- Wednesday
- July 29th, 2026
ಉಬರಡ್ಕ ಮಿತ್ತೂರು ಗ್ರಾಮದ ನೀರಬಿದಿರೆ ವಿನ್ಸೆಂಟ್ ಡಿಸೋಜ ಅಲ್ಪಕಾಲದ ಅಸೌಖ್ಯದಿಂದ ಜೂ.4 ರಂದು ನಿಧನರಾದರು. ಮೃತರು ತಾಯಿ, 7 ಮಂದಿ ಸಹೋದರಿಯರು ಹಾಗೂ ಓರ್ವ ಸಹೋದರರನ್ನು ಅಗಲಿದ್ದಾರೆ.
ಬೆಳ್ಳಾರೆ ಗ್ರಾಮದ ಕಾವಿನಮೂಲೆ ನಿವಾಸಿ, 'ಪ್ರಶಾಂತ್' ಆಟೋದ ಮಾಲಕ ಬಾಬು ಆ್ಯಂಟನಿ ಡಿ ಸೋಜಾರವರು ಅಸೌಖ್ಯದಿಂದ ಜೂ.7ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 61 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಮತ್ತು ಓರ್ವ ಪುತ್ರ, ಕುಟುಂಬಸ್ಥರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಕೆಲ ದಿನಗಳಿಂದ ಅಸೌಖ್ಯಕ್ಕೊಳಗಾಗಿದ್ದ ಇವರಿಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.ಸುಮಾರು 1...
ಗುತ್ತಿಗಾರು ಗ್ರಾಮದ ಕಮಿಲ ಜೊರ್ತೆ ಗುಡ್ಡಪ್ಪ ಗೌಡರ ಪುತ್ರ ಕೌಶಿಕ್ (19) ಅಸೌಖ್ಯದಿಂದ ಜೂ.5 ರಂದು ನಿಧನರಾದರು. ಕಳೆದೆ ಒಂದುವರೆ ವರ್ಷಗಳಿಂದ ಅಂಗಾಂಗ ಬಲಹೀನತೆಗೆ ಒಳಗಾಗಿ ಚಿಕಿತ್ಸೆ ಪಡೆದು, ನಂತರ ಮನೆಯಲ್ಲಿ ಆರೈಕೆ ಪಡೆಯುತ್ತಿದ್ದರು. ಮೃತರು ತಾಯಿ ಸುಮಿತ್ರ, ತಮ್ಮ ರಿತೇಶ್ ಹಾಗೂ ತಂಗಿ ಮೌನಿತಾ ರನ್ನು ಅಗಲಿದ್ದಾರೆ.
ಅವಳಿ ಮಕ್ಕಳಿಗೆ ಜನ್ಮ ನೀಡಿದ ಸುಳ್ಯದ ಪಂಬೆತ್ತಾಡಿ ಗ್ರಾಮದ ಬಾಣಂತಿಯೊಬ್ಬರು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಪಂಬೆತ್ತಾಡಿಯ ಮೂಲೆಮನೆ ವಿಶ್ವನಾಥ್ ಗೌಡ ಪುತ್ರಿ ಪೂಜಿತಾ ಮೃತ ಮಹಿಳೆ. ಇವರನ್ನು ಈಶ್ವರಮಂಗಲದ ಮುಂಡ್ಯ ಕೆಮ್ಮತ್ತಡ್ಕ ಮನೋಜ್ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಮೊನ್ನೆ ಹೆರಿಗೆಗೆಂದು ಪುತ್ತೂರಿನ ಸಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಅವರು ನಿನ್ನೆ ಬೆಳಗ್ಗೆ...
ಕೊಡಿಯಾಲ ಗ್ರಾಮದ ಕಲ್ಲಗದ್ದೆ ನಿವಾಸಿ ಕೃಷ್ಣ (40) ಅಲ್ಪಕಾಲದ ಅಸೌಖ್ಯದಿಂದ ಮೇ.4 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಜಾನಕಿ, ಹಾಗೂ ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಆನೆ ದಾಳಿಗೆ ಒಳಗಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕಲ್ಮಕಾರಿನಿಂದ ವರದಿಯಾಗಿದೆ. ಕಲ್ಮಕಾರಿನ ಮೆಂಟೆಕಜೆ ಶಿವರಾಮ ಗೌಡ(80) ಎಂಬವರು ಮೃತಪಟ್ಟ ದುರ್ದೈವಿ. ಇವರ ಮನೆಯಿಂದ ಸಮೀಪದ ಕಾಡಿನಿಂದ ಪೈಪ್ ನಲ್ಲಿ ನೀರು ಬರುತ್ತಿತ್ತು. ಇಂದು ಶಿವರಾಮ ಗೌಡರು ಪೈಪ್ ಸರಿ ಮಾಡಲೆಂದು ಹೋದ ಸಂದರ್ಭದಲ್ಲಿ ಕಾಡಾನೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ....
ಗುತ್ತಿಗಾರು ಗ್ರಾಮದ ವಳಲಂಬೆ ನಿವಾಸಿ ಅಮೈ ಶಿವರಾಮ ಗೌಡರು ಅಲ್ಪಕಾಲದ ಅಸೌಖ್ಯದಿಂದ ಎ.1 ರಂದು ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ರೇವತಿ, ಮಕ್ಕಳಾದ ಪ್ರೇಮಾ ಪ್ರಕಾಶ್ ಆಲಂಕಳ್ಯ, ಜಗದೀಶ ಅಮೈ, ಮೋಹನ ಅಮೈ, ಸಹೋದರರು, ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
ಗುತ್ತಿಗಾರು ಗ್ರಾಮದ ವಳಲಂಬೆ ಪುರ್ಲುಮಕ್ಕಿ ನರಿಯೂರು ಗುಡ್ಡಪ್ಪ ಗೌಡ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಇಂದು ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ರವಿಪ್ರಕಾಶ್, ಚೇತನ್, ಪುತ್ರಿ ಶ್ರೀಮತಿ ರೂಪಲತಾ, ಮೂವರು ಸಹೋದರರು, ಒರ್ವ ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ನಿಂತಿಕಲ್ಲು ಕಾಪಡ್ಕ (ಪುಂಡೂರು) ನಿವಾಸಿ ಲಕ್ಷ್ಮೀಯವರು ಅಲ್ಪಕಾಲದ ಅನಾರೋಗ್ಯದಿಂದ ಫೆ. 15ರಂದು ರಾತ್ರಿ ನಿಧನರಾದರು.ಅವರಿಗೆ 78ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ನಾರಾಯಣ ನಾಯ್ಕ, ಪುತ್ರಿಯರಾದ ಪಾರ್ವತಿ ಬಾಬು ನಾಯ್ಕ ಕುಳ್ಳಾಜೆ, ದೇವಕಿ ಸೋಮಪ್ಪ ನಾಯ್ಕ ಕೊಳಚಿಪ್ಪು, ಮೀನಾಕ್ಷಿ ಗೋವಿಂದ ನಾಯ್ಕ ಅಡೂರು, ಜಾನಕಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
Loading posts...
All posts loaded
No more posts
