- Tuesday
- August 4th, 2026
ಪುತ್ತೂರು ಹಾಗೂ ಸುಳ್ಯದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಲು ಅರ್ಹ ಹಾಗೂ ಆಸಕ್ತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅಡ್ಮಿನಿಸ್ಟ್ರೇಟಿವ್ ಸ್ಟಾಫ್ ಹಾಗೂ ಕಛೇರಿ ಸಹಾಯಕಿಯರ ಹುದ್ದೆಗಳು ಖಾಲಿ ಇದ್ದು, ಯಾವುದೇ ಪದವಿ ಪೂರ್ಣಗೊಳಿಸಿದ ಕಡ್ಡಾಯವಾಗಿ ಬೇಸಿಕ್ ಕಂಪ್ಯೂಟರ್ ಜ್ಞಾನವನ್ನು ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದ್ದು, ಸೂಕ್ತ ಅರ್ಹತೆ ಇರುವವರಿಗೆ ಹಾಗೂ ಅನುಭವ ಇಲ್ಲದ ಫ್ರೆಶರ್ಸ್ಗಳಿಗೂ ಮುಕ್ತ...
ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ಸಂಪಾಜೆ ಕೊಡಗು ಇದರ ಆಶ್ರಯದಲ್ಲಿ ನಡೆಸುವ 33ನೇ ವರ್ಷದ ಗೌರಿ ಗಣೇಶೋತ್ಸವದ ನೂತನ ಪದಾಧಿಕಾರಿಗಳ ಆಯ್ಕೆಯು ಜೂ.06 ಶನಿವಾರದಂದು ಪಯಸ್ವಿನಿ ಪ್ರಾ.ಕೃ.ಪ.ಸ ಸಂಘದ ಸಭಾಭವನದಲ್ಲಿ ಸಮಿತಿಯ ಅಧ್ಯಕ್ಷರಾದ ವಿಕ್ರಾಂತ್ ಎಂ.ಬಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಹಿಂದಿನ ಬಾರಿಯ ಆಯ ವ್ಯಯ ಪತ್ರವನ್ನು ಗೌರವಾಧ್ಯಕ್ಷರಾದ ಬಿ.ಆರ್ ಶಿವರಾಮ ಮಂಡಿಸಿದರು. ಈ ಬಾರಿಯ ನೂತನ ಅಧ್ಯಕ್ಷರಾಗಿ...
ದ್ವಿತೀಯ ಪಿಯುಸಿ ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಸತತ ಎರಡನೇ ಬಾರಿಗೆ ಶೇ.100 ಫಲಿತಾಂಶ ಪಡೆದ ಗುತ್ತಿಗಾರು ಸರಕಾರಿ ಪದವಿಪೂರ್ವ ಕಾಲೇಜನ್ನು ಗುತ್ತಿಗಾರು ಲಯನ್ಸ್ ಕ್ಲಬ್ ವತಿಯಿಂದ ಜಿಲ್ಲಾ ರಾಜ್ಯಪಾಲರ ಭೇಟಿಯ ಸಂದರ್ಭದಲ್ಲಿ ಗೌರವಿಸಲಾಯಿತು. ಕಾಲೇಜು ಪ್ರಾಂಶುಪಾಲರಾದ ಚೆನ್ನಮ್ಮ.ಪಿ ಇವರು ಗೌರವ ಸ್ವೀಕರಿಸಿದರು.
ದಿನಾಂಕ : 10 ಜೂನ್ 2026ವಾರ : ಬುಧವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಜೂನ್ 10) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 390 ರಿಂದ...
ಸುಬ್ರಹ್ಮಣ್ಯ ಜೂನ್ 09 : ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್, ರೋಟರಿ ಕ್ಲಬ್ ಸುಬ್ರಹ್ಮಣ್ಯ ಹಾಗೂ ಟೀಂ ಈಶ್ವರ್ ಮಲ್ಪೆ ಇವರುಗಳ ಸಹಯೋಗದೊಂದಿಗೆ ಜೂ.09 ರಂದು ಶ್ರೀಮಠದ ಆವರಣದಲ್ಲಿ ಉಚಿತ ಕಿವಿಯ ಶ್ರವಣ ತಪಾಸಣಾ ಶಿಬಿರ ಹಾಗೂ ಶ್ರವಣ ಯಂತ್ರಕ್ಕೆ ಸಹಾಯಧನ ಹಾಗೂ ವಿತರಣೆ ಕಾರ್ಯಕ್ರಮ ನಡೆಯಿತು.ಸುಬ್ರಹ್ಮಣ್ಯ ಶ್ರೀ ಸಂಪುಟ...
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಸುಳ್ಯ, ಪಯಸ್ವಿನಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ(ರಿ.) ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ 08 ರಂದು “ಟಿ.ಬಿ ನಿರ್ಮೂಲನೆ, ಮುಟ್ಟಿನ ನೈರ್ಮಲ್ಯ ದಿನ, ಗರ್ಭಕೋಶದ ಕ್ಯಾನ್ಸರ್ ಹಾಗೂ...
ದೇವಚಳ್ಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ.09 ರಂದು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಇಕೋ ಕ್ಲಬ್ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ಪ್ರಾದೇಶಿಕ ಅರಣ್ಯ ವಿಭಾಗ ಸುಬ್ರಹ್ಮಣ್ಯ ಉಪ ವಿಭಾಗ, ಸುಳ್ಯ ವಲಯ ಇದರ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಮತ್ತು ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ನೆಲ್ಲೂರು ಕೆಮ್ರಾಜೆ ಶಾಖೆ ಉಪ...
ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ ಮೊ: 9591969197ದಿನಾಂಕ:10-06-2026 ಬುಧವಾರ*01,🐏ಮೇಷ ರಾಶಿ🐏*📃,ಇಂದು ನಿಮಗೆ ತುಂಬಾ ಶುಭ ದಿನ. ವೃತ್ತಿಪರ ಜೀವನದಲ್ಲಿ ನೀವು ಒಳ್ಳೆಯ ಸುದ್ದಿಯನ್ನು ಸ್ವೀಕರಿಸುತ್ತೀರಿ. ಉನ್ನತ ಅಧಿಕಾರಿಗಳ ಬೆಂಬಲದಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ವ್ಯರ್ಥ ಪ್ರಯಾಣವನ್ನು ಮಾಡಬೇಕಾಗುತ್ತದೆ. ಕುಟುಂಬದ ಸದಸ್ಯರೊಂದಿಗೆ ದೈವಿಕ ದರ್ಶನ ಪಡೆಯುತ್ತೀರಿ. ಒಂದು ವ್ಯವಹಾರದಲ್ಲಿ ಬಂಧುಗಳೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ಆರ್ಥಿಕ ಗೊಂದಲ...
ಕಿರುಬೆರಳ ತುದಿ ಹಿಡಿದು ಊರೆಲ್ಲಾ ನಡೆಸುವಿರಿ, ಬಿದ್ದಾಗ ಹಿಡಿದೆತ್ತಿ ಕಣ್ಣೀರ ಒರೆಸುವಿರಿ, ತಪ್ಪು ದಾರಿ ಹಿಡಿದಾಗ ಬೈದು ಬುದ್ಧಿ ಹೇಳುವಿರಿ, ಸರಿದಾರಿ ತೋರಿ ಸದಾ ಬೆನ್ನಹಿಂದೆ ನಿಲ್ಲುವಿರಿ, ಸೋತಾಗ ಜೊತೆನಿಂತು “ನಾವಿದ್ದೇವೆ” ಎನ್ನುವಿರಿ, ನಾವು ಗೆದ್ದಾಗ ಅಲ್ಲೆಲ್ಲೋ ದೂರದಲ್ಲೇ ನಿಲ್ಲುವಿರಿ, ಆದರೆ ಮನದೊಳಗೆ ನೀವು ನಮಗಿಂತ ಹೆಚ್ಚು ಸಂಭ್ರಮಿಸುವಿರಿ...ಬದುಕಿನಲ್ಲಿ ಕಷ್ಟಗಳೆಷ್ಟೇ ಬಂದರೂ ನಮ್ಮೆದುರು ಸದಾ ನಗು-ನಗುತ್ತಲೇ...
ಎಲಿಮಲೆಯ ದೇವಚಳ್ಳ ಮಾ.ಹಿ.ಪ್ರಾ. ಶಾಲೆ, ಜ್ಞಾನದೀಪ ಎಲಿಮಲೆ ಹಾಗೂ ಎಲಿಮಲೆ ಪ್ರೌಢಶಾಲೆಯ ವಿದ್ಯಾರ್ಥಿಗಳು ನಿತ್ಯ ಸಂಚರಿಸುವ ಪ್ರದೇಶದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಬೃಹತ್ ಮರವೊಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.ಈ ಮುಖ್ಯ ರಸ್ತೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ನೂರಾರು ಮಂದಿ ಪ್ರತಿದಿನ ಓಡಾಟ ನಡೆಸುತ್ತಿದ್ದು, ಬಸ್ಗಾಗಿ ಕಾಯುವವರ ಸಂಖ್ಯೆಯೂ ಹೆಚ್ಚಾಗಿದೆ. ಅಲ್ಲದೆ, ಹಲವಾರು ವಾಹನಗಳು ಮರದಡಿಯಲ್ಲಿ ಪಾರ್ಕಿಂಗ್...
Loading posts...
All posts loaded
No more posts
