Ad Widget

ಬೆಳಕಿನ ಹಬ್ಬ ದೀಪಾವಳಿ

ಹಬ್ಬಗಳು ಮಾನವ ಜೀವನದ ಬಹುಮುಖ್ಯ ಅಂಶವಾಗಿದೆ. ಸಹೋದರತ್ವ, ಬಾಂಧವ್ಯ ಮತ್ತು ಮಾನವನ ಸಾಮಾಜಿಕ ಜೀವನವನ್ನು ಹಂಚಿಕೊಳ್ಳುವಂತಹ ಸಂಭ್ರಮಗಳಲ್ಲಿ ಹಬ್ಬಗಳು ಕೂಡ ಒಂದು. ಒಳ್ಳೆಯದು ಯಾವಾಗಲೂ ಕೆಟ್ಟದ್ದನ್ನು ಗೆಲ್ಲುತ್ತದೆ ಮತ್ತು ನಾವು ಕತ್ತಲೆಯನ್ನು ಬೆಳಕಿನಿಂದ ತೊಡೆದುಹಾಕಬೇಕು ಎಂದು ಹಬ್ಬವು ನಮಗೆ ಕಲಿಸುತ್ತದೆ. ನಿಮ್ಮ ನೆರೆಹೊರೆಯವರನ್ನು ತಿಳಿದುಕೊಳ್ಳಲು ಮತ್ತು ಅವರೊಂದಿಗೆ ಸಂಬಂಧ ಬೆಸೆಯಲು ಹಬ್ಬಗಳು ಪರಿಪೂರ್ಣ ಮಾರ್ಗವಾಗಿದೆ. ದೀಪಾವಳಿಯು ನಮಗೆ ಎಲ್ಲರಿಗೂ ದಯೆ ತೋರಿಸಲು ಕಲಿಸುತ್ತದೆ ಮತ್ತು ಒಳ್ಳೆಯ ಫಲಿತಾಂಶಗಳಿಗಾಗಿ ಕಾಯುವ ತಾಳ್ಮೆ ಮತ್ತು ಮನಸ್ಸನ್ನು ಹೊಂದಿದೆ. ನಮ್ಮ ನಂಬಿಕೆಗಳು ನಮ್ಮ ಮನಸ್ಸನ್ನು ರೂಪಿಸುತ್ತವೆ, ಆದ್ದರಿಂದ ನಾವು ಎಂದಿಗೂ ಹಬ್ಬಗಳ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಬಾರದು.

. . . . . . . . .

ಅರ್ಥ – ಆಚರಣೆ

. . . . . . .

ಹಿಂದೂ ಧರ್ಮದಜನರು ಪ್ರತಿ ವರ್ಷವೂ ಪ್ರಪಂಚದಿ ಎಲ್ಲೆಡೆ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ. ಉತ್ತರ ಭಾರತದಲ್ಲಿ ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರಂಭ. ದೀಪಾವಳಿಯು ಜೈನರು, ಸಿಖ್ಖರು ಮತ್ತು ಬೌದ್ಧರು ಆಚರಿಸುವ ಹಿಂದೂ ಹಬ್ಬವಾಗಿದೆ. ದೀಪಾವಳಿಯು ಆಧ್ಯಾತ್ಮಿಕ ಕತ್ತಲೆಯ ಮೇಲೆ ಆಂತರಿಕ ಬೆಳಕಿನ ವಿಜಯವನ್ನು ಆಚರಿಸುವ ಬೆಳಕಿನ ಹಬ್ಬವಾಗಿದೆ. ಈ ಹಬ್ಬವನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ. ಹಬ್ಬದ ಆಚರಣೆಗಾಗಿ ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ. ದೀಪಾವಳಿಯಂದು ಮನೆಯ ಮುಂದೆ ಬಣ್ಣದ ಪುಡಿ, ಹಿಟ್ಟು ಮತ್ತು ಮರಳಿನಿಂದ ಮಾಡಿದ ರಂಗೋಲಿ ಅಲಂಕಾರಗಳು ತುಂಬಾ ಸಾಮಾನ್ಯವಾಗಿದ್ದು, ಅವುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯನ್ನು ತಮ್ಮ ಮನೆಗಳಿಗೆ ಸ್ವಾಗತಿಸಲು ಜನರು ತಮ್ಮ ಮನೆಗಳನ್ನು ಮಣ್ಣಿನ ದೀಪಗಳಿಂದ ಮತ್ತು ಎಲೆಕ್ಟ್ರಾನಿಕ್ ದೀಪಗಳಿಂದ ಅಲಂಕರಿಸುತ್ತಾರೆ. ಹಬ್ಬದ ಮುಖ್ಯ ದಿನವು ಲಕ್ಷ್ಮಿ ಪೂಜೆಗೆ ಮೀಸಲಾಗಿದೆ. ಅಂದು ರುಚಿಕರವಾದ ಭಕ್ಷ್ಯಗಳು ಮತ್ತು ಪಟಾಕಿಗಳೊಂದಿಗೆ ಸಂಭ್ರಮಿಸಲಾಗುತ್ತದೆ.
ದೀಪಗಳ ಸಾಲು, ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು.

