ವಳಲಂಬೆ ಅಂಗನವಾಡಿಯಲ್ಲಿ ಪೌಷ್ಟಿಕ ತೋಟ ರಚನೆ-ಸ್ವಚ್ಛತಾ ಕಾರ್ಯ

ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ಇದರ ಸದಸ್ಯರಿಂದ ವಳಲಂಬೆ ಅಂಗನವಾಡಿಯಲ್ಲಿ ಪೌಷ್ಟಿಕ ತೋಟ ರಚನೆ ಹಾಗೂ ಅಂಗನವಾಡಿಯ ಸುತ್ತಲೂ ಸ್ವಚ್ಛತೆ ಮಾಡಲಾಯಿತು. ಇವರ ಜೊತೆಗೆ ಬಾಲವಿಕಾಸ ಸಮಿತಿಯ ಅಧ್ಯಕ್ಷರು, ಸದಸ್ಯರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಪಂಚಾಯತ್ ಸದಸ್ಯರು, ಪೋಷಕರು ಸಹಕರಿಸಿದರು.

ಕೃಷಿ ಮಸೂದೆಗಳನ್ನು ವಿರೋಧಿಸಿ ಸುಳ್ಯದಲ್ಲಿ ಕರವೇ ಸಾಂಕೇತಿಕ ಪ್ರತಿಭಟನೆ

ಕೃಷಿ ಮಸೂದೆಗಳನ್ನು ವಿರೋಧಿಸಿ ಕರ್ನಾಟಕದಾದ್ಯಂತ ಇಂದು ರೈತ ಸಂಘಟನೆಗಳು ಕರೆ ನೀಡಿರುವ ಬಂದ್​​ ಹಿನ್ನೆಲೆಯನ್ನು ಬೆಂಬಲಿಸಿ ಸಾಂಕೇತಿಕವಾಗಿ ಸುಳ್ಯದಲ್ಲಿ ಪ್ರತಿಭಟನೆ ನಡೆಸಿ ತಹಶಿಲ್ದಾರರಿಗೆ ಮನವಿಯನ್ನು ಸಲ್ಲಿಸಿದರು.ಕರವೇ ಕಾರ್ಯಕರ್ತರು ಇಂದು ಸುಳ್ಯ ತಾಲೂಕು ಕನ್ನಡ ರಕ್ಷಣಾ ವೇದಿಕೆ ಗೌರವ ಅದ್ಯಕ್ಷ ಅಶೋಕ್ ಕುಮಾರ್ ಮುಂದಾಳತ್ವದಲ್ಲಿ ಕೇರಳ-ಕರ್ನಾಟಕ ರಾಜ್ಯ ಹೆದ್ದಾರಿಯನ್ನು ಕ್ಷಣ ಕಾಲ ತಡೆದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದರು....
Ad Widget

ನಗರ ಪಂಚಾಯತ್ ಚುನಾವಣೆ ಕಳೆದು ಎರಡನೇ ವರ್ಷಕ್ಕೆ ಕಾಲಿಡುತ್ತಿದ್ದರೂ, ಅಧಿಕಾರ ಸಿಗದೆ , ಮತದಾರರಿಗೆ ಉತ್ತರಿಸಲೂ ಸಾಧ್ಯವಾಗದೆ , ಸಂಕಷ್ಟದಲ್ಲಿ ಸಿಲುಕಿದ ಸದಸ್ಯರುಗಳು – ಅಧಿಕಾರಿಗಳದೇ ದರ್ಬಾರು

ಸ್ಥಳೀಯ ನಗರ ಪಂಚಾಯತಿ ಚುನಾವಣೆ ಕಳೆದು 16 ತಿಂಗಳುಗಳೇ ಕಳೆಯಿತು. ಆದರೆ ಆಡಳಿತ ನಡೆಸಲು ಸಮಿತಿ ರಚನೆಯಾಗದೆ , ಮತನೀಡಿ ಗೆಲ್ಲಿಸಿ ಕಳುಹಿಸಿದ ತಮ್ಮ ತಮ್ಮ ವಾರ್ಡಿನ ಜನತೆಗೆ ಉತ್ತರಿಸಲು ಸಾಧ್ಯವಾಗದೆ ಸಂಕಷ್ಟದ ಪರಿಸ್ಥಿತಿಯಲ್ಲಿ ಸ್ಥಳೀಯ ನಗರ ಪಂಚಾಯತ್ ನ ಸದಸ್ಯರುಗಳು ಸಂಕಷ್ಟದಲ್ಲಿ ಸಿಲುಕಿರುತ್ತಾರೆ.ಸುಳ್ಯದ ಪ್ರತಿಯೊಂದು ವಾರ್ಡ್ಗಳಲ್ಲಿ ಮೂಲಭೂತ ಸಮಸ್ಯೆಗಳ ಮಹಾಪೂರವೇ ಎದ್ದುಕಾಣುತ್ತಿದೆ.ನಗರ ಪ್ರದೇಶಗಳಲ್ಲಿ ಕುಡಿಯುವ...

