ಸುಳ್ಯ : ವಿವಿಧೆಡೆ ಎ.ಐ ಕ್ಯಾಮರಾ ಅಳವಡಿಕೆ – ನಿಯಮ ಪಾಲಿಸದ ವಾಹನ ಸವಾರರಿಗೆ ಕಾದಿದೆ ಬಿಗ್ ಶಾಕ್

ರಾಜ್ಯದ ಪ್ರಮುಖ ನಗರಗಳಲ್ಲಿ ಮಾತ್ರ ಅಳವಡಿಕೆಯಾಗಿದ್ದ AI ಸಿ.ಸಿ ಕ್ಯಾಮೆರಾ ಇದೀಗ ಸುಳ್ಯಕ್ಕೂ ಕಾಲಿರಿಸಿದ್ದು, ಸಂಚಾರ ನಿಯಮಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಪೋಲೀಸ್ ಇಲಾಖೆ ಸಜ್ಜಾಗಿದ್ದು ವಾಹನ ಸವಾರರು ಎಚ್ಚರಿಕೆ ವಹಿಸಬೇಕಾಗಿದೆ. ಸುಳ್ಯ ನಗರದಲ್ಲಿ ಎಐ ಕ್ಯಾಮೆರಾ ಅಳವಡಿಸಿ ಮೂಲಕ ಸಂಚಾರ ನಿಯಮದ ಪಾಲಿಸದ ವಾಹನ ಸವಾರರ ಮೇಲೆ ಪೋಲೀಸರು ಹದ್ದಿನ ಕಣ್ಣನ್ನು ಇರಿಸಿದ್ದಾರೆ....

“ರಾಜ್ಯ ಮಟ್ಟದ ಪ್ರಕೃತಿ ಅಧ್ಯಯನ ಚಾರಣ ಶಿಬಿರ 2026” – ಸಮಾರೋಪ ಸಮಾರಂಭ – “ಪ್ರಕೃತಿ ಅಧ್ಯಯನ ಚಾರಣದಿಂದ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಅರಿವು” – ಡಾ| ಪಿ.ಜಿ ಆರ್ ಸಿಂಧ್ಯ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಪಂಜ ಸ್ಥಳೀಯ ಸಂಸ್ಥೆ ಹಾಗೂ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇವರ ಸಹಭಾಗಿತ್ವದಲ್ಲಿ ದಿನಾಂಕ 16-05-2026 ರಿಂದ 20-05-2026 ರವರೆಗೆ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇಲ್ಲಿ ರಾಜ್ಯ ಮಟ್ಟದ ಪ್ರಕೃತಿ ಅಧ್ಯಯನ ಚಾರಣ ಶಿಬಿರ 2026 ಯಶಸ್ವಿಯಾಗಿ ನಡೆಯಿತು.ಕಾರ್ಯಕ್ರಮದ ಸಮಾರೋಪ ಸಮಾರಂಭವು ದಿನಾಂಕ 20-05-2026...
Ad Widget

ರೈನ್ ಕೋಟ್ ಖರೀದಿಸುವ ಆಲೋಚನೆಯಲ್ಲಿದ್ದೀರಾ..!? – ಸುಳ್ಯದ “ಕುಂ-ಕುಂ” ನಲ್ಲಿ ಫ್ಯಾಕ್ಟರಿ ದರದಲ್ಲಿ ರೈನ್ ಕೋಟ್ ಹಾಗೂ ಕೊಡೆಗಳು ಲಭ್ಯ

ಮಳೆಗಾಲ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಗ್ರಾಹಕರ ಅನುಕೂಲಕ್ಕಾಗಿ ಸುಳ್ಯದ “ಕುಂ-ಕುಂ” ನಲ್ಲಿ ರೈನ್ ಕೋಟ್ ಹಾಗೂ ಕೊಡೆಗಳು ಫ್ಯಾಕ್ಟರಿ ದರದಲ್ಲಿ ದೊರೆಯಲಿದ್ದು, ರೂ. 1,000 ಖರೀದಿಯ ಮೇಲೆ ರೈನ್ ಕೋಟ್ ಗೆ ಪಂಚೋ ರೈನ್ ಕೋಟ್ ಉಚಿತವಾಗಿ ದೊರೆಯಲಿದೆ. ಪೋಪಿ ಹಾಗೂ ಝೀಲ್ ಕಂಪೆನಿಯ ಕೊಡೆ ಹಾಗೂ ರೈನ್ ಕೋಟ್ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.

