ಕವನ : ಕರ್ಮಗಳ ಫಲ…

ಬದುಕಿನಲ್ಲಿ ಸೋತ ಜೀವಕ್ಕೆ ನಮ್ಮ ಪ್ರೋತ್ಸಾಹದ ನುಡಿಯೊಂದೇ ಸಾಕು, ಮತ್ತೆದ್ದು ಮುನ್ನಡೆಯಲು ಆ ಜೀವಕ್ಕೆ ಅದು ಪ್ರೇರಣೆಯಾದೀತು, ಆ ಜೀವದ ನಾಳಿನ ಗೆಲುವಿಗೆ ನಮ್ಮ ಇಂದಿನ ಪ್ರೋತ್ಸಾಹದ ನುಡಿಯೇ ಕಾರಣವಾದೀತು...ಬದುಕಿನಲ್ಲಿ ನೊಂದ ಜೀವಕ್ಕೆ ನಮ್ಮ ಸಾಂತ್ವನದ ಮಾತೊಂದೇ ಸಾಕು, ನೋವುಗಳ ತೊರೆದು ನಲಿವಿನೆಡೆಗೆ ಮುನ್ನಡೆಯಲು ಆ ಜೀವಕ್ಕೆ ಅದು ಸ್ಥೈರ್ಯವನ್ನು ನೀಡೀತು, ಆ ಜೀವದ ನಾಳಿನ...

“ನಮ್ಮ ಆರೋಗ್ಯದ ಗುಟ್ಟು ಮತ್ತು ಜುಟ್ಟು ನಮ್ಮ ಕೈಯಲ್ಲಿಯೇ ಇದೆ” – ವಿಶ್ವ ಆರೋಗ್ಯ ದಿನ – ಎಪ್ರಿಲ್ 07 ; ಡಾ|| ಮುರಲೀ ಮೋಹನ್ ಚೂಂತಾರು

ಪ್ರತಿ ವರ್ಷ ಎಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನ ಎಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ. 1948 ರ ಎಪ್ರಿಲ್ 7 ರಂದು ವಿಶ್ವ ಆರೋಗ್ಯ ಸಂಸ್ಥೆ ಉದಯವಾಯಿತು. ಇದರ ಸವಿ ನೆನಪಿಗಾಗಿ 1950 ರಂದು ಪ್ರತಿ ವರ್ಷ ಎಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನ ಎಂದು ಆಚರಿಸಿ, ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ....
Ad Widget

ಅಮರ ಸುದ್ದಿ ವಿಶೇಷ ವರದಿ ; ಗುತ್ತಿಗಾರು ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವತಿಯಿಂದ ವಿನೂತನ ಕಾರ್ಯಕ್ರಮ ; ಸ್ವಾವಲಂಬಿ ಮಹಿಳೆಯರಿಗೆ ಸ್ಫೂರ್ತಿ ತುಂಬಿದ “ಸಂಜೀವಿನಿ ಮಾಸಿಕ ಸಂತೆ”

ಬರಹ : ಉಲ್ಲಾಸ್ ಕಜ್ಜೋಡಿಗ್ರಾಮೀಣ ಪ್ರದೇಶಗಳಲ್ಲಿ “ಸಂತೆ ಮಾರುಕಟ್ಟೆ” ಎನ್ನುವುದು ತುಂಬಾ ಪ್ರಸಿದ್ಧ. ವಾರದಲ್ಲಿ ಒಂದು ದಿವಸ ಅಥವಾ ಕೆಲವು ಕಡೆಗಳಲ್ಲಿ ವಾರಪೂರ್ತಿ ನಡೆಯುವಂತಹ ಈ ಸಂತೆ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ತರಕಾರಿಗಳು, ವಿವಿಧ ರೀತಿಯ ಹಣ್ಣುಗಳು, ಬಟ್ಟೆಗಳು, ಬೇಳೆ-ಕಾಳುಗಳು, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಗ್ರಾಮೀಣ ಪ್ರದೇಶದ ಜನರಿಗೆ ಬೇಕಾದಂತಹ ಎಲ್ಲಾ ರೀತಿಯ ವಸ್ತುಗಳು ಒಂದೇ...

ಅಂದು ಶಿಕ್ಷಕರ ಜೀವನದಲ್ಲಿ ಚೆಲ್ಲಾಟ ಇಂದು ವಿದ್ಯಾರ್ಥಿಗಳ ಭಾಷಾವಾರು ವಿಷಯಗಳನ್ನು ಇಟ್ಟುಕೊಂಡು ಚೆಲ್ಲಾಟವೇ…?