ಅಮರಪಡ್ನೂರು : ನಾಪತ್ತೆಯಾಗಿದ್ದ ಯುವತಿ ವಿವಾಹವಾಗಿ ಪತ್ತೆ

ಅಮರಪಡ್ನೂರು ಗ್ರಾಮದ ಹೊಸಮಜಲು ಮನೆಯ ದಿ.ನಾರಾಯಣ ನಾಯ್ಕ ಎಂಬವರ ಪುತ್ರಿ ದೇಶ್ಮಿತಾ (18) ಸೆ.27 ರಂದು ಕಾಣೆಯಾಗಿದ್ದು, ಇಂದುಬಾಳಿಲ ಗ್ರಾಮದ ಸಂತೋಷ್ ಎಂಬ ಯುವಕನೊಂದಿಗೆ ವಿವಾಹವಾಗಿ ಪತ್ತೆಯಾಗಿರುವುದು ತಿಳಿದುಬಂದಿದೆ.

ವಳಲಂಬೆ: ಗೋವು ಆಧಾರಿತ ಕೃಷಿ ಬಗ್ಗೆ ಮಾಹಿತಿ ಕಾರ್ಯಕ್ರಮ

ಗೋವು ಆಧಾರಿತ ಕೃಷಿ ಹಾಗೂ ಗೋ ಕೃಪಾಮೃತ ಬಗ್ಗೆ ಮಾಹಿತಿ ಕಾರ್ಯಕ್ರಮ ಮತ್ತು ಪ್ರಾತ್ಯಕ್ಷಿಕೆ ಡಿ‌.ಯಂ. ರಾಮಣ್ಣ ಗೌಡ ರವರ ಮನೆಯಲ್ಲಿ ಸೆ.28 ರಂದು ನಡೆಯಿತು. ಆರ್.ಕೆ.ಭಟ್ ಸುಳ್ಯ ಇವರು ಮಾಹಿತಿ ನೀಡಿದರು. ಮಾಹಿತಿ ಕಾರ್ಯಕ್ರಮದಲ್ಲಿ ಡಿ.ಆರ್. ಲೋಕೇಶ್,ಶಶಿ ದೇರಾಜೆ ಚಂದ್ರಶೇಖರ್ ಮೊಟ್ಟೆಮನೆ ಕುಶಾಲಪ್ಪ, ವಾಸುದೇವ ಮಣಿಯಾನ ಮನೆ, ಸತೀಶ್ ಮೂಕಮಲೆ, ಚಿದಾನಂದ ಹುಲಿಮನೆ, ಓಂಕಾರ್...

ಕಳಂಜ ಗ್ರಾಮ ಪಂಚಾಯತ್ ಗೆ ಗಾಂಧಿ ಗ್ರಾಮ ಪುರಸ್ಕಾರ

ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ನೀಡಲಾಗುವ 'ಗಾಂಧಿ ಗ್ರಾಮ' ಪುರಸ್ಕಾರಕ್ಕೆ ಸುಳ್ಯ ತಾಲೂಕಿನಿಂದ ಈ ಬಾರಿ ಕಳಂಜ ಗ್ರಾಮ ಪಂಚಾಯತ್ ಭಾಜನವಾಗಿದೆ. ಸಮಗ್ರ ಅಭಿವೃದ್ಧಿ , ಸ್ವಚ್ಛತೆ ಹಾಗೂ ನೈರ್ಮಲ್ಯತೆಯ ಪಾಲನೆಗಾಗಿ ನೀಡಲಾಗುವ ಈ ಪುರಸ್ಕಾರವನ್ನು ಅಕ್ಟೋಬರ್ 2 ರ ಗಾಂಧೀ ಜಯಂತಿಯಂದು ಪ್ರದಾನ ಮಾಡಲಾಗುವುದೆಂದು ತಿಳಿದುಬಂದಿದೆ.

