ಪೈಂದೋಡಿ ದೇವಸ್ಥಾನದಲ್ಲಿ ಶ್ರೀ ಸತ್ಯನಾರಾಯಣ ದೇವರ ಪೂಜೆ

ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ವಿಶು ಯುಗಾದಿಯ ಪ್ರಯುಕ್ತ ಪವಮಾನ ಅಭಿಷೇಕ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಏ.15 ರಂದು ನಡೆಯಿತು. ಅರ್ಚಕರಾದ ವಿಷ್ಣುಭಟ್ ಪೈಂದೋಡಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಗೌಡ ಕುದ್ವ, ಸಮಿತಿ ಸದಸ್ಯರಾದ ಧರ್ಮಪಾಲ ಕಂಡೂರು, ಕಿಶೋರ್ ಕುಮಾರ್ ಪುಂಡಿಮನೆ, ರವಿಕುಮಾರ್ ಚಳ್ಳಕೋಡಿ, ಲಕ್ಷ್ಮಣ...

ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಕ್ಷಣಗಣನೆ – ಭರದಿಂದ ನಡೆಯುತ್ತಿರುವ ಅಭಿವೃದ್ಧಿ ಕಾರ್ಯ – ಏ.29 ರಂದು ಪುನಃ ಪ್ರತಿಷ್ಠೆ – ಮೇ.2 ರಂದು ಬ್ರಹ್ಮಕಲಶಾಭಿಷೇಕ

ಕರಿಕ್ಕಳ ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಏ.24 ರಿಂದ ಮೇ.03 ರ ತನಕ ನಡೆಯಲಿದ್ದು, ಭರದಿಂದ ಅಭಿವೃದ್ದಿ ಕಾರ್ಯ ನಡೆಯುತ್ತಿದೆ. ಏ.29 ರಂದು ಪುನಃ ಪ್ರತಿಷ್ಠೆ ಹಾಗೂ ಮೇ.2 ರಂದು ಬ್ರಹ್ಮಕಲಶಾಭಿಷೇಕ ನಡೆಯಲಿದೆ.ಅಂದಾಜು 4 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ : ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಸಂಬಂಧಿಸಿದಂತೆ ಚಾಮುಂಡಿಮೂಲೆಯಲ್ಲಿ ನಿರ್ಮಾಣಗೊಂಡಿರುವ ಚಾಮುಂಡಿ...
Ad Widget

ಮೇನಾಲ : ಮಸೀದಿಯಲ್ಲಿ 10 ಸಾವಿರ ರೂಪಾಯಿಗೆ ಏಲಂ ಆದ ಹಲಸಿನ ಹಣ್ಣು

ಅಜ್ಜಾವರ ಮೇನಾಲ ಮಸೀದಿ ಬಳಿಯಿರುವ ಹಲಸಿನ ಮರದಲ್ಲಿ 10 ವರ್ಷಗಳ ಬಳಿಕ ಹಲಸಿನಕಾಯಿ ಆಗಿತ್ತು. ಇದನ್ನು ಮಸೀದಿ ಆಡಳಿತ ಮಂಡಳಿಯವರು ಏ.15 ರಂದು ಏಲಂ ಮಾಡಿದರು. ಏಲಂ ನಲ್ಲಿ ರೂ 10 ಸಾವಿರ ರೂಪಾಯಿಗೆ ಸಾಜಿದ ಎಂಬವರು ಪಡೆದುಕೊಂಡರು.

“ಧಾರ್ಮಿಕ ಶ್ರದ್ಧಾ ಕೇಂದ್ರದಲ್ಲಿ ಆಟೋ ಚಾಲಕರ ಸೇವೆ ಅನನ್ಯ, ಶ್ಲಾಘನೀಯ – ಆಟೋ ಚಾಲಕರ ಮಕ್ಕಳು ಮುಂದೆ ಪೈಲೆಟ್ ಆಗಿ ಮೂಡಿಬರಲಿ” : ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ

ಸುಬ್ರಹ್ಮಣ್ಯ ಏಪ್ರಿಲ್ 15 : “ಸುಬ್ರಹ್ಮಣ್ಯದ ಆಟೋ ಚಾಲಕರು ದೂರದ ಊರುಗಳಿಂದ ಕುಕ್ಕೆ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಪ್ರಥಮ ಮಾಹಿತಿದಾರರಾಗಿರುತ್ತಾರೆ. ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಂದ ಬರುವ ಭಕ್ತಾದಿಗಳಿಗೆ ಕುಕ್ಕೆ ಕ್ಷೇತ್ರದ ಬಗ್ಗೆ ವಿವರವಾದ ಮಾಹಿತಿ ನೀಡಿ ಅವರಿಗೆ ನೀಡುವ ಸೇವೆ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಆಟೋ ಚಾಲಕರ ಮಕ್ಕಳು ವಿಮಾನದ ಪೈಲೆಟ್ ಆಗಬೇಕು. ಅವರು...

ಮುಂಡಕಜೆಯಲ್ಲಿ ಕುಡಿಯುವ ನೀರಿನ ಸಮಸ್ಯೆ – ತುರ್ತು ಸ್ಪಂದಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೊಳ್ಳೂರು

ಅಮರ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡಕಜೆಯಲ್ಲಿ ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ನಾಗರಿಕರು ಪರದಾಡುವಂತಾಗಿದ್ದು, ಸ್ಥಳೀಯರ ಕೋರಿಕೆ ಮೇರೆಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಸ್ಥಳಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯ ಕುರಿತು ಅವಲೋಕಿಸಿದರು. ನೀರಿನ ಟ್ಯಾಂಕಿಯಿಂದ ಬರುವ ಪೈಪ್ ತುಂಡಾಗಿರುವುದು ಮತ್ತು...

ಬೆಳ್ಳಾರೆಯ ಜ್ಞಾನದೀಪದಲ್ಲಿ ಬೇಸಿಗೆ ರಜೆಯ ನವೋದಯ ತರಬೇತಿ ಶಿಬಿರ ಆರಂಭ

ನವೋದಯ ಮತ್ತು ವಿವಿಧ ವಸತಿ ಶಾಲಾ ಪ್ರವೇಶ ಪರೀಕ್ಷೆಗೆ ಕಳೆದ 18 ವರ್ಷಗಳಿಂದ ತರಬೇತಿಗಳನ್ನು ನಡೆಸುತ್ತಿರುವ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ 2026-27ನೇ ಸಾಲಿನ ಬೇಸಿಗೆ ರಜೆಯ ನವೋದಯ ತರಬೇತಿ ಶಿಬಿರ ಆರಂಭಗೊಂಡಿತು. ಒಂದು ತಿಂಗಳು ನಡೆಯುವ ಈ ತರಬೇತಿ ಶಿಬಿರದಲ್ಲಿ 4 ಅಥವಾ 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ನವೋದಯ...

ಸುಳ್ಯ : ನಾವೂರಿನ ಕಲ್ಕುಡ ದೈವಸ್ಥಾನದ ಶಿಲಾಮಯ ಗುಡಿಗೆ ದಾರಂದ ಮುಹೂರ್ತ

ಸುಳ್ಯದ ನಾವೂರಿನಲ್ಲಿರುವ ಕಲ್ಕುಡ ದೈವಸ್ಥಾನದಲ್ಲಿ ನೂತನವಾಗಿ ಶಿಲಾಮಯ ಗುಡಿ ನಿರ್ಮಾಣದ ಕಾರ್ಯವು ಜರುಗುತ್ತಿದ್ದು, ಇದರ ದಾರಂದ ಮುಹೂರ್ತ ಕಾರ್ಯವು ಎ.15ರಂದು ಬೆಳಿಗ್ಗೆ ನೆರವೇರಿತು.ದೈವಸ್ಥಾನದ ಆಡಳಿತ ಧರತಮದರ್ಶಿಗಳಾದ ಪಿ.ಕೆ ಉಮೇಶ್ ಅವರು ದೈವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿದ ಬಳಿಕ ಶಿಲ್ಪಿ ವಿಜಯ ಅವರ ನೇತೃತ್ವದಲ್ಲಿ ಶಿಲಾಮಯ ಗುಡಿಗೆ ದಾರಂದ ಮುಹೂರ್ತ ನಡೆಯಿತು.ಈ ಸಂದರ್ಭದಲ್ಲಿ ಕಲ್ಕುಡ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ...

