ಸಂಪಾಜೆ ಘನ ತ್ಯಾಜ್ಯ ಘಟಕ ಸ್ಥಳ ಪರಿಶೀಲನೆ ನಡೆಸಿದ ಅರಣ್ಯ ಅಧಿಕಾರಿಗಳು

ಬಹುಕಾಲದ ನಿರೀಕ್ಷೆಯಲ್ಲಿರುವ ಸಂಪಾಜೆ ಗ್ರಾಮ ಪಂಚಾಯತ್ ಘನತ್ಯಾಜ್ಯ ಘಟಕದ ಬೇಡಿಕೆ ಸಾರ್ವಜನಿಕರಲ್ಲಿದ್ದು ಇದೀಗ ಇಂದು ಸ್ಥಳ ಪರಿಶೀಲನೆ ಮಾಡಲು ಅರಣ್ಯ ಸಂರಕ್ಷಣಾಧಿಕಾರಿ ಕರಿಕಲನ್ ಸಂಪಾಜೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ಸಮಾಲೋಚನೆಯನ್ನು ನಡೆಸಿ ಬೇಡಿಕೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳ ಒದಗಿಸಲು...

ಉಬರಡ್ಕ ಗ್ರಾಮಸ್ಥರಿಂದ ವಿದ್ಯುತ್ ಲೈನ್ ಸ್ವಚ್ಚತೆಗೆ ಮೆಸ್ಕಾಂಗೆ ಸಹಕಾರ

ಕೊಡಿಯಾಲಬೈಲಿಂದ ಕಂದಡ್ಕ ಹಾಗೂ ಉಬರಡ್ಕಮಿತ್ತೂರು ವರೆಗಿನ ಹೆಚ್ ಟಿ ಲೈನ್ ಕ್ಲಿಯರೆನ್ಸ್ ಮೇ. ೩೧ ರಂದು ನಡೆಯಿತು. ಸುಮಾರು ೨೫ ಕ್ಕೂ ಹೆಚ್ಚೂ ಬಳಕೆದಾರರು ಭಾಗವಹಿಸಿ ಮೆಸ್ಕಾಂ ಜೊತೆ ಕೈ ಜೋಡಿಸಿದರು. ಈ ಪ್ರದೇಶದಲ್ಲಿ ಹಾದು ಹೋಗುವ ಸುಬ್ರಹ್ಮಣ್ಯ ಮತ್ತು ಕೇನ್ಯ ಪೀಡರ್ ನ ಲೈನ್ ತಾಗುವ ಗೆಲ್ಲುಗಳನ್ನು ಕಡಿದು ಸ್ವಚ್ಚಗೊಳಸಿದರು. ಉಬರಡ್ಕದ ಗ್ರಾಮಸ್ಥರು ಪ್ರತಿ...
Ad Widget

ಮಕ್ಕಳನ್ನ ಶಾಲೆಗೆ ಕಳಿಸಲ್ಲ, ಶಿಕ್ಷಣಕ್ಕಿಂತ ಆರೋಗ್ಯ ಮುಖ್ಯ” ಸರಕಾರದ ವಿರುದ್ದ ಆನ್ಲೈನ್ ಸಹಿ ಸಂಗ್ರಹ ಆರಂಭಿಸಿದ ಪೋಷಕರು.

ರಾಜ್ಯ ಸರಕಾರ ಕೊರೊನಾ ಸೋಂಕು ಹರಡುತ್ತಿರುವ ಬೆನ್ನಲ್ಲೇ ಶಾಲೆಗಳನ್ನು ಆರಂಭಿಸಲು ಆದೇಶ ಹೊರಡಿಸಿದೆ. ರಾಜ್ಯ ಸರಕಾರದ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಪೋಷಕರು ಸಹಿ ಸಂಗ್ರಹ ಅಭಿಯಾನ ಜೊತೆಗೆ ಆನ್ ಲೈನ್ ಅಭಿಯಾನವನ್ನು ಕೈಗೊಂಡಿದ್ದಾರೆ. ಪೋಷಕರ ಅಭಿಯಾನಕ್ಕೀಗ ಬಾರೀ ಬೆಂಬಲ ವ್ಯಕ್ತವಾಗಿದೆ.ಜೂನ್ 5ರಿಂದಲೇ ಶಾಲೆಗಳನ್ನು ಪುನರಾರಂಭ ಮಾಡುವ ಕುರಿತು ಶಿಕ್ಷಣ ಇಲಾಖೆ ಈಗಾಗಲೇ ಆದೇಶ ಹೊರಡಿಸಿದ್ದು,...