ನೆಲ್ಲೂರು ಕೆಮ್ರಾಜೆ ಗ್ರಾಮಸ್ಥರಿಗೆ ಸೆ.30 ರಂದು ಕೋವಿಡ್-19 ತಪಾಸಣಾ ಶಿಬಿರ

ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಗಳಿಗಾಗಿ ವಿಶೇಷ ಕೋವಿಡ್ ತಪಾಸಣಾ ಶಿಬಿರವನ್ನು ಸೆ.30 ಬುಧವಾರ ದಂದು ಪೂರ್ವಾಹ್ನ 10 ಗಂಟೆಗೆ ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪರೀಕ್ಷೆ ನಡೆಸಿಕೊಳ್ಳಬಹುದು.🔹ಪರೀಕ್ಷೆ ನಡೆಸಲು ಬರುವವರು ತಮ್ಮ ಮೊಬೈಲ್ ಪೋನ್ ಜೊತೆಗೆ ತರಬೇಕು.🔹 ನೋಂದಾವಣೆಯ ಬಳಿಕ ನಿಮ್ಮ ಮೊಬೈಲ್ ನಂಬರಿಗೊಂದು...

ಹರಿಹರಪಲ್ಲತ್ತಡ್ಕ ಗ್ರಾಮಸ್ಥರಿಗೆ ಸೆ.29 ರಂದು ಕೋವಿಡ್-19 ತಪಾಸಣಾ ಶಿಬಿರ

ಹರಿಹರಪಲ್ಲತ್ತಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಗಳಿಗಾಗಿ ವಿಶೇಷ ಕೋವಿಡ್ ತಪಾಸಣಾ ಶಿಬಿರವನ್ನು ಸೆ.29 ಮಂಗಳವಾರ ದಂದು ಪೂರ್ವಾಹ್ನ 10 ಗಂಟೆಗೆ ಹರಿಹರಪಲ್ಲತ್ತಡ್ಕ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ನಡೆಸಿಕೊಳ್ಳಬಹುದು.🔹ಪರೀಕ್ಷೆ ನಡೆಸಲು ಬರುವವರು ತಮ್ಮ ಮೊಬೈಲ್ ಪೋನ್ ಜೊತೆಗೆ ತರಬೇಕು.🔹 ನೋಂದಾವಣೆಯ ಬಳಿಕ ನಿಮ್ಮ ಮೊಬೈಲ್ ನಂಬರಿಗೊಂದು ಒಟಿಪಿ ಸಂಖ್ಯೆ ಬರುತ್ತದೆ....

ಮಡಪ್ಪಾಡಿ ಗ್ರಾಮಸ್ಥರಿಗೆ ಸೆ.29 ರಂದು ಕೋವಿಡ್-19 ತಪಾಸಣಾ ಶಿಬಿರ

ಮಡಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಗಳಿಗಾಗಿ ವಿಶೇಷ ಕೋವಿಡ್ ತಪಾಸಣಾ ಶಿಬಿರವನ್ನು ಸೆ.29 ಮಂಗಳವಾರ ದಂದು ಪೂರ್ವಾಹ್ನ 10 ಗಂಟೆಗೆ ಮಡಪ್ಪಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ನಡೆಸಿಕೊಳ್ಳಬಹುದು.🔹ಪರೀಕ್ಷೆ ನಡೆಸಲು ಬರುವವರು ತಮ್ಮ ಮೊಬೈಲ್ ಪೋನ್ ಜೊತೆಗೆ ತರಬೇಕು.🔹 ನೋಂದಾವಣೆಯ ಬಳಿಕ ನಿಮ್ಮ ಮೊಬೈಲ್ ನಂಬರಿಗೊಂದು ಒಟಿಪಿ ಸಂಖ್ಯೆ ಬರುತ್ತದೆ....

ದೇವಚಳ್ಳ ಗ್ರಾಮಸ್ಥರಿಗೆ ಸೆ.30 ರಂದು ಕೋವಿಡ್-19 ತಪಾಸಣಾ ಶಿಬಿರ

ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಗಳಿಗಾಗಿ ವಿಶೇಷ ಕೋವಿಡ್ ತಪಾಸಣಾ ಶಿಬಿರವನ್ನು ಸೆ.30 ಬುಧವಾರ ದಂದು ಪೂರ್ವಾಹ್ನ 10 ಗಂಟೆಗೆ ದೇವಚಳ್ಳ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪರೀಕ್ಷೆ ನಡೆಸಿಕೊಳ್ಳಬಹುದು.🔹ಪರೀಕ್ಷೆ ನಡೆಸಲು ಬರುವವರು ತಮ್ಮ ಮೊಬೈಲ್ ಪೋನ್ ಜೊತೆಗೆ ತರಬೇಕು.🔹 ನೋಂದಾವಣೆಯ ಬಳಿಕ ನಿಮ್ಮ ಮೊಬೈಲ್ ನಂಬರಿಗೊಂದು ಒಟಿಪಿ ಸಂಖ್ಯೆ...
Loading posts...

All posts loaded

No more posts

error: Content is protected !!