ಸಂಜೀವ ಶೆಟ್ಟಿ ಪಾಂಡೇಲುಗುತ್ತು ನಿಧನ

ಬೆಳ್ಳಾರೆ ಗ್ರಾಮದ ದರ್ಖಾಸ್ತು ನಿವಾಸಿ ಪಾಂಡೇಲು ಗುತ್ತು ಸಂಜೀವ ಶೆಟ್ಟಿಯವರುಜ 20ರಂದು ನಿಧನರಾದರು.ಅವರಿಗೆ 76 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ದಿನೇಶ್ ದರ್ಖಾಸ್ತು, ಪುತ್ರಿಯರಾದ ಶ್ರೀಮತಿ ದೀಪ, ದಿವ್ಯ ಚಂದ್ರಶೇಖರ ನಂಜೆ, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

ಲೀಲಾವತಿ ರೈ ಬೆಳ್ಳಿಪ್ಪಾಡಿ ನಿಧನ

ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಗುತ್ತು ಮನೆಯ ಹಿರಿಯರಾದ ಲೀಲಾವತಿ ರೈ ಬೆಳ್ಳಿಪ್ಪಾಡಿ ಅವರು ಜ.20ರಂದು ಸಂಜೆ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.ಅವರಿಗೆ 90 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಚಂದ್ರಹಾಸ ರೈ, ಸದಾನಂದ ರೈ, ಜಗದೀಶ ರೈ, ರಾಮಕೃಷ್ಣ ರೈ ಹಾಗೂ ಪುತ್ರಿಯರಾದ ನಳಿನಿ ರೈ, ಜಯಂತಿ ರೈ, ಪವಿತ್ರ ರೈ ಹಾಗೂ ಸೊಸೆಯಂದಿರು, ಬಂಧುಮಿತ್ರರು...
Ad Widget

ದೇರಣ್ಣ ಗೌಡ ಕನ್ನಡ್ಕ ನಿಧನ

ಗುತ್ತಿಗಾರು ಗ್ರಾಮದ ಪೈಕ ದೇರಣ್ಣ ಗೌಡ ಕನ್ನಡ್ಕ ರವರು ಅಲ್ಪಕಾಲದ ಅಸೌಖ್ಯದಿಂದ ಜ.18 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಬಾಲಕಿ, ಪುತ್ರರಾದ ಚಿದಾನಂದ ಕನ್ನಡ್ಕ, ದಯಾನಂದ ಕನ್ನಡ್ಕ, ಪುತ್ರಿ ಶ್ರೀಮತಿ ನೇತ್ರಾವತಿ ಪುರುಷೋತ್ತಮ ಸೋಣಂಗೇರಿ ಕಲ್ಲಾಜೆ, ಸೊಸೆಯಂದಿರು ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

ನಿಧನ : ಕಮಾಲುದ್ದೀನ್

ಸುಳ್ಯದ ಪ್ರತಿಷ್ಠಿತ ದಿನಸಿ ಮಳಿಗೆ ಜನತಾ ಸ್ಟೋರ್ಸ್ ನಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರತರಾಗಿದ್ದ ಮಂಗಳೂರು ಮೂಲದ ಉದ್ಯಮಿ ಕಮಾಲುದ್ದೀನ್(54) ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ನಿಧನ ಹೊಂದಿದರು.ಮೃತರು ಕೊಡುಗೈದಾನಿ, ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ನಿರ್ಮಾತೃ ಹಾಗೂ ಸುಳ್ಯ ಅನ್ಸಾರಿಯ ಅನಾಥಾಲಯದ ಮಾಜಿ ಅಧ್ಯಕ್ಷರಾಗಿದ್ದ ದಿವಂಗತ ಹಾಜಿ ಮಹಮ್ಮದ್ ಜನತಾ ಅವರ ಪತ್ನಿಯ...