ಮೊದಲು ಶಿಕ್ಷಕರ ಜೀವನದಲ್ಲಿ ಚೆಲ್ಲಾಟವಾಡಿದರು. ಅಂದರೆ ಶಿಕ್ಷಕರು ಕೇವಲ ಪಾಠ ಮಾಡುವುದಲ್ಲದೆ ವಿದ್ಯಾರ್ಥಿಗಳೊಂದಿಗೆ ಬೆರೆತು ಅವರಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸುವ ಅಥವಾ ಹೊರಸೆಳೆಯುವ ಕಾಯಕ ಯೋಗಿಗಳಂತೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಅಕ್ಷಯ ಪಾತ್ರೆಯಂತೆ ಕಾರ್ಯನಿರ್ವಹಿಸುವ ಅಂದ ಹಾಗೇ “ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ”.ವಿದ್ಯೆಯನ್ನು ಧಾರೆ ಎರೆಯುದರಲ್ಲಿ ಸೈ ಎನಿಸಿಕೊಂಡವರು ಗುರುಗಳು. ಅಲ್ಲದೆ ಶಿಕ್ಷಕರು ತಮ್ಮ ಪ್ರೀತಿಯ...

ಲಾಕ್ ಡೌನ್ ನಿಂದ ತಿಳಿಯಿತು ಹಳ್ಳಿಯ ಮಹತ್ವ – ಯುದ್ಧದಿಂದ ತಿಳಿಯಿತು ಒಲೆಯ ಮಹತ್ವ

ಅನಾರೋಗ್ಯಕ್ಕೆ ತುತ್ತಾದಾಗ ಮಾತ್ರ ಅನೇಕರಿಗೆ ಅವರವರ ಬಗ್ಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಅದೆಷ್ಟೋ ಆಲಸ್ಯತನದ ಉನ್ಮಾದಗಳು ತಳೆದಿದ್ದವು ಎಂಬುದು ಕೋವಿಡ್-19 ಸೃಷ್ಟಿಸಿರುವ ಬಿಕ್ಕಟ್ಟು ಜೀವವೈವಿಧ್ಯದ ನಾಶವೆಂದು ಕೆಲ ಜನರು ಬಾಯಿಂದ ಬಾಯಿಗೆ ಹೇಳುತ್ತಿದ್ದರು. ಅಲ್ಲದೆ ತೀವ್ರವಾದ ಜನಸಂದಣಿ ಪ್ರದೇಶ, ನಗರಗಳು ಹೆಚ್ಚಾಗಿ ವೈರಾಣುಗಳ ಹರಡುವಿಕೆ ಮಾಡಿದಂತಹ ಸ್ಥಳವಾಗಿತ್ತು. ಅಂದ ಹಾಗೇ ಹಳ್ಳಿಯಿಂದ ದಿಲ್ಲಿಯತ್ತ...

ಕಿರು ಲೇಖನ : ಅನುಪಸ್ಥಿತಿ

ಬದುಕಿನ ಕೆಲವೊಂದು ಸಂದರ್ಭಗಳಲ್ಲಿ ನಮ್ಮ ಜೊತೆಯಲ್ಲಿ ಇರುವ ನೂರು ಜನರ ಉಪಸ್ಥಿತಿಗಿಂತ ನಮ್ಮ ಜೊತೆಯಲ್ಲಿ ಇಲ್ಲದೇ ಇರುವ ಒಬ್ಬ ವ್ಯಕ್ತಿಯ ಅನುಪಸ್ಥಿತಿ ನಮ್ಮನ್ನು ಹೆಚ್ಚು ಕಾಡುತ್ತದೆ. ಅದೆಷ್ಟು ಕಾಡುತ್ತದೆ ಎಂದರೆ ನಮ್ಮ ಜೊತೆಗಿರುವ ಆ ನೂರು ಜನರ ಮಧ್ಯೆ ನಾವೂ ಕೂಡ ಖುಷಿಯಿಂದ ಬೆರೆಯಬೇಕು ಎಂದರೆ ಅದೂ ಕೂಡ ನಮ್ಮಿಂದ ಸಾಧ್ಯವಾಗುವುದಿಲ್ಲ. ಏಕೆಂದರೆ ನಾವು ದೈಹಿಕವಾಗಿ...

“ನನ್ನ ಬದುಕು ರೂಪಿಸಿದ ನನ್ನಮ್ಮ” – ಡಾ| ಮುರಲೀ ಮೋಹನ್ ಚೂಂತಾರು

ಸುಮಾರು 22 ವರ್ಷಗಳ ಹಿಂದೆ ನನ್ನ ಅಮ್ಮ ಮೆದುಳಿನ ಕ್ಯಾನ್ಸರ್‌ನಿಂದ ತೀರಿ ಹೋದರೂ ನನಗೆ ನನ್ನಮ್ಮ ಇಲ್ಲವೆಂದು ಅನಿಸುವುದೇ ಇಲ್ಲ. ಯಾಕೆಂದರೆ ನನ್ನಮ್ಮ ನನ್ನ ದೇಹದ ಇಂಚಿಂಚಿನಲ್ಲೂ ಆವರಿಸಿಕೊಂಡು ನನ್ನನ್ನು ಸದಾ ಎಚ್ಚರಿಸುತ್ತಲೇ ಇದ್ದಾಳೆ. ಭೌತಿಕವಾಗಿ ಇಲ್ಲದಿದ್ದರೂ ನಾನು ಮಾಡುವ ಪ್ರತೀ ಕೆಲಸ ಕಾರ್ಯದಲ್ಲೂ ಆಕೆಯೇ ಆವರಿಸಿಕೊಂಡಿದ್ದಾಳೆ. ಎಂಬತ್ತರ ದಶಕದಲ್ಲಿ ನನ್ನ ಬಾಲ್ಯದ ದಿನಗಳಲ್ಲಿ ನನ್ನನ್ನು...

