- Sunday
- September 20th, 2026
ಅಮರಮುಡ್ನೂರು ಗ್ರಾಮದ ಚೆನ್ನಪರಿ ಸಮೀಪದ ಅಚ್ಚಿಪಳ್ಳದಲ್ಲಿ ಆ.09ರಂದು ಈ ವರ್ಷದ ಕೆಸರುಗದ್ದೆ ಕ್ರೀಡಾಕೂಟ ಹಾಗೂ ಧಾರ್ಮಿಕ ಕಾರ್ಯಕ್ರಮವು ಗರುಡ ಯುವಕ ಮಂಡಲ(ರಿ.) ಚೊಕ್ಕಾಡಿ ಮತ್ತು ಮಯೂರಿ ಯುವತಿ ಮಂಡಲ(ರಿ.) ಚೊಕ್ಕಾಡಿ ಇವರ ಜಂಟಿ ಆಶ್ರಯದಲ್ಲಿ, ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಇದರ ಸಹಯೋಗದೊಂದಿಗೆ ಸಂಭ್ರಮದಿಂದ ನಡೆಯಿತು. ಶ್ರೀಮತಿ ಸ್ವಾತಿ ಪಡ್ಪು ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು....
ಕಾಂಚನ ಹುಂಡೈ ನ ಪ್ರಸಾದ್ ಕಾಂಚನ್ ಅವರು ಇತ್ತೀಚೆಗೆ ರಾಮ ಭಕ್ತರ ಬಗ್ಗೆ ನೀಡಿದ ಅವಹೇಳನಕಾರಿ ಹೇಳಿಕೆ ಖಂಡಿಸಿ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿದ್ದ ಕಾರು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸುಬ್ರಹ್ಮಣ್ಯದ ಹಿಂದು ಪ್ರಮುಖರು ಆಗಮಿಸಿ, ಹೇಳಿಕೆಯನ್ನು ಖಂಡಿಸಿ ಪ್ರತಿಭಟಿಸಿದ ಘಟನೆ ನಡೆದಿದ್ದು, ಹಿಂದು ಮುಖಂಡರು ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಮಾತ್ರವಲ್ಲದೆ ಸಮಸ್ತ ಹಿಂದೂ ರಾಮಭಕ್ತರ ಕ್ಷಮೆಯನ್ನು...
ಸುಳ್ಯ: ಪ್ರಜಾಧ್ವನಿ ಕರ್ನಾಟಕ, ಪ್ರಜ್ಞಾವಂತ ಭಾರತ, ಶಾಲಾ ಶಿಕ್ಷಣ ಇಲಾಖೆ ಹಾಗೂ ಶಾರದಾ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ ಇದರ ಸಂಯುಕ್ತ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ ಮತ್ತು ಸಂವಾದ ಕಾರ್ಯಕ್ರಮವು ಆ. 11 ರಂದು ಶಾರದಾ ಹೈ ಸ್ಕೂಲ್ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಗಣ್ಯ ಅತಿಥಿಗಳು ಜ್ಯೋತಿ...
ಸುಳ್ಯ ತಾಲೂಕು ಕಚೇರಿಗೆ ಅ.12 ರಂದು ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ, ಕಚೇರಿಯ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ ಕಡತ ಪರಿಶೀಲನೆ ನಡೆಸಿದ್ದಾರೆ. ಉಡುಪಿ ಲೋಕಾಯುಕ್ತ ಡಿ.ವೈ.ಎಸ್.ಪಿ ಹಾಲ್ ಮೂರ್ತಿ ರಾವ್ ನೇತೃತ್ವದ ತಂಡ ಭೇಟಿ ನೀಡಿದೆ.ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳು ಮತ್ತು ಕಡತಗಳನ್ನು ಪರಿಶೀಲಿಸುವ ಉದ್ದೇಶದಿಂದ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ,...
ದೇವಚಳ್ಳ ಸಮುದಾಯ ಅರೋಗ್ಯ ಅಧಿಕಾರಿ ಮೋನಿಷಾ ಜಿ.ಎಸ್ ರವರಿಗೆ ಎಮ್.ಎಸ್ಸಿ ಕ್ಲಿನಿಕಲ್ ನುಟ್ರಿಷನ್ ಮತ್ತು ಡಯೆಟಿಕ್ಸ್(M.sc in Clinical nutrition and dietetics) ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಎಲ್ಲಾ ಸೆಮಿಸ್ಟರ್ಗಳಲ್ಲಿ ಡಿಸ್ಟಿಂಕ್ಷನ್ ನಲ್ಲಿ ಉತ್ತಿರ್ಣಗೊಂಡಿರುತ್ತಾರೆ. ಇವರು ದೇವಚಳ್ಳ ಗ್ರಾಮದ ಅಚ್ರಪ್ಪಾಡಿ ಮತ್ತು ಮಾವಿನಕಟ್ಟೆ ಶಾಲೆಯ ವಿದ್ಯಾರ್ಥಿಗಳ ಸೇವಿಸುವ ನೂಟ್ರಿಷನ್ ಕುರಿತಾದ ಪ್ರಬಂಧ ಮಂಡಿಸಿದ್ದರು. ಈ...
ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 12 ಆಗಸ್ಟ್ 2026ವಾರ : ಬುಧವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಆಗಸ್ಟ್ 12) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ...
ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದಿನಂಪ್ರತಿ ಆಗಮಿಸುವ ಸಾವಿರಾರು ಭಕ್ತಾದಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸ್ಥಳೀಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು ಆಶ್ರಯಿಸುತ್ತಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಬಸ್ ನಿಲ್ದಾಣದ ಆವರಣದಲ್ಲಿ ಸಂಚರಿಸುವುದೇ ಸಾರ್ವಜನಿಕರಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿತ್ತು. ಬಸ್ ನಿಲ್ದಾಣದ ಇಕ್ಕೆಲಗಳಲ್ಲಿ, ಎದುರುಗಡೆಯ ಮಾರ್ಗದ ಬದಿಗಳಲ್ಲಿ...
ಸುಳ್ಯ : ಸುಳ್ಯ ವಲಯಾರಣ್ಯಾಧಿಕಾರಿಯಾಗಿ ನಿರಂಜನ್ ಶೆಟ್ಟಿ ಅವರು ಆಗಮಿಸುತ್ತಿದ್ದು, ಮೂಲತಃ ಕುಂದಾಪುರದವರಾದ ಅವರು ಈ ಹಿಂದೆ ಚಿಕ್ಕಮಗಳೂರು, ಬಾಳೆಹೊನ್ನೂರು ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ಹನೂರು(ಚಾಮರಾಜನಗರ)ನಿಂದ ವರ್ಗಾವಣೆಗೊಂಡು ಸುಳ್ಯಕ್ಕೆ ಆಗಮಿಸುತ್ತಾರೆ.ಈ ಮೊದಲು ಸುಳ್ಯ ವಲಯಾರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ್.ಎನ್ ಅವರು ಕುಶಾಲನಗರದ ವಲಯಾರಣ್ಯಾಧಿಕಾರಿ ಅರಣ್ಯ ತರಬೇತಿ ಕೇಂದ್ರಕ್ಕೆ ವರ್ಗಾವಣೆಗೊಂಡಿದ್ದಾರೆ.
ಕಡಬ : ವಿಶ್ವ ತುಳುವೆರ್ ಮಂಗಳೂರು ಹಾಗೂ ವಿಶ್ವ ತುಳುವೆರ್ ಕಡಬ ಘಟಕ ವತಿಯಿಂದ ಸಂಘ - ಸಂಸ್ಥೆಗಳ ಸಹಯೋಗದೊಂದಿಗೆ ಆಟಿ ಅಮವಾಸ್ಯೆ ದಿನದ ಪ್ರಯುಕ್ತ ಹಾಲೆ ಮರದ ಕೆತ್ತೆಯ ಕಷಾಯ(ಪಾಲೆದ ಕೆತ್ತೆದ ಕಷಾಯ) ಮತ್ತು ಆಟಿ ಅವಲಕ್ಕಿ ವಿತರಣೆ ಕಾರ್ಯಕ್ರಮ ಕಡಬ ಮಧ್ಯ ಪೇಟೆಯಲ್ಲಿ ಬುಧವಾರ ಬೆಳಗ್ಗೆ ನಡೆಯಿತು. ಸಾರ್ವಜನಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳು ಕಷಾಯ...
ಕೇಂದ್ರ ಸರಕಾರಕ್ಕೆ ನಮ್ಮ ರಾಜ್ಯದ ಬರ ಪೀಡಿತ ತಾಲೂಕಿನ ವರದಿ ಸಲ್ಲಿಸುವ ಸಮಯದಲ್ಲಿ ನಮ್ಮ ವಿಧಾನ ಸಭಾ ಕ್ಷೇತ್ರಕ್ಕಿಂತ ಹೆಚ್ಚು ಮಳೆಯಾಗಿರುವ ತಾಲೂಕನ್ನು ಬರ ಪೀಡಿತವೆಂದು ಸೇರಿಸಿದ್ದರೂ ನಮ್ಮ ವಿಧಾನ ಸಭಾ ಕ್ಷೇತ್ರವನ್ನು ಉದ್ದೇಶ ಪೂರ್ವಕವಾಗಿ ಕೈ ಬಿಟ್ಟಿದ್ದು ಕ್ಷೇತ್ರದ ಜನತೆಗೆ ಕಾಂಗ್ರೆಸ್ ಸರಕಾರ ಅಪಚಾರವೆಸಗಿದೆ ಹಾಗೂ ಸುಳ್ಳು ಹೇಳಿಕೆ ಬಿಟ್ಟು ಸಹಕಾರಿ ಸಂಘಗಳಿಗೆ ಬಾಕಿ...
Loading posts...
All posts loaded
No more posts