ಹಿಂದೂಧರ್ಮದ ಹಿನ್ನೆಲೆ

  1. ಲೋಕ ರಕ್ಷಕನಾದ ಮಹಾವಿಷ್ಣುವು ಎಂಟನೇ ಅವತಾರವಾಗಿ ಕೃಷ್ಣನಾಗಿ ಬಂದು ನರಕಾಸುರ ಎಂಬ ರಾಕ್ಷಸನನ್ನು ಸಂಹರಿಸಿ, ೧೦,೦೦೦ ಗೋಪಿಕಾ ಸ್ತ್ರೀಯರನ್ನು ರಕ್ಷಿಸಿದ ಸುದಿನವಾಗಿದೆ. ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ.
  2. ಶ್ರೀಮಾನ್ ನಾರಾಯಣನು ವಾಮನ ರೂಪದಲ್ಲಿ ಬಲಿ ಚಕ್ರವರ್ತಿಯ ಬಳಿಗೆ ಬಂದು ೩ ಹೆಜ್ಜೆ ಸ್ಥಳ ಕೇಳಿ ವಾಮನಾಗಿದ್ದವನು, ತ್ರಿವಿಕ್ರಮನಾಗಿ ಬೆಳೆದು, ೧ನೇ ಪಾದ ಭೂಮಿಯನ್ನು ಆವರಿಸಿ , ೨ನೇ ಪಾದ ಆಕಾಶವನ್ನು ಆವರಿಸಿ, ಮೂರನೇ ಹೆಜ್ಜೆಯನ್ನು ಅವನ ತಲೆಯ ಮೇಲೆ ಇಡುವಂತೆ ಹೇಳುತ್ತಾನೆ ಆಗ ಶ್ರೀಮಾನ್ ನಾರಾಯಣ ತಲೆಯ ಮೇಲೆ ಇಟ್ಟು ತುಳಿಯುತ್ತಾರೆ. ಬಲಿ ಚಕ್ರವರ್ತಿಯ ಭಕ್ತಿಗೆ ಮೆಚ್ಚಿ ಆಚರಿಸುವ ಹಬ್ಬವೇ ಬಲಿಪಾಡ್ಯಮಿ
  3. ಪಿತೃವಾಕ್ಯ ಪರಿಪಾಲನೆಗಾಗಿ ೧೪ ವರ್ಷ ವನವಾಸ ಮುಗಿಸಿ ರಾವಣನನ್ನು ಸಂಹರಿಸಿ ಮರಳಿ ಅಯೋದ್ಯೆಗೆ ಬಂದ ಸುದಿನ. ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ, ಅಮಾವಾಸ್ಯೆಯ ಹಿಂದಿನ ದಿನ (ನರಕ ಚತುರ್ದಶಿ)
  4. ಪಾಂಡವರು ಹನ್ನೆರಡು ವರ್ಷ ವನವಾಸ ಮುಗಿಸಿ ಇಂದ್ರಪ್ರಸ್ಥ ರಾಜ್ಯಕ್ಕೆ ಮರಳಿ ಸಂಭ್ರಮಿಸಿದ ಸುದಿನವಾಗಿದೆ ಈ ದೀಪಾವಳಿ ಹಬ್ಬ.
    ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.