ಅರಂತೋಡು ಮದುವೆಗೆ ಕೊರೊನ ಕಾಟ – 50 ಕ್ಕೂ ಅಧಿಕ ಮಂದಿಗೆ ಕಾರಂಟೈನ್ ಸಂಕಟ

ಅರಂತೋಡಿನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡ ಸುಮಾರು ಐವತ್ತಕ್ಕೂ ಅಧಿಕ ಮಂದಿಗೆ ಮುಂಜಾಗ್ರತಾ ಕ್ರಮವಾಗಿ ಹೋಂ ಕ್ವಾರಂಟೈನ್ ವಿಧಿಸಿರುವ ಘಟನೆ ನಡೆದಿದೆ.ಮಲೇಷ್ಯಾದಿಂದ ಬಂದು ಮಂಗಳೂರಿನಲ್ಲಿ ಹೋಟೆಲ್ ಕ್ವಾರಂಟೈನಲ್ಲಿದ್ದ ವೈಧ್ಯ ರಿಪೋರ್ಟ್ ಬರುವ ಮುನ್ನ ಅರಂತೋಡು ತನ್ನ ಸಂಬಂಧಿಕರ ಮನೆಗೆ ಬಂದಿದ್ದರು. ಅರಂತೋಡಿನಲ್ಲಿರುವ ವೇಳೆ ವರದಿ ಬಂದ ಹಿನ್ನಲೆಯಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಿದ ೫೨ಕ್ಕೂ ಅಧಿಕ ಮಂದಿಗೆ...

ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿ ಶಿಬಿಲಿಯ ಸಾಧನೆಗೆ ಶಿಕ್ಷಣಾಧಿಕಾರಿಯಿಂದ ಪ್ರಶಂಸೆ

ಕೊರೊನಾ ತಡೆಗಟ್ಟಲು ಇಲ್ಲಿನ ಆಡಳಿತ ವ್ಯವಸ್ಥೆ ಹರಸಾಹಸ ಪಡುತ್ತಿರುವಾಗ ಗಾಂಧಿನಗರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ, ಸುಳ್ಯದ ಇಕ್ಬಾಲ್ ಜಿ ಎ ರವರ ಪುತ್ರ ಮೊಹಮ್ಮದ್ ಶಿಬಿಲಿ  ತನ್ನ ಕೈ ಚಳಕದ ಮೂಲಕ ಸ್ಯಾನಿಟೈಝರ್ ಸ್ಟ್ಯಾಂಡ್ ತಯಾರಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸ್ಟ್ಯಾಂಡ್‌ನ ಪ್ರಾತ್ಯಕ್ಷಿಕೆ - ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ಸಾಮಾಜಿಕ ಅಂತರ ಕಾಪಾಡುವುದು ಮತ್ತು...

ಶಾಲಾ ಪ್ರಾರಂಭೋತ್ಸವ ಸಂತೋಷದ ಹುಮ್ಮಸ್ಸಿನಲ್ಲಿ, ಈ ದಿನ ಬೇಸರ ಆವರಿಸಿಕೊಂಡಾಗ…

ಜೂನ್01 ಬಂದರೆ  ಸಾಕು ಪ್ರತಿ ವರ್ಷವೂ  ಎಂದಿನಂತೆ ಶಾಲಾ ಮಕ್ಕಳು ಉಲ್ಲಾಸ, ಉತ್ಸಾಹದ ಜೊತೆಗೆ ಹೊಸ ಹುರುಪಿನಿಂದ ಶಾಲೆಯ ಅಂಗಳಕ್ಕೆ ಬರುತ್ತಿರುತ್ತಾರೆ... *ಆಹಾ!!* ಬೇಸಿಗೆ ರಜೆಯಲ್ಲಿ ಅವ್ವನ ಮನೆಗೋ,ಮಾವನ ಮನೆಯೋ ಹೀಗೇ ಸಂಸಾರದ ಸಂಬಂಧಿಗಳ ಮನೆಗೆ ಪ್ರಯಾಣ ಮಾಡಿ ಏಳೆಂಟು ದಿನ ಅಲ್ಲೇ ತಮ್ಮಂತಹ ಜೊತೆಗಾರೊಂದಿಗೆ ಆಟ ತುಂಟಾಟ ಜೊತೆಗೆ ಖುಷಿ ಖುಷಿಯಾಗಿ ದಿನಕಳೆಯುತ್ತಾ ಮತ್ತೆ...

