Ad Widget

ಮುಂಜಾಗ್ರತಾ ಕ್ರಮ ಅನುಸರಿಸಿಲ್ಲ ಎಂದು ಕಲ್ಲುಗುಂಡಿಯ ವೈನ್ ಶಾಪ್ ಗೆ ಪಂಚಾಯತ್ ನೋಟೀಸ್

ಕಲ್ಲುಗುಂಡಿಯ ಕವಿತಾ ವೈನ್ಸ್ ತನ್ನ ಗ್ರಾಹಕರಿಗೆ ಸಾಮಾಜಿಕ ಅಂತರ ಕಾಪಾಡಲು ಸೂಚಿಸದಿರಿವುದು ಹಾಗೂ ಮಾಸ್ಕ್ ಧರಿಸದೇ ಗ್ರಾಹಕರು ಬರುತ್ತಿರುವುದನ್ನು ಗಮನಿಸಿದ ಗ್ರಾಮ ಪಂಚಾಯತ್ ನೋಟೀಸ್ ನೀಡಿದೆ. ಈ ನೋಟೀಸ್ ನಲ್ಲಿ ಸಮಯ ಪಾಲನೆ ಮಾಡದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಪಂಚಾಯತ್ ಸೂಚನೆಯನ್ನು ನಿರ್ಲಕ್ಷಿಸಿರುವುದರಿಂದ ಪರವಾನಿಗೆಯನ್ನು ರದ್ದುಗೊಳಿಸುವ ಬಗ್ಗೆ ತೀರ್ಮಾನಿಸಲಾಗಿದೆ....

ದ.ಕ.ಕೊರೋನಾ ಮಹಾಸ್ಫೋಟ | ಇಂದು 83 ಪಾಸಿಟಿವ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಮುಂದುವರೆದಿದೆ. ಜಿಲ್ಲೆಯಲ್ಲಿ ಇಂದು 83 ಜನರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಮೂಲಗಳು ಹೇಳಿವೆ. ಸೋಂಕಿತರನ್ನು ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಮಧ್ಯಾಹ್ನ ಸೋಂಕು ಪೀಡಿತ ಮೂಡಬಿದ್ರೆ ನಿವಾಸಿಯೊಬ್ಬರು ಸಾವನ್ನಪ್ಪಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಇದುವರೆಗೆ 26 ಮಂದಿ ಪ್ರಾಣ ಕಳೆದುಕೊಂಡಿದ್ದು,...
Ad Widget

*ಸುಳ್ಯ ವರ್ತಕರ ಸಂಘದ ಸಭೆ-ಅಗಲಿದ ಹಿರಿಯ ವರ್ತಕ ಸುಂದರ ಸರಳಾಯ ,ಡಾ. ಸುಗುಣ, ಸುಂದರಿ ಯವರಿಗೆ ಶ್ರದ್ಧಾಂಜಲಿ*

ಸುಳ್ಯ ತಾಲೂಕು ವರ್ತಕರ ಸಂಘದ ಸಭೆ ಸುಳ್ಯ ಎಪಿಎಂಸಿ ಸಭಾಂಗಣದಲ್ಲಿ ಇಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ವಹಿಸಿದ್ದರು. ವೇದಿಕೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಿರೀಶ್ ಉಪಾಧ್ಯಕ್ಷ ಪ್ರಭಾಕರ್ ನಾಯರ್ ಕೋಶಾಧಿಕಾರಿ ಸುರೇಶ್ ಚಂದ್ರ ಕಮಿಲ ,ಉಪಸ್ಥಿತರಿದ್ದರು. ಸಭೆಯಲ್ಲಿ  ಇತ್ತೀಚಿಗೆ ಅಗಲಿದ ಹಿರಿಯ ವರ್ತಕ ಸುಂದರ ಸರಳಾಯ ,ಡಾಕ್ಟರ್...

ಗುತ್ತಿಗಾರು – ಸಂಜೆ 4 ರವರೆಗೆ ಮಾತ್ರ ಅಂಗಡಿ ತೆರೆಯಲು ವರ್ತಕರ ಸ್ವಯಂ ನಿರ್ಧಾರ

ಗುತ್ತಿಗಾರು - ಸಂಜೆ 4 ರವರೆಗೆ ಮಾತ್ರ ಅಂಗಡಿ ತೆರೆಯಲು ವರ್ತಕರ ಸ್ವಯಂ ನಿರ್ಧಾರಗುತ್ತಿಗಾರು ವರ್ತಕರ ಸಂಘ, ಗ್ರಾಮ ಪಂಚಾಯತ್ ಹಾಗೂ ಕೊರೊನಾ ತುರ್ತು ಕಾರ್ಯಪಡೆ ಜಂಟಿಯಾಗಿ ಜು.7 ರಂದು ಗಿರಿಜನ ಸಭಾಭವನದಲ್ಲಿ ಕೊರೊನಾ ತಡೆ ಜಾಗೃತಿ ಸಭೆ ಜರುಗಿತು.ಈ ಸಭೆಯಲ್ಲಿ ಒಮ್ಮತದ ನಿರ್ಧಾರ ಕ್ಕೆ ಬರಲಾಗಿ ನಾಳೆಯಿಂದಲೇ ಜು 8 ರಿಂದ ಜು 25ರವರೆಗೆ...

ಕೊಲ್ಲಮೊಗ್ರದ ಮಧುಶಂಕರ್‌ಗೆ ಪಿಎಚ್‌ಡಿ ಪದವಿ

ಮಣಿಪಾಲ ಸ್ಕೂಲ್ ಆಫ್ ಇನ್ಫಾರ್ಮೇಶನ್ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮಧುಶಂಕರ ಎಂ . ಅವರಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ( ಮಾಹೆ ) ಪಿಎಚ್‌ಡಿ ಪದವಿ ನೀಡಿದೆ . ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗ ಪ್ರಾಧ್ಯಾಪಕ ಮತ್ತು ಸಹ ನಿರ್ದೇಶಕ ಡಾ.ಸೋಮಶೇಖರ ಭಟ್ ಮತ್ತು ಮಣಿಪಾಲ ಸ್ಕೂಲ್ ಆಫ್...

ಪುತ್ತೂರು: ಆವರಣ ಗೋಡೆ ಕುಸಿದು ಮಹಿಳೆ ಮೃತ್ಯು

ಪುತ್ತೂರು : ಆವರಣಗೋಡೆ ಕುಸಿದು ಬಿದ್ದು ಮಹಿಳೆಯೊಬ್ಬರು ಅದರ ಅಡಿಯಲ್ಲಿ ಸಿಲುಕಿ ಮೃತಪಟ್ಟ ಘಟನೆ ಪುತ್ತೂರಿನ ಪರ್ಲಡ್ಕ ಸಮೀಪ ಗೋಳಿತೊಟ್ಟು ಎಂಬಲ್ಲಿ ಇಂದು ನಡೆದಿದೆ . ಕೆಎಸ್‌ಆರ್‌ಟಿಸಿ ಬಸ್ಸು ಚಾಲಕ ಚಂದ್ರ ಶೇಖರ್ ರವರ ಪತ್ನಿ ವಸಂತಿ ( 49 ) ಮೃತಪಟ್ಟ ದುರ್ದೈವಿ. ಮನೆಯ ಹಿಬ್ಬಂದಿಯ ಜಗಲಿಯಲ್ಲಿ ಬೀಡಿ ಕಟ್ಟುತ್ತಿದ್ದಾಗ ಎದುರಿನ ಮನೆಯ ಅವರಣ...

ಸತತ 3 ನೇ ಬಾರಿಗೆ ಜಿಲ್ಲಾ ಮಟ್ಟದಲ್ಲಿ ಸಂತೋಷ್ ಕುಮಾರ್ ರೈ ಗೆ ಅತ್ಯುತ್ತಮ ಯೋಜನಾಧಿಕಾರಿ ಪ್ರಶಸ್ತಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕು ಇದರ ಯೋಜನಾಧಿಕಾರಿಯಾದ ಸಂತೋಷ್ ಕುಮಾರ್ ರೈ ಯವರಿಗೆ ಸತತ 3 ನೇ ಬಾರಿಗೆ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಯೋಜನಾಧಿಕಾರಿ ಪ್ರಶಸ್ತಿ ಪಡೆದುಕೊಂಡಿರುತ್ತಾರೆ.2019-20 ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಮಾಡಿದ ಉತ್ತಮ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಅವಧಿಯಲ್ಲಿ ಪ್ರಗತಿನಿಧಿ ವಿತರಣೆ 60 ಕೋಟಿ, ತಂಡಗಳ...