ಬೆಳ್ಳಾರೆ : ಪಳ್ಳಿಮಜಲು ಮಸೀದಿಯಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ಅಧ್ಯಯನ ತರಗತಿ

ಬೆಳ್ಳಾರೆ ಗ್ರಾಮದ ಪಳ್ಳಿಮಜಲಿನ ಅಬೂಬಖರ್ ಸ್ವಿದ್ದೀಖ್(ರ)ಮಸೀದಿಯಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್ ಮತ್ತು ಅಧ್ಯಯನ ತರಗತಿ ಎ 12ರಂದು ನಡೆಯಿತು.ಮುಸ್ಸಂಜೆ ನಮಾಝಿನ ನಂತರ ಸ್ವಲಾತ್ ಮಜ್ಲಿಸ್ ಪ್ರವಾದಿ ಪ್ರೇಮಿಗಳ ಮನ ಪುಳಕಗೊಳ್ಳುವಂತೆ ಮಾಡಿತು.ಪಳ್ಳಿಮಜಲಿನ ಅಬೂಬಖರ್ ಸ್ವಿದ್ದೀಖ್(ರ)ಮಸೀದಿಯ ಖತೀಬ್ ಹಾಗೂ ಪಳ್ಳಿಮಜಲು ಸಿರಾಜುಲ್ ಹುದಾ ಸೆಕೆಂಡರಿ ಮದರಸದ ಅಧ್ಯಾಪಕ ಮುಹಮ್ಮದ್ ಸವಾದ್ ಮದನಿ ಅಜ್ಜಾವರ ಸ್ವಲಾತ್ ಕಾರ್ಯ ವಿಧಾನಗಳಿಗೆ...

ಬೆಳ್ಳಾರೆಯ ಬಿ.ಎಂ ಕಾಂಪ್ಲೆಕ್ಸ್‌ನಲ್ಲಿ ಹೋಟೆಲ್ ವೆಲ್ಕಂ ಶುಭಾರಂಭ

ಬೆಳ್ಳಾರೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಬಿ. ಯಎಂ. ಕಾಂಪ್ಲೆಕ್ಸ್‌ನಲ್ಲಿ ಉಮರ್ ಮಣಿಮಜಲು ಹಾಗೂ ಜಮಾಲ್ ಬೆಳ್ಳಾರೆಯವರ ಪಾಲುದಾರಿಕೆಯ ಹೋಟೆಲ್ ವೆಲ್ಕಂ ಎ.13ರಂದು ಶುಭಾರಂಭಗೊಂಡಿತು.ಈ ಅತ್ಯಾಪ್ತ ತಾಣದಲ್ಲಿ ಚಹಾ, ಕಾಫಿ, ತಿಂಡಿ,ಚಿಕನ್ ಬಿರಿಯಾನಿ, ಚಿಕನ್ ಮಂದಿ ಹಾಗೂ ತಾಜಾ ಜ್ಯೂಸ್ ಐಟಂಗಳು ದೊರೆಯುತ್ತವೆ ಎಂದು ಪಾಲುದಾರರು ತಿಳಿಸಿದ್ದಾರೆ. (ವರದಿ : ಎಂ.ಎ. ಮುಸ್ತಫಾ ಬೆಳ್ಳಾರೆ)

ಪಂಜ : ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ “ವಿಷುಕಣಿ ಪೂಜೆ”

ಪಂಜದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಏ.15ರಂದು ಪೂರ್ವಾಹ್ನ “ವಿಷುಕಣಿ ಪೂಜೆ” ನೆರವೇರಿತು.ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಕಾನತ್ತೂರು, ವ್ಯವಸ್ಥಾಪನಾ ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳು ವಿಷುಕಣಿ ವೀಕ್ಷಿಸಿ ಪ್ರಸಾದ ಸ್ವೀಕರಿಸಿದರು. (ವರದಿ : ಉಲ್ಲಾಸ್ ಕಜ್ಜೋಡಿ)
Loading posts...

All posts loaded

No more posts

error: Content is protected !!