Ad Widget

ವಿಶ್ವಹಿಂದೂ ಪರಿಷದ್ ಬಜರಂಗದಳದ ವತಿಯಿಂದ ಶೌರ್ಯ ಜಾಗರಣ ರಥಯಾತ್ರೆ ಹಾಗೂ ಬೃಹತ್ ಸಾರ್ವಜನಿಕ ಸಭೆ

. . . . . . . . .

ಭಾಗವಹಿಸಿದ್ದರುಭಾಗವಹಿಸಿದ್ದರುವಿಶ್ವಹಿಂದೂ ಪರಿಷದ್ ಬಜರಂಗದಳ ಸುಳ್ಯ ಹಾಗೂ ಕಡಬ ಪ್ರಖಂಡ ವತಿಯಿಂದ ಶೌರ್ಯ ಜಾಗರಣ ರಥಯಾತ್ರೆಯ ಬೃಹತ್ ಶೋಭಾಯಾತ್ರೆ ಹಾಗೂ ಬೃಹತ್ ಸಾರ್ವಜನಿಕ ಸಭೆ, ಬೃಹತ್ ಹಿಂದೂ ಶೌರ್ಯ ಸಂಗಮ ಕಾರ್ಯಕ್ರಮ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ‌ ಮುಂಭಾಗದಲ್ಲಿ ನಡೆಯಿತು.
ಬೃಹತ್ ಶೋಭಾಯಾತ್ರೆ ಸಂಪಾಜೆಯಿಂದ ಹೊರಟು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗಕ್ಕೆ ಆಗಮಿಸಿತು. ಬಳಿಕ ಅಲ್ಲಿ ಬೃಹತ್ ಹಿಂದೂ ಶೌರ್ಯ ಸಂಗಮ ಕಾರ್ಯಕ್ರಮ ನಡೆಯಿತು.
ದಿಕ್ಸೂಚಿ ಭಾಷಣ ನೆರವೇರಿಸಿ ವಿಶ್ವ ಹಿಂದೂ ಪರಿಷದ್ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಘು ಜಿ.ಸಕಲೇಶಪುರ ಮಾತನಾಡಿ, ಹಿಂದು ಸಂಘಟನೆಗಳ ಮೂಲಕ ಹಿಂದುಗಳ ಸಂಘಟಿಸುವ, ಒಗ್ಗೂಡಿಸುವ ಕೆಲಸ ನಡೆಯುತ್ತಿದೆ. ನಮ್ಮದು ಶ್ರೇಷ್ಠವಾದ ಶೌರ್ಯ ಪರಂಪರೆ. ಭಾರತದ ಇತಿಹಾಸವೇ ಶೌರ್ಯ ಇತಿಹಾಸ, ಭಾರತದ ಇತಿಹಾಸವೇ ಗೆಲುವಿನ ಇತಿಹಾಸ, ಭಾರತದ ಇತಿಹಾಸವೇ ಸಾಹಸದ ಇತಿಹಾಸ ಎಂದರು.
ಶೌರ್ಯ ಜಾಗರಣ ರಥಯಾತ್ರೆ ಮೂಲಕ ಹಿಂದಿನ ಕಾರ್ಯ ನೆನಪಿಸುವ ಕೆಲಸ ಮಾಡಲಾಗುತ್ತಿದೆ. ನಮ್ಮಲ್ಲಿರುವ ಸ್ವಾರ್ಥ ಬಿಟ್ಟು ಸಂಘಟನೆಯ ಹಿಂದೆ, ಸಂಘಟನೆಯ ಚೌಕಟ್ಟಿನಲ್ಲಿ ಹೋದರೆ ಮಾತ್ರ ಉಳಿಯಲು ಸಾಧ್ಯ ಅಲ್ಲದೇ ಈ ಕಾರ್ಯಕ್ರಮದಿಂದಲೇ ಪ್ರತಿಜ್ಞೆಯನ್ನು ಮಾಡಬೇಕು ನಾವು ಹೊಟ್ಟೆ ಹಸಿವಾಗಿ ಕುಳಿತರೂ ಹಿಂದೂ ವಿರೋಧಿಗಳ ಬಳಿ ಯಾವುದೇ ತರನದ ಸಾಮಾಗ್ರಿಗಳನ್ನು ಖರೀದಿಸಬಾರದು ಅಲ್ಲದೇ ಅಖಂಡ ಭಾರತ ನಿರ್ಮಾಣಕ್ಕಾಗಿ ಎಲ್ಲರು ಪಣತೊಟ್ಟು ಸಂಕಲ್ಪದೊಂದಿಗೆ ನಡೆಯೋಣ ಎಂದರು.