ಪೂಜೆ

ದೀಪಾವಳಿಯ ದಿನದಂದು ಪೂಜೆ ಪುನಸ್ಕಾರಕ್ಕೆ ವಿಶೇಷ ಮಹತ್ವವಿದೆ. ಈ ದಿನ, ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿ ಹಾಗೂ ಗಣೇಶನನ್ನು ಪೂಜಿಸಲಾಗುತ್ತದೆ. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ವರ್ಷವಿಡೀ ಮನೆಯಲ್ಲಿ ಸಂಪತ್ತು ಮತ್ತು ಸಂತೋಷದ ಹರಿವು ಇರುತ್ತದೆ. ದೀಪಾವಳಿಯ ಪೂಜೆಗೆ ಚಿನ್ನ ಮತ್ತು ಬೆಳ್ಳಿ ಆಭರಣಗಳು, ಪಾತ್ರೆಗಳು ಮತ್ತು ಮಣ್ಣಿನ ಲಕ್ಷ್ಮಿ-ಗಣೇಶನನ್ನು ಖರೀದಿಸುತ್ತಾರೆ. ದೀಪಾವಳಿಯ ದಿನದಂದು ಗಣೇಶ ಮತ್ತು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಈ ದಿನ ಮನೆಯ ಮುಂಭಾಗಿಲಿನಲ್ಲಿ ರಂಗೋಲಿ ಹಾಕುತ್ತಾರೆ. ಇದರೊಂದಿಗೆ ಇಡೀ ಮನೆಯನ್ನು ದೀಪಗಳಿಂದ ಅಲಂಕರಿಸುವ ಮೂಲಕ ಲಕ್ಷ್ಮಿಯ ಆಗಮನವನ್ನು ಸ್ವಾಗತಿಸಲಾಗುತ್ತದೆ. ದೀಪಾವಳಿಯ ಅಂಗವಾಗಿ ನಡೆಯುವ ಇತರ ಸಮಾರಂಭಗಳಲ್ಲಿ ಆಯುಧಪೂಜೆ ಮತ್ತು ಗೋಪೂಜೆಗಳನ್ನು ಹೆಸರಿಸಬಹುದು. ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು.

ಮೋಜು-ಮಸ್ತಿ

ಕುಟುಂಬಗಳು ಮತ್ತು ಸ್ನೇಹಿತರ ನಡುವೆ ಬಲವಾದ ಬಂಧಗಳನ್ನು ಬಲಪಡಿಸಲು ಹಬ್ಬಗಳನ್ನು ಮಾಡಲಾಗಿದೆ ಇದಕ್ಕೆ ದೀಪಾವಳಿ ಅತ್ಯುತ್ತಮ ಉದಾಹರಣೆಯಾಗಿದೆ. ಇದು ರಾಷ್ಟ್ರೀಯ ರಜಾದಿನವಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಕೆಲಸದ ಬಗ್ಗೆ ಚಿಂತಿಸದೆ ಹಬ್ಬವನ್ನು ಆನಂದಿಸುತ್ತಾರೆ. ತವರಿಗೆ ಹೋಗುವುದು , ಬಣ್ಣ ಬಣ್ಣದ ರಂಗೋಲಿ , ತಳಿರು-ತೋರಣ , ಹೂವಿನ ಅಲಂಕಾರ , ಎಣ್ಣೆ ಸ್ನಾನ , ಹೊಸ ಬಟ್ಟೆ , ನಾರಿಯರ ಸಡಗರ, ಸಿಹಿ ತಿಂಡಿಗಳು, ಹಣತೆಯ ಸಾಲು ಅಬಬ್ಬಾ ಹೇಳುವುದೇ ಸಂತಸದ ವಿಷಯ. ಮನೆ-ಮಂದಿ, ಬಂಧು-ಬಳಗದವರ ಜೊತೆಗೂಡಿ ಪೂಜೆ , ಹರಟೆ , ನೆಗೆ , ಮಾತಿನ ಪಅರ್ಥಪೂರ್ಣ ಪಟಾಕಿ , ದೀಪಾಲಂಕಾರ , ಹಬ್ಬದ ಊಟ ಸವಿಯುವುದೇ ಒಂದು ಸಂತಸ. ಒಟ್ಟಾರೆಯಾಗಿ ದೀಪಾವಳಿ ಹಬ್ಬದ ಆಚರಣೆಯೇ ಅರ್ಥಪೂರ್ಣವಾದದ್ದು. ರಾತ್ರಿಯಲ್ಲಿ ಇದು ಹೆಚ್ಚು ರೋಮಾಂಚನಕಾರಿಯಾಗಿದೆ ಏಕೆಂದರೆ ಈ ದಿನ ಸಾಕಷ್ಟು ದೀಪಗಳನ್ನು ಹಚ್ಚಲಾಗುತ್ತದೆ. ಜಗಮಗಿಸುವ ಕಾಂತಿ ಮೈಮನಗಳನ್ನು ಬೆಳಗಿಸಿ ಮುಂದಿನ ವರ್ಷದವರೆಗೂ ನೆನಪಿನಲ್ಲಿ ಉಳಿಯುತ್ತದೆ.

