- Tuesday
- July 28th, 2026
ಸುಳ್ಯ, ಜೂ.12: ಜೂನ್ 10ರಂದು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ರಸ್ತೆಯ ಶ್ರೀದೇವಿ ಕಾಂಪ್ಲೆಕ್ಸ್ ಎದುರು ಸಂಭವಿಸಿದ್ದ ಸ್ಕೂಟಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಿ.ಎ. ಸುಬ್ರಹ್ಮಣ್ಯ ಅವರು ಚಿಕಿತ್ಸೆ ಫಲಕಾರಿಯಾಗದೆ ಜೂನ್ 12ರಂದು ಮೃತಪಟ್ಟಿದ್ದಾರೆ. ಜೂನ್ 10ರಂದು ಸಂಜೆ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ದ್ವಿಚಕ್ರ ವಾಹನವು ಸುಬ್ರಹ್ಮಣ್ಯ ಅವರಿಗೆ ಢಿಕ್ಕಿ ಹೊಡೆದಿತ್ತು....
ಹರಿಹರ ಪಳ್ಳತ್ತಡ್ಕ ಗ್ರಾಮದ ಕಜ್ಜೋಡಿ ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಧರ್ ಭಾಗವತ್ ರವರು ಜೂ.11 ರಂದು ರಾತ್ರಿ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಅಧ್ಯಾಪಕ ವೃತ್ತಿಯಲ್ಲಿ ಧೀರ್ಘ ಕಾಲ ಸೇವೆ ಸಲ್ಲಿಸಿದ್ದ ಇವರು ಸಹಾಯಕ ಪ್ರಾಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ಹಾಗೂ ಉಪನ್ಯಾಸಕರಾಗಿ ಕಡಬ, ಗುತ್ತಿಗಾರು, ದುಗ್ಗಲಡ್ಕ ಹಾಗೂ ಪಂಜ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ 22 ವರ್ಷಗಳ ಹಿಂದೆ ನಿವೃತ್ತಿಯನ್ನು...
ಕಳಂಜ ಗ್ರಾಮದ ಅಯ್ಯನಕಟ್ಟೆ ನಿವಾಸಿ ಇಬ್ರಾಹಿಂ ಅಜಪಿಲ(86) ಎಂಬುವವರುಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಜೂನ್ 04 ರಂದು ನಿಧನರಾದರು. ಅವರು ಪುತ್ರರಾದ ಮುಹಮ್ಮದ್, ಅಬ್ದುಲ್ ಖಾದರ್, ಅಬೂಬಖರ್ ಸೆಲೆಖ್ಟ್ ಹಾಗೂ ಇಬ್ಬರು ಪುತ್ರಿಯರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.
ಉಬರಡ್ಕ ಮಿತ್ತೂರು ಗ್ರಾಮದ ಉರುಂಡೆ ನಾರಾಯಣ ಗೌಡರು ಮೇ 30 ರಂದು ಅಲ್ಪಕಾಲ ಅಸೌಖ್ಯ ದಿಂದ ಸ್ವಗೃಹದಲ್ಲಿ ನಿಧನರಾದರು.ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸೀತಮ್ಮ, ಪುತ್ರ ವಸಂತ, ಪುತ್ರಿಯರಾದ ದಮಯಂತಿ ಮತ್ತು ಗಿರಿಜಾ, ಸೊಸೆ ನಳಿನಿ ಹಾಗೂ ಮೊಮ್ಮಮ್ಮಕ್ಕಳನ್ನು ಅಗಲಿದ್ದಾರೆ..
ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದದಲ್ಲಿ ವಾಸವಾಗಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ನ ನಿವೃತ್ತ ಚೀಫ್ ಮ್ಯಾನೇಜರ್ ಪ್ರಸಾದ್ ಕಳಿಗೆ(69) ಗುರುವಾರ ನಿಧನರಾದರು. ಅವರು ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ನಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ಮೃತರು ಪತ್ನಿ, ಇಬ್ಬರು ಪುತ್ರರು ಸಹೋದರ, ಸಹೋದರಿ, ಬಂಧು-ಮಿತ್ರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ದೇವಚಳ್ಳ ಗ್ರಾಮದ ಅಂಬೆಕಲ್ಲು ದಿ.ರಾಮಣ್ಣ ಗೌಡರ ಪತ್ನಿ ಚಂದ್ರಾವತಿ ಅಂಬೆಕಲ್ಲು ಇವರು ವಯೋಸಹಜ ಅನಾರೋಗ್ಯದಿಂದ ಮೇ.27 ರಂದು ನಿಧನರಾದರು. ಮೃತರಿಗೆ 82 ವರ್ಷ ವಯಸ್ಸಾಗಿತ್ತು.ಮೃತರು ಮಕ್ಕಳಾದ ಜಯರಾಮ್ ಅಂಬೆಕಲ್ಲು, ಮನಮೋಹನ್ ಅಂಬೆಕಲ್ಲು, ಕಲಾವತಿ ಮಂಡೆಕೋಲು ಹಾಗೂ ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.
ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಹಳೆಮನೆ ಸುಂದರ ಗೌಡ ರವರು ಅಲ್ಪಕಾಲದ ಅಸೌಖ್ಯದಿಂದ ಮೇ.20ರಂದು ಬೆಳಿಗ್ಗೆ ನಿಧನರಾದರು. ಮೃತರಿಗೆ 61 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶೀಲಾವತಿ, ಪುತ್ರಿಯರಾದ ಜಯಶ್ರೀ, ಜಶ್ಮಿತಾ, ಪುತ್ರ ಹಿತೇಶ್ ಹಾಗೂ ಸಹೋದರರಾದ ಕುಂಞಣ್ಣ ಗೌಡ, ಗಂಗಾಧರ ಗೌಡ, ಸಹೋದರಿ ಜಯಂತಿ ಹಾಗೂ ಅಳಿಯಂದಿರು, ಮೊಮ್ಮಕ್ಕಳು ಮತ್ತು ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.
ಸುಬ್ರಹ್ಮಣ್ಯ ಮೇ 09 : ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಬಸವನಮೂಲೆಯಲ್ಲಿ ವಾಸವಿರುವ ದಿ. ವೀರಪ್ಪಗೌಡ ನಡುತೋಟ ಅವರ ಪತ್ನಿ ಹೊನ್ನಮ್ಮ(73) ಇಂದು ಶನಿವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ. ಅವರು ಪುತ್ರ ವಿಜಯ್, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಹಿರಿಯ ಜಿಲ್ಲಾ ಸಹಕಾರಿ ಧುರೀಣ ಸುಳ್ಯದ ಪಿ.ಬಿ ದಿವಾಕರ ರೈ ಅವರ ಧರ್ಮಪತ್ನಿ ಶ್ರೀಮತಿ ವಿದ್ಯಾ ದಿವಾಕರ ರೈ ರವರು ಅಲ್ಪಕಾಲದ ಅಸೌಖ್ಯದಿಂದ ಏ.05 ರಂದು ಸಂಜೆ ನಿಧನರಾದರು. ಮೃತರಿಗೆ 55 ವರ್ಷ ವಯಸ್ಸಾಗಿತ್ತು. ಅವರು ಹಲವು ಸಮಯಗಳಿಂದ ಅಸೌಖ್ಯದಿಂದದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆ ಕಾರಣದಿಂದ ದಿವಾಕರ ರೈ ಅವರು...
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ಕ್ಷೇತ್ರೇಶರಾಗಿದ್ದ ಪೆರುವಾಜೆ ಗ್ರಾಮದ ಪೆರುವಾಜೆಗುತ್ತು ಅಮರನಾಥ ಶೆಟ್ಟಿಯವರು ಮೇ 01ರಂದು ಮುಂಜಾನೆ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಪುಷ್ಪಾವತಿ ಪಾಲ್ತಾಡು, ಪುತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪಾಲ್ತಾಡು ನಿರಂಜನ ಶೆಟ್ಟಿ, ಪುತ್ರಿ ಶ್ರೀಮತಿ ನಿವೇದಿತಾ ಶೆಟ್ಟಿ, ಅಳಿಯ,...
Loading posts...
All posts loaded
No more posts