ಸುಳ್ಯ ಶೌರ್ಯ ರಥಯಾತ್ರೆ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ದೇಶ ಇಂದು ಪರಮ ವೈಭವದ ಕಡೆಗೆ ಸಾಗುತ್ತಿದೆ. ಹಿರಿಯರ ಕಲ್ಪನೆಯಂತೆ ಹಿಂದೂ ಸಂಘಟನೆ ತನ್ನ ಕಾರ್ಯಚಟುವಟಿಕೆ ಮಾಡುತ್ತಿದೆ. ಮುಂದೆ ನಾವೆಲ್ಲ ಸೇರಿ ದೇಶ ಕಟ್ಟುವ ಕಾರ್ಯ ಮಾಡೋಣ ಎಂದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ, ವಿಶ್ವ ಹಿಂದೂ ಪರಿಷದ್ ಮಂಗಳೂರು ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಮುರಳೀಕೃಷ್ಣ ಹಸಂತಡ್ಕ, ಶೌರ್ಯ ರಥ ಯಾತ್ರೆ ಸಮಿತಿ ಸಂಚಾಲಕ ವೆಂಕಟ್ ದಂಬೆಕೋಡಿ, ಪ್ರಧಾನ ಕಾರ್ಯದರ್ಶಿ ರಜತ್ ಅಡ್ಕಾರ್, ಬಜರಂಗದಳ ಸುಳ್ಯ ಪ್ರಖಂಡ ಅಧ್ಯಕ್ಷ ಸೋಮಶೇಖರ ಪೈಕ, ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಸುಳ್ಯ ಪ್ರಖಂಡ ಕಾರ್ಯದರ್ಶಿ ನವೀನ್ ಎಲಿಮಲೆ, ಕಡಬ ಪ್ರಖಂಡ ಕಾರ್ಯದರ್ಶಿ ಜಯಂತ್ ಕಲ್ಲುಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾಧ್ಯಕ್ಷ ಡಾ| ಕೃಷ್ಣಪ್ರಸನ್ನ ಪ್ರಾಸ್ತಾವಿಕ ಮಾತನಾಡಿದರು. ಸುಳ್ಯ ಬಜರಂಗದಳ ಸಂಚಾಲಕ ಹರಿಪ್ರಸಾದ್ ಎಲಿಮಲೆ ಸ್ವಾಗತಿಸಿದರು. ಶ್ರೀದೇವಿ ನಾಗರಾಜ್ ಭಟ್ ಕಾರ್ಯಕ್ರಮ ನಿರೂಪಿಸಿ ಸಂದೀಪ್ ವಳಲಂಬೆ ಧನ್ಯವಾದ ಸಮರ್ಪಿಸಿದರು. ಈ ಸಭೆಯಲ್ಲಿ ಸಂಘ ಪರಿವಾರದ ನಾಯಕರು , ಬಿಜೆಪಿ ನಾಯಕರು ಭಾಗವಹಿಸಿದ್ದರುವಿಶ್ವಹಿಂದೂ ಪರಿಷದ್ ಬಜರಂಗದಳ ಸುಳ್ಯ ಹಾಗೂ ಕಡಬ ಪ್ರಖಂಡ ವತಿಯಿಂದ ಶೌರ್ಯ ಜಾಗರಣ ರಥಯಾತ್ರೆಯ ಬೃಹತ್ ಶೋಭಾಯಾತ್ರೆ ಹಾಗೂ ಬೃಹತ್ ಸಾರ್ವಜನಿಕ ಸಭೆ, ಬೃಹತ್ ಹಿಂದೂ ಶೌರ್ಯ ಸಂಗಮ ಕಾರ್ಯಕ್ರಮ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ‌ ಮುಂಭಾಗದಲ್ಲಿ ನಡೆಯಿತು.
ಬೃಹತ್ ಶೋಭಾಯಾತ್ರೆ ಸಂಪಾಜೆಯಿಂದ ಹೊರಟು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗಕ್ಕೆ ಆಗಮಿಸಿತು. ಬಳಿಕ ಅಲ್ಲಿ ಬೃಹತ್ ಹಿಂದೂ ಶೌರ್ಯ ಸಂಗಮ ಕಾರ್ಯಕ್ರಮ ನಡೆಯಿತು.
ದಿಕ್ಸೂಚಿ ಭಾಷಣ ನೆರವೇರಿಸಿ ವಿಶ್ವ ಹಿಂದೂ ಪರಿಷದ್ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಘು ಜಿ.ಸಕಲೇಶಪುರ ಮಾತನಾಡಿ, ಹಿಂದು ಸಂಘಟನೆಗಳ ಮೂಲಕ ಹಿಂದುಗಳ ಸಂಘಟಿಸುವ, ಒಗ್ಗೂಡಿಸುವ ಕೆಲಸ ನಡೆಯುತ್ತಿದೆ. ನಮ್ಮದು ಶ್ರೇಷ್ಠವಾದ ಶೌರ್ಯ ಪರಂಪರೆ. ಭಾರತದ ಇತಿಹಾಸವೇ ಶೌರ್ಯ ಇತಿಹಾಸ, ಭಾರತದ ಇತಿಹಾಸವೇ ಗೆಲುವಿನ ಇತಿಹಾಸ, ಭಾರತದ ಇತಿಹಾಸವೇ ಸಾಹಸದ ಇತಿಹಾಸ ಎಂದರು.