ಪರಿಸರ ಸ್ನೇಹಿ ದೀಪಾವಳಿ

ದೀಪಾವಳಿ ಬಹಳ ಹಿಂದಿನಿಂದಲೂ ಪಟಾಕಿ ಸಿಡಿಸುವುದರೊಂದಿಗೆ ಸಂಬಂಧ ಹೊಂದಿದೆ ಆದರೆ ಇದು ಅಗತ್ಯವೇ? ಖಂಡಿತ ಇಲ್ಲ, ನಾವೆಲ್ಲರೂ ಮನೆಯಲ್ಲಿಯೇ ಇದ್ದು ನಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹೃತ್ಪೂರ್ವಕ ಭೋಜನವನ್ನು ಆನಂದಿಸಿದರೆ ದೀಪಾವಳಿಯನ್ನು ಇನ್ನೂ ಅದ್ಭುತವಾಗಿ ಆಚರಿಸಬಹುದು. ಪಟಾಕಿಗಳನ್ನು ಸಿಡಿಸುವುದರಿಂದ ವಾತಾವರಣಕ್ಕೆ ಹಾನಿಕಾರಕ ಅನಿಲಗಳು ಬಿಡುಗಡೆಯಾಗುತ್ತವೆ ಅದು ಅಂತಿಮವಾಗಿ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತದೆ. ಪಟಾಕಿಗಳು ನಮ್ಮ ಸುತ್ತಮುತ್ತ ವಾಸಿಸುವ ಪ್ರಾಣಿಗಳಿಗೆ ಹಾನಿ ಮಾಡುತ್ತದೆ. ಇತರರ ಸುರಕ್ಷತೆಗೆ ಧಕ್ಕೆಯಾಗದಂತೆ ನಾವು ಜವಾಬ್ದಾರಿಯುತವಾಗಿ ಹಬ್ಬವನ್ನು ಆಚರಿಸಬೇಕು. ದೀಪಾವಳಿಯ ಸಮಯದಲ್ಲಿ ಹೊಸದಾಗಿ ಬೇಯಿಸಿದ ಆಹಾರದಿಂದ ಹೊರಹೊಮ್ಮುವ ದಟ್ಟವಾದ ಪರಿಮಳದಿಂದ ಮನೆಗಳು ತುಂಬಿರುತ್ತವೆ. ಹಬ್ಬದ ಸಮಯದಲ್ಲಿ ರುಚಿಕರವಾದ ಭಕ್ಷ್ಯಗಳನ್ನು ಬೇಯಿಸಲಾಗುತ್ತದೆ ಮತ್ತು ಸೇವಿಸಲಾಗುತ್ತದೆ. ಹಬ್ಬಗಳು ನಮ್ಮಲ್ಲಿ ಸಹೋದರತ್ವದ ಪ್ರಮುಖ ಮನೋಭಾವವನ್ನು ಬೆಳೆಸಲು ಮಾಡಲಾಗಿದೆಯೇ ಹೊರತು ಆಚರಣೆಯ ಹೆಸರಿನಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಹಾಳುಮಾಡಲು ಅಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು.

ಡಾ‌.ಮಮತ ‍ (ಕಾವ್ಯ ಬುದ್ಧ)
ಅದ್ಯಾಪಕಿ, ಸಾಹಿತಿ,
ಬೆಂಗಳೂರು


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading