ನ.ಪಂ. ಗೆ ಸಂಬಂಧಿಸಿದ ಕಟ್ಟಡ ಕೋಣೆಗಳ ವಿವರಗಳನ್ನು ಮಾಹಿತಿ ಹಕ್ಕಿನಲ್ಲಿ ಕೇಳಿದ ರಂಜಿತ್ ಪೂಜಾರಿಗೆ ಜೀವ ಬೆದರಿಕೆ !?

ಗಾಂಧಿನಗರದ ಮೀನು ಮಾರುಕಟ್ಟೆ ಬಳಿ ಇರುವ ಬಾಡಿಗೆ ಕೋಣೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗಿದೆ. ಈ ಕೋಣೆಗಳನ್ನು ಕೆಲವು ಪ್ರಭಾವಿ ಬೇನಾಮಿ ವ್ಯಕ್ತಿಗಳು ನಗರ ಪಂಚಾಯತ್ ಮೀಸಲು ಹೆಸರಿನಲ್ಲಿ ಕಡಿಮೆ ಬಾಡಿಗೆಗೆ ಎಲಂನಲ್ಲಿ ಪಡೆದು 3 ನೇ ವ್ಯಕ್ತಿಗಳಿಗೆ ಹೆಚ್ಚಿನ ಬಾಡಿಗೆ ನಿಗದಿಪಡಿಸಿ ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಕುರಿತು ಸಂಪೂರ್ಣ...

ಪಕ್ಷದ ವ್ಯವಹಾರಗಳಲ್ಲಿ ಅಧ್ಯಕ್ಷರ ನಿರ್ದೇಶನಗಳನ್ನು ಪಾಲಿಸದ ಆರೋಪ- ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆ ವಜಾ

ಪಕ್ಷದ ವ್ಯವಹಾರಗಳಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನಿರ್ದೇಶನಗಳನ್ನು ಪಾಲಿಸಿಲಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆ ಅವರನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ವಜಾಗೊಳಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಜಯಪ್ರಕಾಶ್ ರೈ ಆದೇಶಿಸಿದ್ದಾರೆ.ಈ ಬಗ್ಗೆ ಧರ್ಮಪಾಲ ಕೊಯಿಂಗಾಜೆ ಅವರನ್ನು ಸಂಪರ್ಕಿಸಿದಾಗ ನಿನ್ನೆ ದಿನ ಎ.ಐ.ಸಿ.ಸಿ. ಹಾಗು ಕೆ.ಪಿ.ಸಿ.ಸಿ. ಯ ನಿರ್ದೇಶನದಂತೆ ಕೇಂದ್ರ ಸರಕಾರದ...
Ad Widget

ಬೆಳ್ಳಾರೆ ಬಲಿಗಾಗಿ ಕಾದು ಕುಳಿತಿದೆ ತೆಂಗಿನ ಮರ

          ಬೆಳ್ಳಾರೆ - ಸುಳ್ಯ ಮುಖ್ಯರಸ್ತೆಯಲ್ಲಿ ಬೆಳ್ಳಾರೆ ಪೇಟೆಯಿಂದ ಅಣತಿ ದೂರದಲ್ಲಿರುವ ಬೂಡು ಎಂಬಲ್ಲಿ ತೆಂಗಿನ ಮರವೊಂದರ ಕಾಂಡ ಮಣ್ಣಿನಿಂದ ಶಿಥಿಲಗೊಂಡು ಅಡಿಕೆ ಮರಗಳ ನಡುವೆ ಸಿಲುಕಿಕೊಂಡು ರಸ್ತೆ ಮೇಲೆ ವಾಲಿ ನಿಂತುಕೊಂಡಿದ್ದು ಯಾವುದೇ ಕ್ಷಣದಲ್ಲಿ ಬೀಳುವ ಆತಂಕದಲ್ಲಿದೆ. ದಿನನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ತೆಂಗಿನ ಮರ ಬಿದ್ದರೆ ಅದರ ಕೆಳಗಡೆ ಹಾದು...

