ಮಂಡೆಕೋಲು ಗ್ರಾ.ಪಂ.ಸಿಬ್ಬಂದಿ ವಾಣಿಶ್ರೀ ನಿಧನ

ಮಂಡೆಕೋಲು ಗ್ರಾಮ ಪಂಚಾಯತ್ ಸಿಬ್ಬಂದಿ ಶ್ರೀಮತಿ ವಾಣಿಶ್ರೀ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿನ್ನೆ ತಡರಾತ್ರಿ ನಿಧನರಾದರು.ಅವರಿಗೆ 35 ವರ್ಷ ವಯಸ್ಸಾಗಿತ್ತು.ಕೆಲ ತಿಂಗಳ ಹಿಂದೆ ಅಸೌಖ್ಯಕ್ಕೊಳಗಾಗಿದ್ದ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮರಳಿದ್ದರು. ವಾರದ ಹಿಂದೆ ಮತ್ತೆ ಅಸೌಖ್ಯ ಉದ್ಭವಿಸಿದಾಗ ಮಂಗಳೂರಿಗೆ ದಾಖಲಿಸಲಾಗಿತ್ತು. ಆದರೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.ಮೃತರು ಪತಿ ಸಂತೋಷ್ ಮಾವಂಜಿ ಹಾಗೂ ಇಬ್ಬರು...

ಆಲೆಟ್ಟಿ ಸಿ.ಎ. ಬ್ಯಾಂಕ್ ಉದ್ಯೋಗಿ ರಾಜೇಶ್ ಅಲೆಟ್ಟಿ ನಿಧನ

ಅಲೆಟ್ಟಿ ಸಿ.ಎ. ಬ್ಯಾಂಕ್ ಉದ್ಯೋಗಿ ರಾಜೇಶ್ ಅಲೆಟ್ಟಿ ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನ ರಾಗಿರುತ್ತಾರೆ.ಯುವಕ ಮಂಡಲದ ಅಧ್ಯಕ್ಷ ರಾಗಿ,ಭಜನ ಸಂಘದ ಸದಸ್ಯ ರಾಗಿ ಸೇೇವೆ ಸಲ್ಲಿಸಿದ್ದಾರೆ
Ad Widget

ಕುಂಞಣ್ಣ ಆಳ್ವ ಕಲ್ಲಡ್ಕ

ಪೆರುವಾಜೆ ಗ್ರಾಮದ ಪೂವಾಜೆ ಕಿಟ್ಟಣ್ಣ ರೈ ಯವರ ಪತ್ನಿ ಶಾರದಾ ರೈ ಅವರ ತಂದೆ ಕುಂಞಣ್ಣ ಆಳ್ವ (೮೫) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಪುತ್ರ ಪುತ್ತೂರಿನ ಸಾಯಿ ಸ್ಟುಡಿಯೋ ಮಾಲಕ ಶಿವ ಪ್ರಸಾದ್ ಆಳ್ವ ಹಾಗೂ ಶಾರದಾ ರೈ ಸೇರಿ ಆರು ಪುತ್ರಿಯರನ್ನು ಅಗಲಿದ್ದಾರೆ. ಇವರು ಕಲ್ಲಡ್ಕದ ಪ್ರಗತಿ ಪರ ಕೃಷಿಕರಾಗಿ, ಕಲ್ಲಡ್ಕ ತರವಾಡು...

ಕೆ ಬಿ ಅಬ್ದುಲ್ ಖಾದರ್ ಹಾಜಿ ಪೇರೋಲಿ ನಿಧನ

ಎಸ್ ಎಸ್ ಎಫ್ ಜಾಲ್ಸೂರು ಸೆಕ್ಟರ್ ಇದರ ಮಾಜಿ ಅಧ್ಯಕ್ಷರು ಎಸ್ ಎಸ್ ಎಫ್ ಸುಳ್ಯ ಡಿವಿಷನ್ ಕಾರ್ಯಕಾರಿ ಸಮಿತಿ ಸದಸ್ಯರು ಅಬ್ದುಲ್ ನಾಸಿರ್ ಬಾಹಸನಿ ಹಾಗೂ ಎಸ್ ಎಸ್ ಎಫ್ ಸುಣ್ಣ ಮೂಲೆ ಶಾಖೆಯ ಕೋಶಾಧಿಕಾರಿ ಕಯಬು ಇವರ ತಂದೆಯವರಾದ ಕೆ ಬಿ ಅಬ್ದುಲ್ ಖಾದರ್ ಹಾಜಿ ಪೇರೋಲಿ (69) ಮೇ 24 ರಂದು...

ಕೆಂಚಮ್ಮ ಚಿಕ್ಮುಳಿ ನಿಧನ

ಗುತ್ತಿಗಾರು ಗ್ರಾಮದ ಚಿಕ್ಮುಳಿ ಕೆಂಚಮ್ಮ (೭೮) ಮೇ. ೨೩ ರಂದು ನಿಧನರಾದರು. ಮೃತರು ಪುತ್ರರಾದ ಕೋಮಲಾಂಗ, ಗೋಪಾಲಕೃಷ್ಣ, ನಾಗೇಶ , ಪುತ್ರಿಯರಾದ ದೇವಿ, ರೋಹಿಣಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಜನಾರ್ಧನ ಮಾವಿನಕಟ್ಟೆ ನಿಧನ

ದೇವಚಳ್ಳ ಗ್ರಾಮದ ಮಾವಿನಕಟ್ಟೆ ಜನಾರ್ದನ ಗೌಡರವರು ಅಸೌಖ್ಯದಿಂದ ಮೇ ೨೩ ರಂದು ಸ್ವಗೃಹದಲ್ಲಿ ನಿಧನರಾದರು.ಮೃತರು ಪತ್ನಿ ಮೀನಾಕ್ಷಿ, ಪುತ್ರರಾದ ಸುಬ್ರಹ್ಮಣ್ಯ ಅರಣ್ಯ ಇಲಾಖೆಯ ರಾಜೇಶ್, ಗಾಯಕ ಮತ್ತು ಅಧ್ಯಾಪಕ ಶಶಿಧರ, ಜಯಂತ, ಅಶೋಕ ಹಾಗೂ ಪುತ್ರಿಯರಾದ ಶ್ರೀಮತಿ ಭಾರತಿ, ಶ್ರೀಮತಿ ಜ್ಯೋತಿ,ಅಳಿಯಂದಿರು, ಸೊಸೆಯಂದಿರನ್ನು ಅಗಲಿದ್ದಾರೆ.ಜನಾರ್ಧನ ಗೌಡರವರು ಮೆಕ್ಯಾನಿಕಲ್ ವೃತ್ತಿ ಮಾಡುತ್ತಿದ್ದ ಅವರು ಯಕ್ಷಗಾನ ಕಲಾವಿದರಾಗಿಯೂ ಜಯಪ್ರಿಯರಾಗಿದ್ದದರು....

ಮಣಿಕ್ಕಾರ ಟ್ಯಾಪಿಂಗ್ ಕಾರ್ಮಿಕ ಆತ್ಮಹತ್ಯೆ

ಪೆರುವಾಜೆ ಗ್ರಾಮದ ಮಣಿಕ್ಕಾರ ಎಂಬಲ್ಲಿ ವೃದ್ದರೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ.23 ರಂದು ನಡೆದಿದೆ.ಮಣಿಕ್ಕಾರ ಕೋಡಿಯಡ್ಕ ನಿವಾಸಿ ಶಬರಿನಾಥನ್ (70) ಎಂಬವರು ಮನೆಯ ಸಮೀಪದ ಗೇರು ಮರಕ್ಕೆ ಲುಂಗಿಯಿಂದ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದುಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಬ್ಬರ್ ಟ್ಯಾಪಿಂಗ್ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದ ಇವರು ಮಾನಸಿಕ ಖಿನ್ನತೆಗೆ ಒಳಪಟ್ಟು...

ವಿದ್ಯುತ್ ಶಾಕ್ ವಿದ್ಯಾರ್ಥಿ ಮೃತ್ಯು

ಕೊಡಿಯಾಲ ಗ್ರಾಮದ ರಾಮಕುಮೇರು ಎಂಬಲ್ಲಿ ವಿದ್ಯಾರ್ಥಿಯೊಬ್ಬ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಘಟನೆ ಮೇ. 18 ರಂದು ಸಂಜೆ ನಡೆದಿದೆ.ರಾಮಕುಮೇರು ದಿ. ಸೋಮಶೇಖರ ಕುಂದಲ್ಪಾಡಿ ಎಂಬವರ ಪುತ್ರ ನಿಶಾಂತ್ (17 ) ಮನೆಯ ಸಮೀಪದ ಮಾವಿನ ಮರದಿಂದ ಅಲ್ಯುಮಿನಿಯಂ ಗಳೆಯಿಂದ ಮಾವಿನ ಹಣ್ಣನ್ನು ಕೊಯ್ಯುತ್ತಿರುವಾಗ ಸಮೀಪವಿದ್ದ ವಿದ್ಯುತ್ ಲೈನ್‌ಗೆ ಗಳೆ ತಾಗಿ ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿ...

ಜನಾರ್ಧನ ಶಿಲ್ಪಿ ಬಿಲದ್ವಾರ ನಿಧನ

ಹಲವು ವರ್ಷಗಳಿಂದ ಸುಬ್ರಹ್ಮಣ್ಯ ದಲ್ಲಿ ಹಿರಿಯ ಮರದ ಶಿಲ್ಪಿಯಾಗಿದ್ದ ಜನಾರ್ದನ ಆಚಾರ್ಯ (82) ಬಿಲದ್ವಾರ ಮೇ ೧೮ ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರು ಪತ್ನಿ , ಆರು ಜನ ಪುತ್ರಿಯರು, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಸಂತೋಷ್ ಡಿಸೋಜ ನಾಯರ್ ಕೆರೆ ನಿಧನ

ಕೂತ್ಕುಂಜ ಗ್ರಾಮದ ನಾಯರ್ ಕೆರೆ ಪಂಜ ಖಾಸಗಿ ಬಸ್ ನಿಲ್ದಾಣದಲ್ಲಿ ಅಮರ ಸುದ್ದಿ ಪತ್ರಿಕೆ ಏಜೆಂಟರಾಗಿದ್ದ ಜೆರಾಲ್ಡ್ ಡಿಸೋಜ ರ ಏಕೈಕ ಪುತ್ರ ಸಂತೋಷ್ ಡಿಸೋಜ (20) ಅಸೌಖ್ಯದಿಂದ ಮೇ.೧೭ ರಂದು ನಿಧನರಾದರು. ಅನಾರೋಗ್ಯಕ್ಕೊಳಗಾಗಿದ್ದ ಸಂತೋಷ್ ನನ್ನು ಪುತ್ತೂರಿನ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟರೆಂದು ತಿಳಿದುಬಂದಿದೆ. ತಂದೆ, ತಾಯಿ ಫಿಲೋಮಿನಾ ರನ್ನುಅಗಲಿದ್ದಾರೆ.
Loading posts...

All posts loaded

No more posts

error: Content is protected !!