ಪಡ್ಪಿನಂಗಡಿ ಶಿವಗೌರಿ ಕಲ್ಯಾಣ ಮಂಟಪದ ಮಾಲಕ ಸುರೇಶ್ ಕುಮಾರ್ ನಡ್ಕ ನಿಧನ

ಪಡ್ಪಿನಂಗಡಿ ಶಿವಗೌರಿ ಕಲ್ಯಾಣ ಮಂಟಪದ ಮಾಲಕ ಸುರೇಶ್ ಕುಮಾರ್ ನಡ್ಕ ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು  ನಿಧನರಾದರು. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಅವರಿಗೆ ಹೃದಯದ ಶಸ್ತ್ರಚಿಕಿತ್ಸೆ ನಡೆದಿತ್ತು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಕಲ್ಮಡ್ಕ ಗ್ರಾಮ ಪಂಚಾಯತ್ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ,...

ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕಿ ಕಮಲಾಕ್ಷಿ.ವಿ ಶೆಟ್ಟಿ ನಿಧನ

ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿರುವ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಕಮಲಾಕ್ಷಿ.ವಿ ಶೆಟ್ಟಿ ಅವರು ಅಲ್ಪಕಾಲದ ಅಸೌಖ್ಯದಿಂದ ಜ.07 ರಂದು ಮುಂಜಾನೆ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

ನಿಧನ : ಸೋಮಶೇಖರ ಕೆರೆಕ್ಕೋಡಿ

ಹರಿಹರ ಪಳ್ಳತ್ತಡ್ಕ ಗ್ರಾಮದ ಕೆರೆಕ್ಕೋಡಿ ಸೋಮಶೇಖರ ಎಂಬುವವರು ಜ.05 ರಂದು ಮದ್ಯಾಹ್ನ 2:00 ಗಂಟೆಗೆ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ(ಜ.04) ರಾತ್ರಿ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು(ಜ.05) ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.ಮೃತರಿಗೆ 56 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಶ್ರೀಮತಿ ಬೇಬಿ, ಪುತ್ರಿಯರಾದ...

ಕೊಡಿಯಾಲ : ಕೆರೆಗೆ ಬಿದ್ದು ತಾಯಿ ಹಾಗೂ ಮಗು ಮೃತ್ಯು

ಕೊಡಿಯಾಲ ಗ್ರಾಮದ ಆರ್ವಾರ ಎಂಬಲ್ಲಿ ತಾಯಿ ಹಾಗೂ ಮಗು ಕೆರೆಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದ್ದು, ಹರೀಶ್ ಆರ್ವಾರ ಎಂಬುವವರ ಪತ್ನಿ ಮಧುಶ್ರೀ ಹಾಗೂ 2 ವರ್ಷದ ಮಗು ಧ್ವನಿ ಮೃತಪಟ್ಟವರು. ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ವೆಂಕಟ್ರಮಣ ಗೌಡ ಹುಲಿಮನೆ ನಿಧನ

ಜಾಲ್ಸೂರು ಗ್ರಾಮದ ಹುಲಿಮನೆಯವರಾದ ವೆಂಕಟ್ರಮಣ ಗೌಡರು ಬೇಂಗಮಲೆಯಲ್ಲಿ ನೆಲೆಸಿದ್ದರು. ಅಲ್ಪಕಾಲದ ಅಸೌಖ್ಯದಿಂದ ಜ.1 ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 89 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ , ಓರ್ವ ಪುತ್ರ, ನಾಲ್ವರು ಪುತ್ರಿಯರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

ಗುತ್ತಿಗಾರು : ಮೋಹಿನಿ ಬಲ್ಬೇರಿ ನಿಧನ

ಗುತ್ತಿಗಾರು ಗ್ರಾಮದ ಬಲ್ಬೇರಿ(ಪಾಲ್ತಾಡಿ) ವಾಚಣ್ಣ ಗೌಡರ ಧರ್ಮಪತ್ನಿ ಶ್ರೀಮತಿ ಮೋಹಿನಿ ಇವರು ಹೃದಯಾಘಾತದಿಂದ ಜ.1 ರಂದು ನಿಧನರಾದರು.ಇವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರಿಯರಾದ ಶ್ರೀಮತಿ ಭವ್ಯ ಗಣೇಶ ನಾವೂರು, ಶ್ರೀಮತಿ ಉಮಾ ಚೇತನ್ ಇಟ್ಟಿಗುಂಡಿ, ಶ್ರೀಮತಿ ಉಷಾ ದಯಾನಂದ ಹಾಗೂ ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!