ಸುಳ್ಯದಲ್ಲಿ ಹೆಚ್ಚಾಗುತ್ತಿರುವ ಲೈಂಗಿಕ ಕಿರುಕುಳ ಪ್ರಕರಣಗಳು – ಕಾಮುಕರ ಅಟ್ಟಹಾಸಕ್ಕೆ ಬಲಿಯಾಗುತ್ತಿದ್ದಾರೆ ಮುಗ್ಧ ಅಪ್ರಾಪ್ತ ಹೆಣ್ಣು ಮಕ್ಕಳು

ಕಳೆದ ಒಂದು ವಾರಗಳಲ್ಲಿ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ಕಿರುಕುಳದ 2 ಪ್ರಕರಣಗಳು ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದರೊಂದಿಗೆ ಕಳೆದ ಒಂದೇ ತಿಂಗಳಿನಲ್ಲಿ ಮೂರು ಪ್ರಕರಣಗಳು ಬೆಳಕಿಗೆ ಬಂದಿವೆ. ಕಳೆದ ಕೆಲವು ದಿನಗಳ ಹಿಂದೆ ಅರಂಬೂರು ಪರಿಸರದಲ್ಲಿ ಮಾನಸಿಕ ಅಸ್ವಸ್ಥೆ ಅಪ್ರಾಪ್ತೆ ಹೆಣ್ಣುಮಗಳ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯದ ಪ್ರಕರಣ ಈಗಾಗಲೇ ಸುಳ್ಯ...

ಬಾಳಿಲ ವಿಶೇಷ ಗ್ರಾಮಸಭೆ

ಬಾಳಿಲ ಗ್ರಾಮ ಪಂಚಾಯತ್‌ನಲ್ಲಿ ವಿಶೇಷ ಗ್ರಾಮಸಭೆಯು ಸೆ.19ರಂದು ಬಾಳಿಲ ಪರಿಶಿಷ್ಟ ವರ್ಗಗಳ ಆಶ್ರಮ ಶಾಲೆ ಸಭಾಭವನದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತಾಧಿಕಾರಿ ನಿರಂಜನ ಚಿದಾನಂದ ಹಿರೇಮಠ ವಹಿಸಿದ್ದರು. ಸಭೆಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು ಉಪಸ್ಥಿತರಿದ್ದರು. ಜೂನಿಯರ್ ಇಂಜಿನಿಯರ್ ಜನಾರ್ಧನರವರು ಜಲಜೀವನ್ ಮಿಷನ್ ಬಗ್ಗೆ ಮಾಹಿತಿ ನೀಡಿದರು. ಪ್ರತಿಯೊಬ್ಬರಿಗೂ ಶುದ್ಧಜಲ ಒದಗಿಸುವ ನಿಟ್ಟಿನಲ್ಲಿ...

ಸ್ಲಾಬ್ ಮುರಿದು ಬಿದ್ದು ಬಾಯಿ ತೆರೆದು ನಿಂತಿರುವ ಚರಂಡಿಗೆ ಬಿದ್ದ ಕಾರು

ಸುಳ್ಯದ ಬಸ್ ನಿಲ್ದಾಣದ ಬಳಿ ಹಲವು ತಿಂಗಳುಗಳಿಂದ ಚರಂಡಿಯ ಸ್ಲಾಬ್ ಮುರಿದುಬಿದ್ದು ಅಪಾಯದ ಸ್ಥಿತಿಯಲ್ಲಿ ನಿಂತಿದ್ದವು. ಇದರ ಬಗ್ಗೆ ಕಳೆದ ಎರಡು ಬಾರಿ ಅಮರ ಸುಳ್ಯ ಸುದ್ದಿ ಪತ್ರಿಕೆಯ ವತಿಯಿಂದ ಸಂಬಂಧಪಟ್ಟ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸಗಳನ್ನು ಮಾಡಲಾಗಿತ್ತು. ನಗರದ ಪುಟ್ ಪಾತ್ ಗಳ ಅವಸ್ಥೆ ಆದರೆ ಇತ್ತ ಕಡೆ ಗಮನಹರಿಸದ ಇವರು ಇದಕ್ಕೂ ಮುನ್ನ ಹಲವು...

ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಉನ್ನತೀಕರಿಸುವಂತೆ ಶಾಸಕರಿಗೆ ಮನವಿ

ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಉನ್ನತೀಕರಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ. 2019 ರಲ್ಲಿ ಆಶಾ ತಿಮ್ಮಪ್ಪ ರವರು ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿರುವಾಗ ಜಿ.ಪಂ.ನಿಂದ ನಿರ್ಣಯ ಮಾಡಿ ಕಳಿಸಲಾಗಿತ್ತು. ಸರಕಾರದ ಮಟ್ಟದಲ್ಲಿ ಬಾಕಿ ಉಳಿದಿರುವ ಬಗ್ಗೆ ಅಸಮಾಧಾನಕ್ಕೆ ಕಾರಣವಾಗಿದೆ. ತಾಲೂಕಿನ ಎರಡನೇ ಅತೀ ದೊಡ್ಡ ಪಟ್ಟಣವಾಗಿರುವ ಬೆಳ್ಳಾರೆಯಲ್ಲಿ 24x7...

ಕೆವಿಜಿ‌‌ ಸುಳ್ಯ ಹಬ್ಬ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ವೆಂಕಟರಮಣ ಸೊಸೈಟಿ ಅಧ್ಯಕ್ಷ ಪಿ.ಸಿ ಜಯರಾಮರಿಗೆ ಸನ್ಮಾನ

ಕೆವಿಜಿ‌‌ ಸುಳ್ಯ ಹಬ್ಬದ ಅಧ್ಯಕ್ಷರಾಗಿ ಆಯ್ಕೆಯಾದ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ ಜಯರಾಮ ಅವರನ್ನು ಸೊಸೈಟಿ ವತಿಯಿಂದ ಇಂದು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮೋಹನ್ ರಾಂ ಸುಳ್ಳಿ, ನಿರ್ದೇಶಕರುಗಳಾದ, ಎ.ವಿ ತೀರ್ಥರಾಮ, ಕೆ.ಸಿ ನಾರಾಯಣ ಗೌಡ, ಸದಾನಂದ ಕುರುಂಜಿ, ಲತಾ ಮಾವಾಜಿ, ನಳಿನಿ ಸೂರಯ್ಯ, ಚಂದ್ರ ಕೋಲ್ಚಾರ್, ಪಿ.ಎಸ್, ಗಂಗಾಧರ,...

ಕೊಲ್ಲಮೊಗ್ರ ಕೋವಿಡ್-19 ತಪಾಸಣೆ – ಪರೀಕ್ಷೆ ನಡೆದ 121 ಜನರ ವರದಿ ನೆಗೆಟಿವ್

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸೆ.28 ರಂದು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಗಳಿಗಾಗಿ ವಿಶೇಷ ಕೋವಿಡ್ -19 ತಪಾಸಣಾ ಶಿಬಿರದಲ್ಲಿ ನಡೆಯಿತು. ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ವಿಶೇಷ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಪರೀಕ್ಷೆ ನಡೆಸಿದ ಎಲ್ಲಾ 121 ಗ್ರಾಮಸ್ಥರ ವರದಿ ಕೂಡ ನೆಗೆಟಿವ್ ಬಂದಿದೆ.

ಬಡ ರೋಗಿಯ ಚಿಕಿತ್ಸೆಗೆ ಸಹಾಯ ಹಸ್ತ ನೀಡಿದ ಮುಳ್ಯ ಅಟ್ಲೂರಿನ ಹೆಲ್ಪಿಂಗ್ ವಾರಿಯರ್ಸ್

ಕಡಬ ತಾಲೂಕಿನ ಸುಬ್ರಹ್ಮಣ್ಯದ ನಿವಾಸಿಯಾಗಿರುವ ಲಕ್ಷ್ಮೀನಾರಾಯಣ ಭಟ್ ಇವರು ಹಲವು ತಿಂಗಳಿನಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಈ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಹೊಟ್ಟೆಯಲ್ಲಿ ಕ್ಯಾನ್ಸರ್ ಗಡ್ಡೆ ಇರುವುದು ದೃಢ ಪಟ್ಟಿತು. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಇವರು ಚಿಕಿತ್ಸೆಯ ವೆಚ್ಚಕ್ಕಾಗಿ ಮಾಧ್ಯಮದ ಮೂಲಕ ದಾನಿಗಳಿಂದ ಸಹಾಯಯಾಚಿಸಿದ್ದರು. ಈ ಬಗ್ಗೆ ಅಮರ ಸುದ್ದಿ ವೆಬ್ಸೈಟಿನಲ್ಲಿ ಬಂದ ವರದಿಯನ್ನು ವೀಕ್ಷಿಸಿ...
Loading posts...

All posts loaded

No more posts

error: Content is protected !!