ಉತ್ತರ ಕನ್ನಡದ ಭಟ್ಕಳದಲ್ಲಿ ನಡೆದ ರಾಜ್ಯ ಮಟ್ಟದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅಶ್ವಿಜ್ ಅತ್ರೇಯ ಸುಳ್ಯ

ಮೇ16 : Inspire Dance Crew, Bhatkala ಇದರ 5ನೇ ವರ್ಷದ “ಸಂಭ್ರಮ “2026 Shining Night” ರಾಜ್ಯ ಮಟ್ಟದ ಸಂಗೀತ ಗಾಯನ ಸ್ಪರ್ಧೆಯಲ್ಲಿ ಸುಳ್ಯದ ಅಶ್ವಿಜ್ ಅತ್ರೇಯ ಸುಳ್ಯ ಇವರು ಪ್ರಥಮ ಸ್ಥಾನ ಪಡೆದು ಟ್ರೋಫಿ ನಗದು ಬಹುಮಾನಕ್ಕೆ ಭಾಜನರಾಗಿದ್ದಾರೆ. ಆಡಿಷನ್, ಮೆಗಾ ಆಡಿಷನ್, ಸೆಮಿ ಫಿನಾಲೆ ಹಂತಗಳಿಂದ ಆಯ್ಕೆಯಾಗಿ ಫಿನಾಲೆ ಹಂತದಲ್ಲಿ ಟಾಪ್...

ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿದ ತೆಲಂಗಾಣ ಸಾರಿಗೆ ಸಚಿವರಾದ ಪೋನ್ನಮ್ ಪ್ರಭಾಕರ

ಸುಬ್ರಹ್ಮಣ್ಯ : ತೆಲಂಗಾಣ ರಾಜ್ಯ ಸರಕಾರದ ಸಾರಿಗೆ ಸಚಿವರಾದ ಪೊನ್ನಮ್ ಪ್ರಭಾಕರ ಅವರು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಇವರನ್ನು ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿಗಳಾದ ಅರವಿಂದ ಅಯ್ಯಪ್ಪ ಸುತಗುಂಡಿ ಸ್ವಾಗತಿಸಿದರು. ಬಳಿಕ ಶ್ರೀ ದೇವಳಕ್ಕೆ ತೆರಳಿದ ಸಚಿವರು ಶ್ರೀ ದೇವರ ದರುಶನ ಮಾಡಿದರು. ಇವರಿಗೆ ಅರ್ಚಕರು ಶಾಲು ಹೊದಿಸಿ ಮಹಾಪ್ರಸಾದ ನೀಡಿದರು....

ಸುಬ್ರಹ್ಮಣ್ಯ : ಕೊಲ್ಲಮೊಗ್ರು-ಹರಿಹರ ಪ್ರಾ.ಕೃ.ಪ.ಸ ಸಂಘದಿಂದ ಪತ್ರಿಕಾಗೋಷ್ಠಿ – 2025-26ನೇ ಸಾಲಿನಲ್ಲಿ 480.80 ಕೋಟಿ ರೂ. ವ್ಯವಹಾರ, 1.80 ಕೋಟಿ ರೂ. ಲಾಭ ಹಾಗೂ 27 ಕೋಟಿ ರೂ. ವ್ಯವಹಾರ ವಿಸ್ತರಣೆ, ಶೇ.99 ಸಾಲ ವಸೂಲಾತಿ – ಮಾಹಿತಿ ನೀಡಿದ ಆಡಳಿತ ಮಂಡಳಿ

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಮೇ.20 ಬುಧವಾರದಂದು ಸುಬ್ರಹ್ಮಣ್ಯದಲ್ಲಿ ಸಂಘದ 2025-26ನೇ ಸಾಲಿನ ವ್ಯಾವಹಾರಿಕ ವರ್ಷದ ವರದಿಯನ್ನು ನೀಡುವ ಸಲುವಾಗಿ ಪತ್ರಿಕಾಗೋಷ್ಠಿ ನಡೆದಿದ್ದು, ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಡಾ| ಸೋಮಶೇಖರ್ ಕಟ್ಟೆಮನೆ “ತಾಲೂಕಿನ ಪ್ರಮುಖ ಸಹಕಾರಿ ಸಂಘವಾಗಿ ಹರಿಹರ ಪಳ್ಳತ್ತಡ್ಕದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿ ಕೊಲ್ಲಮೊಗ್ರು ಹಾಗೂ...