ಕುಕ್ಕೆಯಲ್ಲೊಂದು ಕುಮಾರಧಾರೆ

ಪ್ರಕೃತಿದತ್ತವಾದ ಕುಮಾರ ಪರ್ವತದ ತಪ್ಪಲಿನಿಂದ ಸುಬ್ರಹ್ಮಣ್ಯನ ಮಡಿಲಲ್ಲಿ ಧಾರೆಯಾಗುವ ನದಿಯೇ ಕುಮಾರಧಾರೆ. ಮೇಲಿನಿಂದ ಹರಿದು ಬರುವುದರಿಂದ ಧಾರೆ ಎಂದಾಗಿದ್ದು ಜನರ ಬಾಯಲ್ಲಿ ಕುಮಾರಧಾರವಾಗಿದೆ. ಈ ನದಿಯು ಪುಣ್ಯತೀರ್ಥವಾಗಿ ಸದಾ ಹರಿಯುತ್ತಿದೆ. ಕುಮಾರ ಧಾರೆಯಲ್ಲಿ ಮಿಂದು, ಕುಕ್ಕೆಯಲ್ಲಿ ಉಂಡು ಜೀವನ ಪಾವನಗೊಳಿಸಿಕೊಂಡೆವು ಎಂಬುದು ಭಕ್ತಾದಿಗಳ ಮಾತಾಗಿದೆ. ಈ ನದಿಗೆ ಅದರದೇ ಆದ ಮಹತ್ವವಿದೆ. ಸುಬ್ರಹ್ಮಣ್ಯನು ತಾರಕಾಸುರನನ್ನು ನಿಗ್ರಹಿಸಿ...

ಕವನ : ಆಹಾರವ ಅರಸುತ್ತಾ – ಉಸಿರಾಟವ ಹುಡುಕುತ್ತಾ…

ಆಹಾರವ ಅರಸುತ್ತಾ ಕಾಡುಪ್ರಾಣಿಗಳು ಇಂದು ನುಗ್ಗುತ್ತಿವೆ ನಾಡಿನ ಕಡೆಗೆ, ಅವುಗಳನ್ನು ಬೆದರಿಸಿ ಅಟ್ಟುವೆವು ನಾವು ಮರಳಿ ಕಾಡಿನೆಡೆಗೆ, ನೆನಪಿರಲಿ ಅವುಗಳು ಆಹಾರವ ಅರಸಿ ಬರುತ್ತಿರುವುದು ಅವುಗಳ ಹೊಟ್ಟೆಪಾಡಿಗೆ...ಕಾಡಿನಲ್ಲೇ ಸಿಗುತ್ತಿತ್ತು ಈ ಹಿಂದೆ ಅವುಗಳಿಗೆ ಬೇಕಾದಷ್ಟು ಆಹಾರ, ಆದರೆ ಅಲ್ಲಿಗೂ ತಲುಪಿತ್ತು ಮನುಷ್ಯರು ಎನಿಸಿಕೊಂಡ ನಮ್ಮ ಸ್ವಾರ್ಥಸಾಧನೆಯ ಅಧಿಕಾರ, ಕಾಡುಗಳ ನಾಶಗೈಯುತ್ತಾ ಸಾಗಿದೆವು ನಾವು ತೋರದೇ ಯಾವ...

ಲೇಖನ : “ಬಂಗಾರ” ಜನಸಾಮಾನ್ಯರ ಪಾಲಿಗೆ “ಬಲುಭಾರ”

ಅದೊಂದು ಕಾಲವಿತ್ತು ಬಡವರು, ಮಧ್ಯಮವರ್ಗದವರು ಸೇರಿದಂತೆ ಜನಸಾಮಾನ್ಯರಾದ ಪ್ರತಿಯೊಬ್ಬರೂ ಸಹ ಪ್ರತೀವರ್ಷವೂ ಕೂಡ ತಾವು ವರ್ಷಪೂರ್ತಿ ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದಲ್ಲಿ ಅಷ್ಟೋ-ಇಷ್ಟೋ ಉಳಿಸಿ ಕೂಡಿಟ್ಟು ಆ ಕೂಡಿಟ್ಟ ಹಣದಲ್ಲಿ ತಮ್ಮ ಮಕ್ಕಳ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ವರ್ಷಕ್ಕೊಮ್ಮೆಯಾದರೂ ತಮ್ಮಿಂದಾದಷ್ಟರ ಮಟ್ಟಿಗೆ ಚಿನ್ನವನ್ನು ಖರೀದಿ ಮಾಡುತ್ತಾ “ಇಂದು ನಾವು ಅನುಭವಿಸುತ್ತಿರುವ ಕಷ್ಟಗಳನ್ನು, ನೋವುಗಳನ್ನು ಮುಂದೆ ನಮ್ಮ...
Loading posts...

All posts loaded

No more posts

error: Content is protected !!