ಔಷಧಿ ಖರೀದಿಸಿದವರ ವಿವರ ಪಡೆಯದ 110 ಮೆಡಿಕಲ್ ಶಾಪ್ ಗಳ ಪರವಾನಗಿ ರದ್ದು

ಬೆಂಗಳೂರು : ಕೋವಿಡ್‍ಗೆ ಸಂಬಂಧಿಸಿದ ರೋಗ ಲಕ್ಷಣಗಳಾದ ನೆಗಡಿ, ಕೆಮ್ಮು, ಜ್ವರ ಇನ್ನಿತರೆ ಆರೋಗ್ಯ ಸಮಸ್ಯೆಗಳಿಗೆ ಔಷಧ ಖರೀದಿಸಿದವರ ವಿವರಗಳನ್ನು ಫಾರ್ಮಾ ಪೋರ್ಟ್‍ನಲ್ಲಿ ಭರ್ತಿ ಮಾಡದ ಔಷಧಿ ಅಂಗಡಿಗಳ ಪರವಾನಗಿಗಳನ್ನು ಅಮಾನತುಪಡಿಸಲಾಗಿದೆ. ಮೆಡಿಕಲ್ ಶಾಪ್‍ಗಳಲ್ಲಿ ಔಷಧಿ ಖರೀದಿಸುವವರ ವಿವರಗಳನ್ನು ಪಡೆಯದೆ ಔಷಧಿ ಮಾರಾಟ ಮಾಡಲಾಗುತ್ತಿದೆ. ಕೋವಿಡ್ ಸಂದಿಗ್ದ ಪರಿಸ್ಥಿತಿಯಲ್ಲಿ ಇಂತಹ ಬೇಜವಾಬ್ದಾರಿ ತೋರಿರುವ ಔಷಧಿ ಮಳಿಗೆಗಳ...

ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಕೇರಳ ಗಡಿಯಲ್ಲಿ ಬಿಗುವಿನ ವಾತಾವರಣ

ಕರ್ನಾಟಕ ರಾಜ್ಯದಲ್ಲಿ ಕೊರೊನ ಮಹಾಮಾರಿ ಅಟ್ಟಹಾಸ ಮೆರೆದಿದ್ದು ಇದರಿಂದ ಕೇರಳ-ಕರ್ನಾಟಕ ಸಂಪರ್ಕಿಸುವ ಸಂಪೂರ್ಣ ಗಡಿ ಭಾಗಗಳನ್ನು ಕೇರಳ ಸರ್ಕಾರ ಮುಚ್ಚಿಸಿದೆ. ಕಾಸರಗೋಡು ಭಾಗಗಳಿಂದ ಮಂಗಳೂರಿಗೆ ಉದ್ಯೋಗಕ್ಕಾಗಿ ಹಾಗೂ ಅತ್ಯಾವಶ್ಯಕ ಕೆಲಸಕಾರ್ಯಗಳಿಗಾಗಿ ಆಸ್ಪತ್ರೆ ಗಳಿಗಾಗಿ ಜನರು ಮಂಗಳೂರಿನ ಅವಲಂಬಿಸಿಕೊಂಡಿದ್ದಾರೆ ಸರ್ಕಾರ ಕೈಗೊಂಡ ಈ ಕ್ರಮದಿಂದ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.ಕೇರಳದ ಕಾಸರಗೋಡು ಮಂಜೇಶ್ವರ ಭಾಗದಿಂದ ಮಂಗಳೂರಿಗೆ ಬರುತ್ತಿದ್ದ ಜನರು...

ಶಿಲ್ಪಕಲೆಯ ಮೀರಿಸುವಂತಿದೆ ಗೆರಟೆಯ ಮೇಲಿನ ಕೈಚಳಕ – ಶಿಕ್ಷಕರ ಕಲ್ಪನೆಗೆ ಅರಳಿದ ಕಲಾಕೃತಿಗಳ ಒಂದು ಪರಿಚಯ

ಗೆರಟೆಯಿಂದ ರಚನೆಯಾದ ಕಲಾಕೃತಿ ಎಲ್ಲಿಯೋ ಬಿಸಾಡಿ ಹೋಗುವ, ಒಲೆ ಸೇರಿ ಬೂದಿಯಾಗುವ ಗೆರಟೆಗೆ ಕಲಾತ್ಮಕತೆ ಕೊಟ್ಟರೇ ಹೇಗೆ ಶೋಕೇಸ್ ಸೇರುವುದೆಂದೂ ನಿಮಗೆ ಗೊತ್ತೆ. ಅಮರ ಸುದ್ದಿ ಈ ಬಗ್ಗೆ ಎಲೆಮರೆಯ ಕಾಯಿಯಂತಿದ್ದ ಚಿತ್ರಕಲಾ ಶಿಕ್ಷಕರೊಬ್ಬರ ಕಲೆಯ ಮೇಲೆ ಬೆಳಕು ಚೆಲ್ಲಿದೆ.ತೆಂಗಿನಕಾಯಿಯ ಗೆರಟೆಗೆ ಚಿತ್ರಕಲಾ ಶಿಕ್ಷಕರ ಕೈಗೆ ಸಿಕ್ಕಿದರೇ ಏನೆಲ್ಲಾ ಆಕರ್ಷಣಿಯ ವಸ್ತುವನ್ನಾಗಿ ಮಾಡುಬಹುದು ಎಂದು ಇಲ್ಲಿದೇ...
Loading posts...

All posts loaded

No more posts

error: Content is protected !!