ಗುತ್ತಿಗಾರು : ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸ್ವಚ್ಛತೆ ಮೂಲಕ ಮಾದರಿಯಾದ ದಂಪತಿಗಳಿಗೆ ಅಕ್ಕಿ ವಿತರಣೆ

ಜಿಲ್ಲಾ ಮಟ್ಟದ ಯೋಗಾಸನ ಮತ್ತು ರಕ್ತದಾನ ಶಿಬಿರ ಪ್ರಯುಕ್ತ ಆಯೋಜನೆ ಮಾಡಲಾಗಿದ್ದ ಸಹಾಯ ನಿಧಿ ಕೂಪನ್ ನ ಬಹುಮಾನಗಳನ್ನು ವಿತರಣೆ ಮಾಡಲಾಗಿದ್ದು, ಕೆಲವೊಂದು ಬಹುಮಾನಗಳು ಹಾಗೆ ಉಳಿಕೆ ಆಗಿದ್ದು ಇದರ ಬಾಬ್ತು ಇದ್ದ 50 ಕೆ.ಜಿ ಅಕ್ಕಿಯನ್ನು ಗುತ್ತಿಗಾರಿನಲ್ಲಿ ಸ್ವಚ್ಛತೆಯ ಕೆಲಸವನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತ ಮಾದರಿ ಜೀವನ ನಡೆಸುತ್ತಿರುವ ಶ್ರೀಮತಿ ಲೀಲಾವತಿ ಅನಂತಕೃಷ್ಣ ಛತ್ರಪ್ಪಾಡಿ ಅವರಿಗೆ...

ನಿಧನ : ಸುಂದರ ಗೌಡ ಹಳೆಮನೆ

ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಹಳೆಮನೆ ಸುಂದರ ಗೌಡ ರವರು ಅಲ್ಪಕಾಲದ ಅಸೌಖ್ಯದಿಂದ ಮೇ.20ರಂದು ಬೆಳಿಗ್ಗೆ ನಿಧನರಾದರು. ಮೃತರಿಗೆ 61 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶೀಲಾವತಿ, ಪುತ್ರಿಯರಾದ ಜಯಶ್ರೀ, ಜಶ್ಮಿತಾ, ಪುತ್ರ ಹಿತೇಶ್ ಹಾಗೂ ಸಹೋದರರಾದ ಕುಂಞಣ್ಣ ಗೌಡ, ಗಂಗಾಧರ ಗೌಡ, ಸಹೋದರಿ ಜಯಂತಿ ಹಾಗೂ ಅಳಿಯಂದಿರು, ಮೊಮ್ಮಕ್ಕಳು ಮತ್ತು ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.

ಇಂದಿನ(ಮೇ 20) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಹೊಸ ಅಡಿಕೆ ಮತ್ತು ಕಾಳುಮೆಣಸು ಧಾರಣೆಯಲ್ಲಿ ಕುಸಿತ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 20 ಮೇ 2026ವಾರ : ಬುಧವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಮೇ 20) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 425 ರಿಂದ...

ಮೇ.21 ರಂದು ಸುಳ್ಯ ತಾಲೂಕಿನ ವಿವಿಧೆಢೆ ವಿದ್ಯುತ್ ವ್ಯತ್ಯಯ – ಮೆಸ್ಕಾಂ ಪ್ರಕಟಣೆ

ಮೇ.21 ಗುರುವಾರದಂದು ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ ಬೆಳ್ಳಾರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರ್‌ಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11 ಕೆ.ವಿ ಬೆಳ್ಳಾರೆ-1, ಬೆಳ್ಳಾರೆ-2 ನೆಟ್ಟಾರು, ಕಳಂಜ, ಮುರುಳ್ಯ, ಪೆರ್ಲಂಪಾಡಿ, ಚೊಕ್ಕಾಡಿ ಫೀಡರುಗಳಲ್ಲಿ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ಹಾಗೂ ಸುಳ್ಯ...
Loading posts...

All posts loaded

No more posts

error: Content is protected !!