ಕುಸಿಯುವ ಭೀತಿಯಲ್ಲಿದೆ ಕೊಪ್ಪತ್ತಡ್ಕ ಸೇತುವೆ- ತುರ್ತು ಕ್ರಮ ಅಗತ್ಯ

ಹರಿಹರಪಲ್ಲತ್ತಡ್ಕ ಕಿರಿಭಾಗ ಬಾಳುಗೋಡು ರಸ್ತೆಯಲ್ಲಿರುವ ಕೊಪ್ಪತ್ತಡ್ಕ ಕಿರು ಸೇತುವೆ ತಡೆಬೇಲಿ ಕಿತ್ತು ಹೋಗಿದ್ದು ಸ್ವಲ್ಪವೇ ಉಳಿದಿದೆ,ಒಂದು ಭಾಗದ ತಡೆಗೋಡೆ ಕೂಡ ಕುಸಿಯುವ ಭೀತಿಯಲ್ಲಿದೆ.ಈ ಸೇತುವೆ ಕಿರಿದಾಗಿದ್ದು ಒಂದು ಲಘು ವಾಹನ ಮಾತ್ರ ಸಂಚರಿಸಲು ಅವಕಾಶವಿದೆ. ಈ ರಸ್ತೆಯಲ್ಲಿ ದಿನದಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಶಾಲಾ,ಕಾಲೇಜು ವಿದ್ಯಾರ್ಥಿಗಳು ಕೂಡ ನಡೆದುಕೊಂಡು ಹೋಗುತ್ತಾರೆ. ಮಳೆಗಾಲದಲ್ಲಿ ತುಂಬಿ ಹರಿಯುವ ವೇಳೆ...

ತಳೂರಿನ ಎರಡು ಕುಟುಂಬ ಕ್ವಾರಂಟೈನ್

ಅರಂತೋಡು ಲಿಂಕ್ ಇರುವ ದೇವಚಳ್ಳ ಗ್ರಾಮದ ತಳೂರಿನ ಎರಡು ಕುಟುಂಬವನ್ನು ಹೋಂ ಕ್ವಾರೆಂಟೇನ್ ಮಾಡಲಾಗಿದೆ . ಅರಂತೋಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇವರು ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.

ಆನ್ಲೈನ್ ನಲ್ಲಿ ಕಲಿಕೆಗೆ ನೆರವಾಗಲೂ ವಿದ್ಯಾರ್ಥಿನಿಗೆ ಮೊಬೈಲ್ ಕೊಡುಗೆ

ಭಾರತ ಲಾಕ್ ಡೌನ್ ಗೊಂಡ ಹಿನ್ನೆಲೆಯಲ್ಲಿ ಶೈಕ್ಷಣಿಕ ಕೇಂದ್ರಗಳು ಮುಚ್ಚಲ್ಪಟ್ಟಿದೆ. ದ್ವಿತೀಯ ಪಿಯುಸಿ ಹಾಗೂ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ವೇಳಾಪಟ್ಟಿಗಳು ನಿಗದಿ ಗೊಂಡು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಹಾಯವಾಗುವಂತೆ ಆನ್ಲೈನ್ ತರಬೇತಿಗಳು ಆರಂಭಗೊಂಡಿದೆ.ಈ ನಿಟ್ಟಿನಲ್ಲಿ ಕಳೆದ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆದು ತೇರ್ಗಡೆಯಾದ ಬಡ ವಿದ್ಯಾರ್ಥಿನಿಗೆ ಕಲಿಕೆಗೆ ಸಹಾಯವಾಗುವ ನಿಟ್ಟಿನಲ್ಲಿ ಎಂಬಿ ಫೌಂಡೇಶನ್...

ಉಡುಪಿ ಯಲ್ಲಿ ಆರ್ಭಟಿಸಿದ ಕೊರೊನಾ – 210 ಸೋಂಕಿತರು ಪತ್ತೆ

ಕರ್ನಾಟಕದಲ್ಲಿ ಕೊರೋನಾ ತಾಂಡವವಾಡುತ್ತಿದ್ದು, ಇತ್ತೀಚೆಗೆ ಪ್ರತಿದಿನ ಶತಕ ಬಾರಿಸುತ್ತಲೇ ಬರುತ್ತಿದೆ. ಯಾವಾಗ ಹೊರರಾಜ್ಯ, ದೇಶಗಳಿಂದ ಕರ್ನಾಟಕಕ್ಕೆ ಜನ ಬಂದರೋ ಅಗಲೇ ಕೊರೊನ ರುದ್ರ ನರ್ತನ ಆರಂಭಿಸಿದೆ. ಇಂದು ಕೃಷ್ಣ ನಗರಿ ಉಡುಪಿಯಲ್ಲಿ ಒಂದೇ ದಿನ ಬರೋಬ್ಬರಿ 210 ಪ್ರಕರಣಗಳು ಪತ್ತೆಯಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ . ಇದರಿಂದ ಉಡುಪಿ ಸೇರಿದಂತೆ...
Loading posts...

All posts loaded

No more posts

error: Content is protected !!