“ ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ”

ಮಾರ್ಚ್ 8 ರಂದು ಆಚರಿಸುವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಪ್ರಪಂಚದ ಎಲ್ಲಾ ಮಹಿಳೆಯರ ಸ್ಥಾನಮಾನ ಹೆಚ್ಚಿಸುವತ್ತ ಹಾಗೂ ಹಾಗೂ ಅವರು - ಅವರ ಕುಟುಂಬದ ಬಗೆಗಿನ ಆರೋಗ್ಯ ರಕ್ಷಣೆಯತ್ತ ಒತ್ತುಕೊಡುತ್ತಿದ್ದಾರೆ. ಈ ನಮ್ಮ ದೇಶದಲ್ಲಿ “ ಪಿತಾ ರಕ್ಷತಿ ಕೌಮಾರೆ ಭರ್ತಾ ರಕ್ಷತಿ ಯೌವ್ವನೇ, ರಕ್ಷಂತೆ ಸ್ಥಾವರೇ ಪುತ್ರ, ನಾ ಸ್ತ್ರೀ ಸ್ವಾತಂತ್ರ್ಯ ಮರ್ಹತೀ”. ಅಂದರೆ...

ಬಿ ಜೆ ಪಿ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿ ಹರ್ಷಿತ್ ಪೆರುವಾಜೆ

ಬಿಜೆಪಿ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿ ಹರ್ಷಿತ್ ಪೆರುವಾಜೆ ನೇಮಕಗೊಂಡಿದ್ದಾರೆ.ಕಳೆದ ಅವಧಿಯಲ್ಲಿ ಬಿ ಜೆ ಪಿ ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
Ad Widget

ಸುಬ್ರಹ್ಮಣ್ಯ ಆರೋಗ್ಯ ಕೇಂದ್ರಕ್ಕೆ ಪ್ರಿಂಟರ್ ಕೊಡುಗೆ

       ಸುಬ್ರಹ್ಮಣ್ಯ ಮಾ.7: ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಿಜಯ ಗ್ರಾಮೀಣ ಪ್ರತಿಷ್ಠಾನ ಸಂಸ್ಥೆಮಂಗಳೂರು ಇವರು ಎರಡು ಕಂಪ್ಯೂಟರ್ ಪ್ರಿಂಟರ್ಗಳನ್ನು ಇಂದು ಗುರುವಾರ ಕೊಡುಗೆಯಾಗಿ ನೀಡಿರುತ್ತಾರೆ.                               ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ಮಂಗಳೂರಿನ ವಿಜಯ ಗ್ರಾಮೀಣ ಪ್ರತಿಷ್ಠಾನ ಸಂಸ್ಥೆಯ ಕಾರ್ಯದರ್ಶಿ ರಾಜೇಂದ್ರ ರೈ ಬೆಳ್ಳಿಪಾಡಿ ಇವರು ಆರೋಗ್ಯ ಕೇಂದ್ರದ ಆಡಳಿತ...

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಕೆವಿಜಿ ಸಮೂಹ ಸಂಸ್ಥೆ ಇದರ ವತಿಯಿಂದ ಸುಳ್ಯ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಮಾ.7ರಂದು ನಡೆಯಿತು.ಕರ್ನಾಟಕ ಸರ್ಕಾರದ ಮೀನುಗಾರಿಕಾ ಸಹಾಯಕ ನಿರ್ದೇಶಕಿ ಮಿಲನ ಕೆ. ಭರತ್ ಉದ್ಘಾಟಿಸಿದರು. ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಲಿಬರಲ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ.ಕೆ ವಿ ಚಿದಾನಂದ ವಹಿಸಿದರು. ಅಕಾಡೆಮಿ ಲಿಬರಲ್...

ಸುಳ್ಯ : ವಿದ್ಯುತ್ ಗುತ್ತಿಗೆದಾರರ ಸಂಘದ ಸಮೃದ್ಧಿ ಸಭಾಭವನ ಲೋಕಾರ್ಪಣೆ

ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ನಿರ್ಮಾಣಗೊಂಡ ಸಮೃದ್ಧಿ ಸಮದಾಯ ಭವನ ಇಂದು ಲೋಕಾರ್ಪಣೆಗೊಂಡಿತು. ಸಭಾಭವನದ ಉದ್ಘಾಟನೆಯನ್ನು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ್ ಸಭಾಭವನ ಉದ್ಘಾಟಿಸಿದರು. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಉರ್ಬನ್ ಪಿಂಟೋ ಸಂಘದ ಕಛೇರಿ ಉದ್ಘಾಟಿಸಿದರು. ಶಾಸಕಿ ಭಾಗೀರಥಿ ಮುರುಳ್ಯ ದೀಪ ಪ್ರಜ್ವಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸೋಮಶೇಖರ...

ಸುಳ್ಯ : ವಿದ್ಯುತ್ ಗುತ್ತಿಗೆದಾರರ ಸಂಘದ  ಸಮೃದ್ಧಿ ಸಭಾಭವನ ಲೋಕಾರ್ಪಣೆ

ಅನುಮತಿ ಪಡೆದ  ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ನಿರ್ಮಾಣಗೊಂಡ ಸಮೃದ್ಧಿ ಸಮದಾಯ ಭವನ ಮಾ.7ರಂದು ಲೋಕಾರ್ಪಣೆಗೊಂಡಿತು. ಸಭಾಭವನದ ಉದ್ಘಾಟನೆಯನ್ನು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ್ ಸಭಾಭವನ ಉದ್ಘಾಟಿಸಿದರು. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಉರ್ಬನ್ ಪಿಂಟೋ ಸಂಘದ ಕಛೇರಿ ಉದ್ಘಾಟಿಸಿದರು. ಶಾಸಕಿ ಭಾಗೀರಥಿ ಮುರುಳ್ಯ ದೀಪ ಪ್ರಜ್ವಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸೋಮಶೇಖರ...

ಚೊಕ್ಕಾಡಿ :  ಮೈಮೇಲೆ ದನ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತ್ಯು 

ವ್ಯಕ್ತಿಯೊಬ್ಬರ ಮೈಮೇಲೆ ದನ ಬಿದ್ದು ತೀವ್ರ ಜಖಂಗೊಂಡು ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದ ಘಟನೆ ಚೊಕ್ಕಾಡಿಯಿಂದ ವರದಿಯಾಗಿದೆ. ಅಮರಪಡೂರು ಗ್ರಾಮದ ಚೊಕ್ಕಾಡಿಯ ನಿವಾಸಿ ನಡುಗಲ್ಲು ರಾಧಾಕೃಷ್ಣರವರು ಫೆ.27 ರಂದು ತಮ್ಮ ದನವನ್ನುಮೇಯಿಸಲು ಕಟ್ಟಿ ಹಾಕಲೆಂದು ತೋಟದ ಬದಿಯಲ್ಲಿ ಕರೆದೊಯ್ಯುತ್ತಿರುವಾಗ ಬರೆಯಲ್ಲಿ ಜಾರಿ ಬಿದ್ದರು. ಈ ವೇಳೆ ದನದ ಕುತ್ತಿಗೆಗೆ ಕಟ್ಟಿದ್ದ ಹಗ್ಗ ಅವರ ಕೈಯಲ್ಲಿದ್ದುದರಿಂದ ಎಳೆಯಲ್ಪಟ್ಟು ದನವು...

ಸುಳ್ಯ;  ಮಾ. 10 ರಂದು ಗ್ಯಾರಂಟಿ ಸಮಾವೇಶ

ಸುಳ್ಯ ತಾಲೂಕಿನಲ್ಲಿ ಮಾ. 10 ರಂದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವು ನಡೆಯಲಿದೆ.ಕರ್ನಾಟಕ ರಾಜ್ಯ ಸರಕಾರವು ನೀಡುತ್ತಿರುವ ಅನ್ನಭಾಗ್ಯ, ಸ್ತ್ರೀಶಕ್ತಿ, ಗೃಹಲಕ್ಷ್ಮಿ, ಯುವನಿಧಿ, ಗೃಹ ಜ್ಯೋತಿ ಯೋಜನೆಗಳ ಫಲಾನುಭವಿಗಳ ಸಭೆಯನ್ನು ಸರಕಾರದ ವತಿಯಿಂದ ನಡೆಸಲಾಗುವುದು. ಈ ಸಮಾವೇಶವು ಸುಳ್ಯದ ಪರಿವಾರಕಾನದಲ್ಲಿರುವ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಂಗಣದಲ್ಲಿ ನಡೆಯಲಿದೆ. ಸುಮಾರು 2500 ರಿಂದ 3000 ಮಂದಿ...

ನವೀನ್ ಚಾತುಬಾಯಿಯವರಿಗೆ ಉಳ್ಳಾಲ ಕೃಷಿ ಮತ್ತು ತೋಟಗಾರಿಕಾ ಕೇಂದ್ರದಿಂದ ಜಿಲ್ಲಾ ಪ್ರಗತಿಪರ ಕೃಷಿಕ ಪುರಸ್ಕಾರ

   ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಕೃಷಿಕ ನವೀನ್ ಚಾತುಬಾಯಿಯವರಿಗೆ ಉಳ್ಳಾಲ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಿಂದ ಜಿಲ್ಲಾ ಮಟ್ಟದ ಪ್ರಗತಿಪರ ಕೃಷಿಕ ಪುರಸ್ಕಾರ ದೊರೆಯಿತು. ಮಾರ್ಚ್ 6ರಂದು ಉಳ್ಳಾಲದಲ್ಲಿ ನಡೆದ ಗೇರು ಮೇಳ ಮತ್ತು ವಿಚಾರ ಸಂಕಿರಣ-2024 ಕಾರ್ಯಕ್ರಮದಲ್ಲಿ ಜಿಲ್ಲೆಯ 5 ಜನ ಪ್ರಗತಿಪರ ಕೃಷಿಕರಿಗೆ ಪುರಸ್ಕಾರ ಮಾಡಿ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಗೇರು...

ಅಯೋಧ್ಯೆಗೆ ತೆರಳಿದ ಸುಳ್ಯದ ಬಿಜೆಪಿ ಕಾರ್ಯಕರ್ತರು

ಶ್ರೀ ರಾಮಚಂದ್ರನ ಜನ್ಮಭೂಮಿ ಅಯೋಧ್ಯೆಗೆ ಸುಳ್ಯದಿಂದ ಬಿಜೆಪಿ‌ ಕಾರ್ಯಕರ್ತರು  ಮಾ.6 ರಂದು  ತೆರಳಿದ್ದರು.ಬಿಜೆಪಿ‌ ಕಾರ್ಯಕರ್ತರ ತಂಡದಲ್ಲಿ ಪುರುಷರು ಹಾಗೂ ಮಹಿಳೆಯರು ಭಾಗಿಯಾಗಿದ್ದರು. ಶಾಸಕಿಕು. ಭಾಗೀರಥಿ ಮುರುಳ್ಯ ‌ಹಾಗೂ ಪಕ್ಷದ ಮುಖಂಡರು ಶುಭ ಹಾರೈಸಿ ಬೀಳ್ಕೊಟ್ಟರು.
Loading posts...

All posts loaded

No more posts

error: Content is protected !!