ಶೌರ್ಯ ಜಾಗರಣ ರಥಯಾತ್ರೆ ಮೂಲಕ ಹಿಂದಿನ ಕಾರ್ಯ ನೆನಪಿಸುವ ಕೆಲಸ ಮಾಡಲಾಗುತ್ತಿದೆ. ನಮ್ಮಲ್ಲಿರುವ ಸ್ವಾರ್ಥ ಬಿಟ್ಟು ಸಂಘಟನೆಯ ಹಿಂದೆ, ಸಂಘಟನೆಯ ಚೌಕಟ್ಟಿನಲ್ಲಿ ಹೋದರೆ ಮಾತ್ರ ಉಳಿಯಲು ಸಾಧ್ಯ ಅಲ್ಲದೇ ಈ ಕಾರ್ಯಕ್ರಮದಿಂದಲೇ ಪ್ರತಿಜ್ಞೆಯನ್ನು ಮಾಡಬೇಕು ನಾವು ಹೊಟ್ಟೆ ಹಸಿವಾಗಿ ಕುಳಿತರೂ ಹಿಂದೂ ವಿರೋಧಿಗಳ ಬಳಿ ಯಾವುದೇ ತರನದ ಸಾಮಾಗ್ರಿಗಳನ್ನು ಖರೀದಿಸಬಾರದು ಅಲ್ಲದೇ ಅಖಂಡ ಭಾರತ ನಿರ್ಮಾಣಕ್ಕಾಗಿ ಎಲ್ಲರು ಪಣತೊಟ್ಟು ಸಂಕಲ್ಪದೊಂದಿಗೆ ನಡೆಯೋಣ ಎಂದರು.
ಸುಳ್ಯ ಶೌರ್ಯ ರಥಯಾತ್ರೆ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ದೇಶ ಇಂದು ಪರಮ ವೈಭವದ ಕಡೆಗೆ ಸಾಗುತ್ತಿದೆ. ಹಿರಿಯರ ಕಲ್ಪನೆಯಂತೆ ಹಿಂದೂ ಸಂಘಟನೆ ತನ್ನ ಕಾರ್ಯಚಟುವಟಿಕೆ ಮಾಡುತ್ತಿದೆ. ಮುಂದೆ ನಾವೆಲ್ಲ ಸೇರಿ ದೇಶ ಕಟ್ಟುವ ಕಾರ್ಯ ಮಾಡೋಣ ಎಂದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ, ವಿಶ್ವ ಹಿಂದೂ ಪರಿಷದ್ ಮಂಗಳೂರು ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಮುರಳೀಕೃಷ್ಣ ಹಸಂತಡ್ಕ, ಶೌರ್ಯ ರಥ ಯಾತ್ರೆ ಸಮಿತಿ ಸಂಚಾಲಕ ವೆಂಕಟ್ ದಂಬೆಕೋಡಿ, ಪ್ರಧಾನ ಕಾರ್ಯದರ್ಶಿ ರಜತ್ ಅಡ್ಕಾರ್, ಬಜರಂಗದಳ ಸುಳ್ಯ ಪ್ರಖಂಡ ಅಧ್ಯಕ್ಷ ಸೋಮಶೇಖರ ಪೈಕ, ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಸುಳ್ಯ ಪ್ರಖಂಡ ಕಾರ್ಯದರ್ಶಿ ನವೀನ್ ಎಲಿಮಲೆ, ಕಡಬ ಪ್ರಖಂಡ ಕಾರ್ಯದರ್ಶಿ ಜಯಂತ್ ಕಲ್ಲುಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾಧ್ಯಕ್ಷ ಡಾ| ಕೃಷ್ಣಪ್ರಸನ್ನ ಪ್ರಾಸ್ತಾವಿಕ ಮಾತನಾಡಿದರು. ಸುಳ್ಯ ಬಜರಂಗದಳ ಸಂಚಾಲಕ ಹರಿಪ್ರಸಾದ್ ಎಲಿಮಲೆ ಸ್ವಾಗತಿಸಿದರು. ಶ್ರೀದೇವಿ ನಾಗರಾಜ್ ಭಟ್ ಕಾರ್ಯಕ್ರಮ ನಿರೂಪಿಸಿ ಸಂದೀಪ್ ವಳಲಂಬೆ ಧನ್ಯವಾದ ಸಮರ್ಪಿಸಿದರು. ಈ ಸಭೆಯಲ್ಲಿ ಸಂಘ ಪರಿವಾರದ ನಾಯಕರು , ಬಿಜೆಪಿ ನಾಯಕರು

. . . . . . .


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading