಿ.
ಕಡಬ ಕಾಲೇಜು ವಿದ್ಯಾರ್ಥಿಗಳಿಗೆ ಆಸಿಡ್ ಎರಚಿದ ಪ್ರಕರಣ. ವಿದ್ಯಾರ್ಥಿಗಳ ಭಾವನೆಗಳ ಜೊತೆಗೆ ಚೆಲ್ಲಾಟ ಮತ್ತು ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುವ ಸಂದರ್ಭಗಳು ಎದುರಾದರೆ ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಬಂಧಿತ ಆರೋಪಿಗೆ ಕಠಿಣ ಶಿಕ್ಷೆಗೆ ಗುರಿಪಡಿಸುವ ಜೊತೆಗೆ ಈತನ ಹಿಂದೆ ಇರುವ ಕಾಣದ ಕೈಗಳು ಹಾಗೂ ಈ ಕೃತ್ಯಕ್ಕೆ ಪ್ರೇರಣೆ ನೀಡುವ ಸಮಾಜಘಾತುಕ ಶಕ್ತಿಗಳನ್ನು ಪತ್ತೆ ಹಚ್ಚಿ ಅವರನ್ನು...
ಸುಳ್ಯ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ,ಮೈಸೂರು ನಡೆಸಿದ ಎಂಎಸ್ಸಿ 2020-21 ರ ಜನವರಿ ಬ್ಯಾಚ್ ನ ಸೈಕಾಲಜಿ ವಿಭಾಗದ ಸ್ನಾತಕೋತ್ತರ ಪರೀಕ್ಷೆಯಲ್ಲಿಸಾವಿತ್ರಿ ಬಿ ಅವರು 6 ನೇ ರಾಂಕ್ ಪಡೆದುಕೊಂಡಿದ್ದಾರೆ. ಮಾರ್ಚ್ 3 ರ ಭಾನುವಾರ ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ನಡೆದ ಘಟಿಕೋತ್ಸವದ ವೇಳೆ ಇವರಿಗೆ ಪದವಿ ಪ್ರದಾನ ಮಾಡಲಾಗಿದೆ. ಪಿಯುಸಿ ವಿದ್ಯಾಭ್ಯಾಸದ ನಂತರ ನರ್ಸಿಂಗ್...
ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಇಂದು ಸುಳ್ಯ ಹಾಗೂ ಅಜ್ಜಾವರದಿಂದ ಏಕಕಾಲಕ್ಕೆ ಹಸಿರುವಾಣಿ ಮೆರವಣಿಗೆ ನಡೆದು ಕಲವರ ತುಂಬುವ ಮೂಲಕ ದೈವಕಟ್ಟು ಮಹೋತ್ಸವಕ್ಕೆ ಅದ್ದೂರಿ ಚಾಲನೆ ದೊರೆಯಿತು. https://youtu.be/9Ah-nJ-7qpQ?si=dhdOweqpynKMUTlj ಇದಕ್ಕೆ ಮೊದಲು ಸುಳ್ಯದಿಂದ ಬೆಳಗ್ಗೆ ಚೆನ್ನಕೇಶವ ದೇವಸ್ಥಾನದಲ್ಲಿ ಪೂಜೆ ನಡೆದು ಬಳಿಕ ವಾಹನ ಮೆರವಣಿಗೆಯ ಮೂಲಕ ವಿವೇಕಾನಂದ ಸರ್ಕಲ್ ಬಳಿಯಿಂದಾಗಿ ಹಸಿರುವಾಣಿ ಮೆರವಣಿಗೆ ಸಾಗಿ ಬಂತು...
ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಗಳಿಗೆ ಆಸಿಡ್ ಎರಚಿರುವ ಪ್ರಕಾರಣದ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಜೊತೆಗೆ ಶಾಲಾ ಶಿಕ್ಷಣ ಇಲಾಖೆ ಮಕ್ಕಳ ಪಾಠ ಸಮಯದಲ್ಲಿ ಮಕ್ಕಳ ಚಲನವಲನದ ಬಗ್ಗೆ ಗಮನಹರಿಸಬೇಕು. ಶಾಲಾ ಸಮಗ್ರ ಶಿಕ್ಷಣ ನೀತಿ ಅಡಿಯಲ್ಲಿ ನಾಳೆ ಶಿಕ್ಷಕರು ಕೂಡ ಸಮಯಕ್ಕೆ ಸರಿಯಾಗಿ...
ಎಣ್ಮೂರು ಸಮೀಪದ ಕಲ್ಲೇರಿಯ ಮನೆಯೊಂದಕ್ಕೆ ಮಾ.5ರಂದು ಬೆಳಗ್ಗೆ ಎನ್ಐಎ ಅಧಿಕಾರಿಗಳ ತಂಡವೊಂದು ದಾಳಿ ನಡೆಸಿ ಪರಿಶೀಲನೆ ಮಾಡಿರುವುದಾಗಿ ತಿಳಿದುಬಂದಿದೆ.ಬೆಳ್ಳಾರೆ ಠಾಣಾ ವ್ಯಾಪ್ತಿಯ ಕಲ್ಲೇರಿಯ ಮನೆಯವರೊಬ್ಬರ ಕೊಠಡಿಯಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬರು ಬಾಡಿಗೆಗಿದ್ದು ಅವರ ಕೊಠಡಿಗೆ ಎನ್ಐಎ ಅಧಿಕಾರಿಗಳ ತಂಡವು ದಿಢೀರ್ ದಾಳಿ ನಡೆಸಿ ಪರಿಶೀಲಿಸಲಾಗಿದೆ. ಮನೆಯವರನ್ನು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.
ದೊಡ್ಡತೋಟದ ಅರ್ನೋಜಿ ಡಿಯಪ್ಪ ಗೌಡರ ಪುತ್ರ ರವಿಕುಮಾರ (48) ಅನಾರೋಗ್ಯದಿಂದ ಮೃತಪಟ್ಟ ಘಟನೆ ಇಂದು ನಡೆದಿದೆ. ಇವರು ಬೆಂಗಳೂರಿನಲ್ಲಿ ನೆಲೆಸಿದ್ದರು. ಮೃತರು ಪತ್ನಿ ಸುನಿತಾ, ಪುತ್ರಿ ಮೋಕ್ಷಿತಾ, ಪುತ್ರ ಮೋಹಿತ್, ತಂದೆ, ತಾಯಿ, ಸಹೋದರ, ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ
Loading posts...
All posts loaded
No more posts
