- Wednesday
- August 12th, 2026
ಮುಕ್ಕೂರು : ಕುಂಡಡ್ಕ- ಮುಕ್ಕೂರು ನೇಸರ ಯುವಕ ಮಂಡಲ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಆಶ್ರಯದಲ್ಲಿ ಫೆ.13 ರಂದು ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ಮುಕ್ಕೂರು ಶಾಲಾ ವಠಾರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನುಶಿವಳ್ಳಿ ಸಂಪನ್ನ ಬೆಳಂದೂರು ವಲಯ ಅಧ್ಯಕ್ಷ ಮೋಹನ ಬೈಪಡಿತ್ತಾಯ ಉದ್ಘಾಟಿಸಲಿದ್ದಾರೆ. ನೇಸರ...
ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮದಲ್ಲಿ ಜಿಯೋ ಕೇಬಲ್ ಅಳವಡಿಸುವ ಸಂದರ್ಭದಲ್ಲಿ ಬಿ.ಎಸ್.ಎನ್.ಎಲ್ ಕೇಬಲ್ ಕಟ್ ಮಾಡಿದ್ದರು. ಇದರಿಂದಾಗಿ ಬಿ.ಎಸ್.ಎನ್.ಎಲ್. ಲ್ಯಾಂಡ್ ಲೈನ್ ಸಂಪರ್ಕ ಸರಿಯಾಗಿ ಇರಲಿಲ್ಲ. ಇದನ್ನು ಸ್ಥಳೀಯರೇ ಸೇರಿ ಹಳೆಯ ಕೇಬಲ್ ಗಳನ್ನೇ ಸರಿಪಡಿಸಿ ಲ್ಯಾಂಡ್ ಲೈನ್ ಸಂಪರ್ಕವನ್ನು ಸರಿಪಡಿಸಿದ್ದರು. ಆದರೆ ಕೆಲವರಿಗೆ ಇಂಟರ್ನೆಟ್ ಸಂಪರ್ಕ ಸಿಗುತ್ತಿರಲಿಲ್ಲ ಹಾಗೂ ಫೋನ್ ನಲ್ಲಿ ಮಾತನಾಡುವ...
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಾರ್ಯ ಮತ್ತು ಪಾಲನಾ ಉಪವಿಭಾಗ ಮಡಿಕೇರಿ ವತಿಯಿಂದ ಚೆಂಬು ಗ್ರಾ.ಪಂ.ಮಾಜಿ ಅಧ್ಯಕ್ಷ ಎನ್.ವಿ.ಕೃಷ್ಣಪ್ಪ ನಡುಬೆಟ್ಟು, ಪೆರಾಜೆ ಗ್ರಾಮದ ಥೋಮಸ್ ಬಿಳಿಯಾರು, ಕೊಡಗು ಸಂಪಾಜೆಯಿಂದ ಇಸ್ಮಾಯಿಲ್ ಚಡಾವುರವರನ್ನು ಸೆಸ್ಕ್ ಎಇಇ ಮಹೇಶ್ ಮತ್ತು ಸಿಬ್ಬಂದಿವರ್ಗದವರು ಸಂಪಾಜೆ ವಿದ್ಯುತ್ ಕಚೇರಿಯಲ್ಲಿ ಸನ್ಮಾನಿಸಿದರು.ಸಮಯಕ್ಕೆ ಮುಂಚಿತವಾಗಿಯೇ ಇವರು ವಿದ್ಯುತ್ ಬಿಲ್ ಪಾವತಿಸುತ್ತಿದ್ದರು. ಈ ಸಂದರ್ಭದಲ್ಲಿ...
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಫೆ.19ರಂದು ನೆಹರೂ ಸ್ಮಾರಕ ಕಾಲೇಜಿನಲ್ಲಿ ನಡೆಯುವ 25ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನೆಹರೂ ಸ್ಮಾರಕ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ, ಸಾಹಿತಿ ಡಾ.ಪೂವಪ್ಪ ಕಣಿಯೂರು ಅಧ್ಯಕ್ಷತೆಯಲ್ಲಿ ಫೆ.19 ರಂದು 25ನೇ ಕನ್ನಡ ಸಾಹಿತ್ಯ ಸಮ್ಮೇಳನ...
2021 ಪೆಬ್ರವರಿ 07 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯದ ಸದಸ್ಯರಿಂದ ಶ್ರಮದಾನ ಫೆ. 7 ರಂದು ನಡೆಯಿತು. ಘಟಕದ ಸಂಯೋಜಕರಾದ ಸತೀಶ್ ಟಿ.ಎನ್. ಹಾಗೂ ಮಣಿಕಂಠ ಕಟ್ಟ ಇವರ ನೇತೃತ್ವದಲ್ಲಿ ಗಡಿಕಲ್ಲು ವಿಷ್ಣುಮೂರ್ತಿ ದೈವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ದ್ವಾರವನ್ನು ಶ್ರಮಸೇವೆಯ ಮುಖಾಂತರ ಮಾಡಲಾಯಿತು. ಶ್ರೀ ಕ್ಷೇತ್ರ...
ಗೊನೆಯಾಗಿ ಕಡಿದ ಬಾಳೆಯಲ್ಲಿ ಮತ್ತೆ ಗೊನೆ ಬಂದು ಪ್ರಕೃತಿ ತನ್ನ ವೈಶಿಷ್ಟ್ಯತೆಯನ್ನು ಪ್ರದರ್ಶಿಸಿದೆ. ಈ ವಿಸ್ಮಯ ಯುವ ಸಾಹಿತಿ,ಕೃಷಿಕರು ಆಗಿರುವ ಗುತ್ತಿಗಾರು ಗ್ರಾಮದ ಹೊಸೊಳಿಕೆ ಯೋಗೀಶ್ ರವರ ತೋಟದಲ್ಲಿ ಕಂಡುಬಂದಿದೆ.
ನಿರಂತರವಾಗಿ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವ ಎಸ್ ಡಿ ಪಿ ಐ ಮುಖಂಡ ರಿಯಾಜ್ ಫರಂಗಿಪೇಟೆ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸುಳ್ಯ ಮಂಡಲ ಯುವ ಮೋರ್ಚಾ ವತಿಯಿಂದ ಸುಳ್ಯ ನಗರದ ಉಪ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು. ಸಕಾರಾತ್ಮಕವಾಗಿ ಸ್ಪಂದಿಸಿದ ಪೋಲಿಸ್ ಉಪ ನಿರೀಕ್ಷಕರು ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಈ ವೇಳೆ...
ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಾಯಗೊಂಡ ಘಟನೆ ಫೆ.8 ರಂದು ಬೆಳ್ಳಾರೆ ಸಮೀಪ ಅಯ್ಯನಕಟ್ಟೆ ಎಂಬಲ್ಲಿ ನಡೆದಿದೆ. ಸವಾರ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ವೇಳೆ ಅವರ ಮೊಬೈಲ್ ಕಳೆದು ಹೋಗಿದೆ ಎಂದು ತಿಳಿದುಬಂದಿದೆ. ಬೈಕ್ ಸವಾರರು ಚೊಕ್ಕಾಡಿ ಯಿಂದ ನಿಂತಿಕಲ್ಲ್ ಗೆ ಬೈಕ್ ನಲ್ಲಿ...
ಪಂಜದ ಪಲ್ಲೋಡಿ ಸಮೀಪ ರಕ್ಷಿತ್ ಕೇನ್ಯ ರವರ ಮೊಬೈಲ್ ಕಳೆದು ಹೋಗಿತ್ತು. ಇದು ಪಲ್ಲೋಡಿಯ ಅಪ್ಪಿ ಎಂಬವರಿಗೆ ಸಿಕ್ಕಿತ್ತು. ಅದನ್ನು ಅವರು ರಕ್ಷಿತ್ ಅವರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಅವರ ಪ್ರಾಮಾಣಿಕತೆಗೆ ಬಹುಮಾನ ನೀಡಿ ಗೌರವಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕು ಬೆಳ್ಳಾರೆ ವಲಯದ ಚೊಕ್ಕಾಡಿ ಒಕ್ಕೂಟದ ಕುಳ್ಳಾಜೆ ನಿವಾಸಿ ಮಾಣಿಕ ಇವರಿಗೆ ನಡೆದಾಡಲು ಅಸಾಧ್ಯವಾಗಿದ್ದು, ಇದಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ವೀಲ್ ಚೇರನ್ನು ವಿತರಣೆ ಮಾಡಲಾಯಿತು. ಈ ಸಂದರ್ಭ ವಲಯ ಮೇಲ್ವಿಚಾರಕ ಮುರಳೀಧರ, ಸೇವಾ ಪ್ರತಿನಿಧಿ ಶ್ರೀಮತಿ ಹರ್ಷಿತಾ,...
Loading posts...
All posts loaded
No more posts
